Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಉಚಿತ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡುವ ಗಡುವು 1 ವರ್ಷ ವಿಸ್ತರಣೆ : `UIDAI’ ಮಹತ್ವದ ಆದೇಶ

18/06/2025 9:00 AM

ರಾಜ್ಯ ಸರ್ಕಾರದಿಂದ ವಿಕಲಚೇತನರ ಆರೈಕೆದಾರರಿಗೆ ಗುಡ್ ನ್ಯೂಸ್ : `ಮಾಸಿಕ ಗೌರವಧನ’ಕ್ಕೆ ಅರ್ಜಿ ಆಹ್ವಾನ

18/06/2025 8:55 AM

ಯುದ್ಧ ಪ್ರಾರಂಭ: ಇಸ್ರೇಲ್ ದಾಳಿಯ ನಡುವೆ ಟ್ರಂಪ್ ಬೆದರಿಕೆಗಳಿಗೆ ಖಮೇನಿ ಪ್ರತಿಕ್ರಿಯೆ

18/06/2025 8:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೋಷಕರಿಗೆ ಗುಡ್‌ ನ್ಯೂಸ್‌ : ನಾಳೆ ರಾಜ್ಯದ 250 ಅಂಗನವಾಡಿಗಳಲ್ಲಿ ‘LKG, UKGʼ ಆರಂಭ
KARNATAKA

ಪೋಷಕರಿಗೆ ಗುಡ್‌ ನ್ಯೂಸ್‌ : ನಾಳೆ ರಾಜ್ಯದ 250 ಅಂಗನವಾಡಿಗಳಲ್ಲಿ ‘LKG, UKGʼ ಆರಂಭ

By kannadanewsnow5721/07/2024 6:35 AM

ಬೆಂಗಳೂರು : ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲು ಮೊದಲ ಹಂತದಲ್ಲಿ ಬೆಂಗಳೂರಿನ 250 ಅಂಗನವಾಡಿಗಳನ್ನು ಗುರುತಿಸಿದ್ದು, ಹಂತಹಂತವಾಗಿ ಎಲ್ಲ ಅಂಗನವಾಡಿ ಕೇಂದ್ರಗಳಲ್ಲೂ ಎಲ್ ಕೆಜಿ, ಯುಕೆಜಿ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ಶನಿವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದೊರೆತ ತಾತ್ವಿಕ ಒಪ್ಪಿಗೆ ಮೇರೆಗೆ ಹಂತ-ಹಂತವಾಗಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿಯೂ ಪೂರ್ವ ಪ್ರಾಥಮಿಕ (LKG & UNG) ಗಳನ್ನು ಪ್ರಾರಂಭಿಸಲು ಆದೇಶಿಸಲಾಗಿದೆ. ಅದರಂತೆ, ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ 250 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ (LKG & UKG) ಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಬೆಂಗಳೂರು ಉತ್ತರ ಜಿಲ್ಲೆಯ 62, ಪೂರ್ವ ಜಿಲ್ಲೆಯ 20, ಕೇಂದ್ರ ಜಿಲ್ಲೆಯ 50, ಬೆಂಗಳೂರು ರಾಜ್ಯ (ಪ್ರೊಜೆಕ್ಟ್) 50, ಬೆಂಗಳೂರು ದಕ್ಷಿಣ 48, ಆನೆಕಲ್ 20 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದ್ದು, 1,238 ಗಂಡು ಹಾಗೂ 1,203 ಹೆಣ್ಣು ಮಕ್ಕಳು ಸೇರಿ ಒಟ್ಟೂ 2,441 ಮಕ್ಕಳು ಇದರಲ್ಲಿ ಒಳಗೊಳ್ಳಲಿದ್ದಾರೆ.

04 ರಿಂದ 06 ವರ್ಷದ ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ಪಠ್ಯ, ಪುಸ್ತಕ (ಆಂಗ್ಲ ಹಾಗೂ ಕನ್ನಡ ಮಾಧ್ಯಮ) ನೀಡಲು, 1 ಜೊತೆ ಸಮವಸ್ತ್ರ ನೀಡಲು, 1 ಬ್ಯಾಗ್ ಮತ್ತು ಪೆನ್ಸಿಲ್ ಬಾಕ್ಸ್ ನೀಡಲು ನಿರ್ಧರಿಸಲಾಗಿದೆ. ಇದಕ್ಕೆ ಸಿಎಸ್ಆರ್ ಫಂಡ್ ಪಡೆಯಲು ಉದ್ದೇಶಿಸಲಾಗಿದೆ. LKG & UKG -ಪೂರ್ವ ಪ್ರಾಥಮಿಕ ಕೇಂದ್ರಗಳನ್ನು ಪ್ರತಿ ದಿನ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ನಡೆಸಲು ಉದ್ದೇಶಿಸಲಾಗಿದೆ. ಪೂರ್ವ ಪ್ರಾಥಮಿಕ ಕೇಂದ್ರಗಳಲ್ಲಿ ಹಾಲಿ PUC ಮತ್ತು ಪದವಿ / ಸ್ನಾತಕೋತ್ರದ ಪದವಿ ವಿದ್ಯಾರ್ಹತೆ ಹೊಂದಿರುವ ಹಾಗೂ ಈಗಾಗಲೇ ಅಗತ್ಯ ತರಬೇತಿ ಪಡೆದಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಮಾತ್ರ ಬೋಧನೆ ಮಾಡಲು ಗುರುತಿಸಲಾಗಿದೆ. ಆಂಗ್ಲ ಹಾಗೂ ಕನ್ನಡ ಮಾಧ್ಯಮಗಳಲ್ಲಿ ಬೋಧನೆ ಮಾಡಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದೇ ಸೋಮವಾರ, ಜುಲೈ 22ರಿಂದ 250 ಅಂಗನವಾಡಿ ಕೇಂದ್ರಗಳಲ್ಲಿ LKG & UKG ಪೂರ್ವ ಪ್ರಾಥಮಿಕ ಕೇಂದ್ರಗಳನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Good news for parents: 'LKG UKG' to be launched in 250 anganwadis in the state tomorrow UKGʼ ಆರಂಭ! ಪೋಷಕರಿಗೆ ಗುಡ್‌ ನ್ಯೂಸ್‌ : ನಾಳೆ ರಾಜ್ಯದ 250 ಅಂಗನವಾಡಿಗಳಲ್ಲಿ 'LKG
Share. Facebook Twitter LinkedIn WhatsApp Email

Related Posts

BREAKING : ಉಚಿತ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡುವ ಗಡುವು 1 ವರ್ಷ ವಿಸ್ತರಣೆ : `UIDAI’ ಮಹತ್ವದ ಆದೇಶ

18/06/2025 9:00 AM2 Mins Read

ರಾಜ್ಯ ಸರ್ಕಾರದಿಂದ ವಿಕಲಚೇತನರ ಆರೈಕೆದಾರರಿಗೆ ಗುಡ್ ನ್ಯೂಸ್ : `ಮಾಸಿಕ ಗೌರವಧನ’ಕ್ಕೆ ಅರ್ಜಿ ಆಹ್ವಾನ

18/06/2025 8:55 AM1 Min Read

BIG NEWS : ‘ಬಾಗೇಪಲ್ಲಿ’ ಇನ್ಮುಂದೆ ‘ಭಾಗ್ಯನಗರ’ : ನಾಳೆ ಸಚಿವ ಸಂಪುಟ ಸಭೆಯಲ್ಲಿ ಐತಿಹಾಸಿಕ ನಿರ್ಧಾರ.!

18/06/2025 8:48 AM1 Min Read
Recent News

BREAKING : ಉಚಿತ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡುವ ಗಡುವು 1 ವರ್ಷ ವಿಸ್ತರಣೆ : `UIDAI’ ಮಹತ್ವದ ಆದೇಶ

18/06/2025 9:00 AM

ರಾಜ್ಯ ಸರ್ಕಾರದಿಂದ ವಿಕಲಚೇತನರ ಆರೈಕೆದಾರರಿಗೆ ಗುಡ್ ನ್ಯೂಸ್ : `ಮಾಸಿಕ ಗೌರವಧನ’ಕ್ಕೆ ಅರ್ಜಿ ಆಹ್ವಾನ

18/06/2025 8:55 AM

ಯುದ್ಧ ಪ್ರಾರಂಭ: ಇಸ್ರೇಲ್ ದಾಳಿಯ ನಡುವೆ ಟ್ರಂಪ್ ಬೆದರಿಕೆಗಳಿಗೆ ಖಮೇನಿ ಪ್ರತಿಕ್ರಿಯೆ

18/06/2025 8:55 AM

BIG NEWS : ‘ಬಾಗೇಪಲ್ಲಿ’ ಇನ್ಮುಂದೆ ‘ಭಾಗ್ಯನಗರ’ : ನಾಳೆ ಸಚಿವ ಸಂಪುಟ ಸಭೆಯಲ್ಲಿ ಐತಿಹಾಸಿಕ ನಿರ್ಧಾರ.!

18/06/2025 8:48 AM
State News
KARNATAKA

BREAKING : ಉಚಿತ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡುವ ಗಡುವು 1 ವರ್ಷ ವಿಸ್ತರಣೆ : `UIDAI’ ಮಹತ್ವದ ಆದೇಶ

By kannadanewsnow5718/06/2025 9:00 AM KARNATAKA 2 Mins Read

ನವದೆಹಲಿ: ನಾಗರಿಕರು ತಮ್ಮ ಆಧಾರ್‌ಕಾರ್ಡ್ ನವೀಕರಣ ಮಾಡಿಕೊಳ್ಳಲು ಆನ್ಸೆನ್ ಸೌಲಭ್ಯ ವನ್ನು 2026ರ ಜೂ.14ರವರೆಗೆ ವಿಸ್ತರಿಸಲಾಗಿದೆ ಎಂದು ಭಾರತೀಯ ವಿಶಿಷ್ಟಗುರುತಿನ…

ರಾಜ್ಯ ಸರ್ಕಾರದಿಂದ ವಿಕಲಚೇತನರ ಆರೈಕೆದಾರರಿಗೆ ಗುಡ್ ನ್ಯೂಸ್ : `ಮಾಸಿಕ ಗೌರವಧನ’ಕ್ಕೆ ಅರ್ಜಿ ಆಹ್ವಾನ

18/06/2025 8:55 AM

BIG NEWS : ‘ಬಾಗೇಪಲ್ಲಿ’ ಇನ್ಮುಂದೆ ‘ಭಾಗ್ಯನಗರ’ : ನಾಳೆ ಸಚಿವ ಸಂಪುಟ ಸಭೆಯಲ್ಲಿ ಐತಿಹಾಸಿಕ ನಿರ್ಧಾರ.!

18/06/2025 8:48 AM

ಪೋಷಕರಿಗೆ ಗುಡ್ ನ್ಯೂಸ್ : ರಾಜ್ಯದ 1008 ಸರ್ಕಾರಿ ಶಾಲೆಗಳಲ್ಲಿ LKG, UKG ತರಗತಿ ಪ್ರಾರಂಭ

18/06/2025 8:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.