Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ದೇಶಾದ್ಯಂತ 9–14 ವಯಸ್ಸಿನ ಬಾಲಕಿಯರಿಗೆ ಉಚಿತ ‘HPV ಲಸಿಕೆ’ ; ‘ಗರ್ಭಕಂಠ ಕ್ಯಾನ್ಸರ್’ ತಡೆಗೆ ಸರ್ಕಾರ ಮಹತ್ವದ ನಿರ್ಧಾರ

24/02/2026 4:03 PM

ಗೊರೂರು ಪಂಕಜ ಅವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಕನ್ನಡ ಪಯಸ್ವಿನಿ ಅಚ್ಯುಮೆಂಟ್ ಅವಾರ್ಡ್- 2026 ಪ್ರಶಸ್ತಿ ಪ್ರದಾನ

24/02/2026 4:03 PM

NCERT 8ನೇ ತರಗತಿ ಪಠ್ಯದಲ್ಲಿ ಮಹತ್ವದ ಬದಲಾವಣೆ

24/02/2026 3:55 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಎಲ್ಲಾ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : ನ.21 ರಿಂದ `ಶಿಕ್ಷಣ ಆದಾಲತ್’ ಆಯೋಜನೆ!
KARNATAKA

ರಾಜ್ಯದ ಎಲ್ಲಾ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : ನ.21 ರಿಂದ `ಶಿಕ್ಷಣ ಆದಾಲತ್’ ಆಯೋಜನೆ!

By kannadanewsnow5717/11/2024 1:14 PM

ಬೆಂಗಳೂರು : ಜಿಲ್ಲಾ ಮತ್ತು ತಾಲೂಕು ವ್ಯಾಪ್ತಿಯ ಕಚೇರಿಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರುಗಳಿಗೆ ಸಂಬಂಧಿಸಿದ ಹಾಗೂ ಇಲಾಖೆಗೆ ಸಂಬಂಧಿಸಿದ ಬಾಕಿ ಕಡತಗಳ ವಿಲೇವಾರಿ ಕುರಿತು, ತಾಲೂಕು ಹಂತದಲ್ಲಿ ಶಿಕ್ಷಣ ಆದಾಲತ್ ಆಯೋಜಿಸಲಾಗಿದೆ.

ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖದನ್ವಯ ಜಿಲ್ಲಾ ಮತ್ತು ತಾಲೂಕು ವ್ಯಾಪ್ತಿಯ ಕಚೇರಿಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರುಗಳಿಗೆ ಸಂಬಂಧಿಸಿದ ಹಾಗೂ ಇಲಾಖೆಗೆ ಸಂಬಂಧಿಸಿದ ಬಾಕಿ ಕಡತಗಳ ವಿಲೇವಾರಿ ಕುರಿತು, ತಾಲೂಕು ಹಂತದಲ್ಲಿ ದಿನಾಂಕ: 01.11.2024 ರಿಂದ 20.11.2024 ರವರೆಗೆ ಹಾಗೂ ಜಿಲ್ಲಾ ಹಂತದಲ್ಲಿ ದಿನಾಂಕ:21.11.2024 ರಿಂದ 30.11.2024 ರ ವರೆಗೆ ಕಡತ ವಿಲೇವಾರಿ ಪ್ರಕ್ರಿಯೆ ಹಮ್ಮಿಕೊಳ್ಳಲು ಯೋಜಿಸಲಾಗಿದೆ.

ಜಿಲ್ಲಾ ಮತ್ತು ತಾಲೂಕು ವ್ಯಾಪ್ತಿಯ ಕಚೇರಿಗಳಲ್ಲಿ ಬಾಕಿ ಕಡತಗಳ ವಿಲೇವಾರಿ ಕುರಿತು ಜಿಲ್ಲಾವಾರು ನೋಡಲ್ ಅಧಿಕಾರಿಗಳನ್ನಾಗಿ ಅವರ ಆಯುಕ್ತರ ಕಚೇರಿ ಇವರ ಕಾರ್ಯಾಲಯದಿಂದ ಮೇಲಾಧಿಕಾರಿಗಳನ್ನು ನೇಮಿಸಿದ್ದು ಮೊದಲನೇ ಹಂತದಲ್ಲಿ ಸದರಿ ನೋಡಲ್ ಅಧಿಕಾರಿಗಳು ತಾಲೂಕು ಹಂತದ ಕಡತ ವಿಲೇವಾರಿ ಕುರಿತು ಹಾಗೂ 2ನೇ ಹಂತದಲ್ಲಿ ಜಿಲ್ಲಾ ಉಪನಿರ್ದೇಶಕರ ಕಾರ್ಯಾಲಯದಲ್ಲಿ ಬಾಕಿ ಕಡತ ವಿಲೇವಾರಿ ಕುರಿತು, ಅಗತ್ಯ ಕ್ರಮ ಕೈಗೊಳ್ಳಲು ಮೇಲ್ವಿಚಾರಣೆ ನಡೆಸಲಿದ್ದಾರೆ.

ಉಪನಿರ್ದೇಶಕರ ಕಚೇರಿ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕರು/ಸಿಬ್ಬಂದಿಯವರಿಗೆ ಸಂಬಂಧಿಸಿದ ಸೇವಾ ಮಾಹಿತಿಗಳನ್ನು ಮತ್ತು ಶಿಕ್ಷಕ/ ಸಿಬ್ಬಂದಿಯವರಿಂದ ಸ್ವೀಕರಿಸಲ್ಪಟ್ಟ ಮನವಿಗಳೊಂದಿಗೆ ವಿವಿಧ ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ನಿಗದಿತ ಸಮಯದೊಳಗೆ ಕಡತ ವಿಲೇವಾರಿ ಮಾಡುವುದು ಆಯಾ ಕಚೇರಿಗಳ ಆದ್ಯ ಕರ್ತವ್ಯವಾಗಿರುತ್ತದೆ. ಕಾರಣ, ಶಿಕ್ಷಣ ಅದಾಲತ್ ಹಂತ-2 ರ ಅನ್ವಯ ನವೆಂಬರ್-2024 ರ ಮಾಹೆಯಲ್ಲಿ ಸರ್ಕಾರಿ ನೌಕರರಿಂದ ಪಡೆದ ಅಹವಾಲುಗಳನ್ನು ಹಾಗೂ ಸೇವಾ ವಿವರಗಳಿಗೆ ಸಂಬಂಧಿಸಿದ ಕಡತಗಳನ್ನು ಈ ಕೆಳಗೆ ತಿಳಿಸಿರುವಂತೆ ಹಂತವಾರು ಕ್ರಮ ಕೈಗೊಳ್ಳಲು ಈ ಮೂಲಕ ತಿಳಿಸಿದೆ.

ನವೆಂಬರ್-2024ರ ಅದಲಾತ್ನಲ್ಲಿ ಉಪನಿರ್ದೇಶಕರ ಕಚೇರಿ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಕರ/ಸಿಬ್ಬಂದಿಗಳ ಕುರಿತಾದ ಕೆಳಕಂಡ 10 ವಿಷಯಗಳ ಕಡತಗಳನ್ನು ವಿಲೇವಾರಿ ಮಾಡುವುದು.

1. ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ಶಿಕ್ಷಕರ ಸೇವಾ ವಿವರಗಳನ್ನು ಸೇವಾ ಪುಸ್ತಕದಂತೆ ದಾಖಲು ಮಾಡುವುದು. ( ಅನುಬಂಧ-1)

2. ಪರಿವೀಕ್ಷಣಾ ಅವಧಿ ಘೋಷಣೆ [ಕರ್ನಾಟಕ ನಾಗರೀಕ ಸೇವಾ (ಪರಿವೀಕ್ಷಣಾ) ನಿಯಮಗಳು 1977ಗಳಂತೆ), ( ಅನುಬಂಧ-2)

3. 10.15.20.25.30 ವರ್ಷಗಳ ಕಾಲಮಿತಿ ವೇತನ ಬಡ್ತಿ, ಸ್ವಯಂ ಚಾಲಿತ ಬಡ್ತಿ, ಮತ್ತು ವಿಶೇಷ ಬಡ್ತಿ, ಸ್ಥಗಿತ ವೇತನ ಬಡ್ತಿಗಳ ದರಗಳನ್ನು ಮೂಲ ವೇತನದಲ್ಲಿ ಸೇರಿಸಿ, ಬಾಕಿ ವೇತನಗಳ ಇತ್ಯರ್ಥಪಡಿಸುವುದು. [ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ಆಇ60ಎಸ್.ಆರ್.ಪಿ 1984 20:23.08.1984 ). (-3)

4. ಗಳಿಕೆ ರಜೆಯ ಲೆಕ್ಕದ ಮಾಹಿತಿಯನ್ನು ಸೇವಾ ಪುಸ್ತಕದಲ್ಲಿ ಇಂದೀಕರಿಸುವ ಕುರಿತು. [ಕರ್ನಾಟಕ ನಾಗರೀಕ ಸೇವಾ ನಿಯಮಗಳು ರಜಾ ನಿಯಮಗಳು ನಿಯಮ 105 ರಿಂದ 206]. ( ಅನುಬಂಧ-4)

5. ಸರ್ಕಾರಿ ನೌಕರರು ನಿವೃತ್ತಿ ಹೊಂದುವ -3- ತಿಂಗಳ ಮುಂಚೆ, ಮಾನ್ಯ ಎ.ಜಿ.ಕಚೇರಿಗೆ ಅವರ ಮೂಲ ಸೇವಾ ಪುಸ್ತಕದೊಂದಿಗೆ ಪಿಂಚಣಿ ಪ್ರಸ್ತಾವನೆ ಕಳುಹಿಸುವ ಕುರಿತು. (ಕರ್ನಾಟಕ ಸರ್ಕಾರಿ ನೌಕರರ ಕುಟುಂಬ ನಿವೃತ್ತಿ ನಿಯಮಗಳು 2002]. ( ಅನುಬಂಧ-5)

6. ಮಹಿಳಾ ಪ್ರಸೂತಿ ರಜೆಗಳು. [ನಿ-135] ( ಅನುಬಂಧ-6)

7. ಅನುಕಂಪ ಆಧಾರದ ನೇಮಕಾತಿಗಳು. [ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಗಳು, 1996….2023] ( ಅನುಬಂಧ-7)

8. ನ್ಯಾಯಾಲಯ ಪ್ರಕರಣಗಳು. ( ಅನುಬಂಧ-8)

9. ಹಿಂದಿನ ಸೇವೆ ಪರಿಗಣಿಸುವ ಪ್ರಕರಣಗಳ ಕುರಿತು. (ಕನಾಸೇನಿ.224) ( ಅನುಬಂಧ-9)

10. ಅಂತಿಮ ವೇತನ ಪ್ರಮಾಣ ಪತ್ರ (LPC) ಹಾಗೂ ಸೇವಾ ಪುಸ್ತಕ ಕಳುಹಿಸುವ ಕುರಿತು. (ಅನುಬಂಧ-10)

ಸದರಿ ಅನುಬಂಧಗಳಂತೆ (1ರಿಂದ10) ಮಾಹಿತಿಯನ್ನು ಈ ಕೂಡಲೇ ಕ್ರೋಢೀಕರಿಸಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಮಾಹಿತಿಯನ್ನು ನಮ್ಮ ಕಚೇರಿಗೆ ದಿ:08.11.2024 ರ ಒಳಗಾಗಿ ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ಮುಂದುವರೆದು, ನಮ್ಮ ಕಚೇರಿಯಿಂದ ಅದಾಲತ್ ಮೇಲ್ವಿಚಾರಣೆಗಾಗಿ ತಮ್ಮ ತಾಲೂಕಿಗೆ ಹಾಗೂ ಜಿಲ್ಲೆಗೆ ಬರುವ ಮೇಲಾಧಿಕಾರಿಗಳು ಅಕ್ಟೋಬರ್-2024ರಲ್ಲಿ ನಡೆದ ಅದಾಲತ್ ಹಂತ-1 ರ ಪುಗತಿ ಪರಿಶೀಲನೆಯನ್ನು ಸಹಾ ಮಾಡಲಿದ್ದಾರೆ. ಆದ್ದರಿಂದ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ನಿಯಮಾನುಸಾರ ಪೂರ್ಣಗೊಳಿಸಿ, ಅದಾಲತ್ ಅನ್ನು ಯಶಸ್ವಿಗೊಳಿಸತಕ್ಕದ್ದು.

Good news for all the school teachers of the state: 'Education Adalat' scheme from November 21! ರಾಜ್ಯದ ಎಲ್ಲಾ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : ನ.21 ರಿಂದ `ಶಿಕ್ಷಣ ಆದಾಲತ್’ ಆಯೋಜನೆ!
Share. Facebook Twitter LinkedIn WhatsApp Email

Related Posts

ಗೊರೂರು ಪಂಕಜ ಅವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಕನ್ನಡ ಪಯಸ್ವಿನಿ ಅಚ್ಯುಮೆಂಟ್ ಅವಾರ್ಡ್- 2026 ಪ್ರಶಸ್ತಿ ಪ್ರದಾನ

24/02/2026 4:03 PM1 Min Read

ಜನಸಂದಣಿ ನಿಯಂತ್ರಣ ಮಸೂದೆ ಜಾರಿಯಾಗುವವರೆಗೆ ‘SOP’ ಪಾಲಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

24/02/2026 3:34 PM1 Min Read

ರಾಜ್ಯದ `ಆಶಾ ಕಾರ್ಯಕರ್ತೆ’ಯರಿಗೆ ಗುಡ್ ನ್ಯೂಸ್ : ಜನಸಂಖ್ಯೆಗೆ ಅನುಗುಣವಾಗಿ ಹುದ್ದೆಗಳ ಮರುಹಂಚಿಕೆಗೆ ಸರ್ಕಾರ ಆದೇಶ !

24/02/2026 3:24 PM1 Min Read
Recent News

BREAKING : ದೇಶಾದ್ಯಂತ 9–14 ವಯಸ್ಸಿನ ಬಾಲಕಿಯರಿಗೆ ಉಚಿತ ‘HPV ಲಸಿಕೆ’ ; ‘ಗರ್ಭಕಂಠ ಕ್ಯಾನ್ಸರ್’ ತಡೆಗೆ ಸರ್ಕಾರ ಮಹತ್ವದ ನಿರ್ಧಾರ

24/02/2026 4:03 PM

ಗೊರೂರು ಪಂಕಜ ಅವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಕನ್ನಡ ಪಯಸ್ವಿನಿ ಅಚ್ಯುಮೆಂಟ್ ಅವಾರ್ಡ್- 2026 ಪ್ರಶಸ್ತಿ ಪ್ರದಾನ

24/02/2026 4:03 PM

NCERT 8ನೇ ತರಗತಿ ಪಠ್ಯದಲ್ಲಿ ಮಹತ್ವದ ಬದಲಾವಣೆ

24/02/2026 3:55 PM

BREAKING: ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ವೇಳಾಪಟ್ಟಿ ಪ್ರಕಟ: ಜೂನ್ 14ಕ್ಕೆ ಭಾರತ-ಪಾಕ್ ಹೈವೋಲ್ಟೇಜ್ ಫೈಟ್!

24/02/2026 3:50 PM
State News
KARNATAKA

ಗೊರೂರು ಪಂಕಜ ಅವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಕನ್ನಡ ಪಯಸ್ವಿನಿ ಅಚ್ಯುಮೆಂಟ್ ಅವಾರ್ಡ್- 2026 ಪ್ರಶಸ್ತಿ ಪ್ರದಾನ

By kannadanewsnow0924/02/2026 4:03 PM KARNATAKA 1 Min Read

ಬೆಂಗಳೂರು: ಕಾಸರಗೋಡು ಕೇವಲ ಗಡಿ ಪ್ರದೇಶವಲ್ಲ; ಅದು ಕನ್ನಡ ಹೃದಯಭೂಮಿ. ಇಲ್ಲಿನ ಪ್ರತಿಯೊಬ್ಬ ಕನ್ನಡಿಗನ ಕನಸು ಸಾಕಾರವಾಗುವ ದಿನ ಬರಬೇಕು…

ಜನಸಂದಣಿ ನಿಯಂತ್ರಣ ಮಸೂದೆ ಜಾರಿಯಾಗುವವರೆಗೆ ‘SOP’ ಪಾಲಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

24/02/2026 3:34 PM

ರಾಜ್ಯದ `ಆಶಾ ಕಾರ್ಯಕರ್ತೆ’ಯರಿಗೆ ಗುಡ್ ನ್ಯೂಸ್ : ಜನಸಂಖ್ಯೆಗೆ ಅನುಗುಣವಾಗಿ ಹುದ್ದೆಗಳ ಮರುಹಂಚಿಕೆಗೆ ಸರ್ಕಾರ ಆದೇಶ !

24/02/2026 3:24 PM

ಫೆ.28 ರಿಂದ ಮಾರ್ಚ್‌17ರವರೆಗೆ ದ್ವಿತೀಯ PUC ವಾರ್ಷಿಕ ಪರೀಕ್ಷೆ

24/02/2026 2:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.