Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಒಂದು ವಾರ ‘ತಲೆ ಸ್ನಾನ’ ಮಾಡದಿದ್ರೆ ಏನಾಗುತ್ತೆ ಗೊತ್ತಾ.?

13/06/2025 10:00 PM

ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ನಿವೃತ್ತ ನೌಕರರಿಗೆ UPS ಪಿಂಚಣಿ ಯೋಜನೆ ಬಗ್ಗೆ ಮಹತ್ವದ ಮಾಹಿತಿ

13/06/2025 9:55 PM

BREAKING : ರೈತನ ವಿರೋಧದ ನಡುವೆ ವಿದ್ಯುತ್ ಹೈ ಟೆನ್ಶನ್ ಲೈನ್ ಅಳವಡಿಕೆ : ವಿಷ ಸೇವಿಸಿ ದಂಪತಿ ಆತ್ಮಹತ್ಯೆಗೆ ಯತ್ನ!

13/06/2025 9:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ‘ಆರೋಗ್ಯ ಇಲಾಖೆ ನೌಕರ’ರಿಗೆ ಗುಡ್ ನ್ಯೂಸ್: ‘ವರ್ಗಾವಣೆ’ಗೆ ಮಾರ್ಗಸೂಚಿ ಪ್ರಕಟ
KARNATAKA

ರಾಜ್ಯದ ‘ಆರೋಗ್ಯ ಇಲಾಖೆ ನೌಕರ’ರಿಗೆ ಗುಡ್ ನ್ಯೂಸ್: ‘ವರ್ಗಾವಣೆ’ಗೆ ಮಾರ್ಗಸೂಚಿ ಪ್ರಕಟ

By kannadanewsnow0916/06/2024 5:42 AM

ಬೆಂಗಳೂರು: ರಾಜ್ಯ ಸರ್ಕಾರದಿಂದ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳನ್ನು 2024-25ನೇ ಸಾಲಿನಲ್ಲಿ ವರ್ಗಾವಣೆಗಾಗಿ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಈ ಮೂಲಕ ಆರೋಗ್ಯ ಇಲಾಖೆಯ ನೌಕರರ ವರ್ಗಾವಣೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ಅದರಲ್ಲಿ 2024-25ನೇ ಸಾಲಿನ ವರ್ಗಾವಣೆಯನ್ನು ಉಲ್ಲೇಖಿತ ಸರ್ಕಾರದ ಪತ್ರದಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ಕಾಯ್ದೆ 2011 ಹಾಗೂ ಕಾಲಕಾಲಕ್ಕೆ ಹೊರಡಿಸಲಾದ ತಿದ್ದುವಡಿ ಕಾಯ್ದೆಯಡಿ ಹಾಗೂ ಈ ಕಾಯ್ದೆಯಡಿ ರಚಿಸಲಾಗಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಡಿಸಿ ದಿನಾಂಕ:31.07.2024ರ ಒಳಗಾಗಿ ಪೂರ್ಣಗೊಳಿಸಲು ಸರ್ಕಾರ ಸಹಮತಿ ನೀಡಲಾಗಿದೆ ಎಂದಿದೆ.

2024-25ನೇ ಸಾಲಿನ ಸಾರ್ವಜನಿಕ ವರ್ಗಾವಣೆ ಪ್ರಕ್ರಿಯೆಯನ್ನು ಸಮಾಲೋಚನೆ ಮೂಲಕ ವರ್ಗಾವಣೆ ಕಾಯ್ದೆ ಮತ್ತು ನಿಯಮ-2011 ಹಾಗೂ ತಿದ್ದುಪಡಿ ನಿಯಮಗಳನ್ವಯ ಕೈಗೊಳ್ಳಲು ಅಗತ್ಯ ಮಾಹಿತಿ ಕ್ರೋಡೀಕರಿಸುವ ಹಾಗೂ ಪರಿಶೀಲನಾ ಕಾರ್ಯ ಕೈಗೊಳ್ಳಲು ವರ್ಗಾವಣಾ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಸಿದೆ.

ವರ್ಗಾವಣೆ ಅರ್ಜಿಗಳನ್ನು ಸಲ್ಲಿಸುವ ವಿಧಾನ

1. ವರ್ಗಾವಣೆ ಕಾಯ್ದೆ ಮತ್ತು ನಿಯಮಗಳನ್ವಯ ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳು ವರ್ಗಾವಣೆ ಅರ್ಜಿಗಳನ್ನು ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಕಛೇರಿ ಮುಖ್ಯಸ್ಥರ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳು/ನೌಕರರು ತಮ್ಮ ನಿಯಂತ್ರಣಾಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸುವುದು.
2. ವೈದ್ಯಾಧಿಕಾರಿಗಳು/ತಜ್ಞ ವೈದ್ಯರು ಮತ್ತು ಇತರೆ ಸಿಬ್ಬಂದಿಗಳ ವರ್ಗಾವಣೆ ಅರ್ಜಿಗಳ ಮಾಹಿತಿಯನ್ನು ಪತ್ರದೊಂದಿಗೆ ಲಗತ್ತಿಸಿರುವ ವರ್ಗಾವಣೆ ನಮೂನೆಯ ಅರ್ಜಿಯಲ್ಲಿ ಭರ್ತಿ ಮಾಡುವುದು. ಸದರಿ ವರ್ಗಾವಣೆ ಅರ್ಜಿಯ ಮಾಹಿತಿಯನ್ನು ಅಧಿಕಾರಿ/ನೌಕರರ ಸೇವಾ ವಿವರ ಹಾಗೂ ಮೂಲ ಸೇವಾ ಪುಸ್ತಕಗಳನ್ನು ಪರಿಶೀಲಿಸಿದ ನಂತರ ಭರ್ತಿ ಮಾಡಿದ ಸೇವಾ ವಿವರಗಳನ್ನು ಕಛೇರಿ ಮುಖ್ಯಸ್ಥರು ದಾಖಲೆಗಳೊಂದಿಗೆ ಪರಿಶೀಲಿಸಿ ಸಂಬಂಧಪಟ್ಟ ಆರೋಗ್ಯ ಸಂಸ್ಥೆ/ಕಛೇರಿಯ
ನಿಯಂತ್ರಣಾಧಿಕಾರಿ/ಮೇಲಾಧಿಕಾರಿಗಳ ಸಹಿಯೊಂದಿಗೆ ಧೃಢೀಕರಿಸುವುದು.
3. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯ ವಿಷಯ ನಿರ್ವಾಹಕರು, ಕಛೇರಿ ಅಧೀಕ್ಷಕರು, ಸಹಾಯಕ ಆಡಳಿತಾಧಿಕಾರಿಗಳು ಅರ್ಜಿಯಲ್ಲಿರುವ ಮಾಹಿತಿಯನ್ನು ಪರಿಶೀಲಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮೇಲು ರುಜು ಮಾಡಿ ವರ್ಗಾವಣೆ ಅರ್ಜಿಯನ್ನು ಕ್ರೋಡಿಕರಿಸಿಕೊಳ್ಳುವುದು.
4. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕ್ರೋಡೀಕರಿಸಿಕೊಂಡ ಅರ್ಜಿಗಳಲ್ಲಿರುವ ಮಾಹಿತಿಯನ್ನು ಈ ಸುತ್ತೋಲೆಯಲ್ಲಿ ಲಗತ್ತಿಸಿರುವ ಎಕ್ಸೆಲ್‌ಶೀಟ್ ನಮೂನೆಯಲ್ಲಿ ಹುದ್ದೆವಾರು ಪ್ರತ್ಯೇಕವಾಗಿ ಭರ್ತಿ ಮಾಡಿ ಅದರಲ್ಲಿ ಅಧಿಕಾರಿ/ನೌಕರ ಸೇವಾ ಅವಧಿಯಲ್ಲಿನ ಸೇವೆಯನ್ನು ವಲಯವಾರು (A,B & C ZONE) ವಿಂಗಡಿಸಿ ಒಂದು ವರ್ಷ ಪೂರ್ಣಗೊಳಿಸಿದ ಅವಧಿಗೆ ಮಾತ್ರ ಅಂಕಗಳನ್ನು ನೀಡಿ ಸಾಫ್ಟ್ ಕಾಪಿಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸುವುದು ಮತ್ತು ಅಂತಹ ಮಾಹಿತಿಯ ನಮೂನೆಯ ಹಾರ್ಡ್ ಕಾಪಿಯನ್ನು ಮೇಲಾಧಿಕಾರಿಗಳು ಸಹಿ ಮಾಡಿ, ಸ್ವೀಕೃತಗೊಂಡ ಎಲ್ಲಾ ಹುದ್ದೆವಾರು ವರ್ಗಾವಣೆ ಅರ್ಜಿಗಳ ಮೂಲ ಪ್ರತಿಯೊಂದಿಗೆ ನಿರ್ದೇಶನಾಲಯದ ಸಂಬಂಧಪಟ್ಟ ವೃಂದದ ವಿಷಯ ನಿರ್ವಾಹಕರು ಮತ್ತು ಕಛೇರಿ ಅಧೀಕ್ಷಕರುಗಳಿಗೆ ನೀಡಬೇಕಾಗಿರುವುದರಿಂದ ಪ್ರತಿ ಹುದ್ದೆವಾರು ಮಾಹಿತಿಗೆ ಪ್ರತ್ಯೇಕವಾಗಿ (Covering letter ನೊಂದಿಗೆ ನಮೂನೆ -1, 2 ಮತ್ತು 3ರಲ್ಲಿ ನಿಗದಿಪಡಿಸಿರುವ ದಿನಾಂಕದೊಳಗೆ ಮುದ್ದಾಂ ಸಲ್ಲಿಸತಕ್ಕದ್ದು.

5. ವೈದ್ಯರು/ಅಧಿಕಾರಿ/ನೌಕರರು ಸಲ್ಲಿಸಿರುವ ವರ್ಗಾವಣೆ ಅರ್ಜಿಗಳು ವರ್ಗಾವಣೆ ಕಾಯ್ದೆಯ ಅನ್ವಯ ಅನರ್ಹವೆಂದು ಕಂಡು ಬಂದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು/ಜಿಲ್ಲಾ ಶಸ್ತ್ರ ಚಿಕಿತ್ಸಕರು/ನಿಯಂತ್ರಣಾಧಿಕಾರಿಗಳು ತಮ್ಮ ಹಂತದಲ್ಲಿಯೇ ತಿರಸ್ಕರಿಸುವುದು.
ಈ ವರ್ಗಾವಣೆ ಪ್ರಕ್ರಿಯೆಯ ದಿನಗಳಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು/ಜಿಲ್ಲಾ ಶಸ್ತ್ರ ಚಿಕಿತ್ಸಕರು/ನಿಯಂತ್ರಣಾಧಿಕಾರಿಗಳ ಕಛೇರಿಯ ಆಡಳಿತ ವಿಭಾಗದ ಅಧಿಕಾರಿ/ಸಿಬ್ಬಂದಿಗೆ ರಜೆ ಮಂಜೂರು ಮಾಡಬಾರದು. ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಕ್ರಮವನ್ನು ಜರುಗಿಸುವುದು ಹಾಗೂ ಯಾವುದೇ ಅಧಿಕಾರಿ/ಸಿಬ್ಬಂದಿಗಳ ಸೇವಾ ವಿವರಗಳಲ್ಲಿ ಪರಿಶೀಲನಾ ಸಮಯದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು/ಜಿಲ್ಲಾ ಶಸ್ತ್ರ ಚಿಕಿತ್ಸಕರು/ನಿಯಂತ್ರಣಾಧಿಕಾರಿಗಳು/ಸಹಾಯಕ ಆಡಳಿತಾಧಿಕಾರಿಗಳು/ಕಛೇರಿ ಅಧೀಕ್ಷಕರು/ವಿಷಯ ನಿರ್ವಾಹಕರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

2024-25 ಸಾಲಿನ ವರ್ಗಾವಣೆ ಅರ್ಜಿಗಳನ್ನು ಈ ಕೆಳಗಿನ ಅಂಶಗಳನ್ನು ಪರಿಗಣಿಸಿ ಕ್ರಮವಹಿಸುವುದು.

1. ಅರ್ಜಿ ಸಲ್ಲಿಸಿರುವ ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳು ವರ್ಗಾವಣೆ ಕಾಯ್ದೆ ಮತ್ತು ನಿಯಮಗಳನ್ವಯ ಅರ್ಹರಿರುತ್ತಾರೆಯೇ ಎಂದು ಪರಿಶೀಲಿಸುವುದು.
2. ಖಾಯಂ ಪೂರ್ವ ಸೇವಾವಧಿ ಘೋಷಣೆಯಾಗಿದೆಯೇ ಎಂದು ಪರಿಶೀಲಿಸುವುದು.
3. ವರ್ಗಾವಣೆ ಕಾಯ್ದೆ ಪ್ರಕರಣ 4(1) ರಂತೆ ವೈದ್ಯರು ಹಾಗೂ ಇತರೆ ಸಿಬ್ಬಂದಿಗಳು ಸಂಬಂಧಪಟ್ಟ ವೃಂದ ಮತ್ತು ನೇಮಕಾತಿ ನಿಯಮದಲ್ಲಿರುವಂತೆ ನಿಗಧಿತ ಅವಧಿಯ ಕಡ್ಡಾಯ ಗ್ರಾಮೀಣ ಸೇವೆಯನ್ನು ಸಲ್ಲಿಸಿರುವ ಬಗ್ಗೆ ಪರಿಶೀಲಿಸುವುದು
4. ವರ್ಗಾವಣೆ ಕಾಯ್ದೆ ನಿಯಮ (6)ರನ್ವಯ ವೃಂದವಾರು ಕನಿಷ್ಠ ಸೇವಾವಧಿ ಪೂರೈಸಿರುತ್ತಾರೆಯ ಎಂದು ಪರಿಶೀಲಿಸುವುದು
5. ಸೇವಾವಧಿಯಲ್ಲಿ ಇಲ್ಲಿಯವರೆಗೆ ನಿರ್ವಹಿಸಿದ ಸೇವೆಯ ಮಾಹಿತಿಯನ್ನು ಅತ್ಯಂತ ಜಾಗರೂಕತೆಯಿಂದ ಪರಿಶೀಲಿಸುವುದು ಮತ್ತು ಸದರಿ ಸೇವೆಯನ್ನು ವರ್ಗಾವಣೆ ಕಾಯ್ದೆ ನಿಯಮ(10) ರನ್ವಯ ವಲಯವಾರು (ಎ,ಬಿ,ಸಿ ಜೋನ್) ವಿಂಗಡಿಸಿ ಅಂಕಗಳನ್ನು ನೀಡುವುದು ಇದರ ಆಧಾರದ ಮೇಲೆ ವರ್ಗಾವಣೆ ಆದ್ಯತಾ ಪಟ್ಟಿ ಸಿದ್ಧಪಡಿಸಿ ನಿಯಮಾನುಸಾರ ನಿಖರವಾದ ಮಾಹಿತಿ ಸಲ್ಲಿಸಲು ಸೂಚಿಸಿದೆ. 6. ಕಲ್ಯಾಣ ಕರ್ನಾಟಕ ಭಾಗದ ವ್ಯಾಪ್ತಿಯ ಆರೋಗ್ಯ ಸಂಸ್ಥೆ/ಕಛೇರಿಗಳಿಗೆ ವಿವಿಧ ವೃಂದದ ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆದುರಾಗಿ ನೇಮಕಾತಿ ಹೊಂದಿರುವ ಅಧಿಕಾರಿ/ನೌಕರರನ್ನು ಅವರ ನೇಮಕಾತಿ ದಿನಾಂಕದಿಂದ ಕನಿಷ್ಠ 10 ವರ್ಷಗಳವರೆಗೂ ಕಲ್ಯಾಣ ಕರ್ನಾಟಕ ಪ್ರದೇಶ ಹೊರತುಪಡಿಸಿ ಇತರೆ ಸ್ಥಳಕ್ಕೆ ವರ್ಗಾವಣೆ ಮಾಡಬಾರದು ಎಂದು ಸರ್ಕಾರದ ಆದೇಶ ಸಂ: ಸಿಆಸುಇ/17/ಸೇನೌವ/2015 ದಿನಾಂಕ:27.04.2015 ರಲ್ಲಿ ತಿಳಿಸಿರುವಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದರಿಂದ, ಸದರಿ ಭಾಗದ ವ್ಯಾಪ್ತಿಯಲ್ಲಿ ಖಾಲಿ ಇರುವ ಸ್ಥಳಗಳಿಗೆ ಮಾತ್ರ ವರ್ಗಾವಣೆಗೆ ಪರಿಗಣಿಸಲಾಗುವುದು.
7. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು 2011 ಅಧಿನಿಯಮದ ಕಂಡಿಕೆ (10) ರಲ್ಲಿ ತಿಳಿಸಿರುವಂತೆ ಈ ಕೆಳಕಂಡಂತೆ ಆದ್ಯತೆ ಮೇರೆಗೆ ಪಟ್ಟಿಯನ್ನು ತಯಾರಿಸುವುದು.
ಎ) ಗಂಭೀರ ಮಾರಣಾಂತಿಕ ಖಾಯಿಲೆಗಳು
ಬಿ) ಎರಡು ವರ್ಷದೊಳಗೆ ವಯೋನಿವೃತ್ತಿ ಹೊಂದುವಂತಹ ಅಧಿಕಾರಿಗಳು/ನೌಕರರು ಸಿ) ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪ್ರಮಾಣೀಕರಿಸಲಾದಂತ 40% ಕ್ಕಿಂತಲೂ ಹೆಚ್ಚಿನ ಅಶಕ್ತತೆ ಇರುವ
ವಿಕಲಚೇತನ ಸಂದರ್ಭಗಳು
ಡಿ) ವಿಧವೆಯರ ಸಂದರ್ಭಗಳು
ಇ) ಪತಿ ಮತ್ತು ಪತ್ನಿ, ಸರ್ಕಾರಿ ನೌಕರರಾಗಿರುವಂತಹ ಸಂದರ್ಭಗಳು ಮತ್ತು ರಾಜ್ಯ ಸರ್ಕಾರದಿಂದ ಹೊರಡಿಸಲಾದ ವರ್ಗಾವಣೆಯ ಮಾರ್ಗಸೂಚಿಗಳ ಉಪಬಂಧಗಳನುಸಾರ ಪರಿಗಣಿಸಬೇಕಾದ ಸಂದರ್ಭಗಳು ಪರಿಗಣಿಸಲಾಗುವುದು.

ಎ) ವೈದ್ಯಕೀಯ ಕಾರಣ ಈ ವೈದ್ಯಕೀಯ ಪ್ರಕರಣದ ಅರ್ಜಿಗಳನ್ನು ಜಿಲ್ಲೆಯ ವೈದ್ಯಕೀಯ ಮಂಡಳಿಯಿಂದ ನೀಡಿರುವ ಪ್ರಮಾಣ ಪತ್ರದ ದಾಖಲೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ವಹಿಸಲು ಹಾಗೂ ವೈದ್ಯಕೀಯ ಪ್ರಕರಣಗಳನ್ನು ಇಲಾಖೆಯ ಸಹನಿರ್ದೇಶಕರು (ವೈದ್ಯಕೀಯ) ಇವರು ದೃಢೀಕರಿಸಿದ ನಂತರ ಪರಿಗಣಿಸಲಾಗುವುದು.
ಮಾರಣಾಂತಿಕ ಖಾಯಿಲೆಗಳು (Terminally ill) ಆಧಾರದ ಮೇಲೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸುವವರು ಸರ್ಕಾರಿ ನೌಕರರ (ಹೆಂಡತಿ/ಗಂಡ/ಮಕ್ಕಳು ಮಾತ್ರ) ಮಾರಣಾಂತಿಕ ಖಾಯಿಲೆಯಿಂದ ನರಳುತ್ತಿರುವ ಬಗ್ಗೆ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಮಂಡಳಿಯವರು ನೀಡುವ ಪ್ರಮಾಣ ಪತ್ರದಲ್ಲಿ ನಮೂದಿಸಿರಬೇಕು ಮತ್ತು ಸಲ್ಲಿಸಬೇಕು. ತಾವು ಹೊಂದಿರುವ ಖಾಯಿಲೆಗೆ ಅವರ ಕರ್ತವ್ಯ ನಿರತ ಸ್ಥಳದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲವೆಂದು ಮತ್ತು ಆ ಖಾಯಿಲೆಗೆ ಚಿಕಿತ್ಸೆ ದೊರೆಯಬಹುದಾದ ಸ್ಥಳಕ್ಕೆ ಮಾತ್ರ ವರ್ಗಾವಣೆ ಕೋರಿಕೆಯಾಗಿರಬೇಕು.
ಬಿ) ಎರಡು ವರ್ಷಗಳ ಒಳಗೆ ವಯೋ
ನಿವೃತ್ತಿ ಹೊಂದುವವರಿಗೆ ವರ್ಗಾವಣೆಯಿಂದ ವಿನಾಯಿತಿ ಇದೆ. ಹಾಗೂ ಎರಡು ವರ್ಷಗಳ ಒಳಗೆ ನಿವೃತ್ತಿ ಅಂಚಿನಲ್ಲಿರುವ ನೌಕರರಿಗೆ ಕೋರಿಕೆಯ ಮೇರೆಗೆ ಖಾಲಿ ಇರುವ ಅನುಕೂಲಕರವಾಗಿರುವ ಸ್ಥಳದಲ್ಲಿ ಖಾಲಿ ಹುದ್ದೆ ಇದ್ದಲ್ಲಿ ಅರ್ಹರಿರುತ್ತಾರೆ.
ಸಿ) ವಿಕಲಚೇತನ: ಶೇಕಡಾ 40 ಕ್ಕಿಂತಲೂ ಹೆಚ್ಚಿನ ಅಶಕ್ತತೆ ಇರುವ ವಿಕಲಚೇತನ ಸಂದರ್ಭಗಳಲ್ಲಿ ಮಾತ್ರ ಅವಕಾಶವಿರುತ್ತದೆ. ವಿಕಲಚೇತನ ಅಧಿಕಾರಿ/ನೌಕರರು ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಮಂಡಳಿಯವರು ನೀಡಿರುವ ಪ್ರಮಾಣಪತ್ರ ಪಡೆದು ಸಲ್ಲಿಸಬೇಕು. ಅಂಗವಿಕಲ ನೌಕರರ ಪ್ರಕರಣದ ಅವಲಂಬಿತರ ಆಧಾರದ ಮೇಲೆ ವರ್ಗಾವಣೆಗೆ ಅವಕಾಶವಿರುವುದಿಲ್ಲ.
ಡಿ) ವಿಧವೆ : ಇವರು ತಹಶೀಲ್ದಾರ್ ಇವರಿಂದ ಪಡೆದ ವಿಧವಾ ಪ್ರಮಾಣಪತ್ರ ಸಲ್ಲಿಸಬೇಕು. ಕೇವಲ ಮರಣ ಪ್ರಮಾಣಪತ್ರ ಅಥವಾ ಬೇರೆ ಯಾವುದೇ ರೀತಿಯ ಪುಮಾಣ ಪತ್ರಗಳನ್ನು ಅಂಗೀಕರಿಸುವುದಿಲ್ಲ.
ಇ) ಪತಿ-ಪತ್ನಿ ವರ್ಗಾವಣೆ: ಇದರಡಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಥವಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆ ನಿಗಮ ಹಾಗೂ ಮಂಡಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪತಿ- ಪತ್ನಿರವರು ಅರ್ಹರಿರುತ್ತಾರೆ. ಒಂದೇ ತಾಲ್ಲೂಕಿನಲ್ಲಿ ಇರುವ ನೌಕರರು ವರ್ಗಾವಣೆಗೆ ಅರ್ಹರಲ್ಲ ಮತ್ತು ಇಲಾಖೆಯ ದಂಪತಿಗಳಿಬ್ಬರೂ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅವರಲ್ಲಿ ಯಾರಾದರೂ ಒಬ್ಬರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು, ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಕಛೇರಿಗಳಿಂದ ದೃಢೀಕರಣ ಪತ್ರ ಸಲ್ಲಿಸತಕ್ಕದ್ದು ಪ್ರಮಾಣ ಪತ್ರದಲ್ಲಿ ಪತಿ-ಪತ್ನಿಯ ಹೆಸರು, ಪದನಾಮ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಇಲಾಖೆಯ ಮಾಹಿತಿ
ದೃಢೀಕರಣಗೊಂಡಿರತಕ್ಕದ್ದು, ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
8. ಅಮಾನತ್ತು ಆದ ಅಧಿಕಾರಿ/ ನೌಕರರ ಅಮಾನತ್ತು ವಿಖಂಡನೆಗೊಳಿಸಿ ಸ್ಥಳ ನಿಯುಕ್ತಿಗೊಳಿಸಿದಲ್ಲಿ ವರ್ಗಾವಣೆ ಕಾಯ್ದೆ ನಿಯಮಾನುಸಾರ ಕನಿಷ್ಠ ಅವಧಿ ಪೂರೈಸದೆ ಇದ್ದಲ್ಲಿ ವರ್ಗಾವಣೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
9. ಕೋರಿಕೆ ವರ್ಗಾವಣೆ ಆದೇಶ ಪಡೆದು ಅನಿವಾರ್ಯ ಕಾರಣಗಳಿಂದ ವರ್ಗಾವಣೆ ಆದೇಶ ರದ್ದು ಪಡಿಸಿಕೊಂಡಿದ್ದಲ್ಲಿ ಅಂತಹ ಅಧಿಕಾರಿ/ನೌಕರರು ಮೂರು ವರ್ಷಗಳವರೆಗೂ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
10. ಪರಸ್ಪರ ವರ್ಗಾವಣೆ/ಪತಿ-ಪತ್ನಿ ಪ್ರಕರಣ/ವಿಧವೆ/ವಿಕಲಚೇತನ/ಅನಾರೋಗ್ಯದ ಅಡಿಯಲ್ಲಿ ಒಂದು ಬಾರಿ ವರ್ಗಾವಣೆ ಪಡೆದಿದ್ದಲ್ಲಿ ಮತ್ತೆ ಅವರು ಮೂರು ವರ್ಷಗಳವರೆಗೂ ವರ್ಗಾವಣೆಗೆ ಅರ್ಹರಾಗಿರುವುದಿಲ್ಲ. ಸದರಿ ಪ್ರಕರಣಗಳನ್ನು ಅವರ ಮೇಲಾಧಿಕಾರಿಗಳಿಂದ ನಿಯಮಾನುಸಾರ ಪರಿಶೀಲಿಸಿ ದೃಢೀಕರಿಸಿರಬೇಕು.

ವರ್ಗಾವಣೆ ಕಾಯ್ದೆ ಮತ್ತು ನಿಯಮಗಳನ್ವಯ ಈ ಕೆಳಕಂಡ ಮಾಹಿತಿಗಳನ್ನು ಎಲ್ಲಾ ಜಿಲ್ಲಾ ಆಕುಕ ಅಧಿಕಾರಿಗಳು / ಜಿಲ್ಲಾ ಶಸ್ತ್ರ ಚಿಕಿತ್ಸಕರುಗಳು/ನಿಯಂತ್ರಣಾಧಿಕಾರಿಗಳು ಕಡ್ಡಾಯವಾಗಿ ಆಯುಕ್ತಾಲಯಕ್ಕೆ ಸಲ್ಲಿಸುವುದು:
1. ವರ್ಗಾವಣೆ ಕಾಯ್ದೆ ಮತ್ತು ನಿಯಮ 4ರನ್ವಯ ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳು ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸುವ ಬಗ್ಗೆ: ವರ್ಗಾವಣೆ ಕಾಯ್ದೆ ಪ್ರಕರಣ 4(1) ರಂತ ವೈದ್ಯರು ಹಾಗೂ ಇತರೆ ಸಿಬ್ಬಂದಿಗಳು ನೇಮಕಾತಿಗೆ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳ ಮೇರೆಗೆ ನಿಗಧಿತ ಪಡಿಸಲಾದ ಕನಿಷ್ಠ ಅವಧಿಯ ಸೇವೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಸಲ್ಲಿಸದಿದ್ದಲ್ಲಿ ಮತ್ತು ಐವತ್ತು ವರ್ಷ ವಯಸ್ಸನ್ನು ತಲುಪದೆ ಇರುವ ವೈದ್ಯಾಧಿಕಾರಿ ಅಥವಾ ಇತರೆ ಸಿಬ್ಬಂದಿಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವುದಕ್ಕಾಗಿ ವರ್ಗಾಯಿಸಿ ನಿಯುಕ್ತಿಗೊಳಿಸಲಾಗುವುದು, ಅಂತಹವರ ಮಾಹಿತಿಯನ್ನು ಸಲ್ಲಿಸುವುದು.
2. ವರ್ಗಾವಣೆ ಕಾಯ್ದೆ ನಿಯಮ (5) ರನ್ವಯ mismatch in posting of specialists: ಇಲಾಖೆಯಲ್ಲಿ ಗುರುತಿಸಿರುವ ತಜ್ಞ ಹುದ್ದೆಗಳಲ್ಲಿ ವೈದ್ಯರುಗಳು ತಜ್ಞತೆಗೆ ಅನುಗುಣವಾಗಿ ಕಾರ್ಯನಿರ್ವಹಿಸದೇ ಬೇರೆ ತಜ್ಞತೆ ಇತರೆ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರ ಮಾಹಿತಿಯನ್ನು ಸಲ್ಲಿಸುವುದು,
3. ವರ್ಗಾವಣೆ ಕಾಯ್ದೆ ನಿಯಮ (6)ರನ್ವಯ ಈ ಕೆಳಗಿನಂತೆ ಕನಿಷ್ಠ ಸೇವಾವಧಿ ಪೂರೈಸಿರುವ ವೈದ್ಯರು ಹಾಗೂ ಇತರ ಸಿಬ್ಬಂದಿಗಳ ಮಾಹಿತಿಯನ್ನು ಸಲ್ಲಿಸುವುದು.

Share. Facebook Twitter LinkedIn WhatsApp Email

Related Posts

ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ನಿವೃತ್ತ ನೌಕರರಿಗೆ UPS ಪಿಂಚಣಿ ಯೋಜನೆ ಬಗ್ಗೆ ಮಹತ್ವದ ಮಾಹಿತಿ

13/06/2025 9:55 PM1 Min Read

BREAKING : ರೈತನ ವಿರೋಧದ ನಡುವೆ ವಿದ್ಯುತ್ ಹೈ ಟೆನ್ಶನ್ ಲೈನ್ ಅಳವಡಿಕೆ : ವಿಷ ಸೇವಿಸಿ ದಂಪತಿ ಆತ್ಮಹತ್ಯೆಗೆ ಯತ್ನ!

13/06/2025 9:35 PM1 Min Read

BREAKING: ಮಂಗಳೂರಲ್ಲಿ ಚಾಕು ಇರಿತಕ್ಕೊಳಗಾಗಿದ್ದ ಕೌಶಿಕ್ ಚಿಕಿತ್ಸೆ ಫಲಿಸದೇ ಸಾವು

13/06/2025 9:17 PM1 Min Read
Recent News

ಒಂದು ವಾರ ‘ತಲೆ ಸ್ನಾನ’ ಮಾಡದಿದ್ರೆ ಏನಾಗುತ್ತೆ ಗೊತ್ತಾ.?

13/06/2025 10:00 PM

ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ನಿವೃತ್ತ ನೌಕರರಿಗೆ UPS ಪಿಂಚಣಿ ಯೋಜನೆ ಬಗ್ಗೆ ಮಹತ್ವದ ಮಾಹಿತಿ

13/06/2025 9:55 PM

BREAKING : ರೈತನ ವಿರೋಧದ ನಡುವೆ ವಿದ್ಯುತ್ ಹೈ ಟೆನ್ಶನ್ ಲೈನ್ ಅಳವಡಿಕೆ : ವಿಷ ಸೇವಿಸಿ ದಂಪತಿ ಆತ್ಮಹತ್ಯೆಗೆ ಯತ್ನ!

13/06/2025 9:35 PM

BREAKING: ಮಂಗಳೂರಲ್ಲಿ ಚಾಕು ಇರಿತಕ್ಕೊಳಗಾಗಿದ್ದ ಕೌಶಿಕ್ ಚಿಕಿತ್ಸೆ ಫಲಿಸದೇ ಸಾವು

13/06/2025 9:17 PM
State News
KARNATAKA

ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ನಿವೃತ್ತ ನೌಕರರಿಗೆ UPS ಪಿಂಚಣಿ ಯೋಜನೆ ಬಗ್ಗೆ ಮಹತ್ವದ ಮಾಹಿತಿ

By kannadanewsnow0913/06/2025 9:55 PM KARNATAKA 1 Min Read

ಮೈಸೂರು: ನಿವೃತ್ತಿ ಹೊಂದಿದ ಎನ್‌ಪಿಎಸ್ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಗೆ ಆಯ್ಕೆ ಮಾಡಲು ದಿನಾಂಕ 30-06-2025 ಕೊನೆಯ…

BREAKING : ರೈತನ ವಿರೋಧದ ನಡುವೆ ವಿದ್ಯುತ್ ಹೈ ಟೆನ್ಶನ್ ಲೈನ್ ಅಳವಡಿಕೆ : ವಿಷ ಸೇವಿಸಿ ದಂಪತಿ ಆತ್ಮಹತ್ಯೆಗೆ ಯತ್ನ!

13/06/2025 9:35 PM

BREAKING: ಮಂಗಳೂರಲ್ಲಿ ಚಾಕು ಇರಿತಕ್ಕೊಳಗಾಗಿದ್ದ ಕೌಶಿಕ್ ಚಿಕಿತ್ಸೆ ಫಲಿಸದೇ ಸಾವು

13/06/2025 9:17 PM

ರಾಜ್ಯದ ವಿಕಲಚೇತನ ವ್ಯಕ್ತಿಗಳ ಆರೈಕೆದಾರರ ಗಮನಕ್ಕೆ: ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

13/06/2025 8:23 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.