Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ನಮ್ಮ ‘ಆಶಾ ಕಿರಣ’ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆ ಯ ಪ್ರಶಂಸೆ : CM ಸಿದ್ದರಾಮಯ್ಯ ಮೆಚ್ಚುಗೆ

03/07/2025 3:28 PM

ಕೋವಿಡ್ ಲಸಿಕೆಗಳ ಕುರಿತ ಸಿಎಂ ಸಿದ್ದರಾಮಯ್ಯ ಹೇಳಿಕೆಗಳು ಪೂರ್ತಿ ‘ತಪ್ಪು’ ; ‘ಬಯೋಕಾನ್’ ಮುಖ್ಯಸ್ಥೆ

03/07/2025 3:09 PM

‘ನಮ್ಮ ಲಸಿಕೆ ಸುರಕ್ಷಿತ, ಹಠಾತ್ ಸಾವುಗಳಿಗೆ ಕಾರಣವಲ್ಲ’ : ಹೃದಯಾಘಾತಕ್ಕೆ ‘ಲಸಿಕೆ’ ಕಾರಣ ಎಂದ ಸಿಎಂ ‘ಸಿದ್ದು’ಗೆ ‘ಕೋವಿಶೀಲ್ಡ್’ ಸ್ಪಷ್ಟನೆ

03/07/2025 2:55 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » NWKRTC ಸಿಬ್ಬಂದಿಗಳಿಗೆ ಗುಡ್ ನ್ಯೂಸ್: ಕಿಮ್ಸ್ ಸಹಯೋಗದೊಂದಿಗೆ ಇನ್ಮುಂದೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ
KARNATAKA

NWKRTC ಸಿಬ್ಬಂದಿಗಳಿಗೆ ಗುಡ್ ನ್ಯೂಸ್: ಕಿಮ್ಸ್ ಸಹಯೋಗದೊಂದಿಗೆ ಇನ್ಮುಂದೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ

By kannadanewsnow0906/03/2024 4:31 PM

ಬೆಂಗಳೂರು: ಕಿಮ್ಸ್ ಸಹಯೋಗದೊಂದಿಗೆ ವಾಕರಸಾಸಂಸ್ಥೆಯ ಸಿಬ್ಬಂದಿಗಳಿಗೆ ಮತ್ತು ಅವರ ಅವಲಂಬಿತರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ NWKRTC ಸಿಬ್ಬಂದಿಗೆ ಗುಡ್ ನ್ಯೂಸ್ ನೀಡಲಾಗಿದೆ.

ಈ ಕುರಿತಂತೆ ಮಾಹಿತಿ ನೀಡಿರುವಂತ ನಿಗಮವು, ಸಂಸ್ಥೆಯು ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಕಾರವಾರ (ಉತ್ತರ ಕನ್ನಡ) ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯಲ್ಲಿ ಒಟ್ಟು 21120 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ಸುಮಾರು 15000 ನೌಕರರು ಚಾಲಕ-ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

> ನೌಕರರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಅವಶ್ಯಕತೆಯನುಸಾರ ವೈದ್ಯಕೀಯ ಮುಂಗಡ ನೀಡಲಾಗುತ್ತಿದೆ.

> ಕಳೆದ ಆರ್ಥಿಕ ವರ್ಷದಲ್ಲಿ ಎಲ್ಲಾ ವಿಭಾಗಗಳಿಂದ 4401 ಪ್ರಕರಣಗಳಲ್ಲಿ ರೂ.523.47 ಲಕ್ಷ ಮೊತ್ತದ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲಾಗಿದೆ.

ನೌಕರರಿಗೆ ಉತ್ತಮ ಆರೋಗ್ಯ ಮತ್ತು ಉತ್ತಮ ದರ್ಜೆಯ ಚಿಕಿತ್ಸೆಗಾಗಿ 106 ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಸರ್ಕಾರವು ಗುರುತಿಸಿರುವ 380 ಕ್ಕೂ ಹೆಚ್ಚಿನ ಆಸ್ಪತ್ರೆಗಳಿಗೆ ಮಾನ್ಯತೆ ನೀಡಿ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯಕ್ಕೆ ಅನುವು ಮಾಡಿಕೊಡಲಾಗಿದೆ.

ನೌಕರರು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮರುಪಾವತಿಗಾಗಿ ಸಲ್ಲಿಸುವ ಬಿಲ್ಲುಗಳು CGHS-2014 ದರಗಳಲ್ಲಿ ಪರಿಗಣಿಸುವುದರಿಂದ ವಾಸ್ತವಿಕ ವೆಚ್ಚದಷ್ಟು ಮೊತ್ತವು ಮರುಪಾವತಿ ಆಗದೇ ಇರುವುದರಿಂದ ನೌಕರರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿರುವುದು ಕಂಡು ಬಂದಿರುತ್ತದೆ. ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದ ಕಿಮ್ಸ್ ಸಂಸ್ಥೆಯವರೊಂದಿಗೆ ಈ ನಗದು ರಹಿತ ಚಿಕಿತ್ಸಾ ಸೌಲಭ್ಯದ ಒಪ್ಪಂದವನ್ನು ಮಾಡಿಕೊಳ್ಳಲು ಯೋಜಿಸಲಾಗಿದೆ.

ಸಂಸ್ಥೆಯು ನೌಕರರು ಅನಾರೋಗ್ಯದಿಂದ ಬಳಲುತ್ತಿರುವಾಗ ಹಣಕಾಸಿನ ಕೊರತೆ ಇದ್ದಾಗ ಚಿಕಿತ್ಸೆ ಪಡೆದುಕೊಳ್ಳಲು ಹಿಂದೆ ಸರಿಯಬಾರದು ಎಂಬ ಉದ್ದೇಶದಿಂದ, ಅವರುಗಳು ಕಿಮ್ಸ್ ಆಸ್ಪತ್ರೆಗೆ ಬಂದು ತಮ್ಮ ಪರಿಚಯ ಹೇಳಿಕೊಂಡು ತಮ್ಮ ಗುರುತಿನ ಚೀಟಿ ತೋರಿಸಿ ಅವರ ವಿವರಗಳನ್ನು ತಿಳಿಸಿ ವೈದ್ಯಕೀಯ ಚಿಕಿತ್ಸೆಗಾಗಿ ದಾಖಲಾದರೆ, ಕಿಮ್ಸ್ ಸಂಸ್ಥೆಯವರು ಚಿಕಿತ್ಸೆ ನೀಡಿ, ಅವರನ್ನು ಗುಣಪಡಿಸಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸುತ್ತಾರೆ. ನಂತರದಲ್ಲಿ ವೈದ್ಯಕೀಯ ಚಿಕಿತ್ಸೆಯನುಸಾರ ಬಿಲ್ಲನ್ನು ನೌಕರರ ಪರವಾಗಿ ಸಾರಿಗೆ ಸಂಸ್ಥೆಯು ಕಿಮ್ಸ್ ಸಂಸ್ಥೆಯವರಿಗೆ ಭರಿಸುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವ ನೌಕರರು ಯಾವುದೇ ರೀತಿಯ ಅಡಚಣೆ ಇಲ್ಲದೇ ಸಂಸ್ಥೆಯ ಗುರುತಿನ ಪತ್ರವನ್ನು ನೀಡಿ ನಗದು ರಹಿತವಾಗಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವ ಯೋಜನೆ ಇದಾಗಿದೆ.

ಕಾರ್ಯಕ್ರಮದಲ್ಲಿ ಶ್ರೀ ರಾಮಲಿಂಗಾರೆಡ್ಡಿ ಸಾರಿಗೆ ಮತ್ತು ಮುಜರಾಯಿ ಸಚಿವರು, ಭರತ್ ಎಸ್. ಭಾ.ಆ.ಸೇ. ವ್ಯವಸ್ಥಾಪಕ ನಿರ್ದೇಶಕರು, ವಾಕರಸಾಸಂಸ್ಥೆ, ಡಾ|| ಎಸ್. ಎಫ್.ಕಮ್ಮಾರ, ನಿರ್ದೇಶಕರು, ಕಿಮ್ಸ್ ಹುಬ್ಬಳ್ಳಿ, ಡಾ|| ಈಶ್ವರ ಹೊಸಮನಿ, ಪ್ರಾಂಶುಪಾಲರು, ಕಿಮ್ಸ್ ಹುಬ್ಬಳ್ಳಿ, ಡಾ|| ಲಕ್ಷ್ಮೀಕಾಂತ ಲೋಕರೆ, ಕಿಮ್ಸ್ ಹುಬ್ಬಳ್ಳಿ, ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಗಮನಿಸಿ: ‘ಯಶವಂತಪುರ-ವಿಜಯಪುರ ರೈಲು’ಗಳ ಸಂಚಾರ ಅವಧಿ ವಿಸ್ತರಣೆ

BREAKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ : ನೆಲಮಂಗಲದಲ್ಲಿ ’73 ಭ್ರೂಣ ಹತ್ಯೆ’ ಪ್ರಕರಣ ಬೆಳಕಿಗೆ

Share. Facebook Twitter LinkedIn WhatsApp Email

Related Posts

BIG NEWS : ನಮ್ಮ ‘ಆಶಾ ಕಿರಣ’ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆ ಯ ಪ್ರಶಂಸೆ : CM ಸಿದ್ದರಾಮಯ್ಯ ಮೆಚ್ಚುಗೆ

03/07/2025 3:28 PM1 Min Read

GOOD NEWS: ರಾಜ್ಯದ ‘ಗ್ರಾಮೀಣ ಪತ್ರಕರ್ತ’ರಿಗೆ ಗುಡ್ ನ್ಯೂಸ್: ಅರೆಕಾಲಿಕ ವರದಿಗಾರ, ಸಂಪಾಕರಿಗೂ ಸಿಗುತ್ತೆ ಉಚಿತ ಬಸ್ ಪಾಸ್

03/07/2025 2:43 PM1 Min Read

BREAKING : ಬೆಂಗಳೂರಲ್ಲಿ ಭೀಕರ ಅಪಘಾತ : BMTC ಬಸ್ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿಗೆ ಗಂಭೀರ ಗಾಯ!

03/07/2025 1:37 PM1 Min Read
Recent News

BIG NEWS : ನಮ್ಮ ‘ಆಶಾ ಕಿರಣ’ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆ ಯ ಪ್ರಶಂಸೆ : CM ಸಿದ್ದರಾಮಯ್ಯ ಮೆಚ್ಚುಗೆ

03/07/2025 3:28 PM

ಕೋವಿಡ್ ಲಸಿಕೆಗಳ ಕುರಿತ ಸಿಎಂ ಸಿದ್ದರಾಮಯ್ಯ ಹೇಳಿಕೆಗಳು ಪೂರ್ತಿ ‘ತಪ್ಪು’ ; ‘ಬಯೋಕಾನ್’ ಮುಖ್ಯಸ್ಥೆ

03/07/2025 3:09 PM

‘ನಮ್ಮ ಲಸಿಕೆ ಸುರಕ್ಷಿತ, ಹಠಾತ್ ಸಾವುಗಳಿಗೆ ಕಾರಣವಲ್ಲ’ : ಹೃದಯಾಘಾತಕ್ಕೆ ‘ಲಸಿಕೆ’ ಕಾರಣ ಎಂದ ಸಿಎಂ ‘ಸಿದ್ದು’ಗೆ ‘ಕೋವಿಶೀಲ್ಡ್’ ಸ್ಪಷ್ಟನೆ

03/07/2025 2:55 PM

GOOD NEWS: ರಾಜ್ಯದ ‘ಗ್ರಾಮೀಣ ಪತ್ರಕರ್ತ’ರಿಗೆ ಗುಡ್ ನ್ಯೂಸ್: ಅರೆಕಾಲಿಕ ವರದಿಗಾರ, ಸಂಪಾಕರಿಗೂ ಸಿಗುತ್ತೆ ಉಚಿತ ಬಸ್ ಪಾಸ್

03/07/2025 2:43 PM
State News
KARNATAKA

BIG NEWS : ನಮ್ಮ ‘ಆಶಾ ಕಿರಣ’ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆ ಯ ಪ್ರಶಂಸೆ : CM ಸಿದ್ದರಾಮಯ್ಯ ಮೆಚ್ಚುಗೆ

By kannadanewsnow0503/07/2025 3:28 PM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಯೋವೃದ್ಧರು, ಬಡಜನರು ಸೇರಿದಂತೆ ಜನಸಾಮಾನ್ಯರ ಕಣ್ಣಿನ ಸುರಕ್ಷತೆಯ ಕಾಳಜಿ ವಹಿಸುವ ಸಲುವಾಗಿ ನಮ್ಮ…

GOOD NEWS: ರಾಜ್ಯದ ‘ಗ್ರಾಮೀಣ ಪತ್ರಕರ್ತ’ರಿಗೆ ಗುಡ್ ನ್ಯೂಸ್: ಅರೆಕಾಲಿಕ ವರದಿಗಾರ, ಸಂಪಾಕರಿಗೂ ಸಿಗುತ್ತೆ ಉಚಿತ ಬಸ್ ಪಾಸ್

03/07/2025 2:43 PM

BREAKING : ಬೆಂಗಳೂರಲ್ಲಿ ಭೀಕರ ಅಪಘಾತ : BMTC ಬಸ್ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿಗೆ ಗಂಭೀರ ಗಾಯ!

03/07/2025 1:37 PM

BIG NEWS : ರಾಜ್ಯದ ರೈತರೇ ಗಮನಿಸಿ : ಮೊಬೈಲ್ ನಲ್ಲೇ `ಜಮೀನಿನ ಪೋಡಿ ನಕ್ಷೆ’ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

03/07/2025 1:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.