Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಖ್ಯಾತ ಪತ್ರಕರ್ತ ಟಿ.ಜೆ.ಎಸ್.ಜಾರ್ಜ್ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ

03/10/2025 9:06 PM

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸಿದ ಗಣತಿದಾರರಿಗೆ ಗುಡ್ ನ್ಯೂಸ್: ಗೌರವಧನ ಬಿಡುಗಡೆ

03/10/2025 9:02 PM

BREAKING : ‘COD ಆರ್ಡರ್’ಗಳಿಗೆ ‘ಹೆಚ್ಚುವರಿ ಶುಲ್ಕ’ ವಿಧಿಸುವ ಇ-ಕಾಮರ್ಸ್ ಪ್ಲಾಟ್ಫಾರ್ಮ್’ಗಳಿಗೆ ಬಿಗ್ ಶಾಕ್ ; ಸರ್ಕಾರದಿಂದ ತನಿಖೆ ಆರಂಭ

03/10/2025 9:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸಿದ ಗಣತಿದಾರರಿಗೆ ಗುಡ್ ನ್ಯೂಸ್: ಗೌರವಧನ ಬಿಡುಗಡೆ
KARNATAKA

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸಿದ ಗಣತಿದಾರರಿಗೆ ಗುಡ್ ನ್ಯೂಸ್: ಗೌರವಧನ ಬಿಡುಗಡೆ

By kannadanewsnow0903/10/2025 9:02 PM

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸಿದ ಗಣತಿದಾರರಿಗೆ ಬಾಕಿ ಇರುವ ₹2000 ಹಾಗೂ ಪ್ರತಿ ಮನೆಗೆ ₹100 ಗಳಂತೆ ಅವರ ಖಾತೆಗಳಿಗೆ ಬಿಡುಗಡೆ ಮಾಡಲು ಸರ್ಕಾರ ಆದೇಶಿಸಲಾಗಿದೆ.

ಈ ಕುರಿತಂತೆ ರಾಜ್ಯ ಸರ್ಕಾರವು ಆದೇಶಿಸಿದ್ದು, ಅದರಲ್ಲಿ ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು Empirical Data ಪಡೆದು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಬಗ್ಗೆ ಸೂಕ್ತ ಶಿಫಾರಸ್ಸುಗಳೊಂದಿಗೆ ವರದಿ ಸಲ್ಲಿಸಲು ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಲಾಗಿರುತ್ತದೆ. ಈ ಸಂಬಂಧ ಸದರಿ ಆಯೋಗವು ದಿನಾಂಕ:27-03-2025 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮಧ್ಯಂತರ ವರದಿಯನ್ನು ಸಲ್ಲಿಸಿರುತ್ತದೆ. ಸದರಿ ಮಧ್ಯಂತರ ವರದಿಯಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಕುಟುಂಬಗಳ ಮನೆ-ಮನೆ ಸಮೀಕ್ಷೆ ನಡೆಸಲು ಶಿಫಾರಸ್ಸು ಮಾಡಲಾಗಿರುತ್ತದೆ.

ಗೌರವಾನ್ವಿತ ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತು ದತ್ತಾಂಶ ಸಂಗ್ರಹಿಸಲು ಸರ್ಕಾರದಿಂದ ನಡೆಸಲು ಉದ್ದೇಶಿಸಿರುವ ಸಮೀಕ್ಷಾ ಕಾರ್ಯವನ್ನು ಸರ್ಕಾರದ ಅಗತ್ಯ ಕಾರ್ಯವೆಂದು ಪರಿಗಣಿಸಿ, ಕರಾರುವಕ್ಕಾದ ಪ್ರಮಾಣೀಕೃತ ಮಾಹಿತಿಯನ್ನು ಪಡೆಯುವ ಸಲುವಾಗಿ ಸಮೀಕ್ಷಾ ಕಾರ್ಯಕ್ಕೆ ಅಗತ್ಯವಿರುವ ಶಿಕ್ಷಕರನ್ನು ಗಣತಿದಾರರನ್ನಾಗಿ (Enumerators) ಗುರುತಿಸಿ ನೇಮಕ ಮಾಡಲು ಉಲ್ಲೇಖ (2) ರಲ್ಲಿ ಆದೇಶಿಸಲಾಗಿರುತ್ತದೆ.

ಸದರಿ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಸಮೀಕ್ಷೆಗೆ ಅವಶ್ಯವಿರುವ ಅನುದಾನವನ್ನು ಆರ್ಥಿಕ ಇಲಾಖೆ ಟಿಪ್ಪಣಿ ಸಂಖ್ಯೆ: ಆಇ 352 ವೆಚ್ಚ-3/ 2025 ದಿನಾಂಕ:24-04-2025 ರಂತೆ ವಿವಿಧ ಅಭಿವೃದ್ಧಿ ಯೋಜನೆಯ ಲೆಕ್ಕ ಶೀರ್ಷಿಕೆ:2225-01-796-0-02 ರಡಿ 2025-26 ನೇ ಸಾಲಿನಲ್ಲಿ ಒದಗಿಸಲಾಗಿರುವ ಒಟ್ಟು ರೂ.7075.00 ಲಕ್ಷಗಳ ಅನುದಾನದಿಂದ ಸಮೀಕ್ಷೆಗೆ ಅವಶ್ಯಕವಿರುವ ಅನುದಾನ ರೂ.9149.53 ಲಕ್ಷಗಳನ್ನು ಬಳಸಿಕೊಳ್ಳುವಂತೆ ಹಾಗೂ ಈ ಲೆಕ್ಕ ಶೀರ್ಷಿಕೆಯಡಿ ಅನುದಾನದ ಕೊರತೆ ಉಂಟಾದಲ್ಲಿ ಪೂರಕ ಅಂದಾಜಿನಲ್ಲಿ ಒದಗಿಸಲು ಕ್ರಮವಹಿಸಲಾಗುವುದೆಂದು ಉಲ್ಲೇಖ (3) ರ ಪತ್ರದಲ್ಲಿ ತಿಳಿಸಲಾಗಿರುತ್ತದೆ.

ಮುಂದುವರೆದು, ಉಲ್ಲೇಖ (4) ರಲ್ಲಿ ಕಾರ್ಯದರ್ಶಿಗಳು, ಏಕ ಸದಸ್ಯ ವಿಚಾರಣಾ ಆಯೋಗ, ಬೆಂಗಳೂರು ರವರು ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ದಿನಾಂಕ:27-03-2025 ರಂದು ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ. ಈ ವರದಿಯಲ್ಲಿನ ಶಿಫಾರಸ್ಸಿನಂತೆ ದಿನಾಂಕ:05-05-2025 ರಿಂದ ದಿನಾಂಕ:06-07-2025 ರವರೆಗೆ ಅಗತ್ಯ ದತ್ತಾಂಶಗಳ ಸಂಗ್ರಹಣೆಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ನ್ನು ರಾಜ್ಯಾದ್ಯಂತ ಕೈಗೊಳ್ಳಲಾಗಿದ್ದು, ಸದರಿ ಸಮೀಕ್ಷಾ ಕಾರ್ಯನಿರ್ವಹಿಸಿದ ಸಮೀಕ್ಷಾದಾರರಿಗೆ Flat ನೆರವಾಗಿ ರೂ.5,000/- ಗಳ ಸಂಭಾವನೆಯನ್ನು ಹಾಗೂ ಪ್ರತಿ ಪರಿಶಿಷ್ಟ ಜಾತಿಯ ಕುಟುಂಬದ ಸಮೀಕ್ಷೆಗೆ ds.100/- ರಂತೆ ಮೊತ್ತವನ್ನು ನಿಗಧಿಪಡಿಸಲಾಗಿರುತ್ತದೆ. “ ಅದರಂತೆ, ಅವಶ್ಯಕವಿರುವ ರೂ.62,03,92,500/- ಗಳನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ/ಬಿ.ಬಿ.ಎಂ.ಪಿ ಮುಖ್ಯ ಆಯುಕ್ತರಿಗೆ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಆದುದರಿಂದ, ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್‌ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಮಧ್ಯಂತರ ವರದಿಯಲ್ಲಿನ ಶಿಫಾರಸ್ಸಿನಂತೆ ದಿನಾಂಕ:05-05-2025 ರಿಂದ ದಿನಾಂಕ:06- 07-2025 ರವರೆಗೆ ಅಗತ್ಯ ದತ್ತಾಂಶಗಳ ಸಂಗ್ರಹಣೆಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ರಲ್ಲಿ ಗಣತಿದಾರರಾಗಿ ರಾಜ್ಯಾದಂತ ಸಮೀಕ್ಷಾ ಕಾರ್ಯನಿರ್ವಹಿಸಿದೆ’ ಪ್ರತಿ ಸಮೀಕ್ಷಾದಾರರಿಗೆ ಅನುದಾನದ ಕೊರತೆಯಿಂದಾಗಿ ಪ್ರಥಮ ಹಂತದಲ್ಲಿ 1 ನೇ ಕಂತಿನಲ್ಲಿ ತಲಾ ರೂ.3000/- ಗಳ ಸಂಭಾವನೆಯಂತೆ ಒಟ್ಟು ರೂ.17,28,00,000/- ಗಳನ್ನು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಿ.ಓ ಕೋಡ್‌ಗಳಿಗೆ ಉಲ್ಲೇಖ (5) ರಲ್ಲಿ ಬಿಡುಗಡೆ ಮಾಡಲಾಗಿರುತ್ತದೆ.
ಉಲ್ಲೇಖ (6) ರ ಸರ್ಕಾರದ ಆದೇಶದಲ್ಲಿ 3 ನೇ ಕಂತಿನ ಅನುದಾನ ಬಿಡುಗಡೆ ಮಾಡಲಾಗಿದ್ದು, ಬಾಕಿ Flat ದರದಂತೆ ಬಾಕಿ ಇರುವ ರೂ.2000/- ಗಳ ಮೊತ್ತ ಒಟ್ಟು ರೂ.11,52,00,000/- ಗಳ ಸಂಭಾವನೆಯನ್ನು ಹಾಗೂ ಸಮೀಕ್ಷೆಗೊಳಪಡಿಸಿದ ಪ್ರತೀ ಪರೀಷ್ಠ ಜಾತಿ ಮನೆಗೆ ತಲಾ ರೂ.100/- ರಂತ ಒಟ್ಟು ರೂ.25,08,16,700/- ಗಳು ಸೇರಿ ಒಟ್ಟಾರೆ ರೂ.36,60,16,700/- (ಮೂವತ್ತಾರು ಕೋಟಿ ಅರವತ್ತು ಲಕ್ಷ ಹದಿನಾರು ಸಾವಿರ ಏಳುನೂರು ರೂಪಾಯಿ ಮಾತ್ರ) ಗಳನ್ನು ಅನುಬಂಧ-1 ರಲ್ಲಿ ಲಗತ್ತಿಸಿರುವ ಜಿಲ್ಲಾಧಿಕಾರಿಗಳ ಸಿಓ ಕೋಡ್‌ಗಳಿಗೆ ಬಿಡುಗಡೆ ಮಾಡಲು ಹಾಗೂ ಈ ಅನುದಾನವನ್ನು 2025-26 ನೇ ಸಾಲಿನ ಪರಿಶಿಷ್ಟ ಜಾತಿಯವರ ವಿವಿಧ ಅಭಿವೃದ್ಧಿ ಯೋಜನೆ, ರಾಜಪ್ಪ ಶಕೆ ಶೀರ್ಷಿಕೆ:2225-01-796-0-02 (059) ರಡಿ ಜತ್‌ ನಾಗಮೋಹನ್ ದಾಸ್ ಆಯೋಗದ ನಿರ್ವಹಣೆ ವೆಚ್ಚ ಮತ್ತು ಒಳ ಮೀಸಲಾತಿ ಸಮೀಕ್ಷಾ ವೆಚ್ಚಕ್ಕೆ ಬಿಡುಗಡೆ ಮಾಡಲಾಗಿರುವ ರೂ.54.00 ಕೋಟಿ ಅನುದಾನದಲ್ಲಿ ಭರಿಸಲು ನಿರ್ಧರಿಸಿರುವುದರಿಂದ ಈ ಕೆಳಕಂಡಂತೆ ಆದೇಶಿಸಲಾಗಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಮಧ್ಯಂತರ ವರದಿಯಲ್ಲಿನ ಶಿಫಾರಸ್ಸಿನಂತೆ ದಿನಾಂಕ:05-05-2025 ರಿಂದ ದಿನಾಂಕ:06-07-2025 ರವರೆಗೆ ಅಗತ್ಯ ದತ್ತಾಂಶಗಳ ಸಂಗ್ರಹಣೆಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ- 2025 ರಲ್ಲಿ ಗಣತಿದಾರರಾಗಿ ರಾಜ್ಯಾದ್ಯಂತ ಸಮೀಕ್ಷಾ ಕಾರ್ಯನಿರ್ವಹಿಸಿದ ಪ್ರತಿ ಸಮೀಕ್ಷಾದಾರರಿಗೆ Flat ದರದಲ್ಲಿ ಬಾಕಿ ಇರುವ ಮೊತ್ತ ತಲಾ ರೂ.2000/- ಗಳಂತೆ ಒಟ್ಟು ರೂ.11,52,00,000/- ಗಳ ಸಂಭಾವನೆಯನ್ನು ಹಾಗೂ ಸಮೀಕ್ಷೆಗೊಳಪಡಿಸಿದ ಪ್ರತಿ ಪರಿಶಿಷ್ಟ ಜಾತಿ ಮನೆಗೆ ರೂ.100/- ರಂತೆ ಒಟ್ಟು ರೂ.25,08,16,700/- ಗಳು ಸೇರಿ ಒಟ್ಟಾರೇ ರೂ.36,60,16,700/- (ಮೂವತ್ತಾರು ಕೋಟಿ ಅರವತ್ತು ಲಕ್ಷ ಹದಿನಾರು ಸಾವಿರ ಏಳುನೂರು ರೂಪಾಯಿ ಮಾತ್ರ) ಗಳನ್ನು ಅನುಬಂಧ-1 ರಲ್ಲಿ ಲಗತ್ತಿಸಿರುವ ಜಿಲ್ಲಾಧಿಕಾರಿಗಳ ಸಿ.ಓ ಕೋಡ್‌ಗಳಿಗೆ ಬಿಡುಗಡೆ ಮಾಡಿ ಆದೇಶಿಸಿದೆ.

ಈ ಅನುದಾನವನ್ನು 2025-26 ನೇ ಸಾಲಿನ ಪರಿಶಿಷ್ಟ ಜಾತಿಯವರ ವಿವಿಧ ಅಭಿವೃದ್ಧಿ ಯೋಜನ ರಾಜಸ್ವ ಲೆಕ್ಕ ಶೀರ್ಷಿಕೆ:2225-01-796-0-02 (059) ರಡಿ ಜಸ್ಟಿಸ್ ನಾಗಮೋಹನ್‌ ದಾಸ್ ಆಯೋಗದ ನಿರ್ವಹಣಾ ವೆಚ್ಚ ಮತ್ತು ಒಳ ಮೀಸಲಾತಿ ಸಮೀಕ್ಷಣ ವೆಚ್ಚಕ್ಕೆ ಬಿಡುಗಡೆ ಮಾಡಲಾಗಿರುವ ರೂ.54.00 ಕೋಟಿ ಅನುದಾನದಲ್ಲಿ ಭರಿಸುವುದು ಎಂದಿದೆ.

ತನ್ನ 3ನೇ ಪತ್ನಿ ಸನಾ ಜಾವೇದ್ ನಿಂದ ವಿಚ್ಛೇದನ ಪಡೆಯಲು ಮುಂದಾದ ಶೋಯೆಬ್ ಮಲಿಕ್: ವರದಿ | Shoaib Malik

ALERT : ಧೂಮಪಾನಿಗಳೇ ಎಚ್ಚರ : `ಸಿಗರೇಟ್’ನಿಂದ ಈ ಗಂಭೀರ ಕಾಯಿಲೆಗಳು ಬರಬಹುದು.!

Share. Facebook Twitter LinkedIn WhatsApp Email

Related Posts

ಖ್ಯಾತ ಪತ್ರಕರ್ತ ಟಿ.ಜೆ.ಎಸ್.ಜಾರ್ಜ್ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ

03/10/2025 9:06 PM1 Min Read

ನಾಳೆಯಿಂದ ಬೆಂಗಳೂರಲ್ಲಿ ಜಾತಿಗಣಿತ ಸಮೀಕ್ಷೆ ಆರಂಭ

03/10/2025 8:49 PM1 Min Read

ವಾರದಲ್ಲಿ ಮೂರು ದಿನ ಕಾವೇರಿ ಆರತಿ: ಡಿಸಿಎಂ ಡಿ.ಕೆ. ಶಿವಕುಮಾರ್

03/10/2025 8:45 PM2 Mins Read
Recent News

ಖ್ಯಾತ ಪತ್ರಕರ್ತ ಟಿ.ಜೆ.ಎಸ್.ಜಾರ್ಜ್ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ

03/10/2025 9:06 PM

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸಿದ ಗಣತಿದಾರರಿಗೆ ಗುಡ್ ನ್ಯೂಸ್: ಗೌರವಧನ ಬಿಡುಗಡೆ

03/10/2025 9:02 PM

BREAKING : ‘COD ಆರ್ಡರ್’ಗಳಿಗೆ ‘ಹೆಚ್ಚುವರಿ ಶುಲ್ಕ’ ವಿಧಿಸುವ ಇ-ಕಾಮರ್ಸ್ ಪ್ಲಾಟ್ಫಾರ್ಮ್’ಗಳಿಗೆ ಬಿಗ್ ಶಾಕ್ ; ಸರ್ಕಾರದಿಂದ ತನಿಖೆ ಆರಂಭ

03/10/2025 9:01 PM

ತನ್ನ 3ನೇ ಪತ್ನಿ ಸನಾ ಜಾವೇದ್ ನಿಂದ ವಿಚ್ಛೇದನ ಪಡೆಯಲು ಮುಂದಾದ ಶೋಯೆಬ್ ಮಲಿಕ್: ವರದಿ | Shoaib Malik

03/10/2025 8:55 PM
State News
KARNATAKA

ಖ್ಯಾತ ಪತ್ರಕರ್ತ ಟಿ.ಜೆ.ಎಸ್.ಜಾರ್ಜ್ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ

By kannadanewsnow0903/10/2025 9:06 PM KARNATAKA 1 Min Read

ಬೆಂಗಳೂರು: ಇಂದು ಖ್ಯಾತ ಪತ್ರಕರ್ತ ಟಿ.ಜೆ.ಎಸ್ ಜಾರ್ಜ್ ಅವರು ವಿಧವಶರಾಗಿದ್ದರು. ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಸಂತಾಪ…

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸಿದ ಗಣತಿದಾರರಿಗೆ ಗುಡ್ ನ್ಯೂಸ್: ಗೌರವಧನ ಬಿಡುಗಡೆ

03/10/2025 9:02 PM

ನಾಳೆಯಿಂದ ಬೆಂಗಳೂರಲ್ಲಿ ಜಾತಿಗಣಿತ ಸಮೀಕ್ಷೆ ಆರಂಭ

03/10/2025 8:49 PM

ವಾರದಲ್ಲಿ ಮೂರು ದಿನ ಕಾವೇರಿ ಆರತಿ: ಡಿಸಿಎಂ ಡಿ.ಕೆ. ಶಿವಕುಮಾರ್

03/10/2025 8:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.