Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೃದಯ ಸ್ಪರ್ಶಿ ವಿಡಿಯೋ: ಜಮ್ಮುವಿನಲ್ಲಿ ಚಳಿ: ಹುತಾತ್ಮ ಮಗನ ಪ್ರತಿಮೆಗೆ ಕಂಬಳಿ ಹೊದಿಸಿದ ತಾಯಿ | Watch video

10/01/2026 8:19 AM

SHOCKING : ಉಪನ್ಯಾಸಕನಿಂದ ವ್ಯಂಗ್ಯ : ಬೆಂಗಳೂರಲ್ಲಿ `ಡೆಂಟಲ್ ವಿದ್ಯಾರ್ಥಿನಿ’ ಆತ್ಮಹತ್ಯೆಗೆ ಶರಣು.!

10/01/2026 8:18 AM

BREAKING : ಇರಾನ್ ​ನಲ್ಲಿ ತೀವ್ರಗೊಂಡ ಹಿಂಸಾಚಾರಕ್ಕೆ 217 ಮಂದಿ ಬಲಿ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

10/01/2026 8:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ಜುಲೈ 1ರಿಂದ ‘7ನೇ ವೇತನ ಆಯೋಗ ವರದಿ’ ಜಾರಿಗೆ ಸಿದ್ಧತೆ
KARNATAKA

ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ಜುಲೈ 1ರಿಂದ ‘7ನೇ ವೇತನ ಆಯೋಗ ವರದಿ’ ಜಾರಿಗೆ ಸಿದ್ಧತೆ

By kannadanewsnow5712/06/2024 7:06 AM

ಬೆಂಗಳೂರು : ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 7ನೇ ವೇತನ ಆಯೋಗ ವರದಿ ಜಾರಿಗೆ ರಾಜ್ಯ ಸರ್ಕಾರವು ಸಿದ್ದವಾಗಿದ್ದು, ವೇತನ ಪರಿಷ್ಕರಣೆ ಸಹಿತ ಹಲವು ಸವಲತ್ತುಗಳನ್ನು ನೀಡುವ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದ ಸಮಿತಿ ನೀಡಿರುವ ಶಿಫಾರಸುಗಳನ್ನು ಅನುಷ್ಠಾನಿಸಲು ಮುಂದಾಗಿದೆ.

ನೌಕರರ ವೇತನ ಪರಿಷ್ಕರಣೆಗೆ ರಚಿಸಿದ್ದ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜುಲೈ 1ರಿಂದ ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ, ಜುಲೈ 1ರಿಂದ ಅನ್ವಯವಾಗುವಂತೆ ಪರಿಷ್ಕೃತ ವೇತನ ನೀಡಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

ವೇತನ ಪರಿಷ್ಕರಣೆ ಕುರಿತು ಅಧ್ಯಯನ ಮಾಡಿ, ವರದಿ ಸಲ್ಲಿಸಲು ನಿವೃತ್ತ ಮುಖ್ಯಕಾರ್ಯದರ್ಶಿ ಕೆ.ಸುಧಾಕರ್‌ ರಾವ್ ಅಧ್ಯಕ್ಷತೆಯಲ್ಲಿ 2022ರ ನವೆಂಬರ್‌ 19ರಂದು ಆಯೋಗ ರಚಿಸಲಾಗಿತ್ತು. ಆರು ತಿಂಗಳು ನೀಡಿದ್ದ ಅವಧಿಯನ್ನು ಎರಡು ಬಾರಿ ವಿಸ್ತರಿಸಿದ ನಂತರ ಈ ಮಾರ್ಚ್‌ 16ರಂದು ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವರದಿ ಸಲ್ಲಿಕೆಯಾದ ದಿನದಿಂದಲೇ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿತ್ತು. ಹಾಗಾಗಿ, ವೇತನ ಪರಿಷ್ಕರಣೆ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.

ರಾಜ್ಯ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಲಿದೆ?

ಎ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ಸಿ ಮತ್ತು ಡಿ ದರ್ಜೆ ನೌಕರರಿಗೆ 2022ರ ಜುಲೈ 1ರಂದು ಮೂಲ ವೇತನ 17,000 ರೂ. ಇದ್ದರೆ, ತುಟ್ಟಿಭತ್ಯೆ ಶೇ. 31 (5,270 ರೂ.) ಹಾಗೂ ಶೇ.27.50 (4,675 ರೂ. ) ಫಿಟ್ಮೆಂಟ್‌ ಸೇರಿ ಒಟ್ಟು 26,945 ಸಿಗುತ್ತಿತ್ತು. ಇನ್ನು 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮೂಲ ವೇತನ 27,000 ಇದ್ದರೆ, ಅಂದಾಜು ತುಟ್ಟಿ ಭತ್ಯೆ ಶೇ.8.5 (2295 ರೂ), ಮನೆ ಬಾಡಿಗೆ ಭತ್ಯೆ ಶೇ.20 (5,400 ರೂ.), ವೈದ್ಯಕೀಯ 500, ನಗರ ಪರಿಹಾರ ಭತ್ಯೆ (ಸಿಸಿಎ) 750 ರೂ. ಸೇರಿ ಒಟ್ಟು 35,945 (01-01-2024ಕ್ಕೆ) ರೂ. ಸಿಗಲಿದೆ. 6ನೇ ವೇತನ ಆಯೋಗದಲ್ಲಾದರೆ ಒಟ್ಟು 29,005 ರೂ. ಸಿಗುತ್ತಿತ್ತು. ಪರಿಷ್ಕೃತ ವೇತನದಲ್ಲಿ 6940 ರೂ. ಹೆಚ್ಚಳವಾಗಲಿದೆ ಎನ್ನಲಾಗಿದೆ.

Good news for state government employees: 7th Pay Commission report to be implemented from July 1 ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ‘7ನೇ ವೇತನ ಆಯೋಗ ವರದಿ’ ಜಾರಿಗೆ ‘ರಾಜ್ಯ ಸರ್ಕಾರ’ ಸಿದ್ಧತೆ
Share. Facebook Twitter LinkedIn WhatsApp Email

Related Posts

SHOCKING : ಉಪನ್ಯಾಸಕನಿಂದ ವ್ಯಂಗ್ಯ : ಬೆಂಗಳೂರಲ್ಲಿ `ಡೆಂಟಲ್ ವಿದ್ಯಾರ್ಥಿನಿ’ ಆತ್ಮಹತ್ಯೆಗೆ ಶರಣು.!

10/01/2026 8:18 AM1 Min Read

SHOCKING : ಬೆಂಗಳೂರಿನಲ್ಲಿ `ಆಘಾತಕಾರಿ ಕೃತ್ಯ’ : ಹಾಡಹಗಲೇ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ‘ಡೆಲಿವರಿ ಬಾಯ್’.!

10/01/2026 7:48 AM1 Min Read

SHOCKING : ಬೆಂಗಳೂರಲ್ಲಿ ಮತ್ತೊಂದು ಆಘಾತಕಾರಿ ಘಟನೆ: `ಡೆಲಿವರಿ ಬಾಯ್’ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ | Watch Video

10/01/2026 7:34 AM1 Min Read
Recent News

ಹೃದಯ ಸ್ಪರ್ಶಿ ವಿಡಿಯೋ: ಜಮ್ಮುವಿನಲ್ಲಿ ಚಳಿ: ಹುತಾತ್ಮ ಮಗನ ಪ್ರತಿಮೆಗೆ ಕಂಬಳಿ ಹೊದಿಸಿದ ತಾಯಿ | Watch video

10/01/2026 8:19 AM

SHOCKING : ಉಪನ್ಯಾಸಕನಿಂದ ವ್ಯಂಗ್ಯ : ಬೆಂಗಳೂರಲ್ಲಿ `ಡೆಂಟಲ್ ವಿದ್ಯಾರ್ಥಿನಿ’ ಆತ್ಮಹತ್ಯೆಗೆ ಶರಣು.!

10/01/2026 8:18 AM

BREAKING : ಇರಾನ್ ​ನಲ್ಲಿ ತೀವ್ರಗೊಂಡ ಹಿಂಸಾಚಾರಕ್ಕೆ 217 ಮಂದಿ ಬಲಿ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

10/01/2026 8:14 AM

ನೀವು ಪ್ರತಿದಿನ ಬೆಳಗಿನ ಉಪಾಹಾರಕ್ಕೆ ಆಲೂ ಪರೋಟಾ ಸೇವಿಸಿದಾಗ ಏನಾಗುತ್ತದೆ ?

10/01/2026 8:06 AM
State News
KARNATAKA

SHOCKING : ಉಪನ್ಯಾಸಕನಿಂದ ವ್ಯಂಗ್ಯ : ಬೆಂಗಳೂರಲ್ಲಿ `ಡೆಂಟಲ್ ವಿದ್ಯಾರ್ಥಿನಿ’ ಆತ್ಮಹತ್ಯೆಗೆ ಶರಣು.!

By kannadanewsnow5710/01/2026 8:18 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ಬೇಸತ್ತು ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಶರಣಾಗಿರುವ ಘಟನೆ ವರದಿಯಾಗಿದೆ. ಬೆಂಗಳೂರು…

SHOCKING : ಬೆಂಗಳೂರಿನಲ್ಲಿ `ಆಘಾತಕಾರಿ ಕೃತ್ಯ’ : ಹಾಡಹಗಲೇ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ‘ಡೆಲಿವರಿ ಬಾಯ್’.!

10/01/2026 7:48 AM

SHOCKING : ಬೆಂಗಳೂರಲ್ಲಿ ಮತ್ತೊಂದು ಆಘಾತಕಾರಿ ಘಟನೆ: `ಡೆಲಿವರಿ ಬಾಯ್’ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ | Watch Video

10/01/2026 7:34 AM

ALERT : ಪುರುಷರೇ ಗಮನಿಸಿ : 30 ವರ್ಷದ ಮೇಲೆ ತಪ್ಪದೇ ಈ 8 `ಆರೋಗ್ಯ ಪರೀಕ್ಷೆ’ಗಳನ್ನು ಮಾಡಿಸಿಕೊಳ್ಳಲೇಬೇಕು.!

10/01/2026 6:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.