Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಾಮರಾಜನಗರ :  ಮುಖ್ಯ ಅಡಿಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕ ಹಿನ್ನೆಲೆ : ಟಿಸಿ ಪಡೆದು ಬೇರೆ ಶಾಲೆಗೆ ಸೇರಿಸಿದ ಪೋಷಕರು

24/06/2025 4:55 PM

GOOD NEWS: ರಾಜ್ಯ ಸರ್ಕಾರದಿಂದ ದುರ್ಗಮ, ಸಂಪರ್ಕ ರಹಿತ ಪ್ರದೇಶದ ಜನತೆಗೆ ಗುಡ್ ನ್ಯೂಸ್

24/06/2025 4:53 PM

ರೈಲು ಪ್ರಯಾಣಿಕರಿಗೆ ಬಿಗ್ ಶಾಕ್ ; ‘ಟಿಕೆಟ್ ದರ’ ಏರಿಕೆ, ಜುಲೈ 1ರಿಂದ್ಲೇ ಹೊಸ ದರ ಜಾರಿ!

24/06/2025 4:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ರಾಜ್ಯ ಸರ್ಕಾರದಿಂದ ದುರ್ಗಮ, ಸಂಪರ್ಕ ರಹಿತ ಪ್ರದೇಶದ ಜನತೆಗೆ ಗುಡ್ ನ್ಯೂಸ್
KARNATAKA

GOOD NEWS: ರಾಜ್ಯ ಸರ್ಕಾರದಿಂದ ದುರ್ಗಮ, ಸಂಪರ್ಕ ರಹಿತ ಪ್ರದೇಶದ ಜನತೆಗೆ ಗುಡ್ ನ್ಯೂಸ್

By kannadanewsnow0924/06/2025 4:53 PM

ಬೆಂಗಳೂರು: ರಾಜ್ಯ ಸರ್ಕಾರದಿಂದ ರಾಜ್ಯದ ದುರ್ಗಮ ಪ್ರದೇಶ, ಸಂಪರ್ಕ ರಹಿತ ಪ್ರದೇಶಗಳ ಜನತೆಗೆ ಪ್ರಾಥಮಿಕ ಆರೋಗ್ಯ ಆರೈಕಾ ಸೇವೆಗೆ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಸಂಚಾರಿ ಆರೋಗ್ಯ ಘಟಕಗಳನ್ನು ಅನುಷ್ಠಾನ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಈ ಸಂಬಂಧ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಿದ್ದು, 20 ಸಂಚಾರಿ ಆರೋಗ್ಯ ಘಟಕಗಳನ್ನು 3 ವರ್ಷಗಳ ಅವಧಿಗೆ ರೂ.2007.48 ಲಕ್ಷಗಳ ವೆಚ್ಚದಲ್ಲಿ ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ಕೆಟಿಪಿಪಿ ಕಾಯ್ದೆ ಹಾಗೂ ನಿಯಮಗಳನ್ನು ಅನುಸರಿಸಿ ಕೆಲವೊಂದು ಷರತ್ತಿಗೊಳಪಟ್ಟು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

82 ಸಂಚಾರಿ ಆರೋಗ್ಯ ಘಟಕಗಳನ್ನು ( NHM ಅಡಿಯಲ್ಲಿ 50 + SCPTSP ರಡಿ 32 ) ಕೆಲವು ಷರತ್ತಿಗೊಳಪಟ್ಟು ಪಥಮವಾಗಿ 03 ವರ್ಷದ ಅವಧಿಗೆ ಕೆ.ಟಿ.ಪಿ.ಪಿ ಕಾಯ್ದೆ ಹಾಗೂ ನಿಯಮಗಳನ್ನು ಅನುಸರಿಸಿ ಅಲ್ಪಾವಧಿ ಟೆಂಡರ್ ಆಹ್ವಾನಿಸಲು ಅನುಮೋದನೆ ನೀಡಲಾಗಿರುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರಿಂದ ಕಡತ ಸಂಖ್ಯೆ: ಆಕುಕ 104 ಸಿಜಿಇ 2025ರಲ್ಲಿ ಈ ಕೆಳಕಂಡಂತೆ ಪುಸ್ತಾವನೆ ಸ್ವೀಕೃತವಾಗಿದೆ.

1. ಸಂಚಾರಿ ವೈದ್ಯಕೀಯ ಘಟಕಗಳ (MMU) ಚಲಿಸುವ ಚಿಕಿತ್ಸಾಲಯಗಳಾಗಿದ್ದು, ದುರ್ಗಮ ಮತ್ತು ಸಂಪರ್ಕ ರಹಿತ ಪ್ರದೇಶಗಳು ಹಾಗೂ ದುರ್ಬಲ ವರ್ಗದ ಸಮುದಾಯಕ್ಕೆ ಆರೋಗ್ಯ ಸೇವೆಗಳನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಈ ಘಟಕಗಳು ರೋಗ ತಪಾಸಣೆ, ರೋಗ ನಿರ್ಧರಣೆ, ಚಿಕಿತ್ಸೆ ಮೇಲ್ಮಟ್ಟದ ಆರೋಗ್ಯ ಸಂಸ್ಥೆಗಳಿಗೆ ಶಿಪಾರಸ್ಸು ಸೇವೆಗಳನ್ನೊಳಗೊಂಡ ಪ್ರಾಥಮಿಕ ಆರೋಗ್ಯ ಆರ್ತ್ಮಕಾ ಸೇವೆಗಳನ್ನು ನೀಡಲು ಸಜ್ಜುಗೊಳಿಸಲಾಗಿದೆ. ಇದರಿಂದ ಆರೋಗ್ಯ ಸೇವೆಗಳು ಅಲಭ್ಯವಾಗುವ ಸಮುದಾಯಕ್ಕೆ ಮನೆ ಬಾಗಿಲಲ್ಲೇ ಆರೋಗ್ಯ ಸೇವೆಗಳನ್ನು ಪರಿಣಾಮಕಾರಿಯಾಗಿ ನೀಡುವ ಉದ್ದೇಶವನ್ನು ಹೊಂದಿದೆ.

2. ಸಂಚಾರಿ ವೈದ್ಯಕೀಯ ಘಟಕಗಳ ಸಂಬಂಧಿಸಿದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿಗಳಂತೆ ಕೆಳಕಂಡ ಅಂಶಗಳು ಮಾರ್ಗದರ್ಶಿ ತಾತ್ವಿಕ ಅಂಶಗಳಾಗಿವೆ.

1. ಆರೋಗ್ಯ ಉಪಕೇಂದ್ರಗಳ ಮಟ್ಟದಲ್ಲಿ 12 ವಿಸ್ತ್ರತ ಆರೋಗ್ಯ ಸೇವೆಗಳನ್ನು ಎಲ್ಲಾ ದುರ್ಗಮ ಮತ್ತು ಸಂಪರ್ಕ ರಹಿತ ವುದೇಶಗಳಲ್ಲಿ ನೀಡುವ ಮೂಲಭೂತ ಆಶಯವನ್ನು ಹೊಂದಿದೆ.

2. ಜನವಸತಿ ಪ್ರದೇಶಗಳನ್ನು ಸಮೀಪದ ಆರೋಗ್ಯ ಉಪಕೇಂದ್ರಗಳಿಗೆ ತಲುಪಲು 5 ಕಿ.ಮೀ. ದೂರ ಅಥವಾ 30 ನಿಮಿಷಗಳ ಪುಯಾಣ ಅವಧಿಯನ್ನು ಪರಿಗಣಿಸಿ ವರ್ಗೀಕರಿಸಲಾಗುವುದು.

3. ಕನಿಷ್ಠ ಪಕ್ಷ ತಿಂಗಳಿಗೆ ಒಂದು ಬಾರಿ ಸಂಚಾರಿ ಆರೋಗ್ಯ ಘಟಕಗಳ ಮೂಲಕ ದುರ್ಗಮ ಪ್ರದೇಶ/ಸಂಪರ್ಕ ರಹಿತ ಪ್ರದೇಶಗಳನ್ನು ತಲುಪುವ ನಿಟ್ಟಿನಲ್ಲಿ ವರ್ಗೀಕರಿಸಲಾಗಿದೆ. 4. ಸಂಚಾರಿ ಆರೋಗ್ಯ ಘಟಕ ತಂಡವು ಶುಶೂಷಕರು ಅಥವಾ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ನೇತೃತ್ವದಲ್ಲಿದ್ದು, ಇವರು ಉಪಕೇಂದ್ರದ ಮಟ್ಟದಲ್ಲಿ 12 ವಿಸ್ತ್ರತ ಆರೋಗ್ಯ ಸೇವೆಗಳನ್ನು ನೀಡಲಿದ್ದಾರೆ.

5. ಪ್ರತಿ ದಿನ ಪ್ರತಿ ಸಂಚಾರಿ ಆರೋಗ್ಯ ಘಟಕವು ಕನಿಷ್ಠ 2-3 ಜನವಸತಿ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ನೀಡಲಿದೆ.

3. ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ-ಜನಮನ್)ದ ಮಾರ್ಗಸೂಚಿಗಳಂತೆ ಕರ್ನಾಟಕದ ಅಧಿಸೂಚಿತ ಆದಿವಾಸಿ ಜನ ವಸತಿ ಪುದೇಶಗಳಲ್ಲಿ ಸಂಚಾರಿ ವೈದ್ಯಕೀಯ ಘಟಕಗಳ ಮೂಲಕ ಆರೋಗ್ಯ ಸೇವೆಗಳನ್ನು ನೀಡಬೇಕಾಗಿದ್ದು, ರಾಜ್ಯದ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ 780 ಜನ ವಸತಿ ಪ್ರದೇಶಗಳಿವೆ.

4. ದರ್ತಿ ಅಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ (ಡಿಎ-ಜೆಜಿಯುಎ) ದ ಮಾರ್ಗಸೂಚಿಗಳಂತೆ ಎರಡು ಅಂಶಗಳನ್ನು ಖಾತ್ರಿಪಡಿಸಬೇಕಿದೆ.

1. ಪರಿಶಿಷ್ಟ ಪಂಗಡದ ಕುಟುಂಬಗಳು ವಾಸಿಸುವ ಜನವಸತಿ ಪ್ರದೇಶಗಳಿಂದ ಐದು ಕಿ.ಮೀ ವ್ಯಾಪ್ತಿಯ ಒಳಗೆ ಆರೋಗ್ಯ ಉಪ ಕೇಂದ್ರವಿರಬೇಕು, ಎರಡು ಹಳ್ಳಿಗಳು ಈ ಮಾನದಂಡದ ವ್ಯಾಪ್ತಿಯನ್ನು ಪೂರೈಸದಿದ್ದಲ್ಲಿ ಈ ಹಳ್ಳಿಗಳ ಸಮೀಪದಲ್ಲಿ ಆರೋಗ್ಯ ಉಪಕೇಂದ್ರವನ್ನು ಸ್ಥಾಪಿಸಬೇಕಾಗಿದೆ.

2. ಪರಿಶಿಷ್ಟ ಪಂಗಡದ ಕುಟುಂಬಗಳು ವಾಸಿಸುವ ಜನವಸತಿ ಪ್ರದೇಶಗಳಿಂದ ಹತ್ತು ಕಿ.ಮೀ ವ್ಯಾಪ್ತಿಯ ಒಳಗೆ ಪ್ರಾಥಮಿಕ ಆರೋಗ್ಯ ಕೇಂದ್ರವಿರಬೇಕು, ರಾಜ್ಯದಲ್ಲಿ 116 ಹಳ್ಳಿಗಳು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 10 ಕಿ.ಮೀ ಕ್ಕಿಂತ ಹೆಚ್ಚು ದೂರದಲ್ಲಿದ್ದು, ಈ ಹಳ್ಳಿಗಳಿಗೆ ಸಂಚಾರಿ ಆರೋಗ್ಯ ಘಟಕಗಳ (MHU) ಮುಖೇನ ಆರೋಗ್ಯ ಸೇವೆಗಳನ್ನು ನೀಡಬೇಕಾಗಿದೆ.

5. ಸಂಚಾರಿ ವೈದ್ಯಕೀಯ ಘಟಕಗಳ ಸೇವಾ ಕ್ಷೇತ್ರ ಮತ್ತು ಸಂಖ್ಯೆಯನ್ನು ಮೇಲ್ಕಂಡ ಮಾನದಂಡಗಳ ಪ್ರಕಾರ ಲೆಕ್ಕಾಚಾರ ಮಾಡಿರುವುದಿಲ್ಲ, ಆದುದರಿಂದ ಸಂಚಾರಿ ಘಟಕಗಳ ನಿರ್ದಿಷ್ಟ ಸಂಖ್ಯೆ ಮತ್ತು ಸೇವಾಕ್ಷೇತ್ರ ವನ್ನು ಗುರುತಿಸುವ ಪ್ರಕ್ರಿಯೆ ನಡೆಯಬೇಕಾಗಿರುತ್ತದೆ. ರಾಜ್ಯದಲ್ಲಿ ಪ್ರತಿ ಗ್ರಾಮದಲ್ಲಿ ಲಭ್ಯವಿರುವ ಸರ್ಕಾರಿ ಕಟ್ಟಡಗಳ ಸಣ್ಣ ಕೊಠಡಿಗಳನ್ನು ಬಳಸಿಕೊಂಡು ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಬಹುದಾಗಿದ್ದು, ಸಂಚಾರಿ ವೈದ್ಯಕೀಯ ಘಟಕಗಳ ಅಗತ್ಯವು ಕಂಡುಬರುವುದಿಲ್ಲ, ಈ ವಾಹನದಲ್ಲಿ ರೋಗಿಗಳ ತಪಾಸಣೆಗಾಗಿ ಹಾಸಿಗೆ/ಪರೀಕ್ಷಾ ಟೇಬಲ್ ನ್ನು ಅಳವಡಿಸಬೇಕಾಗಿದ್ದು, ಹೆಚ್ಚಿನ ಸ್ಥಳಾವಕಾಶದ ಅಗತ್ಯವಿರುತ್ತದೆ. ಇದರ ಬದಲಾಗಿ ಸಂಚಾರಿ ಆರೋಗ್ಯ ಘಟಕವು (MHU) ಸಾಕಾಗಲಿದ್ದು ಆರೋಗ್ಯ ಆರೈಕಾ ಸಿಬ್ಬಂದಿಗಳ ಪುಯಾಣ ವ್ಯವಸ್ಥೆಗೆ ನಾಲ್ಕು ಚಕ್ರದ ವಾಹನಗಳಾದ ಬೊಲೇರೋ ದಂತಹ ವಾಹನವು ಅಗತ್ಯವಿರುತ್ತದೆ.

6. ಮಾನವ ಸಂಪನ್ಮೂಲವು ಸೇರಿದಂತೆ ಪ್ರತಿ ಸಂಚಾರಿ ಆರೋಗ್ಯ ಘಟಕಕ್ಕೆ ಪ್ರತಿ ಮಾಹೆಗೆ ಸುಮಾರು ರೂ. 1.95 ಲಕ್ಷಗಳು ತಗುಲಿದ್ದು, ಈ ಮೊತ್ತವು ಸಂಚಾರಿ ವೈದ್ಯಕೀಯ ಘಟಕಕ್ಕೆ ರೂ.2.75 -2.85 ಲಕ್ಷಗಳನ್ನು ಅಂದಾಜಿಸಲಾಗಿದೆ.

7. ಎರಡು ಮಾದರಿಯ ಸಂಚಾರಿ ಆರೋಗ್ಯ ಘಟಕಗಳನ್ನು ಅನುಷ್ಠಾನ ಮಾಡಲು ಉದ್ದೇಶಿಸಲಾಗಿದೆ, ಇವುಗಳೆಂದರೆ ಒಂದು ವೈದ್ಯರು ಮತ್ತು ಶುಶೂಷಕರು ಇದ್ದು ಇನ್ನೊಂದು ಮಾದರಿಯಲ್ಲಿ ಶುಶೂಷಕರು ಮಾತ್ರವೇ ಇದ್ದು, ವೈದ್ಯರು ಇರುವುದಿಲ್ಲ. ಮೊದಲ ಮಾದರಿಯ ಘಟಕವು ಪ್ರಾಥಮಿಕ ಆರೋಗ್ಯ ಕೇಂದ್ರವು 10 ಕಿ.ಮೀ ಗಿಂತ ಹೆಚ್ಚು ದೂರದಲ್ಲಿರುವ ಅಥವಾ ಪ್ರಯಾಣಕ್ಕೆ ಒಂದು ಗಂಟೆಗಿಂತ ಹೆಚ್ಚು ಅವಧಿಯು ತಗಲುವ ಪ್ರದೇಶಗಳಿಗೆ ಸೂಕ್ತವಾಗಿರುತ್ತದೆ. ಎರಡನೇ ಮಾದರಿ ಘಟಕವು 10 ಕಿ.ಮೀ ಗಿಂತ ಕಡಿಮೆ ದೂರದಲ್ಲಿರುವ ಹಾಗೂ 5 ಕಿ.ಮೀ ಗಿಂತ ಹೆಚ್ಚು ದೂರದಲ್ಲಿರುವ ಆರೋಗ್ಯ ಉಪಕೇಂದ್ರಗಳು ಅಥವಾ ಪಯಾಣಕ್ಕೆ ಮೂವತ್ತು ನಿಮಿಷಕ್ಕಿಂತ ಹೆಚ್ಚು ಅವಧಿಯು ತಗಲುವ ಪ್ರದೇಶಗಳಿಗೆ ಸೂಕ್ತವಾಗಿರುತ್ತದೆ.

8. ಮೊದಲ ಮಾದರಿಯ ಸಂಚಾರಿ ಆರೋಗ್ಯ ಘಟಕಕ್ಕೆ ಪತಿ ಮಾಹೆಗೆ ರೂ.1.95 ಲಕ್ಷಗಳು ತಗುಲಲಿದ್ದು, ಎರಡನೇ ಮಾದರಿಯ ಆರೋಗ್ಯ ಘಟಕಗಳಿಗೆ ಪ್ರತಿ ಮಾಹೆಗೆ ರೂ.1.20 ಲಕ್ಷಗಳು ತಗಲಲಿದ್ದು, ಸಂಚಾರಿ ಆರೋಗ್ಯ ಘಟಕಗಳ ಕಾರ್ಯಾಚರಣೆಗೆ ತಗಲುವ ವೆಚ್ಚದ ವಿವರಗಳು ಕೆಳಗಿನಂತಿವೆ.

  1. ವೈದ್ಯರ ವೇತನ – 0.75 ಲಕ್ಷಗಳು
  2. ಶುಶ್ರೂಷಕರ ವೇತನ – 0.25 ಲಕ್ಷಗಳು
  3. ಪ್ರಯೋಗಾಲಯ ತಂತ್ರಜ್ಞರ ವೇತನ – 0.20 ಲಕ್ಷ
  4. ಸಂಚಾರಿ ಆರೋಗ್ಯ ಘಟಕಗಳ ಪ್ರಯೋಗಾಲಯ ಸಾಮಗ್ರಿಗಳ ವೆಚ್ಚ – 0.10 ಲಕ್ಷಗಳು
  5. ಸಂಚಾರಿ ಆರೋಗ್ಯ ಘಟಕದ ವಾಹನ (ಸೇಡನ್) ಬಾಡಿಗೆ ವೆಚ್ಚ ( ಚಾಲಕರು ಸೇರಿದಂತೆ) – 0.60
  6. ಇಂಟರ್ ನೆಟ್ ಮತ್ತು ಇತರೆ ಪ್ರಾಸಂಗಿಕ ವೆಚ್ಚಗಳು – 0.05 ಲಕ್ಷಗಳು
  7. ಒಟ್ಟು 1.95 ಲಕ್ಷಗಳು.

ಸಂಚಾರಿ ಆರೋಗ್ಯ ಘಟಕಗಳ ಅನುಷ್ಠಾನಕ್ಕೆ 2025-26ನೇ ಸಾಲಿನಲ್ಲಿ ಒಟ್ಟಾರೆಯಾಗಿ do.2763.36 ಲಕ್ಷಗಳ ಅನುಮೋದನೆಯಾಗಿದ್ದು ಇದರಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ರೂ.1692.00 ಲಕ್ಷಗಳು ಹಾಗೂ ರಾಜ್ಯ ಸರ್ಕಾರದ ಲೆಕ್ಕ ಶೀರ್ಷಿಕೆ:2210-06- 200-0-21 ರಡಿ ರೂ.1071.36 ಲಕ್ಷಗಳ ಅನುಮೋದನೆಯಾಗಿದೆ. 2025-26ನೇ ಸಾಲಿನಲ್ಲಿ 82 ಸಂಚಾರಿ ಆರೋಗ್ಯ ಘಟಕಗಳಿಗೆ ಅನುಮೋದನೆಯಾಗಿರುತ್ತದೆ. ಹೊಸ ಮಾದರಿಯ ಸಂಚಾರಿ ಆರೋಗ್ಯ ಘಟಕಗಳ ಅನುಷ್ಠಾನದಿಂದ ಆರ್ಥಿಕ ಉಳಿತಾಯವಾಗುತ್ತದೆ.

10. ಮೇಲಿನ ವಿವರಗಳ ಹಿನ್ನೆಲೆಯಲ್ಲಿ, ರಾಜ್ಯದಲ್ಲಿನ ದುರ್ಗಮ ಪ್ರದೇಶ/ಸಂಪರ್ಕ ರಹಿತ ಪ್ರದೇಶಗಳಿಗೆ (Remote Places) ಪ್ರಾಥಮಿಕ ಆರೋಗ್ಯ ಸೇವೆಯನ್ನು ನೀಡಲು ಸಂಚಾರಿ ಆರೋಗ್ಯ ಘಟಕಗಳ (ಎಂ.ಹೆಚ್.ಯು) ಅನುಷ್ಠಾನಕ್ಕೆ ರೂ.15.97 ಕೋಟಿಗಳ ವೆಚ್ಚದಲ್ಲಿ ಈ ಕೆಳಕಂಡ ಅಂಶಗಳನ್ನು ಒಳಗೊಂಡಂತೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಲಾಗಿದೆ:

i. ಹಾಲಿ ಇರುವ ಟೆಂಡರ್ ಅನ್ನು ರದ್ದುಗೊಳಿಸುವುದು
PM-JANMAN, DAGJUA ಮತ್ತು ಮಾರ್ಗಸೂಚಿಗಳನ್ನಯ ಸಂಚಾರಿ NHM ಆರೋಗ್ಯ ಘಟಕಗಳನ್ನು ಜಿಲ್ಲೆಗಳ ಅಗತ್ಯತೆಗೆ ಅನುಗುಣವಾಗಿ ಮರು ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು.

iii. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಮುಖಾಂತರ ಹೊರಗುತ್ತಿಗೆ ವಾಹನವನ್ನು (SUV/SEDAN) ಚಾಲಕರು ಸೇರಿದಂತೆ ಪಡೆಯುವುದು ಹಾಗೂ ಅಗತ್ಯ ಮಾನವ ಸಂಪನ್ಮೂಲಗಳಾದ ವೈದ್ಯರು (MBBS), ಶುಶೂಷಕಿ, ಪ್ರಯೋಗಶಾಲಾ ತಂತ್ರಜ್ಞರು, ಸಹಾಯಕರು ಇತ್ಯಾದಿ ರವರನ್ನು ಖಡ್ಡಾಯ ಗ್ರಾಮೀಣ ಸೇವೆ ಅಥವಾ ಲಭ್ಯವಿಲ್ಲದೆ ಇದ್ದಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ಹಾಗೂ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಇತರೆ ಸಿಬ್ಬಂದಿಗಳನ್ನು KTPP ನಿಯಮಾನುಸಾರ ಪಡೆಯಲಾಗುವುದು. ಪರ್ಯಾಯವಾಗಿ ಪೂರ್ಣ ಸೇವೆಯನ್ನು ಪಿಪಿಪಿ ಆಧಾರದ ಮೇಲೆ ಪಡೆಯಲಾಗುವುದು.

iv. ಸಂಚಾರಿ ಆರೋಗ್ಯ ಘಟಕಗಳನ್ನು ಈ ಮೇಲ್ಕಂಡ ಎರಡು ಮಾದರಿಗಳಲ್ಲಿ ಜಿಲ್ಲೆಯ/ಕ್ಷೇತ್ರಕ್ಕೆ ಅನುಗುಣವಾಗಿ ಅನುಷ್ಠಾನಗೊಳಿಸಲಾಗುವುದು.
v. ಮೂಲಭೂತ ಉಪಕರಣಗಳನ್ನು (ಬಿಪಿ ಆಪರೇಟಸ್, ಸೈತಸ್ಕೋಪ್ ಇತ್ಯಾದಿ), ಅಗತ್ಯ ಔಷಧಿಗಳು, ರಾಸಾಯನಿಕಗಳು ಹಾಗೂ ಲಾಜಿಸ್ಟಿಕ್ಸ್ ಗಳನ್ನು KSMSCL ಮುಖಂತರ KTPP ಖರೀದಿಸಲಾಗುವುದು.
vi. ಇದಕ್ಕೆ ಅವಶ್ಯಕ ಅನುದಾನವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು SCSP/TSP ಅನುಮೋದಿತ ಅನುದಾನದಿಂದ ಭರಿಸಲಾಗುವುದು.
vii. ಭಾರತ ಸರ್ಕಾರದ “ಗತಿ ಶಕ್ತಿ” ಪೋರ್ಟಲ್ ನಲ್ಲಿ ವರದಿ ಮಾಡಲಾಗುವುದು.
ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಕುಕ 104 ಸಿಜಿಇ 2025 ಬೆಂಗಳೂರು, ದಿನಾಂಕ:24.06.2025
ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯದಲ್ಲಿನ ದುರ್ಗಮ ಪ್ರದೇಶ/ಸಂಪರ್ಕ ರಹಿತ ಪುದೇಶಗಳಿಗೆ (Remote Places) ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸಲು ಸಂಚಾರಿ ಆರೋಗ್ಯ ಘಟಕಗಳ (ಎಂ.ಹೆಚ್.ಯು) ರೂ.15.97 ಕೋಟಿಗಳ (ಹದಿನೈದು ಕೋಟಿ ತೊಂಬತ್ತೇಳು ಲಕ್ಷ ರುಪಾಯಿಗಳು ಮಾತ್ರ ವೆಚ್ಚದಲ್ಲಿ ಈ ಕೆಳಕಂಡ ಅಂಶಗಳನ್ವಯ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ:

1. ಹಾಲಿಯಿರುವ ಟೆಂಡರ್ ಅನ್ನು ರದ್ದುಗೊಳಿಸಲು.
2. PM-JANMAN, DAGUA ಮತ್ತು ಮಾರ್ಗಸೂಚಿಗಳನ್ವಯ ಸಂಚಾರಿ NHM ಆರೋಗ್ಯ ಘಟಕಗಳನ್ನು ಜಿಲ್ಲೆಗಳ ಅಗತ್ಯತೆಗೆ ಅನುಗುಣವಾಗಿ ಮರು ಪರಿಶೀಲಿಸಿ ಅಗತ್ಯ ಕಮ ಕೈಗೊಳ್ಳತಕ್ಕದ್ದು.
3. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಮುಖಾಂತರ ಹೊರಗುತ್ತಿಗೆ ವಾಹನವನ್ನು (SUV/SEDAN) ಚಾಲಕರು ಸೇರಿದಂತೆ ಪಡೆಯುವುದು. ಅಗತ್ಯ ಮಾನವ ಸಂಪನ್ಮೂಲಗಳಾದ ವೈದ್ಯರು (MBBS), ಶುಶೂಷಕಿ, ಪುಯೋಗಶಾಲಾ ತಂತ್ರಜ್ಞರು, ಸಹಾಯಕರು ಇತ್ಯಾದಿ ರವರನ್ನು ಕಡ್ಡಾಯ ಗ್ರಾಮೀಣ ಸೇವೆ ಅಥವಾ ಲಭ್ಯವಿಲ್ಲದಿದ್ದಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ಹಾಗೂ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಇತರೆ ಸಿಬ್ಬಂದಿಗಳನ್ನು KTPP ನಿಯಮಗಳನ್ನು ಅನುಸರಿಸಿ ಪಡೆಯುವುದು. ಪರ್ಯಾಯವಾಗಿ ಪೂರ್ಣ ಸೇವೆಯನ್ನು ಪಿಪಿಪಿ ಆಧಾರದ ಮೇಲೆ ಪಡೆಯಲು ಕ್ರಮ ಕೈಗೊಳ್ಳತಕ್ಕದ್ದು.
4. ಜಿಲ್ಲಾ ಆರೋಗ್ಯ ಕಲ್ಯಾಣ ಅಧಿಕಾರಿಗಳು ಸಂಚಾರಿ ಆರೋಗ್ಯ ಘಟಕಗಳನ್ನು ಈ ಮೇಲ್ಕಂಡ ಎರಡು ಮಾದರಿಗಳಲ್ಲಿ ಜಿಲ್ಲೆಯ/ಕ್ಷೇತ್ರಕ್ಕೆ ಅನುಗುಣವಾಗಿ ನಿರ್ಧರಿಸಿ ಅಭಿಯಾನ ನಿರ್ದೇಶಕರು ಎನ್.ಹೆಚ್. ಎಮ್. ರವರ ಅನುಮೋದನೆ ಪಡೆದು ಅನುಷ್ಠಾನಗೊಳಿಸತಕ್ಕದ್ದು.
5. ಮೂಲಭೂತ ಉಪಕರಣಗಳನ್ನು (ಬಿಪಿ ಆಪರೇಟಸ್, ಸೈತಸ್ಕೋಪ್ ಇತ್ಯಾದಿ), ಅಗತ್ಯ ಔಷಧಿಗಳು, ರಾಸಾಯನಿಕಗಳು ಹಾಗೂ ಲಾಜಿಸ್ಟಿಕ್ಸ್ ಗಳನ್ನು KSMSCL ಮುಖಾಂತರ KTPP ನಿಯಮಗಳನ್ನು ಅನುಸರಿಸಿ ಸಂಗ್ರಹಿಸತಕ್ಕದ್ದು.
6. ಸಂಚಾರಿ ಆರೋಗ್ಯ ಘಟಕಗಳ ಅನುಷ್ಠಾನಕ್ಕೆ ಅಗತ್ಯವಾದ ಅನುದಾನವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು SCSP/TSP ಅನುಮೋದಿತ ಅನುದಾನದಿಂದ ಭರಿಸತಕ್ಕದ್ದು.
7. ಈ ಯೋಜನೆಯ ವಿವರಗಳನ್ನು ಭಾರತ ಸರ್ಕಾರದ “ಗತಿ ಶಕ್ತಿ” ಪೋರ್ಟಲ್ ನಲ್ಲಿ ವರದಿ ಮಾಡತಕ್ಕದ್ದು.

1.ಹಾಲಿಯಿರುವ ಟೆಂಡರ್‌ನ್ನು ರದ್ದುಪಡಿಸಲು

2.KTPP ಅವಕಾಶಗಳಿಗೆ ಕ್ರಮವಹಿಸತಕ್ಕದ್ದು ಹಾಗೂ ಈ ಸಂಬಂಧ ಯಾವುದೇ ಕಾನೂನಾತ್ಮಕ ಅಥವಾ ಕಾರ್ಯಾಚರಣೆಯ ಅಡೆತಡೆಗಳು ಉದ್ಭವಿಸದಂತೆ ಖಚಿತಪಡಿಸಿಕೊಳ್ಳತಕ್ಕದ್ದು.
3.ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ: ಆಇ 695 ವೆಚ್ಚ-5/2022, ದಿನಾಂಕ: 16.06.2025 ರಲ್ಲಿನ ಸಹಮತಿ ಹಾಗೂ ಸಚಿವ ಸಂಪುಟ ನಿರ್ಣಯ ಸಂಖ್ಯೆ: ಸಿ- 475/2025 ರನ್ವಯ ಹೊರಡಿಸಲಾಗಿದೆ.

ಸಚಿವ ಜಮೀರ್ ರಾಜೀನಾಮೆಗೆ, ವಸತಿ ಹಂಚಿಕೆ ಹಗರಣದ ನ್ಯಾಯಾಂಗ ತನಿಖೆಗೆ ಸಿ.ಟಿ ರವಿ ಒತ್ತಾಯ

ದೊಡ್ಡರಂಗೇಗೌಡ ಆರೋಗ್ಯ ವಿಚಾರಿಸಿದ ಸಚಿವ ಶಿವರಾಜ ತಂಗಡಗಿ: ವೈದ್ಯಕೀಯ ವೆಚ್ಚ ಸರ್ಕಾರವೇ ಭರಿಸುವುದಾಗಿ ಘೋಷಣೆ

ಬೆಂಗಳೂರು ಜನತೆ ಗಮನಕ್ಕೆ: ನಾಳೆ, ನಾಡಿದ್ದು, ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

Share. Facebook Twitter LinkedIn WhatsApp Email

Related Posts

ಚಾಮರಾಜನಗರ :  ಮುಖ್ಯ ಅಡಿಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕ ಹಿನ್ನೆಲೆ : ಟಿಸಿ ಪಡೆದು ಬೇರೆ ಶಾಲೆಗೆ ಸೇರಿಸಿದ ಪೋಷಕರು

24/06/2025 4:55 PM1 Min Read

ಸಚಿವ ಜಮೀರ್ ರಾಜೀನಾಮೆಗೆ, ವಸತಿ ಹಂಚಿಕೆ ಹಗರಣದ ನ್ಯಾಯಾಂಗ ತನಿಖೆಗೆ ಸಿ.ಟಿ ರವಿ ಒತ್ತಾಯ

24/06/2025 4:40 PM2 Mins Read

ರಾಜ್ಯ ಸರ್ಕಾರದಿಂದ ವೈದ್ಯಕೀಯ ಉಪಕರಣಗಳ ಮೇಲ್ವಿಚಾರಣೆ, ನಿರ್ವಹಣೆಗೆ ‘ಇ-ಉಪಕರಣ ತಂತ್ರಾಂಶ’ ಅನುಷ್ಠಾನ

24/06/2025 4:38 PM3 Mins Read
Recent News

ಚಾಮರಾಜನಗರ :  ಮುಖ್ಯ ಅಡಿಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕ ಹಿನ್ನೆಲೆ : ಟಿಸಿ ಪಡೆದು ಬೇರೆ ಶಾಲೆಗೆ ಸೇರಿಸಿದ ಪೋಷಕರು

24/06/2025 4:55 PM

GOOD NEWS: ರಾಜ್ಯ ಸರ್ಕಾರದಿಂದ ದುರ್ಗಮ, ಸಂಪರ್ಕ ರಹಿತ ಪ್ರದೇಶದ ಜನತೆಗೆ ಗುಡ್ ನ್ಯೂಸ್

24/06/2025 4:53 PM

ರೈಲು ಪ್ರಯಾಣಿಕರಿಗೆ ಬಿಗ್ ಶಾಕ್ ; ‘ಟಿಕೆಟ್ ದರ’ ಏರಿಕೆ, ಜುಲೈ 1ರಿಂದ್ಲೇ ಹೊಸ ದರ ಜಾರಿ!

24/06/2025 4:42 PM

ಸಚಿವ ಜಮೀರ್ ರಾಜೀನಾಮೆಗೆ, ವಸತಿ ಹಂಚಿಕೆ ಹಗರಣದ ನ್ಯಾಯಾಂಗ ತನಿಖೆಗೆ ಸಿ.ಟಿ ರವಿ ಒತ್ತಾಯ

24/06/2025 4:40 PM
State News
KARNATAKA

ಚಾಮರಾಜನಗರ :  ಮುಖ್ಯ ಅಡಿಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕ ಹಿನ್ನೆಲೆ : ಟಿಸಿ ಪಡೆದು ಬೇರೆ ಶಾಲೆಗೆ ಸೇರಿಸಿದ ಪೋಷಕರು

By kannadanewsnow0524/06/2025 4:55 PM KARNATAKA 1 Min Read

ಚಾಮರಾಜನಗರ : ಮುಖ್ಯ ಅಡಿಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕ ಹಿನ್ನೆಲೆಯಲ್ಲಿ, ಪೋಷಕರು ಟಿಸಿ ಪಡೆದು ಬೇರೆ ಶಾಲೆಗೆ ಸೇರಿಸಿರುವ…

GOOD NEWS: ರಾಜ್ಯ ಸರ್ಕಾರದಿಂದ ದುರ್ಗಮ, ಸಂಪರ್ಕ ರಹಿತ ಪ್ರದೇಶದ ಜನತೆಗೆ ಗುಡ್ ನ್ಯೂಸ್

24/06/2025 4:53 PM

ಸಚಿವ ಜಮೀರ್ ರಾಜೀನಾಮೆಗೆ, ವಸತಿ ಹಂಚಿಕೆ ಹಗರಣದ ನ್ಯಾಯಾಂಗ ತನಿಖೆಗೆ ಸಿ.ಟಿ ರವಿ ಒತ್ತಾಯ

24/06/2025 4:40 PM

ರಾಜ್ಯ ಸರ್ಕಾರದಿಂದ ವೈದ್ಯಕೀಯ ಉಪಕರಣಗಳ ಮೇಲ್ವಿಚಾರಣೆ, ನಿರ್ವಹಣೆಗೆ ‘ಇ-ಉಪಕರಣ ತಂತ್ರಾಂಶ’ ಅನುಷ್ಠಾನ

24/06/2025 4:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.