ಗದಗ: ಜಿಲ್ಲೆಯ ಜನರು ಬೆಚ್ಚಿ ಬೆಚ್ಚಿ ಬೀಳುವಂತೆ ಮಾಡಿದ್ದು ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ. ಈ ಪ್ರಕರಣಕ್ಕೆ ಕಾರಣವಾದಂತ 8 ಆರೋಪಿಗಳನ್ನು ಪೊಲೀಸರು ಎಡೆಮುರಿ ಕಟ್ಟಿ ಬಂದಿಸಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದಂತ ಗದಗ ಎಸ್ಪಿ ನೇಮಗೌಡ ಅವರು, ಗದಗ ನಗರ ಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತ ಘಟನೆ ನಡೆದ 48 ಗಂಟೆಯಲ್ಲಿ ಪೊಲೀಸರು 8 ಆರೋಪಿಗಳನ್ನು ಬಂಧಿಸಿರೋದಾಗಿ ತಿಳಿಸಿದರು.
ಆಸ್ತಿಯ ಕಲಹದಿಂದಾಗಿ ಈ ಕೊಲೆ ನಡೆದಿದೆ. ಈ ನಾಲ್ವರ ಹತ್ಯೆಗೆ ಮಗನೇ ಸುಫಾರಿ ಕೊಟ್ಟಿರೋದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. ಈ ಹತ್ಯೆ ಸಂಬಂಧ ಪ್ರಮುಖ ಆರೋಪಿ ವಿನಾಯಕ್ ಬಾಕಳೆ, ಫೈರೋಜ್ ಖಾಜಿ, ಸುಲ್ತಾನ್ ಶೇಖರ್, ಸಾಹಿಲ್, ಸೋಹೇಲ್, ಮಹೇಶ್ ಸಾಳೊಂಕೆ, ವಾಹಿದ್ ಬೆಪಾರಿ ಸೇರಿದಂತೆ 8 ಮಂದಿ ಆರೋಪಿಗಳನ್ನು ಬಂಧಿಸಿರೋದಾಗಿ ತಿಳಿಸಿದರು.
ಲೋಕಸಭಾ ಚುನಾವಣೆ 2024: ಸೂರತ್ ಕ್ಷೇತ್ರದಲ್ಲಿ ಸ್ಪರ್ಧೆಯಿಲ್ಲದೆ ಗೆಲುವು ಸಾಧಿಸಿದ ಬಿಜೆಪಿ, ಮೊದಲ ಖಾತೆ ಓಫನ್
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ : ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ