ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐಟಿ ವಿಭಾಗವು National Informatics Centre(NIC) ಸಹಯೋಗದೊಂದಿಗೆ, ನಗರ ಪಾಲಿಕೆಗಳಡಿ ಕಾರ್ಯನಿರ್ವಹಿಸುವ ಜಿಪಿಎಸ್ ತಂಡದ ವಿಶೇಷ ಮನೆ-ಮನೆ ಭೇಟಿ ಮೂಲಕ ಆಸ್ತಿ ತೆರಿಗೆ ಮರುಪರಿಶೀಲನೆ ಕಾರ್ಯವನ್ನು 2ನೇ ಹಂತದಲ್ಲಿ ಯಶಸ್ವಿಯಾಗಿ ನಡೆಸಿದೆ.
ಈ ಹಂತದಲ್ಲಿ ಸುಮಾರು 13,600 ಆಸ್ತಿಗಳ ಮಾಲೀಕರು ಕಳೆದ ಸರಾಸರಿ 5 ವರ್ಷಗಳಿಂದ ಕಡಿಮೆ ತೆರಿಗೆ ಪಾವತಿಸಿರುವುದು ಪತ್ತೆಯಾಗಿದೆ. ಪ್ರತಿ ವರ್ಷಕ್ಕೆ ಪ್ರತ್ಯೇಕವಾಗಿ ನೀಡಲಾದ ನೋಟಿಸ್ಗಳನ್ನು ಒಳಗೊಂಡಂತೆ ಒಟ್ಟು ಸುಮಾರು 67,000 ನೋಟಿಸ್ಗಳನ್ನು ಜಾರಿಗೊಳಿಸಲಾಗಿದೆ.
ಈ ಮರುಪರಿಶೀಲನೆಯಿಂದ ಸುಮಾರು 318 ಕೋಟಿ ರೂ.ಗಳ ತೆರಿಗೆ ತಪ್ಪು ಪಾವತಿ(evasion) ಪತ್ತೆಯಾಗಿದೆ. ಮೊದಲ ಮತ್ತು ಎರಡನೇ ಹಂತಗಳನ್ನು ಸೇರಿಸಿ ಒಟ್ಟು 23,600 ಆಸ್ತಿಗಳಿಂದ 688 ಕೋಟಿ ರೂ.ಗಳ ವಸೂಲಾತಿ ಪ್ರಕ್ರಿಯೆ ಆರಂಭಿಸಲಾಗಿದೆ.
ನೋಟಿಸ್ ಮತ್ತು ಪಾವತಿ ಮಾಹಿತಿ:
* ಸಂಬಂಧಿತ ನಾಗರಿಕರಿಗೆ ಶೋ ಕಾಸ್ ನೋಟಿಸ್ಗಳನ್ನು ಜಾರಿಗೊಳಿಸಲಾಗಿದ್ದು, SMS ಹಾಗೂ IVRS ಮುಖಾಂತರವೂ ಮಾಹಿತಿ ಕಳುಹಿಸಲಾಗಿದೆ.
* ನೋಟಿಸ್ ಪಡೆದ ನಾಗರಿಕರು 15 ದಿನಗಳೊಳಗಾಗಿ ಆನ್ಲೈನ್ ಮೂಲಕ ಅಪೀಲ್ ಸಲ್ಲಿಸಬಹುದು: https://BBMPenyaya.karnataka.gov.in
* ಅಥವಾ ತಕ್ಷಣವೇ ತೆರಿಗೆ ಪಾವತಿಸಬಹುದು:
https://BBMPtax.karnataka.gov.in
ನೋಟಿಸ್ನ ಮಾದರಿ ಪ್ರತಿಯನ್ನು ಕೂಡ ಇದರೊಂದಿಗೆ ಲಗತ್ತಿಸಲಾಗಿದೆ. ಇದರಲ್ಲಿ ಪಾರದರ್ಶಕವಾಗಿ ತೆರಿಗೆ ತಪ್ಪು ಪಾವತಿ ಹೇಗೆ ಪತ್ತೆಯಾಯಿತು ಎಂಬುದು ಸ್ಪಷ್ಟವಾಗಿ ವಿವರಿಸಲಾಗಿದೆ. ನಾಗರಿಕರು ಅದೇ ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅಪೀಲ್ ಸಲ್ಲಿಸುವ ಅವಕಾಶವೂ ಇದೆ.
ವ್ಯವಸ್ಥೆಯ ಕಾರ್ಯವಿಧಾನ (System Process):
1. ಜಿಪಿಎಸ್ ತಂಡದ ಮನೆ-ಮನೆ ಭೇಟಿ ವೇಳೆ ಮೊಬೈಲ್ ಆಪ್ನಲ್ಲಿ ಆಸ್ತಿ ತೆರಿಗೆ ಮಾಹಿತಿಯನ್ನು ಬಳಸಲಾಗುತ್ತದೆ.
2. ಪ್ರತಿಯೊಂದು ಆಸ್ತಿಯ ಜಿಪಿಎಸ್ ಮೂಲಕ ಸೆರೆ ಹಿಡಿಯುತ್ತಾರೆ (GPS Location), ಬಳಕೆ (ವಸತಿ/ವಾಣಿಜ್ಯ/ಮಿಶ್ರ ಇತ್ಯಾದಿ…) ಬಳಕೆಯ ವಿಸ್ತೀರ್ಣ ಮುಂತಾದ ಮಾಹಿತಿಗಳನ್ನು ದಾಖಲಿಸಲಾಗುತ್ತದೆ.
3. ಆಸ್ತಿಯ ಮಹಡಿಗಳ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿ ಮೊಬೈಲ್ ಆಪ್ ಮೂಲಕ ಬ್ಯಾಕ್ ಎಂಡ್ ಗೆ ಕಳುಹಿಸಲಾಗುತ್ತದೆ.
4. ಗುಣಮಟ್ಟ ಪರಿಶೀಲನಾ (QC) ತಂಡವು 100% ಪರಿಶೀಲನೆ ನಡೆಸುತ್ತದೆ. ತಿರಸ್ಕರಿಸಲಾದ ಪ್ರಕರಣಗಳನ್ನು ಮರುಪರಿಶೀಲನೆಗಾಗಿ ಜಿಪಿಎಸ್ ತಂಡಕ್ಕೆ ಹಿಂದಿರುಗಿಸಲಾಗುತ್ತದೆ.
5. QC ಅನುಮೋದಿತ ಮಾಹಿತಿಯನ್ನು ಡ್ರೋನ್ ಚಿತ್ರಗಳು ಹಾಗೂ ಡಿಜಿಟಲ್ ನಿರ್ಮಿತ ವಿಸ್ತೀರ್ಣದ ಮಾಹಿತಿಯೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಘೋಷಿತ ವಿಸ್ತೀರ್ಣಕ್ಕಿಂತ ಹೆಚ್ಚಿನ ನಿರ್ಮಾಣ ಅಥವಾ ಘೋಷಿಸದ ವಾಣಿಜ್ಯ ಬಳಕೆ (ಭಾಗಶಃ ಅಥವಾ ಸಂಪೂರ್ಣ) ಕಂಡುಬಂದಲ್ಲಿ ವ್ಯವಸ್ಥೆಯೇ ಸ್ವಯಂಚಾಲಿತವಾಗಿ ಬಡ್ಡಿ ಮತ್ತು ದಂಡದೊಂದಿಗೆ ಶೋ ಕಾಸ್ ನೋಟಿಸ್ ಜಾರಿಗೊಳಿಸುತ್ತದೆ.
ಜಿಪಿಎಸ್ ತಂಡವು ಪ್ರತಿದಿನ ಸುಮಾರು 10,000 ಆಸ್ತಿಗಳನ್ನು ಭೇಟಿ ಮಾಡುತ್ತಿದೆ. ತೆರಿಗೆ ತಪ್ಪು ಪಾವತಿಸಿದ ಪ್ರತಿಯೊಬ್ಬರೂ ಶೀಘ್ರದಲ್ಲೇ ಹೊಣೆಗಾರರಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತ ಮುನೀಶ್ ಮೌದ್ಗೀಲ್ ತಿಳಿಸಿದ್ದಾರೆ.
ಛೇ..! ಇವನೆಂಥ ಮಾವ! ಮಗಳನ್ನು ಪ್ರೀತಿಸಿ ಮದುವೆಯಾದ ಹುಡುಗನ ಮನೆಗೆ ಬೆಂಕಿ ಹಚ್ಚಿದ ಪಾಪಿ ತಂದೆ!








