Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದ ‘ಮಡಸೂರು ಗ್ರಾಮ’ದ ಜನತೆಗೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಬಿಗ್ ಗಿಫ್ಟ್

07/08/2025 7:17 PM

ಈಗ ಒಂದೇ ಕ್ಲಿಕ್’ನಲ್ಲಿ ಆಧಾರ್ ನವೀಕರಣ ; ‘UIDAI’ನಿಂದ ‘ಇ-ಆಧಾರ್ ಅಪ್ಲಿಕೇಶನ್’ ಆರಂಭ

07/08/2025 6:52 PM

ಕೂಡಲೇ ರಾಜೀನಾಮೆ ನೀಡುವಂತೆ ಇಂಟೆಲ್ ಸಿಇಒಗೆ US ಅಧ್ಯಕ್ಷ ಟ್ರಂಪ್ ಕರೆಮಾಡಿ ಸೂಚನೆ | Intel CEO

07/08/2025 6:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಗೊಂಡ, ರಾಜಗೊಂಡ, ಕಾಡು ಕುರುಬ ಜನಾಂಗ’ದವರಿಗೆ ಗುಡ್ ನ್ಯೂಸ್: ‘ST ಪ್ರಮಾಣ ಪತ್ರ’ ವಿತರಣೆಗೆ ರಾಜ್ಯ ಸರ್ಕಾರ ಆದೇಶ
KARNATAKA

‘ಗೊಂಡ, ರಾಜಗೊಂಡ, ಕಾಡು ಕುರುಬ ಜನಾಂಗ’ದವರಿಗೆ ಗುಡ್ ನ್ಯೂಸ್: ‘ST ಪ್ರಮಾಣ ಪತ್ರ’ ವಿತರಣೆಗೆ ರಾಜ್ಯ ಸರ್ಕಾರ ಆದೇಶ

By kannadanewsnow0903/01/2024 5:48 AM

ಬೆಂಗಳೂರು: ರಾಜ್ಯ ಸರ್ಕಾರದಿಂದ ಕಲಬುರ್ಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಗೊಂಡ, ರಾಜಗೊಂಡ, ಕಾಡುಕುರುಬ ಹಾಗೂ ಕೊಡಗು ಜಿಲ್ಲೆಯ ಕುರುಬ ಜನಾಂಗಕ್ಕೆ ಸೇರಿದವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣಪತ್ರ ವಿತರಣೆಗೆ ಆದೇಶಿಸಿದೆ.

ಈ ಕುರಿತಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ದಿನಾಂಕ 25.08.2023 ರಂದು ಸನ್ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಗೊಂಡ, ರಾಜಗೊಂಡ, ಕಾಡು ಕುರುಬ ಹಾಗೂ ಕೊಡಗು ಜಿಲ್ಲೆಯ ಕುರುಬ ಜಾತಿಗಳ ಜನಾಂಗಕ್ಕೆ, ಜಾತಿ ಪ್ರಮಾಣ ಪತ್ರ/ಸಿಂಧುತ್ವ, ಪ್ರಮಾಣ ಪತ್ರ ವಡೆಯಲು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಚರ್ಚಿಸಿ ತೆಗೆದುಕೊಂಡ ನಿರ್ಣಯಗಳ ಸಭಾ ನಡವಳಿಯನ್ನಯ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಇತರ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಕೆಳಕಂಡಂತೆ ಕ್ರಮವಹಿಸುವುದು ಎಂದಿದ್ದಾರೆ.

1.ಕರ್ನಾಟಕ ರಾಜ್ಯದಲ್ಲಿ ಜಾತಿ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡಲು ಅನುಸರಿಸಬೇಕಾದ ವಿಧಿ-ವಿಧಾನಗಳ ಬಗ್ಗೆ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಹಾಗೂ ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ 1990 ನಿಯಮಗಳು 1992 ರಡಿ ವಿಸ್ತ್ರತವಾಗಿ ವಿವರಿಸಲಾಗಿದೆ ಎಂದು ಹೇಳಿದ್ದಾರೆ.

2 ಜಾತಿ ಮತ್ತು ಸಿಂಧುತ್ವ ಪುಮಾಣ ಪತ್ರಗಳ ಬಗ್ಗೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮೋಟೋ ಪ್ರಕರಣಗಳನ್ನು ಕೈಗೆತ್ತಿಕೊಂಡು ವಿಚಾರಣೆ ಮಾಡಬಾರದು. ಜಿಲ್ಲಾ ಜಾತಿ, ಪರಿಶೀಲನಾ ಸಮಿತಿಯು ವಹಿಸಿದ ಪ್ರಕರಣಗಳನ್ನು ಹಾಗೂ ದೂರು ಬಂದಲ್ಲಿ ವಿಚಾರಣೆ ಮಾಡತಕ್ಕದು.

3. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯಲ್ಲಿ ಬಾಕಿ ಇರುವ ಜಾತಿ/ಸಿಂಧುತ್ವ ಪ್ರಮಾಣ ಪತ್ರ ಪ್ರಕರಣಗಳನ್ನು ಎಸ್.ಸಿ/ಎಸ್.ಟಿ/ಒ.ಬಿ.ಸಿ ಮೀಸಲಾತಿ ಕಾಯ 1990 ಕಲಂ 4 (ಸಿ) (3) ರನ್ವಯ ನಿಗಧಿಪಡಿಸಿದ ಅವಧಿಯೊಳಗೆ ವಿಲೇವಾರಿ ಮಾಡುವುದು.

4.ಗೊಂಡ, ರಾಜಗೊಂಡ, ಕಾಡುಕುರುಬ ಮತ್ತು ಕೊಡಗು ಜಿಲ್ಲೆಯ ಕುರುಬ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ/ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡುವ ಬಗ್ಗೆ, ಸರ್ಕಾರದಿಂದ ಈಗಾಗಲೇ ಸುತ್ತೋಲೆ/ಅಧಿಸೂಚನಗಳ ಪ್ರಕಾರ ಅಭ್ಯರ್ಥಿಗಳು ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಿ. ಸ್ಥಳೀಯ ವಿಚಾರಣೆ/ಮಹಜರ್ ಮಾಡಿ ಶಾಲಾ ದಾಖಲಾತಿಗಳಲ್ಲಿ ಈ ಜಾತಿಗಳ ಬಗ್ಗೆ ನಮೂದಾಗಿದ್ದರೆ ಅದನ್ನು ಒಂದು ಸಾಕ್ಷವೆಂದು ಪರಿಗಣಿಸತಕ್ಕದು ಎಂದು ತಿಳಿಸಿದ್ದಾರೆ.

5. ಗೊಂಡ, ರಾಜ ಗೊಂಡ, ಕಾಡುಕುರುಬ ಮತ್ತು ಕೊಡಗು ಜಿಲ್ಲೆಯ ಕುರುಬ ಜನಾಂಗದವರಿಗೆ ಜಾತಿ |ಸಿಂಧುತ್ವ ಪ್ರಮಾಣ ಪತ್ರ ನೀಡುವ ಬಗ್ಗೆ ಸರ್ಕಾರದಿಂದ ಈಗಾಗಲೇ ಹಲವಾರು ಸುತ್ತೋಲೆ ಹಾಗೂ ಆದೇಶಗಳನ್ನು ನೀಡಿದಾಗೂ ಸದರಿ ಕಾಲದವರಿಗೆ ಜಾತಿ/ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಗಂಭೀರವಾಗಿ ವರಿಗಣಿಸಿದ್ದು, ಸಕಾಲದಲ್ಲಿ ವಮಾಣ ಪತ್ರಗಳನ್ನು ನೀಡಲು ಕ್ರಮತೆಗೆದುಕೊಳ್ಳುವುದು
6. ಸರ್ಕಾರಿ ಉದ್ಯೋಗಗಳಿಗೆ ಜಾತಿ ಮತ್ತು ಆದಾಯ ಸಿಂಧುತ್ವ ಪ್ರಮಾಣ ಪತ್ರ ನೀಡುವಾಗ ತಹಶೀಲ್ದಾರರು ನೀಡಿದ ಜಾತಿ ಮತ್ತು ಜಾತಿ ಆದಾಯ ಪ್ರಮಾಣ ಪತ್ರದ ನೈಜತ ಪರಿಶೀಲನೆಗಾಗಿ ಸರ್ಕಾರವು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯಲ್ಲಿ ಮಂಡಿಸಿ ನಿಯಮಾನುಸಾರ ಇತ್ಯರ್ಥವದಿಸಬೇಕು.
7. ಒಂದು ವೇಳೆ ತಕರಾರು ಇದ್ದಲ್ಲಿ ನಿಯಮಾನುಸಾರ ವಿಚಾರಣೆ ಮಾಡಿ ಅರ್ಹರಿಗೆ ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡಬೇಕು ಅರ್ಹರಿಲ್ಲದಿದ್ದಲ್ಲಿ ಯಾವ ಕಾರಣದ ಮೇಲೆ ತಿರಸ್ಕರಿಸಲಾಗುತ್ತಿದೆ ಎಂಬ ಬಗ್ಗೆ ವಿವರವಾದ ಆದೇಶವನ್ನು (Speaking Order) ಹೊರಡಿಸತಕ್ಕದು.
8. ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ರವರು ಕೆಲವು ಪ್ರಕರಣಗಳನ್ನು ವಿಚಾರಣ ಮಾಡಿ ಅರ್ಹರೆಂದು ವರದಿ ಸಲ್ಲಿಸಿದ ಪ್ರಕರಣಗಳನ್ನು ನಿಯಮಾನುಸಾರ ಇತ್ಯರ್ಥಪಡಿಸತಕ್ಕದು.

9. ಶಾಲಾ ದಾಖಲಾತಿಗಳಲ್ಲಿ ಈ ಮೊದಲೇ ಜೇನು ಕುರುಬ, ಕಾಡುಕುರುಬ, ಗೊಂಡ, ರಾಜಗೊಂಡ ವಡೆಯಲಿಚ್ಛಿಸುವ ಜಾತಿಗೆ ಸೇರಿದವರು ಎಂಬ ಬಗ್ಗೆ ಸಾಕ್ಷವೆಂದು ಪರಿಗಣಿಸತಕ್ಕದು

ಮೇಲ್ಕಂಡ ಅಂಶಗಳನ್ನು ಅನುಸರಿಸಿ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಗೊಂಡ, ರಾಜಗೊಂಡ, ಕಾಡುಕುರುಬ ಹಾಗೂ ಕೊಡಗು ಜಿಲ್ಲೆಯ ಕುರುಬ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ/ಸಿಂಧು ಪ್ರಮಾಣ ಪತ್ರಗಳನ್ನು ನೀಡಲು ಕ್ರಮವಹಿಸಲು ಸೂಚಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಸಾಗರದ ‘ಮಡಸೂರು ಗ್ರಾಮ’ದ ಜನತೆಗೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಬಿಗ್ ಗಿಫ್ಟ್

07/08/2025 7:17 PM3 Mins Read

BREAKING: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ ಸುಧಾಕರ್ ವಿರುದ್ಧ FIR ದಾಖಲು

07/08/2025 6:22 PM1 Min Read

‘ಜೋಗ್ ಫಾಲ್ಸ್’ನ ಅಪಾಯದ ಪ್ರದೇಶದಲ್ಲಿ ವೀಡಿಯೋ ಮಾಡಿದ್ದ ಯೂಟ್ಯೂಬರ್ ವಿರುದ್ಧ ‘FIR’ ದಾಖಲು

07/08/2025 6:18 PM1 Min Read
Recent News

ಸಾಗರದ ‘ಮಡಸೂರು ಗ್ರಾಮ’ದ ಜನತೆಗೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಬಿಗ್ ಗಿಫ್ಟ್

07/08/2025 7:17 PM

ಈಗ ಒಂದೇ ಕ್ಲಿಕ್’ನಲ್ಲಿ ಆಧಾರ್ ನವೀಕರಣ ; ‘UIDAI’ನಿಂದ ‘ಇ-ಆಧಾರ್ ಅಪ್ಲಿಕೇಶನ್’ ಆರಂಭ

07/08/2025 6:52 PM

ಕೂಡಲೇ ರಾಜೀನಾಮೆ ನೀಡುವಂತೆ ಇಂಟೆಲ್ ಸಿಇಒಗೆ US ಅಧ್ಯಕ್ಷ ಟ್ರಂಪ್ ಕರೆಮಾಡಿ ಸೂಚನೆ | Intel CEO

07/08/2025 6:41 PM

BREAKING: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ ಸುಧಾಕರ್ ವಿರುದ್ಧ FIR ದಾಖಲು

07/08/2025 6:22 PM
State News
KARNATAKA

ಸಾಗರದ ‘ಮಡಸೂರು ಗ್ರಾಮ’ದ ಜನತೆಗೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಬಿಗ್ ಗಿಫ್ಟ್

By kannadanewsnow0907/08/2025 7:17 PM KARNATAKA 3 Mins Read

ಶಿವಮೊಗ್ಗ: ಜಿಲ್ಲೆಯ ಸಾಗರದ ಮಡಸೂರು ಗ್ರಾಮದ ಜನತೆಗೆ ಶಾಸಕ ಗೋಪಾಲಕೃಷ್ಣ ಬಿಗ್ ಗಿಫ್ಟ್ ನೀಡಿದ್ದಾರೆ. ಅದೇ ಸಾಗರದ ಮಡಸೂರು ಗ್ರಾಮದಲ್ಲಿ…

BREAKING: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ ಸುಧಾಕರ್ ವಿರುದ್ಧ FIR ದಾಖಲು

07/08/2025 6:22 PM

‘ಜೋಗ್ ಫಾಲ್ಸ್’ನ ಅಪಾಯದ ಪ್ರದೇಶದಲ್ಲಿ ವೀಡಿಯೋ ಮಾಡಿದ್ದ ಯೂಟ್ಯೂಬರ್ ವಿರುದ್ಧ ‘FIR’ ದಾಖಲು

07/08/2025 6:18 PM

ಈ ಅಷ್ಟ ಲಕ್ಷ್ಮೀ ಮಂತ್ರ ಪಠಿಸಿ ನೋಡಿ, ನಿಮಗೆ ಅಷ್ಟೈಶ್ವರ್ಯ ಪ್ರಾಪ್ತಿ

07/08/2025 6:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.