Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ದೇಶದ ಅತಿದೊಡ್ಡ ಬ್ಯಾಂಕ್ ಕಳ್ಳತನ ಕೇಸ್ ಬೇಧಿಸಿದ ಪೊಲೀಸರು : 12 ಆರೋಪಿಗಳು ಅರೆಸ್ಟ್.!

11/07/2025 11:57 AM

ALERT : ಬಾಲ್ಯ ವಿವಾಹವಷ್ಟೇ ಅಲ್ಲ, ಈಗ ‘ನಿಶ್ಚಿತಾರ್ಥ’ವೂ ಅಪರಾಧ: 2 ವರ್ಷ ಜೈಲು, ಇಲ್ಲವೇ 1 ಲಕ್ಷ ದಂಡ ಫಿಕ್ಸ್.!

11/07/2025 11:56 AM

BREAKING : ಪಾಕಿಸ್ತಾನದ 18 ಸೇನಾ ನೆಲೆಗಳ ಮೇಲೆ ಉಗ್ರ ದಾಳಿ : ಬಸ್ ನಲ್ಲಿದ್ದ 9 ಪ್ರಯಾಣಿಕರ ಹತ್ಯೆ | Operation Baam

11/07/2025 11:53 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈತರಿಗೆ ಗುಡ್ ನ್ಯೂಸ್ : ಬೆಂಬಲ ಬೆಲೆ ಯೋಜನೆಯಡಿ `ಭತ್ತ’ ಖರೀದಿ ಪ್ರಕ್ರಿಯೆ ಆರಂಭ.!
KARNATAKA

ರೈತರಿಗೆ ಗುಡ್ ನ್ಯೂಸ್ : ಬೆಂಬಲ ಬೆಲೆ ಯೋಜನೆಯಡಿ `ಭತ್ತ’ ಖರೀದಿ ಪ್ರಕ್ರಿಯೆ ಆರಂಭ.!

By kannadanewsnow5723/01/2025 6:34 AM

ಮಡಿಕೇರಿ : ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಕ್ರಿಯೆ ಡಿಸೆಂಬರ್ 1 ರಿಂದ ಆರಂಭವಾಗಿದ್ದು, ಜಿಲ್ಲೆಯ ರೈತರು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಶ್ರೀಧರಮೂರ್ತಿ ಜೆ.ಬಿ. ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಆದೇಶದಂತೆ 2024-25ನೇ ಸಾಲಿಗೆ ರೈತರಿಂದ ಕನಿಷ್ಟ ಬೆಂಬಲ ಬೆಲೆಯೋಜನೆಯಡಿ ಭತ್ತ ಖರೀದಿ ಮಾಡಲಾಗುತ್ತಿದ್ದು, ಡಿಸೆಂಬರ್, 01 ರಿಂದ ಆರಂಭವಾಗಿದ್ದು, 2025 ರ ಮಾರ್ಚ್, 31 ರವರೆಗೆ ಭತ್ತ ಖರೀದಿ ಮತ್ತು ನೋಂದಣಿಗೆ ಅವಕಾಶ ಇರುತ್ತದೆ.

ಜಿಲ್ಲೆಗೆ ಭತ್ತ ಮತ್ತು ರಾಗಿ ಖರೀದಿಸಲು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಖರೀದಿ ಏಜೆನ್ಸಿಯನ್ನಾಗಿ ಸರಕಾರ ನೇಮಕ ಮಾಡಿದ್ದು, ಖರೀದಿ ಪ್ರಕ್ರಿಯೆಯು ಇವರ ಮುಖಾಂತರ ನಡೆಯುತ್ತಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆಯಡಿ ಡಿಸೆಂಬರ್-2024 ರಿಂದ ರೈತರ ನೋಂದಣಿ ಕಾರ್ಯ ಆರಂಭವಾಗಿದ್ದು, ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‍ಗೆ 2300 ರೂ. ನಿಗದಿಪಡಿಸಲಾಗಿದ್ದು, ರಾಗಿ ಪ್ರತಿ ಕ್ವಿಂಟಲ್‍ಗೆ 4290 ರೂ. ನಿಗದಿಪಡಿಸಲಾಗಿರುತ್ತದೆ.

ಜಿಲ್ಲೆಯಾದ್ಯಂತ ರೈತರಿಗೆ ಅನುಕೂಲ ಆಗುವಂತೆ 05 ಕಡೆಗಳಲ್ಲಿ ಮಡಿಕೇರಿ ಎಪಿಎಂಸಿ ಆವರಣ, ಕುಶಾಲನಗರ ಎಪಿಎಂಸಿ ಆವರಣ, ಗೋಣಿಕೊಪ್ಪ ಎಪಿಎಂಸಿ ಆವರಣ ಹಾಗೂ ಸೋಮವಾರಪೇಟೆ ಎಪಿಎಂಸಿ ಮಾರ್ಕೇಟ್ ಆವರಣ ಹಾಗೂ ವಿರಾಜಪೇಟೆ ಎಪಿಎಂಸಿ ಆವರಣದಲ್ಲಿ ಖರೀದಿ ಮಾಡಲಾಗುತ್ತಿದೆ.

2025 ರ ಜನವರಿ, 22 ರಂತೆ ಒಟ್ಟು ಮಡಿಕೇರಿಯಲ್ಲಿ 05 ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ 04 ಒಟ್ಟು 09 ರೈತರು ಒಟ್ಟು 269.50 ಕ್ವಿಂಟಾಲ್ ಭತ್ತ ನೀಡಲು ನೋಂದಣಿ ಮಾಡಿಕೊಂಡಿದ್ದಾರೆ. ಭತ್ತವನ್ನು ಮಾರಾಟ ಮಾಡಬೇಕಾದ ರೈತರು ಈಗಾಗಲೇ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರಬೇಕು. ಒಂದು ವೇಳೆ ರೈತರು ನೋಂದಣಿ ಮಾಡದಿದ್ದಲ್ಲಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ತಾವು ಬೆಳೆದ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ.

ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿ ಮಾಡಿದ ಭತ್ತದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ನೋಂದಣಿ ಕೇಂದ್ರದಲ್ಲಿ ರೈತರು ಪ್ರೂಟ್ಸ್ ಐಡಿ, ಆಧಾರ್ ಸಂಖ್ಯೆಗೆ ಜೋಡಣೆಯಾದ ತಮ್ಮ ಎನ್‍ಪಿಸಿಐ ಬ್ಯಾಂಕ್ ಖಾತೆಯ ವಿವರ ನೀಡಬೇಕಿದೆ.

ಸರಕಾರವು ಪೌಷ್ಟಿಕಾಂಶತೆಯಿಂದ ಕೂಡಿದ ಸಾರವರ್ಧಿತ ಅಕ್ಕಿಯನ್ನು ಫಲಾನುಭವಿಗಳಿಗೆ ನೀಡಲು ಉದ್ದೇಶಿಸಿದ್ದು, ಈ ಸಂಬಂಧ ಅಕ್ಕಿಗಿರಣಿಗಳಲ್ಲಿ ಹಲ್ಲಿಂಗ್ ಮಾಡುವಾಗ ಸಾರವರ್ದಿತ ಅಕ್ಕಿಯನ್ನು ತಯಾರು ಮಾಡಲು ಕಡ್ಡಾಯವಾಗಿ ಅಕ್ಕಿ ಗಿರಣಿ ಮಾಲೀಕರುಗಳು ಬ್ಲೆಂಡಿಂಗ್ ಮಿಷನ್‍ನ್ನು ಅಳವಡಿಸಲು ಹಾಗೂ ಅಳವಡಿಸದ ಅಕ್ಕಿಗಿರಣಿಗಳಿಗೆ ಸರಕಾರದ ಆದೇಶದಂತೆ ಹಲ್ಲಿಂಗ್‍ಗೆ ಭತ್ತವನ್ನು ನೀಡಲು ಸಾಧ್ಯವಿರುವುದಿಲ್ಲ. ಹೆಚ್ಚಿನ ಮಾಹಿತಿಗೆ ದೂ.ಸಂ. ಸೋಮಯ್ಯ, ಖರೀದಿ ವ್ಯವಸ್ಥಾಪಕರು, ಕೊಡಗು ಜಿಲ್ಲೆ 8073448843 ನ್ನು ಸಂಪರ್ಕಿಸಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಶ್ರೀಧರಮೂರ್ತಿ ಜೆ.ಬಿ. ಅವರು ತಿಳಿಸಿದ್ದಾರೆ.

Good news for farmers: Paddy procurement process begins under support price scheme ರೈತರಿಗೆ ಗುಡ್ ನ್ಯೂಸ್ : ಬೆಂಬಲ ಬೆಲೆ ಯೋಜನೆಯಡಿ `ಭತ್ತ' ಖರೀದಿ ಪ್ರಕ್ರಿಯೆ ಆರಂಭ.!
Share. Facebook Twitter LinkedIn WhatsApp Email

Related Posts

BREAKING : ದೇಶದ ಅತಿದೊಡ್ಡ ಬ್ಯಾಂಕ್ ಕಳ್ಳತನ ಕೇಸ್ ಬೇಧಿಸಿದ ಪೊಲೀಸರು : 12 ಆರೋಪಿಗಳು ಅರೆಸ್ಟ್.!

11/07/2025 11:57 AM1 Min Read

ALERT : ಬಾಲ್ಯ ವಿವಾಹವಷ್ಟೇ ಅಲ್ಲ, ಈಗ ‘ನಿಶ್ಚಿತಾರ್ಥ’ವೂ ಅಪರಾಧ: 2 ವರ್ಷ ಜೈಲು, ಇಲ್ಲವೇ 1 ಲಕ್ಷ ದಂಡ ಫಿಕ್ಸ್.!

11/07/2025 11:56 AM1 Min Read

BREAKING : ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಮಾನನಷ್ಟ ಮೊಕದ್ದಮೆ ಕೇಸ್ ಗೆ ಹೈಕೋರ್ಟ್ ತಡೆಯಾಜ್ಞೆ.!

11/07/2025 11:41 AM1 Min Read
Recent News

BREAKING : ದೇಶದ ಅತಿದೊಡ್ಡ ಬ್ಯಾಂಕ್ ಕಳ್ಳತನ ಕೇಸ್ ಬೇಧಿಸಿದ ಪೊಲೀಸರು : 12 ಆರೋಪಿಗಳು ಅರೆಸ್ಟ್.!

11/07/2025 11:57 AM

ALERT : ಬಾಲ್ಯ ವಿವಾಹವಷ್ಟೇ ಅಲ್ಲ, ಈಗ ‘ನಿಶ್ಚಿತಾರ್ಥ’ವೂ ಅಪರಾಧ: 2 ವರ್ಷ ಜೈಲು, ಇಲ್ಲವೇ 1 ಲಕ್ಷ ದಂಡ ಫಿಕ್ಸ್.!

11/07/2025 11:56 AM

BREAKING : ಪಾಕಿಸ್ತಾನದ 18 ಸೇನಾ ನೆಲೆಗಳ ಮೇಲೆ ಉಗ್ರ ದಾಳಿ : ಬಸ್ ನಲ್ಲಿದ್ದ 9 ಪ್ರಯಾಣಿಕರ ಹತ್ಯೆ | Operation Baam

11/07/2025 11:53 AM

BREAKING : ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಮಾನನಷ್ಟ ಮೊಕದ್ದಮೆ ಕೇಸ್ ಗೆ ಹೈಕೋರ್ಟ್ ತಡೆಯಾಜ್ಞೆ.!

11/07/2025 11:41 AM
State News
KARNATAKA

BREAKING : ದೇಶದ ಅತಿದೊಡ್ಡ ಬ್ಯಾಂಕ್ ಕಳ್ಳತನ ಕೇಸ್ ಬೇಧಿಸಿದ ಪೊಲೀಸರು : 12 ಆರೋಪಿಗಳು ಅರೆಸ್ಟ್.!

By kannadanewsnow5711/07/2025 11:57 AM KARNATAKA 1 Min Read

ಹುಬ್ಬಳ್ಳಿ : ದೇಶದ ಅತಿದೊಡ್ಡ ಬ್ಯಾಂಕ್ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, 12 ಆರೋಪಿಗಳನ್ನು ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದೆ.

ALERT : ಬಾಲ್ಯ ವಿವಾಹವಷ್ಟೇ ಅಲ್ಲ, ಈಗ ‘ನಿಶ್ಚಿತಾರ್ಥ’ವೂ ಅಪರಾಧ: 2 ವರ್ಷ ಜೈಲು, ಇಲ್ಲವೇ 1 ಲಕ್ಷ ದಂಡ ಫಿಕ್ಸ್.!

11/07/2025 11:56 AM

BREAKING : ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಮಾನನಷ್ಟ ಮೊಕದ್ದಮೆ ಕೇಸ್ ಗೆ ಹೈಕೋರ್ಟ್ ತಡೆಯಾಜ್ಞೆ.!

11/07/2025 11:41 AM

BREAKING : ಬೆಂಗಳೂರಲ್ಲಿ `ಅಮೃತಧಾರೆ’ ಸೀರಿಯಲ್‌ ನಟಿಗೆ ಪೆಪ್ಪರ್‌ ಸ್ಪೇ ಹೊಡೆದು ಚಾಕು ಇರಿದ ಪತಿ!

11/07/2025 11:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.