Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮಧ್ಯಪ್ರದೇಶದಲ್ಲಿ10 ಮಕ್ಕಳ ಸಾವು ಕೇಸ್ : `ಕೆಮ್ಮಿನ ಸಿರಪ್’ ಬರೆದುಕೊಟ್ಟಿದ್ದ ವೈದ್ಯ ಅರೆಸ್ಟ್.!

05/10/2025 8:18 AM

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿ ಹತ್ಯೆ ಮಾಡಿರುವುದು ನೋವಿನ ಸಂಗತಿ : ಸಂಸದ ಯದುವೀರ್ ಒಡೆಯರ್

05/10/2025 8:13 AM

`KRS’ ಕಟ್ಟಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ : ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ

05/10/2025 8:08 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯದ ‘ಗ್ರಾಮೀಣ ಪತ್ರಕರ್ತ’ರಿಗೆ ಗುಡ್ ನ್ಯೂಸ್: ‘ಉಚಿತ ಬಸ್ ಪಾಸ್’ ವಿತರಣೆಗೆ ಆಯ್ಕೆ ಸಮಿತಿ ರಚನೆ
KARNATAKA

BREAKING: ರಾಜ್ಯದ ‘ಗ್ರಾಮೀಣ ಪತ್ರಕರ್ತ’ರಿಗೆ ಗುಡ್ ನ್ಯೂಸ್: ‘ಉಚಿತ ಬಸ್ ಪಾಸ್’ ವಿತರಣೆಗೆ ಆಯ್ಕೆ ಸಮಿತಿ ರಚನೆ

By kannadanewsnow0907/01/2025 7:01 PM

ಬೆಂಗಳೂರು: ರಾಜ್ಯದ ಗ್ರಾಮೀಣ ಪತ್ರಕರ್ತರಿಗೂ ಉಚಿತ ಸಾರಿಗೆ ಬಸ್ ಪಾಸ್ ವಿತರಣೆ ಮಾಡುವುದಾಗಿ ಬಜೆಟ್ ನಲ್ಲಿ ಸಿಎಂ ಸಿದ್ಧರಾಮಯ್ಯ ಘೋಷಣೆ ಮಾಡಿದ್ದರು. ಆ ಬಳಿಕ ಆದೇಶ ಕೂಡ ಮಾಡಲಾಗಿತ್ತು. ಇದೀಗ ಉಚಿತ ಬಸ್ ಪಾಸ್ ವಿತರಿಸಲು ಆಯ್ಕೆ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಇಂದು ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ 2024-25ನೇ ಸಾಲಿನ ಬಜೆಟ್ ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ವೃತ್ತಿಗ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ನೀಡುವ ಯೋಜನೆಯನ್ನು ಕೆಲವೊಂದು ಮಾರ್ಗಸೂಚಿ, ಷರತ್ತುಗಳಿಗೆ ಒಳಪಡಿಸಿ ಅನುಷ್ಠಾಗೊಳಿ, ಆದೇಶಿಸಲಾಗಿತ್ತು ಎಂದಿದ್ದಾರೆ.

ಇದರ ಅನ್ವಯ ಅರ್ಜಿಗಳನ್ನು ಪರಿಶೀಲಿಸಿ ಈ ಸೌಲಭ್ಯವನ್ನು ಮಂಜೂರು ಮಾಡಲು ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಇವರ ಅಧ್ಯಕ್ಷತೆಯಲ್ಲಿ ಇನ್ನಿತರ ಸದಸ್ಯರನ್ನೊಳಗೊಂಡಂತೆ ಆಯ್ಕೆ ಸಮಿತಿಯನ್ನು ರಚಿಸಲಾಗಿರುತ್ತದೆ ಎಂದಿದ್ದಾರೆ.

ದಿನಾಂಕ 01-12-2024ರಿಂದ ಜಾರಿಗೆ ಬರುವಂತೆ 2 ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಆಯ್ಕೆ ಸಮಿತಿಯನ್ನು ರಚಿಸಿ ಸರ್ಕಾರದ ಆದೇಶ ಹೊರಡಿಸುವಂತೆ ಸಂಭಾವ್ಯ ಗಣ್ಯರ ಪಟ್ಟಿಯೊಂದಿಗೆ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಇವರು ಕೋರಿರುತ್ತಾರೆ ಎಂದಿದ್ದಾರೆ.

ಈ ಹಿನ್ನಲೆಯಲ್ಲಿ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ನೀಡುವ ಯೋಜನೆಯ ಸೌಲಭ್ಯವನ್ನು ಮಂಜೂರು ಮಾಡಲು ಈ ಕೆಳಕಂಡ ಆಯ್ಕೆ ಸಮಿತಿಯನ್ನು ರಚಿಸಿರುವುದಾಗಿ ಹೇಳಿದ್ದಾರೆ.

  1. ಆಯುಕ್ತರು, ಇಲಾಖಾ ಮುಖ್ಯಸ್ಥರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ – ಅಧ್ಯಕ್ಷರು
  2. ಜಂಟಿ ನಿರ್ದೇಶಕರು ( ಸುದ್ದಿ ಮತ್ತು ಪತ್ರಿಕಾ ಶಾಖೆ) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ- ಸದಸ್ಯರು
  3. ಸರ್ಕಾರದಿಂದ ನಾಮ ನಿರ್ದೇಶಿತರಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಓರ್ವ ಪ್ರತಿನಿಧಿ – ಸದಸ್ಯರು, ಶಿವಾನಂದ ತಗಡೂರು, ಹಿರಿಯ ಪತ್ರಕರ್ತರು
  4. ಸರ್ಕಾರದಿಂದ ನಾಮ ನಿರ್ದೇಶಿತರಾದ ಬೆಂಗಳೂರು ವರದಿಗಾರರ ಕೂಟದ ಓರ್ವ ಪ್ರತಿನಿಧಿ- ಸದಸ್ಯರು, ಎಂ ಚಂದ್ರಶೇಖರ್, ಹವ್ಯಾಸಿ ಪತ್ರಕರ್ತರು
  5. ಸರ್ಕಾರದಿಂದ ನಾಮ ನಿರ್ದೇಶಿತರಾದ ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘ (ರಿ) ಚಿತ್ರದುರ್ಗದ ಓರ್ವ ಪ್ರತಿನಿಧಿ – ಸದಸ್ಯರು, ಹೆಚ್.ಎಲ್ ಸುರೇಶ್, ಸಂಪಾದಕರು, ವಾಸ್ತವ ಕರ್ನಾಟಕ ದಿನಪತ್ರಿಕೆ.
  6. ಸರ್ಕಾರದಿಂದ ನಾಮ ನಿರ್ದೇಶಿತರಾದ ಬೆಂಗಳೂರು ಪೋಟೋ ಜರ್ನಲಿಸ್ಟ್ ಸಂಘದ ಓರ್ವ ಪ್ರತಿನಿಧಿ- ಸದಸ್ಯರು, ಮೋಹನ್ ಕುಮಾರ್, ಹಿರಿಯ ಪತ್ರಿಕಾ ಛಾಯಾಗ್ರಾಹಕರು.
  7. ವಿಶೇಷ ಆಮಂತ್ರಿತರು ( ಇಲಾಖಾ ಮುಖ್ಯಸ್ಥರ ವಿವೇಚನಾಧಿಕಾರ) ಇಬ್ಬರು ಪ್ರತಿನಿಧಿಗಳು – ಸದಸ್ಯರು – ಗಂಗಾಧರ್ ಬಂಡಿಹಾಳ್, ಸ್ಥಾನಿಕ ಸಂಪಾದಕರು, ವಿಜಯ ಕರ್ನಾಟಕ. ಶ್ರೀನಿವಾಸ ನಾಯ್ಕ್.
  8. ಉಪ ನಿರ್ದೇಶಕರು, ಸುದ್ದಿ ಮತ್ತು ಪತ್ರಿಕಾ ಶಾಖೆ- ಸದಸ್ಯ ಕಾರ್ಯದರ್ಶಿ

ವರದಿ: ವಸಂತ ಬಿ ಈಶ್ವರಗೆರೆ

ಸಿಲಿಕಾನ್ ಸಿಟಿ ಜನರೇ ಎಚ್ಚರ.! ಇನ್ಮುಂದೆ ಬೆಂಗಳೂರು ವಿವಿ ಆವರಣದಲ್ಲಿ ಕಸ ಹಾಕಿದ್ರೆ ಬೀಳುತ್ತೆ ದಂಡ

UPDATE : ತೀವ್ರ ಭೂಕಂಪಕ್ಕೆ ‘ಟಿಬೆಟ್’ ತತ್ತರ ; ಮೃತರ ಸಂಖ್ಯೆ 95ಕ್ಕೆ ಏರಿಕೆ |Earthquake

Share. Facebook Twitter LinkedIn WhatsApp Email

Related Posts

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿ ಹತ್ಯೆ ಮಾಡಿರುವುದು ನೋವಿನ ಸಂಗತಿ : ಸಂಸದ ಯದುವೀರ್ ಒಡೆಯರ್

05/10/2025 8:13 AM1 Min Read

`KRS’ ಕಟ್ಟಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ : ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ

05/10/2025 8:08 AM1 Min Read

ರಾಜ್ಯದ `ಪಡಿತರ ಚೀಟಿದಾರರೇ’ ಗಮನಿಸಿ : ಉಚಿತ `ಹೊಲಿಗೆ ಯಂತ್ರ’ ಸೇರಿ ನಿಮಗೆ ಸಿಗಲಿವೆ ಈ 8 ಸೌಲಭ್ಯಗಳು.!

05/10/2025 7:58 AM2 Mins Read
Recent News

BREAKING : ಮಧ್ಯಪ್ರದೇಶದಲ್ಲಿ10 ಮಕ್ಕಳ ಸಾವು ಕೇಸ್ : `ಕೆಮ್ಮಿನ ಸಿರಪ್’ ಬರೆದುಕೊಟ್ಟಿದ್ದ ವೈದ್ಯ ಅರೆಸ್ಟ್.!

05/10/2025 8:18 AM

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿ ಹತ್ಯೆ ಮಾಡಿರುವುದು ನೋವಿನ ಸಂಗತಿ : ಸಂಸದ ಯದುವೀರ್ ಒಡೆಯರ್

05/10/2025 8:13 AM

`KRS’ ಕಟ್ಟಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ : ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ

05/10/2025 8:08 AM

ಇಸ್ರೇಲ್ ‘ವಿತ್‌ಡ್ರಾವಲ್ ಲೈನ್‌’ಗೆ ಒಪ್ಪಿಗೆ; ಹಮಾಸ್ ಸಮ್ಮತಿಸಿದರೆ ತಕ್ಷಣ ಕದನ ವಿರಾಮ : ಟ್ರಂಪ್‌ ಘೋಷಣೆ

05/10/2025 7:58 AM
State News
KARNATAKA

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿ ಹತ್ಯೆ ಮಾಡಿರುವುದು ನೋವಿನ ಸಂಗತಿ : ಸಂಸದ ಯದುವೀರ್ ಒಡೆಯರ್

By kannadanewsnow5705/10/2025 8:13 AM KARNATAKA 1 Min Read

ಮೈಸೂರು : ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟ ವನ್ಯ ಧಾಮದಲ್ಲಿ ಹೆಣ್ಣು ಹುಲಿಯೊಂದನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ…

`KRS’ ಕಟ್ಟಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ : ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ

05/10/2025 8:08 AM

ರಾಜ್ಯದ `ಪಡಿತರ ಚೀಟಿದಾರರೇ’ ಗಮನಿಸಿ : ಉಚಿತ `ಹೊಲಿಗೆ ಯಂತ್ರ’ ಸೇರಿ ನಿಮಗೆ ಸಿಗಲಿವೆ ಈ 8 ಸೌಲಭ್ಯಗಳು.!

05/10/2025 7:58 AM

ರಾಜ್ಯದ ಎಲ್ಲ ಡಿಗ್ರಿ ಕಾಲೇಜುಗಳಲ್ಲಿ `ಸ್ಕೌಟ್ಸ್ & ಗೈಡ್ಸ್’ ಸ್ಥಾಪನೆ ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ

05/10/2025 7:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.