Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING:ಒಂಬತ್ತು ತಿಂಗಳ ಹಿಂದೆ ನಿಧನರಾಗಿದ್ದ ಪಾಕಿಸ್ತಾನದ ನಟಿ ಹುಮೈರಾ ಅಸ್ಗರ್ ಶವ ಪತ್ತೆ

12/07/2025 9:23 AM

SHOCKING : ಬೆಂಗಳೂರಿನಲ್ಲಿ ಮಹಿಳೆಯರು ಸ್ನಾನ ಮಾಡುವ ವಿಡಿಯೋ ಸೆರೆ ಹಿಡಿಯುತ್ತಿದ್ದ ವಿಕೃತ ಕಾಮುಕ ಅರೆಸ್ಟ್.!

12/07/2025 9:22 AM

ಸಾರ್ವಜನಿಕರೇ ಗಮನಿಸಿ : ಮೊಬೈಲ್ ನಲ್ಲಿ ಈ ‘KSP ಆಪ್’ ಇದ್ದರೇ, ನಿಮ್ಮ ಜೊತೆಗೆ ಪೊಲೀಸರೇ ಇದ್ದಂತೆ.!

12/07/2025 9:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ‘AC’ ಕೋರ್ಟ್ ಗಳಲ್ಲಿ ಕೇಸ್ ಬಾಕಿ ಇರೋರಿಗೆ ಗುಡ್ ನ್ಯೂಸ್: ಪ್ರಕರಣಗಳ ಇತ್ಯರ್ಥಕ್ಕೆ 6 ತಿಂಗಳ ಗಡುವು ವಿಸ್ತರಣೆ!
KARNATAKA

ರಾಜ್ಯದ ‘AC’ ಕೋರ್ಟ್ ಗಳಲ್ಲಿ ಕೇಸ್ ಬಾಕಿ ಇರೋರಿಗೆ ಗುಡ್ ನ್ಯೂಸ್: ಪ್ರಕರಣಗಳ ಇತ್ಯರ್ಥಕ್ಕೆ 6 ತಿಂಗಳ ಗಡುವು ವಿಸ್ತರಣೆ!

By kannadanewsnow5710/10/2024 7:26 AM

ಬೆಂಗಳೂರು: ಕಳೆದ ಒಂದು ವರ್ಷದಿಂದ ಎಸಿ (ಉಪ ವಿಭಾಗಾಧಿಕಾರಿ) ನ್ಯಾಯಾಲಯಗಳಲ್ಲಿ ತಕರಾರು ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುತ್ತಿದ್ದು, ಬಾಕಿ ಪ್ರಕರಣಗಳನ್ನೂ ಮುಂದಿನ ಆರು ತಿಂಗಳಲ್ಲಿ ವಿಲೇಗೊಳಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸಮಯದ ಗಡುವು ನೀಡಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಬುಧವಾರ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಜೊತೆ ಎಸಿ ಕೋರ್ಟ್ ಗಳಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

“ಕಳೆದ ವರ್ಷ ನಾನು ಕಂದಾಯ ಇಲಾಖೆ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ಸಂದರ್ಭದಲ್ಲಿ ಎಸಿ ನ್ಯಾಯಾಲಯಗಳಲ್ಲಿ 73,682 ತಕರಾರು ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ 33,207 ಪ್ರಕರಣಗಳನ್ನು ಕೇವಲ ಒಂದು ವರ್ಷದ ಅವಧಿಯಲ್ಲಿ ಇತ್ಯರ್ಥಗೊಳಿಸಿರುವುದು ಉತ್ತಮ ಬೆಳವಣಿಗೆ. ಈ ಮೂಲಕ ರೈತರು -ಸಾರ್ವಜನಿಕರು ಅನಗತ್ಯವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದಕ್ಕೆ ಬ್ರೇಕ್ ಹಾಕಿರುವುದು, ಹಲವು ರೈತರಿಗೆ ನ್ಯಾಯ ಒದಗಿಸಿ ನೆಮ್ಮದಿ ನೀಡಿರುವುದು ಸಾರ್ಥಕದ ಕೆಲಸ” ಎಂದು ಮೆಚ್ಚುಗೆ ಸೂಚಿಸಿದರು.

“ಎಸಿ ಕೋರ್ಟ್ನಲ್ಲಿರುವ ತಕರಾರು ಪ್ರಕರಣಗಳನ್ನು ಆರು ತಿಂಗಳ ಒಳಗೆ ವಿಲೇವಾರಿಗೊಳಿಸಬೇಕು ಎಂಬುದು ಕಾನೂನು. ಆದರೆ, ನಾನು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಪ್ರಗತಿ ಪರಿಶೀಲನೆ ನಡೆಸಿದಾಗ, ಐದು ವರ್ಷದ ಹಳೆಯ ಪ್ರಕರಣಗಳೂ ಇತ್ಯರ್ಥಗೊಳ್ಳದೆ ಬಾಕಿ ಉಳಿದಿರುವುದು ಗಮನಕ್ಕೆ ಬಂದಿತ್ತು. ರೈತರು ಇದರ ನೇರ ಪರಿಣಾಮ ಅನುಭವಿಸಬೇಕಿತ್ತು. ಇದೇ ಕಾರಣಕ್ಕೆ ಕಳೆದ ಒಂದು ವರ್ಷದಿಂದ ಅಭಿಯಾನದ ಮಾದರಿಯಲ್ಲಿ ಎಸಿ ನ್ಯಾಯಾಲಯಗಳಲ್ಲಿನ ಪ್ರಕರಣಗಳ ಇತ್ಯರ್ಥಕ್ಕೆ ವೇಗ ನೀಡಲಾಯಿತು.

ಸಾಗಿಬಂದ ಹಾದಿ ಸಣ್ಣದಿದ್ದು, ಕ್ರಮಿಸಬೇಕಾದ ದೂರ ಇನ್ನೂ ಸಾಕಷ್ಟಿದೆ. ಕನಿಷ್ಟ 40 ಸಾವಿರ ತಕರಾರು ಪ್ರಕರಣಗಳು ಇನ್ನೂ ಬಾಕಿ ಇವೆ. ಮುಂದಿನ ಆರು ತಿಂಗಳಲ್ಲಿ ಈ ಪ್ರಕರಣಗಳನ್ನೂ ಇತ್ಯರ್ಥಗೊಳಿಸಬೇಕು. ಹಲವು ಅಧಿಕಾರಿಗಳು ಇಲಾಖೆಯಲ್ಲಿ ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವರು ಇನ್ನೂ ಟ್ರ್ಯಾಕ್ಗೆ ಬಂದಿಲ್ಲ. ಎಲ್ಲಾ ಅಧಿಕಾರಿಗಳು ಒಟ್ಟಾಗಿ ಕೈಜೋಡಿಸಿದರೆ ಬಾಕಿ ಪ್ರಕರಣಗಳಿಗೂ ಮುಕ್ತಿ ನೀಡುವುದು, ರೈತರಿಗೆ ನ್ಯಾಯ ಒದಗಿಸುವುದು ಕಷ್ಟದ ಮಾತಲ್ಲ” ಎಂದು ಅವರು ತಿಳಿಸಿದರು.

“ಕಳೆದ ಒಂದು ವರ್ಷದಲ್ಲಿ ಒಂಬತ್ತು ಬಾರಿ ಉಪ ವಿಭಾಗಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಗಿದೆ. ಮುಂದಿನ ತಿಂಗಳ ಮೊದಲ ವಾರವೂ ಮತ್ತೊಂದು ಸಭೆ ನಡೆಸಲಾಗುವುದು. ಆ ವೇಳೆಗೆ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಎಷ್ಟು ಪ್ರಕರಣಗಳನ್ನು ವಿಲೇಗೊಳಿಸಿದ್ದೀರಿ? ಎಂದು ಪ್ರಗತಿ ಪರಿಶೀಲನೆ ನಡೆಸಲಾಗುವುದು. ಹೀಗಾಗಿ ತಮ್ಮ ಕೆಲಸಗಳಿಗೆ ಮತ್ತಷ್ಟು ವೇಗ ನೀಡಿ” ಎಂದು ತಾಕೀತು ಮಾಡಿದರು.

ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ

ತಕರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಿ ರೈತರಿಗೆ ಶೀಘ್ರ ನ್ಯಾಯ ಒದಗಿಸುವ ಸಲುವಾಗಿ, ರೆಗ್ಯುಲರ್ ಕೋರ್ಟ್ ಗಳ ಜೊತೆ ತುಮಕೂರು ಮಂಡ್ಯ ಮೈಸೂರು ರಾಮನಗರ ಬೆಂಗಳೂರು ಗ್ರಾಮಾಂತರ, ಕುಂದಾಪುರ ಸೇರಿ 11 ಜಿಲ್ಲೆಗಳಲ್ಲಿ 20ಕ್ಕೂ ಅಧಿಕ ವಿಶೇಷ ನ್ಯಾಯಾಲಯಗಳಿಗೆ ಚಾಲನೆ ನೀಡಲಾಗಿದೆ. ಈ ಮೂಲಕ ಪ್ರಕರಣಗಳ ವಿಲೇವಾರಿಗೆ ವೇಗ ತುಂಬಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

Good news for cases pending in the 'AC' courts of the state: extension of 6 months for the settlement of cases! ರಾಜ್ಯದ ‘AC' ಕೋರ್ಟ್ ಗಳಲ್ಲಿ ಕೇಸ್ ಬಾಕಿ ಇರೋರಿಗೆ ಗುಡ್ ನ್ಯೂಸ್: ಪ್ರಕರಣಗಳ ಇತ್ಯರ್ಥಕ್ಕೆ 6 ತಿಂಗಳ ಗಡುವು ವಿಸ್ತರಣೆ!
Share. Facebook Twitter LinkedIn WhatsApp Email

Related Posts

SHOCKING : ಬೆಂಗಳೂರಿನಲ್ಲಿ ಮಹಿಳೆಯರು ಸ್ನಾನ ಮಾಡುವ ವಿಡಿಯೋ ಸೆರೆ ಹಿಡಿಯುತ್ತಿದ್ದ ವಿಕೃತ ಕಾಮುಕ ಅರೆಸ್ಟ್.!

12/07/2025 9:22 AM1 Min Read

ಸಾರ್ವಜನಿಕರೇ ಗಮನಿಸಿ : ಮೊಬೈಲ್ ನಲ್ಲಿ ಈ ‘KSP ಆಪ್’ ಇದ್ದರೇ, ನಿಮ್ಮ ಜೊತೆಗೆ ಪೊಲೀಸರೇ ಇದ್ದಂತೆ.!

12/07/2025 9:17 AM2 Mins Read

BREAKING : ರಾಜ್ಯದ 5 ಪಟ್ಟಣ ಪಂಚಾಯಿತಿ ,3 ವಾರ್ಡುಗಳ ಉಪಚುನಾವಣೆ ಘೋಷಣೆ : ಆ.17 ಕ್ಕೆ ಮತದಾನ, 20ಕ್ಕೆ ಫಲಿತಾಂಶ | By-Election

12/07/2025 8:15 AM2 Mins Read
Recent News

BREAKING:ಒಂಬತ್ತು ತಿಂಗಳ ಹಿಂದೆ ನಿಧನರಾಗಿದ್ದ ಪಾಕಿಸ್ತಾನದ ನಟಿ ಹುಮೈರಾ ಅಸ್ಗರ್ ಶವ ಪತ್ತೆ

12/07/2025 9:23 AM

SHOCKING : ಬೆಂಗಳೂರಿನಲ್ಲಿ ಮಹಿಳೆಯರು ಸ್ನಾನ ಮಾಡುವ ವಿಡಿಯೋ ಸೆರೆ ಹಿಡಿಯುತ್ತಿದ್ದ ವಿಕೃತ ಕಾಮುಕ ಅರೆಸ್ಟ್.!

12/07/2025 9:22 AM

ಸಾರ್ವಜನಿಕರೇ ಗಮನಿಸಿ : ಮೊಬೈಲ್ ನಲ್ಲಿ ಈ ‘KSP ಆಪ್’ ಇದ್ದರೇ, ನಿಮ್ಮ ಜೊತೆಗೆ ಪೊಲೀಸರೇ ಇದ್ದಂತೆ.!

12/07/2025 9:17 AM

BREAKING: ದೆಹಲಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ, ಹಲವರು ಸಿಲುಕಿರುವ ಶಂಕೆ | Building collapse

12/07/2025 8:56 AM
State News
KARNATAKA

SHOCKING : ಬೆಂಗಳೂರಿನಲ್ಲಿ ಮಹಿಳೆಯರು ಸ್ನಾನ ಮಾಡುವ ವಿಡಿಯೋ ಸೆರೆ ಹಿಡಿಯುತ್ತಿದ್ದ ವಿಕೃತ ಕಾಮುಕ ಅರೆಸ್ಟ್.!

By kannadanewsnow5712/07/2025 9:22 AM KARNATAKA 1 Min Read

ಬೆಂಗಳೂರು: ಬೆಂಗಳೂರಿನಲ್ಲಿ ಮಹಿಳೆಯರು ಸ್ನಾನ ಮಾಡುವುದನ್ನು ವಿಡಿಯೋ ಮಾಡುತ್ತಿದ್ದ ಮತ್ತೊಬ್ಬ ವಿಕೃತ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿ ಪೊಲೀಸರು ಹಾಜ…

ಸಾರ್ವಜನಿಕರೇ ಗಮನಿಸಿ : ಮೊಬೈಲ್ ನಲ್ಲಿ ಈ ‘KSP ಆಪ್’ ಇದ್ದರೇ, ನಿಮ್ಮ ಜೊತೆಗೆ ಪೊಲೀಸರೇ ಇದ್ದಂತೆ.!

12/07/2025 9:17 AM

BREAKING : ರಾಜ್ಯದ 5 ಪಟ್ಟಣ ಪಂಚಾಯಿತಿ ,3 ವಾರ್ಡುಗಳ ಉಪಚುನಾವಣೆ ಘೋಷಣೆ : ಆ.17 ಕ್ಕೆ ಮತದಾನ, 20ಕ್ಕೆ ಫಲಿತಾಂಶ | By-Election

12/07/2025 8:15 AM

SHOCKING : ಗಂಡ-ಹೆಂಡತಿ ನಡುವೆ ಕಿರಿಕ್ : ರಾಯಚೂರಿನಲ್ಲಿ ಪತಿಯನ್ನೇ ನದಿಗೆ ತಳ್ಳಿದ ಪತ್ನಿ.!

12/07/2025 7:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.