ಬೆಂಗಳೂರು: ಕರ್ನಾಟಕ ಸಿವಿಲ್ ಸೇವಾ(ಸಾಮಾನ್ಯ ನೇಮಕಾತಿ)(ತಿದ್ದುಪಡಿ)ನಿಯಮಗಳು, 2024ಕ್ಕೆ ಸಮಬಂಧಿಸಿದಂತೆ ಗೆಜೆಟ್ ಅಧಿಸೂಚನೆ ಹೊರಡಿಸಿದ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರ ರಾಜ್ಯ ಸಿವಿಲ್ ಸೇವೆಗಳ ನೇರ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ 2 ರಷ್ಟು ಮೀಸಲಾತಿ ನೀಡುವ ಬಗ್ಗೆ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಇನ್ನೂ ರಾಜ್ಯದಲ್ಲಿ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್-ಕೆಎಫ್ಡಿ) ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಶಂಕಿತ ಪ್ರಕರಣಗಳನ್ನು ಗುರುತಿಸುವ ಜೊತೆಗೆ ಅಗತ್ಯ ಚಿಕಿತ್ಸೆಗೆ ಕ್ರಮವಹಿಸಬೇಕು ಎಂದು ಕೆಎಫ್ಡಿ ಬಾಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಇ-ಕಾಮರ್ಸ್ ಮೂಲಕ ಉತ್ಕೃಷ್ಟ ಗುಣದಿಂದ ಜಾಗತಿಕವಾಗಿ ಹೆಸರಾಗಿರುವ ಮತ್ತು ಜಿಐ ಮಾನ್ಯತೆ ಪಡೆದಿರುವ ಕಲಬುರಗಿಯ ರುಚಿಕರ ‘ಭೀಮಾ ಬ್ರ್ಯಾಂಡ್’ ತೊಗರಿ ಬೇಳೆಗೆ ದೇಶಾದ್ಯಂತ ಮಾರಕಟ್ಟೆ ಸಿಕ್ಕಂತಾಗಿದ್ದು, ಬೆಳೆಗಾರರಿಗೆ ಶುಭ ಸುದ್ದಿಯಾಗಿದೆ. ರೈತರಿಗೆ ಪ್ರತಿ ಕ್ವಿಂಟಾಲ್ಗೆ ಮಾರುಕಟ್ಟೆ ದರಕ್ಕಿಂತ ₹ 300 ಸಿಗಲಿದೆ. ನಂದಿನಿ ಹಾಲಿನಂತೆ ಸರ್ಕಾರಿ ಸಂಸ್ಥೆಯಿಂದಲೇ ಗ್ರಾಹಕರಿಗೆ ಜಿಐ ಬೇಳೆ ತಲುಪಿಸುವ ಯೋಜನೆ ಇದಾಗಿದೆ.