Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕರ್ನಾಟಕದಲ್ಲಿ ‘SC ಒಳ ಮೀಸಲಾತಿ’ ಜಾರಿಗೆ ಮುಹೂರ್ತ ಫಿಕ್ಸ್: ಆ.16ರಂದು ‘ವಿಶೇಷ ಸಚಿವ ಸಂಪುಟ ಸಭೆ’ ನಿಗದಿ

11/08/2025 2:14 PM

BIG NEWS : ಈ ವರ್ಷ ಗ್ರೇಟರ್ ಬೆಂಗಳೂರು ಅಥಾರಿಟಿ ಸ್ಥಾಪನೆ ಇಲ್ಲ: ಹೈಕೋರ್ಟ್​ಗೆ ಎಜಿ ಶಶಿಕಿರಣ್ ಶೆಟ್ಟಿ ಸ್ಪಷ್ಟನ

11/08/2025 2:14 PM

ಧರ್ಮಸ್ಥಳ ಪ್ರಕರಣ : 13ನೇ ಸ್ಥಳದಲ್ಲಿ ಜಿಪಿಆರ್ ಬಳಕೆಗೆ ಮುಂದಾದ SIT, ಇದು ಹೇಗೆಲ್ಲ ಕೆಲಸ ಮಾಡಲಿದೆ? ಇಲ್ಲಿದೆ ಮಾಹಿತಿ

11/08/2025 2:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘NWKRTC’ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ‘ಸಾರಿಗೆ ಸಂಜೀವಿನಿ’ಯಡಿ ನಗದು ರಹಿತ ಚಿಕಿತ್ಸೆ ವಿಸ್ತರಣೆ
KARNATAKA

‘NWKRTC’ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ‘ಸಾರಿಗೆ ಸಂಜೀವಿನಿ’ಯಡಿ ನಗದು ರಹಿತ ಚಿಕಿತ್ಸೆ ವಿಸ್ತರಣೆ

By kannadanewsnow5727/06/2024 5:37 AM

ಬೆಂಗಳೂರು : ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ ರವರ ಸಹಯೋಗದೊಂದಿಗೆ ವಾ.ಕ.ರ ಸಾರಿಗೆ ಸಂಸ್ಥೆಯಲ್ಲಿ (NWKRTC) ಕಾರ್ಯನಿರತ ನೌಕರರಿಗೆ ಮತ್ತು ಅವರ ಅವಲಂಬಿತರಿಗೆ “ಸಾರಿಗೆ ಸಂಜೀವಿನಿ” ನಗದುರಹಿತ (Cashless) ಒಳರೋಗಿ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

ವಾ.ಕ.ರ.ಸಾ.ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಮತ್ತು ಅವರ ಅವಲಂಬಿತರ ಆರೋಗ್ಯದ ಹಿತದೃಷ್ಟಿಯಿಂದ ಒಳರೋಗಿಗಳಿಗೆ ನಗದುರಹಿತ (Cashless) ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸಲು ಯೋಜಿಸಿ, ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ “ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ” (KIMS) ರವರೊಂದಿಗೆ ಮೂರು (03) ವರ್ಷಗಳ ಅವಧಿಗೆ ಒಡಂಬಡಿಕೆಯನ್ನು ಮಾಡಿಕೊಂಡು “ಸಾರಿಗೆ ಸಂಜೀವಿನಿ” ಯೋಜನೆಯನ್ನು ದಿನಾಂಕ: 06-03-2024 ರಿಂದ ಜಾರಿಗೆ ತರಲಾಗಿದೆ.

ಈ ಯೋಜನೆಯನ್ನು ಜಾರಿಗೆ ತಂದಿರುವ ಕುರಿತು ಉಲ್ಲೇಖಿತ 02 ರ ಸುತ್ತೋಲೆಯಲ್ಲಿ ವಿವರವಾದ ನಿರ್ದೇಶನಗಳನ್ನು ನೀಡಲಾಗಿದೆ. ಮುಂದುವರೆದಂತೆ ಸಂಸ್ಥೆಯ ನೌಕರರು ಮತ್ತು ಅವರ ಅವಲಂಬಿತರು ಸರ್ಕಾರಿ/ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮರುಪಾವತಿಗಾಗಿ ಕೋರುವ ವೈದ್ಯಕೀಯ ಬಿಲ್ಲುಗಳನ್ನು ಆಯಾ ವಿಭಾಗದ ಮುಖ್ಯಸ್ಥರಿಗೆ/ಪ್ರಾದೇಶಿಕ ಕಾರ್ಯಾಗಾರದ ಕಾರ್ಯವ್ಯವಸ್ಥಾಪಕರಿಗೆ ಮಂಜೂರು ಮಾಡಲು ಅಧಿಕಾರ ಪ್ರತ್ಯಾಯೋಜನೆಯನ್ವಯ ಅವಕಾಶವಿರುತ್ತದೆ. ಅಲ್ಲದೇ ಸಂಸ್ಥೆಯು ಒಡಬಂಡಿಕೆ ಮಾಡಿಕೊಂಡಿರುವ ಈ ಆಸ್ಪತ್ರೆಯು ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ (KIMS) ಆಸ್ಪತ್ರೆಯಾಗಿರುವುದರಿಂದ ಈ “ಸಾರಿಗೆ ಸಂಜೀವಿನಿ” ಯೋಜನೆಯಡಿ ಚಿಕಿತ್ಸೆ ಪಡೆಯುವ ವೈದ್ಯಕೀಯ ಬಿಲ್ಲುಗಳನ್ನು ಆಯಾ ವಿಭಾಗ / ಪ್ರಾದೇಶಿಕ ಕಾರ್ಯಾಗಾರದಲ್ಲಿ ಪರಿಶೀಲಿಸಿ. ಮಂಜೂರಾತಿಗೆ ಕ್ರಮವಹಿಸಲು ಸೂಚಿಸಲಾಗಿದೆ.

ಮುಂದುವರೆದು ಸಂಸ್ಥೆಯಲ್ಲಿ ಕಾರ್ಯನಿರತ ಎಲ್ಲಾ ನೌಕರರಿಗೆ ಹಾಗೂ ಅವರ ಅವಲಂಬಿತರಿಗೆ ನಗದುರಹಿತ (Cashless) ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಪಡೆಯಲು ಈ ಕೆಳಕಂಡ ನಿರ್ದೇಶನಗಳನ್ನು ನೀಡಲಾಗಿದೆ.

1. ನೌಕರರು ಹಾಗೂ ಅವರ ಅವಲಂಬಿತರು ಚಿಕಿತ್ಸೆಗೆ ದಾಖಲಾಗುವ ಬಗೆ :

1) ಸಂಸ್ಥೆಯಲ್ಲಿ ಕಾರ್ಯನಿರತ ಎಲ್ಲಾ ನೌಕರರ ಮತ್ತು ಅವರ ಅವಲಂಬಿತರ ವಿವರಗಳ ಮಾಹಿತಿ ಹಾಗೂ ಇತ್ತೀಚಿನ ಭಾವ ಚಿತ್ರದೊಂದಿಗೆ “ಸಾರಿಗೆ ಸಂಜೀವಿನಿ” ತಂತ್ರಾಂಶದಲ್ಲಿ ಕಡ್ಡಾಯವಾಗಿ ನೋಂದಣಿ ಆಗಿರಬೇಕು. ಈ ವಿವರಗಳನ್ನು ಕಿಮ್ಸ್‌ನವರು ಸಾರಿಗೆ ಸಂಜೀವಿನಿ ತಂತ್ರಾಂಶದ ಮೂಲಕ ಪರಿಶೀಲಿಸಿ ಖಾತರಿಪಡಿಸಿಕೊಳ್ಳುವರು.
2) ಚಿಕಿತ್ಸೆಗಾಗಿ ದಾಖಲಾದಾಗ KIMS ಆಸ್ಪತ್ರೆ ರವರಿಗೆ ಸಂಸ್ಥೆಯ ನೌಕರರು ಮತ್ತು ಅವರ ಅವಲಂಬಿತರು ತಮ್ಮ ಪರಿಚಯ ಮತ್ತು ಫಲಾನುಭವಿಗಳು ಎಂದು ತಿಳಿಸುವುದು. NWKRTC ನೌಕರರು ಅವರ ಅವಲಂಬಿತರ ಆವಶ್ಯಕ ಮಾಹಿತಿಯೊಂದಿಗೆ ಮತ್ತು ನೌಕರರ ಭವಿಷ್ಯ ನಿಧಿ ಸಂಖ್ಯೆ ಅಥವಾ ಸಾರಿಗೆ ಸಂಜೀವಿನಿ ತಂತ್ರಾಂಶದಲ್ಲಿ ದಾಖಲಿಸಿದ ದೂರವಾಣಿ ಸಂಖ್ಯೆಯನ್ನು KIMS ಆಸ್ಪತ್ರೆ ರವರಿಗೆ ನೀಡಿ. ಚಿಕಿತ್ಸೆಗೆ ದಾಖಲಾಗುವುದು.

3) ನೌಕರರ ಅವಲಂಬಿತರು ಚಿಕಿತ್ಸೆಗೆ ದಾಖಲಾಗುವ ಸಮಯದಲ್ಲಿ, ಅವರ ಅವಲಂಬಿತರು ನೌಕರನ ಜೊತೆ ಖಾಯಂ ವಾಸ ಮಾಡುತ್ತಿರುವ ವಿವರ, ಜೀವನೋಪಾಯಕ್ಕಾಗಿ ಸಂಪೂರ್ಣವಾಗಿ ಅವರ ಮೇಲೆ ಅವಲಂಬಿತರಾಗಿರುವ ಬಗ್ಗೆ ಹಾಗೂ ಅವರ ಆದಾಯದ ಕುರಿತು ಲಿಖಿತವಾಗಿ ದೃಢೀಕರಣವನ್ನು KIMS ನವರಿಗೆ ನೌಕರರು ಒದಗಿಸಿ ದಾಖಲಿಸುವುದು.

'NWKRTC' ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : 'ಸಾರಿಗೆ ಸಂಜೀವಿನಿ'ಯಡಿ ನಗದು ರಹಿತ ಚಿಕಿತ್ಸೆ ವಿಸ್ತರಣೆ Good news for NWKRTC employees: Cashless treatment extended under 'Transport Sanjeevini'
Share. Facebook Twitter LinkedIn WhatsApp Email

Related Posts

ಕರ್ನಾಟಕದಲ್ಲಿ ‘SC ಒಳ ಮೀಸಲಾತಿ’ ಜಾರಿಗೆ ಮುಹೂರ್ತ ಫಿಕ್ಸ್: ಆ.16ರಂದು ‘ವಿಶೇಷ ಸಚಿವ ಸಂಪುಟ ಸಭೆ’ ನಿಗದಿ

11/08/2025 2:14 PM1 Min Read

BIG NEWS : ಈ ವರ್ಷ ಗ್ರೇಟರ್ ಬೆಂಗಳೂರು ಅಥಾರಿಟಿ ಸ್ಥಾಪನೆ ಇಲ್ಲ: ಹೈಕೋರ್ಟ್​ಗೆ ಎಜಿ ಶಶಿಕಿರಣ್ ಶೆಟ್ಟಿ ಸ್ಪಷ್ಟನ

11/08/2025 2:14 PM1 Min Read

ಬಿಜೆಪಿಯ ಕೆಲವು ಖಾಲಿ ಟ್ರಂಕುಗಳು ಶಬ್ದ ಮಾತ್ರ ಮಾಡುತ್ತವೆ: ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯ

11/08/2025 2:02 PM1 Min Read
Recent News

ಕರ್ನಾಟಕದಲ್ಲಿ ‘SC ಒಳ ಮೀಸಲಾತಿ’ ಜಾರಿಗೆ ಮುಹೂರ್ತ ಫಿಕ್ಸ್: ಆ.16ರಂದು ‘ವಿಶೇಷ ಸಚಿವ ಸಂಪುಟ ಸಭೆ’ ನಿಗದಿ

11/08/2025 2:14 PM

BIG NEWS : ಈ ವರ್ಷ ಗ್ರೇಟರ್ ಬೆಂಗಳೂರು ಅಥಾರಿಟಿ ಸ್ಥಾಪನೆ ಇಲ್ಲ: ಹೈಕೋರ್ಟ್​ಗೆ ಎಜಿ ಶಶಿಕಿರಣ್ ಶೆಟ್ಟಿ ಸ್ಪಷ್ಟನ

11/08/2025 2:14 PM

ಧರ್ಮಸ್ಥಳ ಪ್ರಕರಣ : 13ನೇ ಸ್ಥಳದಲ್ಲಿ ಜಿಪಿಆರ್ ಬಳಕೆಗೆ ಮುಂದಾದ SIT, ಇದು ಹೇಗೆಲ್ಲ ಕೆಲಸ ಮಾಡಲಿದೆ? ಇಲ್ಲಿದೆ ಮಾಹಿತಿ

11/08/2025 2:13 PM

ಬಿಜೆಪಿಯ ಕೆಲವು ಖಾಲಿ ಟ್ರಂಕುಗಳು ಶಬ್ದ ಮಾತ್ರ ಮಾಡುತ್ತವೆ: ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯ

11/08/2025 2:02 PM
State News
KARNATAKA

ಕರ್ನಾಟಕದಲ್ಲಿ ‘SC ಒಳ ಮೀಸಲಾತಿ’ ಜಾರಿಗೆ ಮುಹೂರ್ತ ಫಿಕ್ಸ್: ಆ.16ರಂದು ‘ವಿಶೇಷ ಸಚಿವ ಸಂಪುಟ ಸಭೆ’ ನಿಗದಿ

By kannadanewsnow0911/08/2025 2:14 PM KARNATAKA 1 Min Read

ಬೆಂಗಳೂರು: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಕುರಿತಂತೆ ಈಗಾಗಲೇ ಸರ್ಕಾರಕ್ಕೆ ಡಾ.ಹೆಚ್ಎನ್ ನಾಗಮೋಹನ್ ದಾಸ್ ಏಕ ಸದಸ್ಯ…

BIG NEWS : ಈ ವರ್ಷ ಗ್ರೇಟರ್ ಬೆಂಗಳೂರು ಅಥಾರಿಟಿ ಸ್ಥಾಪನೆ ಇಲ್ಲ: ಹೈಕೋರ್ಟ್​ಗೆ ಎಜಿ ಶಶಿಕಿರಣ್ ಶೆಟ್ಟಿ ಸ್ಪಷ್ಟನ

11/08/2025 2:14 PM

ಬಿಜೆಪಿಯ ಕೆಲವು ಖಾಲಿ ಟ್ರಂಕುಗಳು ಶಬ್ದ ಮಾತ್ರ ಮಾಡುತ್ತವೆ: ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯ

11/08/2025 2:02 PM

ರಾಜ್ಯ ಸರ್ಕಾರದಿಂದ `ಕಾರ್ಮಿಕರ ಮಕ್ಕಳಿಗೆ’ ಗುಡ್ ನ್ಯೂಸ್ : `ಶೈಕ್ಷಣಿಕ ಸಹಾಯಧನ’ಕ್ಕೆ ಅರ್ಜಿ ಆಹ್ವಾನ

11/08/2025 1:56 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.