Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಭಾರತ ಸೇರಿ ಪ್ರಪಂಚದಾದ್ಯಂತ ‘ಗೂಗಲ್’ ಡೌನ್ ; ‘ಜಿಮೇಲ್, ಡ್ರೈವ್ ಸೇವೆ’ಗಳು ಸ್ಥಗಿತ, ಬಳಕೆದಾರರ ಪರದಾಟ |Google down

18/07/2025 9:55 PM

BIG NEWS: ಸಾಗರ ತಾಲ್ಲೂಕಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಬಂಪರ್ ಗಿಫ್ಟ್: 50 ಕೋಟಿ ಅನುದಾನ ಮಂಜೂರು

18/07/2025 9:39 PM

ಕೆಡಿಪಿ ಸಭೆಯಲ್ಲಿ ರಮ್ಮಿ ಆಟ ಆಡಿದ ಡಿಸಿಎಫ್ ಗೆ ಕಾರಣ ಕೇಳಿ ನೋಟಿಸ್: ಸಚಿವ ಈಶ್ವರ್ ಖಂಡ್ರೆ

18/07/2025 9:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಸಾಗರ ತಾಲ್ಲೂಕಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಬಂಪರ್ ಗಿಫ್ಟ್: 50 ಕೋಟಿ ಅನುದಾನ ಮಂಜೂರು
KARNATAKA

BIG NEWS: ಸಾಗರ ತಾಲ್ಲೂಕಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಬಂಪರ್ ಗಿಫ್ಟ್: 50 ಕೋಟಿ ಅನುದಾನ ಮಂಜೂರು

By kannadanewsnow0918/07/2025 9:39 PM

ಶಿವಮೊಗ್ಗ: ಸಾಗರ ತಾಲ್ಲೂಕಿಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಂಪರ್ ಗಿಫ್ಟ್ ನೀಡಿದ್ದಾರೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಮನವಿಯ ಮೇರೆಗೆ ಬರೋಬ್ಬರಿ 50 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದಾರೆ. ಈ ಅನುದಾನದಲ್ಲಿ ಸಾಗರ ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. 

ಕರ್ನಾಟಕ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಾಗರ ವಿಧಾನಸಭಾ ಕ್ಷೇತ್ರವು ಸಂಪೂರ್ಣ ಮಲೆನಾಡು ಪ್ರದೇಶವಾಗಿದ್ದು, ಮಳೆಗಾಲದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು, ಬಹುತೇಕ ಭಾಗ ಶರಾವತಿ ಹಿನ್ನೀರಿನ ಪ್ರದೇಶವಾಗಿರುವುದರಿಂದ ಕೆರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮಳೆಗಾಲದಲ್ಲಿ ಕೆರೆಕೋಡಿಗಳು ನೆರೆ ಪ್ರವಾಹದ ಪರಿಸ್ಥಿತಿ ಅಲ್ಲದೆ, ಮಕ್ಕಳು, ಹಳ್ಳಕೊಳ್ಳಗಳನ್ನು ದಾಟಿ ಹೋಗಬೇಕಾಗಿರುತ್ತದೆ. ಇದಕ್ಕೆ ಕಾಲುಸಂಕ, ತಡೆಗೋಡೆ, ಚೆಕ್ ಡ್ಯಾಂ, ಬ್ಯಾರೇಜ್ ಮತ್ತು ಸೇತುವೆ ನಿರ್ಮಾಣದ ಅವಶ್ಯಕತೆ ಇರುತ್ತದೆ. ಆದುದ್ದರಿಂದ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ ರೂ.60.00 ಕೋಟಿ ಅನುದಾನವನ್ನು ಮಂಜೂರು ಮಾಡಿ, ಸದರಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಪತ್ರದಲ್ಲಿ ಕೋರಿದ್ದಾಗಿ ತಿಳಿಸಿದ್ದಾರೆ.

ಸದರಿ ಪತ್ರದ ಮೇಲೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ‘ನಾವು ಅವರಿಗೆ 50 ಕೋಟಿ ಕಾಮಗಾರಿಗೆ ಅನುಮೋದನೆ ಮಂಡಳಿ ಸಭೆಯಲ್ಲಿ ಅನುಮೋದನೆ ಮಾಡಿದ್ದೇವೆ. ಅದರಲ್ಲಿ ಈ ಕಾಮಗಾರಿಗಳಿಗೆ ಅನುಮೋದನೆ ನೀಡಿ” ಎಂದು ಷರಾ ನಮೂದಿಸಿರುತ್ತಾರೆ ಎಂದಿದ್ದಾರೆ.

ಈ ಹಿನ್ನಲೆಯಲ್ಲಿ ರೈತರ/ಸಾರ್ವಜನಿಕರ ಹಿತದೃಷ್ಟಿಯಿಂದ ಸದರಿ ಕಾಮಗಾರಿಗಳನ್ನು ಕೈಗೊಳ್ಳುವುದು ಅವಶ್ಯವಿರುವುದಾಗಿ ಶಾಸಕರು, ಸಾಗರ ವಿಧಾನಸಭಾ ಕ್ಷೇತ್ರ ಇವರು ತಿಳಿಸಿರುವ ಹಿನ್ನಲೆಯಲ್ಲಿ ಹಾಗೂ ಉಪಮುಖ್ಯಮಂತ್ರಿಯವರ ನಿರ್ದೇಶನದನ್ವಯ ರೈತರ/ಸಾರ್ವಜನಿಕರ ಹಿತದೃಷ್ಟಿಯಿಂದ ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಕಾಲುಸಂಕ, ತಡೆಗೋಡೆ, ಚೆಕ್ ಡ್ಯಾಂ, ಬ್ಯಾರೇಜ್ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವುದು ಅವಶ್ಯವಿರುವ ಹಿನ್ನಲೆಯಲ್ಲಿ ನಿಗಮದ ಆರ್ಥಿಕ ಪ್ರತ್ಯಾಯೋಜನೆಯ ಕಂಡಿಕೆ-1,02 (iii) ರನ್ವಯ ನಿಗಮದ ನಿರ್ದೇಶಕರ ಮಂಡಳಿಗೆ ಅಧಿಕಾರವಿರುವುದರಿಂದ ಪ್ರಸ್ತುತ ಮಂಡಳಿ ಸಭೆಯು ಜರುಗದಿರುವ ಹಿನ್ನಲೆಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಮಾನ್ಯ ಉಪಮುಖ್ಯಮಂತ್ರಿಯವರಿಂದ ಅನುಮೋದನೆ ದೊರಕಿಸಿಕೊಡುವಂತೆ ಉಲ್ಲೇಖಿತ (2)ರ ಈ ಕಛೇರಿ ಪತ್ರದಲ್ಲಿ ಸರ್ಕಾರವನ್ನು ಕೋರಲಾಗಿರುತ್ತದೆ ಎಂದಿದ್ದಾರೆ.

ಅದರನ್ವಯ ಉಲ್ಲೇಖಿತ (3)ರ ಸರ್ಕಾರದ ಪತ್ರದಲ್ಲಿ ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ, ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳ ಕಾಲುಸಂಕ, ತಡೆಗೋಡೆ. ಚೆಕ್ ಡ್ಯಾಂ, ಬ್ಯಾರೇಜ್ ಮತ್ತು ಸೇತುವೆ ನಿರ್ಮಾಣ ಇತ್ಯಾದಿ ರೂ.60.00 ಕೋಟಿ ಮೊತ್ತದ 236 ಕಾಮಗಾರಿಗಳನ್ನು ಕೈಗೊಳ್ಳುವ ಪ್ರಸ್ತಾವನೆಗೆ ಉಪಮುಖ್ಯಮಂತ್ರಿಯವರು ಅನುಮೋದನೆ ನೀಡಿರುತ್ತಾರೆ. ಈ ಹಿನ್ನಲೆಯಲ್ಲಿ ಸದರಿ ವಿಷಯವಾಗಿ ನಿಯಮಾನುಸಾರ ಮುಂದಿನ ಕ್ರಮವಹಿಸುವಂತೆ ಸೂಚಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಆದ್ದರಿಂದ ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ, ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳ ಕಾಲುಸಂಕ, ತಡೆಗೋಡೆ. ಚೆಕ್ ಡ್ಯಾಂ, ಬ್ಯಾರೇಜ್ ಮತ್ತು ಸೇತುವೆ ನಿರ್ಮಾಣ ಇತ್ಯಾದಿ (234 ಸಂಖ್ಯೆ) ಕಾಮಗಾರಿಗಳನ್ನು 2025-26ನೇ ಸಾಲಿನ ಲೆಕ್ಕ ಶೀರ್ಷಿಕೆ 4701 ರಡಿ ಕೈಗೆತ್ತಿಕೊಂಡು, ನಿಗಮದ ನಿರ್ದೇಶಕರ ಮಂಡಳಿಯ ಘಟನೋತ್ತರ ಅನುಮೋದನೆ ಪಡೆಯುವ ಮತ್ತು ಸಂಬಂಧಪಟ್ಟ ಯೋಜನೆಯ ಪರಿಷ್ಕೃತ ಅಂದಾಜಿನಲ್ಲಿ ಅಳವಡಿಸಿಕೊಳ್ಳುವ ನಿಬಂಧನೆ ಹಾಗೂ ವಾರ್ಷಿಕ ಕಾರ್ಯಕ್ರಮ ಪಟ್ಟಿಯಲ್ಲಿ ಅಳವಡಿಸಿಕೊಂಡು ಅನುಮೋದನೆ ಪಡೆಯುವ ಷರತ್ತಿಗೊಳಪಟ್ಟು ರೂ.50.00 ಕೋಟಿಗಳಿಗೆ ಅನುಮೋದನೆ ನೀಡಲಾಗಿದ್ದು, ಸದರಿ ಕಾಮಗಾರಿಗಳನ್ನು ಪ್ಯಾಕೇಜ್‌ವರು (ಸೂಕ್ತ ಪ್ಯಾಕೇಜ್‌ಗಳನ್ನು ತಯಾರಿಸಿ, ಪ್ರತಿ ಪ್ಯಾಕೇಜ್‌ನ ಮೊತ್ತ ರೂ.5.00 ಕೋಟಿ ಮೀರದಂತೆ) ಟೆಂಡರ್ ಆಹ್ವಾನಿಸಲು ಇಲಾಖಾ | ನಿಗಮದ ನಿಯಮಾನುಸಾರ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಮುಂದುವರೆದು, ಸಾಗರ ನಗರದ ಬಸವನಹೊಳೆ ಡ್ಯಾಂ ಹೂಳು ತೆಗೆಯುವುದು ಹಾಗೂ ಅಭಿವೃದ್ಧಿ ಕಾಮಗಾರಿಯ ರೂ. 10.00 ಕೋಟಗಳ ವಿವರವಾದ ಯೋಜನಾ ವರದಿಯನ್ನು ತಯಾರಿಸಿ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವಂತೆ ಸಹ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

ಯಾವೆಲ್ಲ ಕಾಮಗಾರಿ ಕೈಗೊಳ್ಳಲು ಅನುಮೋದನೆ ಗೊತ್ತಾ? ಇಲ್ಲಿದೆ ಲೀಸ್ಟ್

ಪ್ರಾಮಾಣಿಕವಾಗಿ ಉನ್ನತ ಹುದ್ದೆಗೆರಿ ಆದರೆ ಆ ಹುದ್ದೆಯನ್ನು ಖರೀದಿ ಮಾಡಬೇಡಿ: ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ

ರಾಜ್ಯದ ರೈತರಿಗೆ ಮಹತ್ವದ ಮಾಹಿತಿ: ಈಗ ಜಮೀನಿನ ದಾಖಲೆ ‘ಆನ್ ಲೈನ್’ನಲ್ಲಿ ಲಭ್ಯ, ಜಸ್ಟ್ ಹೀಗೆ ಮಾಡಿ

Share. Facebook Twitter LinkedIn WhatsApp Email

Related Posts

ಕೆಡಿಪಿ ಸಭೆಯಲ್ಲಿ ರಮ್ಮಿ ಆಟ ಆಡಿದ ಡಿಸಿಎಫ್ ಗೆ ಕಾರಣ ಕೇಳಿ ನೋಟಿಸ್: ಸಚಿವ ಈಶ್ವರ್ ಖಂಡ್ರೆ

18/07/2025 9:29 PM1 Min Read

ರಾಜ್ಯದ ರೈತರಿಗೆ ಮಹತ್ವದ ಮಾಹಿತಿ: ಈಗ ಜಮೀನಿನ ದಾಖಲೆ ‘ಆನ್ ಲೈನ್’ನಲ್ಲಿ ಲಭ್ಯ, ಜಸ್ಟ್ ಹೀಗೆ ಮಾಡಿ

18/07/2025 9:02 PM1 Min Read

ಪ್ರಾಮಾಣಿಕವಾಗಿ ಉನ್ನತ ಹುದ್ದೆಗೆರಿ ಆದರೆ ಆ ಹುದ್ದೆಯನ್ನು ಖರೀದಿ ಮಾಡಬೇಡಿ: ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ

18/07/2025 8:48 PM1 Min Read
Recent News

BREAKING : ಭಾರತ ಸೇರಿ ಪ್ರಪಂಚದಾದ್ಯಂತ ‘ಗೂಗಲ್’ ಡೌನ್ ; ‘ಜಿಮೇಲ್, ಡ್ರೈವ್ ಸೇವೆ’ಗಳು ಸ್ಥಗಿತ, ಬಳಕೆದಾರರ ಪರದಾಟ |Google down

18/07/2025 9:55 PM

BIG NEWS: ಸಾಗರ ತಾಲ್ಲೂಕಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಬಂಪರ್ ಗಿಫ್ಟ್: 50 ಕೋಟಿ ಅನುದಾನ ಮಂಜೂರು

18/07/2025 9:39 PM

ಕೆಡಿಪಿ ಸಭೆಯಲ್ಲಿ ರಮ್ಮಿ ಆಟ ಆಡಿದ ಡಿಸಿಎಫ್ ಗೆ ಕಾರಣ ಕೇಳಿ ನೋಟಿಸ್: ಸಚಿವ ಈಶ್ವರ್ ಖಂಡ್ರೆ

18/07/2025 9:29 PM

BREAKING : ಬಿಹಾರದ ರೋಡ್ ಶೋ ವೇಳೆ ‘ಪ್ರಶಾಂತ್ ಕಿಶೋರ್’ ಎದೆಗೆ ಗಾಯ, ಆಸ್ಪತ್ರೆಗೆ ದಾಖಲು

18/07/2025 9:17 PM
State News
KARNATAKA

BIG NEWS: ಸಾಗರ ತಾಲ್ಲೂಕಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಬಂಪರ್ ಗಿಫ್ಟ್: 50 ಕೋಟಿ ಅನುದಾನ ಮಂಜೂರು

By kannadanewsnow0918/07/2025 9:39 PM KARNATAKA 2 Mins Read

ಶಿವಮೊಗ್ಗ: ಸಾಗರ ತಾಲ್ಲೂಕಿಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಂಪರ್ ಗಿಫ್ಟ್ ನೀಡಿದ್ದಾರೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಮನವಿಯ…

ಕೆಡಿಪಿ ಸಭೆಯಲ್ಲಿ ರಮ್ಮಿ ಆಟ ಆಡಿದ ಡಿಸಿಎಫ್ ಗೆ ಕಾರಣ ಕೇಳಿ ನೋಟಿಸ್: ಸಚಿವ ಈಶ್ವರ್ ಖಂಡ್ರೆ

18/07/2025 9:29 PM

ರಾಜ್ಯದ ರೈತರಿಗೆ ಮಹತ್ವದ ಮಾಹಿತಿ: ಈಗ ಜಮೀನಿನ ದಾಖಲೆ ‘ಆನ್ ಲೈನ್’ನಲ್ಲಿ ಲಭ್ಯ, ಜಸ್ಟ್ ಹೀಗೆ ಮಾಡಿ

18/07/2025 9:02 PM

ಪ್ರಾಮಾಣಿಕವಾಗಿ ಉನ್ನತ ಹುದ್ದೆಗೆರಿ ಆದರೆ ಆ ಹುದ್ದೆಯನ್ನು ಖರೀದಿ ಮಾಡಬೇಡಿ: ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ

18/07/2025 8:48 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.