Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING: ರಾಜ್ಯದಲ್ಲಿ ಮನಕಲಕುವ ಘಟನೆ: ಬಡತನದಿಂದ ನವಜಾತ ಶಿಶುವನ್ನೇ ಸಾಂತ್ವಾನ ಕೇಂದ್ರಕ್ಕೆ ಕೊಟ್ಟ ತಾಯಿ

07/08/2025 10:15 PM

SHOCKING : ಪೋಷಕರೇ ಎಚ್ಚರ ; ಜೇಡ ಕಚ್ಚಿ ಬಾಲಕಿ ಸಾವು

07/08/2025 10:05 PM

BREAKING ; ಟ್ರಂಪ್ ಸುಂಕ ಹೆಚ್ಚಳದ ನಡುವೆ ಮಾಸ್ಕೋದಲ್ಲಿ ‘ಪುಟಿನ್’ ಭೇಟಿಯಾದ NSA ‘ಅಜಿತ್ ದೋವಲ್’

07/08/2025 9:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಇನ್ಮುಂದೆ ಕರ್ನಾಟಕದಲ್ಲಿ ‘ಕೋಮು ಹಿಂಸೆ’ಗೆ ಬ್ರೇಕ್: ‘ವಿಶೇಷ ಕಾರ್ಯಪಡೆ’ ರಚಿಸಿ ರಾಜ್ಯ ಸರ್ಕಾರ ಆದೇಶ | Special Action Force
KARNATAKA

BIG NEWS: ಇನ್ಮುಂದೆ ಕರ್ನಾಟಕದಲ್ಲಿ ‘ಕೋಮು ಹಿಂಸೆ’ಗೆ ಬ್ರೇಕ್: ‘ವಿಶೇಷ ಕಾರ್ಯಪಡೆ’ ರಚಿಸಿ ರಾಜ್ಯ ಸರ್ಕಾರ ಆದೇಶ | Special Action Force

By kannadanewsnow0930/05/2025 5:45 AM

ಬೆಂಗಳೂರು: ರಾಜ್ಯದಲ್ಲಿ ಕೋಮು ಹಿಂಸೆಗೆ ಬ್ರೇಕ್ ಹಾಕುವಂತ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಈ ಸಂಬಂಧ ಕೋಮು ಹಿಂಸೆ ನಿಗ್ರಹಕ್ಕಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಿದ್ದು,ರಾಜ್ಯದಲ್ಲಿ ನಕ್ಸಲೈಟ್ ಚಟುವಟಿಕೆಗಳ ನಿಗ್ರಹಕ್ಕಾಗಿ Anti Naxal Force (ANF) ಅನ್ನು ಸೃಜಿಸಿ ಆದೇಶಿಸಲಾಗಿದೆ ಎಂದಿದ್ದಾರೆ.

ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ತುಳು, ಕೊಂಕಣಿ ಮುಂತಾದ ವಿಶಿಷ್ಟ ಭಾಷೆಗಳು ಮತ್ತು ಅದರ ಸಾಂಸ್ಕೃತಿಕ ಪರಂಪರೆಯಿಂದ ಗುರುತನ್ನು ರೂಪಿಸಿದ್ದು, ಜನರಲ್ಲಿ ಆಳವಾದ ಸಮುದಾಯದ ಪ್ರಜ್ಞೆ ಮತ್ತು ಪ್ರಾದೇಶಿಕ ಹೆಮ್ಮೆಯನ್ನು ಬೆಳೆಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ಸಾಂಪ್ರದಾಯಿಕವಾಗಿ ಉನ್ನತ ಮಟ್ಟದ ಶಿಕ್ಷಣ ಮತ್ತು ಸಾಕ್ಷರತೆಯೊಂದಿಗೆ ಸ್ಥಿರವಾದ ಆರ್ಥಿಕ ಪುಗತಿಯನ್ನು ಕಂಡಿದ್ದು, ಇದರ ಹೊರತಾಗಿಯೂ ದಕ್ಷಿಣ ಕನ್‌ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪುಸ್ತುತ ಕೋಮು ಸಂವೇದನೆಗಳು ಹೆಚ್ಚಾಗುತ್ತಿದ್ದು, ಸಣ್ಣ ಘಟನೆಗಳು ಸಹ ಪುಮುಖ ಕಾನೂನು ಮತ್ತು ಸುವ್ಯವಸ್ಥೆಯ ಸವಾಲುಗಳಾಗಿ ತ್ವರಿತವಾಗಿ ಉಲ್ಬಣಗೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆಂದು ಹಾಗೂ ಈ ಪುದೇಶವು ಕೋಮು ಹತ್ಯೆಗಳು, ದ್ವೇಷ ಭಾಷಣ, ಹಿಂಸಾಚಾರ ಮುಂತಾದ ಪುನರಾವರ್ತಿತ ಘಟನೆಗಳಿಗೆ ಸಾಕ್ಷಿಯಾಗುತ್ತಿರುವುದಾಗಿ ತಿಳಿಸಿರುತ್ತಾರೆ.

ಈ ಕೃತ್ಯಗಳು ದಕ್ಷಿಣ ಕನ್ನಡ ಪ್ರದೇಶವನ್ನು ಕೋಮು ಮತ್ತು ಆಡಳಿತಾತ್ಮಕ ದೃಷ್ಟಿಕೋನದಿಂದ ಹೆಚ್ಚು ಸೂಕ್ಷ್ಮವಾಗಿಸುತ್ತಿದ್ದು ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತಿರುವುದರಿಂದ ಶಾಂತಿ, ಸಾಮಾಜಿಕ ಒಗ್ಗಟ್ಟು ಮತ್ತು ಕಾನೂನಿನ ನಿಯಮವನ್ನು ತರುವ ನಿಟ್ಟಿನಲ್ಲಿ ಪೂರ್ವಭಾವಿ ಮತ್ತು ನಿರಂತರ ಪ್ರಯತ್ನಗಳು ಅತ್ಯಗತ್ಯವಾಗಿರುತ್ತವೆಂದು ತಿಳಿಸಿರುತ್ತಾರೆ.

ಅಲ್ಲದೇ, ಮಾನ್ಯ ಸರ್ವೋಚ್ಚ ನ್ಯಾಯಾಲಯವು ವಿವಿಧ ಪ್ರಕರಣಗಳಲ್ಲಿನ ತೀರ್ಪುಗಳಲ್ಲಿ ನೈತಿಕ ಪೊಲೀಸ್ ಗಿರಿ, ದ್ವೇಷ ಭಾಷಣಗಳು, ಹಿಂಸಾಚಾರ ಮುಂತಾದ ಪ್ರಕರಣಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು : ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿ, ಹಲವಾರು ಮಾರ್ಗಸೂಚಿಗಳನ್ನು ಒದಗಿಸಿರುತ್ತದೆಂದು ಸಹ ತಿಳಿಸಿರುತ್ತಾರೆ.

ಮುಂದುವರೆದು, ಸರ್ಕಾರದ ಆದೇಶ ದಿನಾಂಕ: 21/05/2005ರನ್ವಯ ಸೃಜಿಸಲಾಗಿರುವ Anti Naxal Force (ANF)ರಲ್ಲಿ ಪ್ರಸ್ತುತ ದಿನಾಂಕ: 12/05/2025ರಂತೆ ಇರುವ ಅಧಿಕಾರಿ/ಸಿಬ್ಬಂದಿಗಳ ಮಂಜೂರಾತಿ ಬಲ, ಕಾರ್ಯನಿರ್ವಹಣೆಯ ಬಲ ಮತ್ತು ಖಾಲಿ ಹುದ್ದೆಗಳ ಬಲವನ್ನು ಒದಗಿಸಿರುತ್ತಾರೆ.

ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಭೂಗತ ನಕ್ಸಲರಾದ 06 ಜನರು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಸಮಿತಿಯ ಮುಂದೆ ಶರಣಾಗಿದ್ದು, ರಾಜ್ಯವು ನಕ್ಸಲ್ ಮುಕ್ತವಾಗಿರುವುದರಿಂದ ನಕ್ಸಲ್ ನಿಗ್ರಹ ಪಡೆಯನ್ನು ವಿಸರ್ಜಿಸಲಾಗುವುದು ಎಂದು 2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ- 457ರಲ್ಲಿ ಘೋಷಿಸಿದ್ದು, ನಕ್ಸಲ್ ನಿಗ್ರಹ ಪಡೆ (ಎ.ಎನ್.ಎಫ್) ಘಟಕವನ್ನು 03 ವರ್ಷಗಳ ಕಾಲ ಮುಂದುವರೆಸುವಂತೆ ಕೋರಿ, ಪರಿಶೀಲನೆಯ ಬಳಿಕ ಘಟಕವನ್ನು ರದ್ದುಗೊಳಿಸಬಹುದಾಗಿದೆ ಎಂದು ತಿಳಿಸಿರುತ್ತಾರೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ವಿಶೇಷ ಕಾರ್ಯಪಡೆ (Special Action Force)ಯನ್ನು ಕೆಳಕಂಡಂತೆ ಸ್ಥಾಪಿಸಲು ಮಂಜೂರಾತಿ ನೀಡಿ ಆದೇಶಿಸಿದೆ. 1. ರಾಜ್ಯದಲ್ಲಿನ ನಕ್ಸಲ್ ನಿಗ್ರಹ ಪಡೆ (Anti Naxal Force)ಯಲ್ಲಿ ಪ್ರಸ್ತುತ ಇರುವ ವಿವಿಧ ದರ್ಜೆಯ ಒಟ್ಟು 656 ಹುದ್ದೆಗಳಲ್ಲಿ ಕೆಳಕಂಡ ಅಧಿಕಾರಿ/ಸಿಬ್ಬಂದಿಗಳ ಹುದ್ದೆಗಳನ್ನು ಬೇರ್ಪಡಿಸಿ, ಪ್ರತ್ಯೇಕವಾಗಿ ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸಿ ಆದೇಶಿಸಿದ್ದಾರೆ.

ಹೊಸದಾಗಿ ಸ್ಥಾಪನೆಯಾಗುವ ವಿಶೇಷ ಕಾರ್ಯಪಡೆಯು ಮೂರು ಕಂಪನಿಗಳನ್ನು ಹೊಂದಿರಲಿದ್ದು, ಈ ಕಂಪನಿಗಳನ್ನು ಉಡುಪಿ ಜಿಲ್ಲೆ ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸ್ಥಾಪಿಸಲಾಗುವುದೆಂದು ಹಾಗೂ ಸಂಬಂಧಪಟ್ಟ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಈ ಪಡೆಗಳನ್ನು ನಿಯೋಜಿಸಲು ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸುವಂತೆ ಮತ್ತು ವಿಶೇಷ ಕಾರ್ಯಪಡೆಯು ವಲಯ ಐಜಿಪಿಯವರ ನಿಯಂತ್ರಣದಲ್ಲಿರುತ್ತಾರೆಂದು ತಿಳಿಸಿ, ಸದರಿ ವಿಶೇಷ ಕಾರ್ಯಪಡೆ (Special Action Force)ಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಕೆಳಕಂಡಂತೆ ಪ್ರಸ್ತಾವನೆಗೆ ಮಂಜೂರಾತಿ ಆದೇಶ ನೀಡುವಂತೆ ಕೋರಿರುತ್ತಾರೆ.

1. ದ್ವೇಷ ಭಾಷಣ, ಉದ್ರೇಕಕಾರಿ ಘಟನೆಗಳು ಮತ್ತು ಕೋಮು ಸಂಬಂಧಿತ ಘಟನೆಗಳಿಗಾಗಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಮತ್ತು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ತಾಂತ್ರಿಕ ಕೋಶವನ್ನು ಒಳಗೊಂಡ ಗುಪ್ತಚರ ಘಟಕವನ್ನು ಹೊಂದುವುದು.

2. ಸಂಭಾವ್ಯ ಕೋಮು ಹಿಂಸಾಚಾರದ ಬಗ್ಗೆ ಕಣ್ಣಾವಲು ಮತ್ತು ಮಾನವ ಗುಪ್ತಚರ ಮೂಲಕ ಎಚ್ಚರಿಕೆ ವ್ಯವಸ್ಥೆಯನ್ನು ರಚಿಸುವುದು.

3. ಪ್ರಾಬಲ್ಯದ ಮೂಲಕ ವಿಶ್ವಾಸ ವೃದ್ಧಿ ಕ್ರಮಗಳನ್ನು ಕೈಗೊಳ್ಳುವುದು.

4. ಮೂಲಭೂತೀಕರಣವನ್ನು ಗುರುತಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕ್ರಮಗಳನ್ನು ಕೈಗೊಳ್ಳುವುದು.

5. ವಲಯ ಐಜಿಪಿರವರು ಕೋಮು ಗಲಭೆಯ ಸಂದರ್ಭಗಳಲ್ಲಿ ವಿಶೇಷ ಕಾರ್ಯಪಡೆ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಲು ಕ್ರಮಕೈಗೊಳ್ಳುವುದು.

 

Share. Facebook Twitter LinkedIn WhatsApp Email

Related Posts

SHOCKING: ರಾಜ್ಯದಲ್ಲಿ ಮನಕಲಕುವ ಘಟನೆ: ಬಡತನದಿಂದ ನವಜಾತ ಶಿಶುವನ್ನೇ ಸಾಂತ್ವಾನ ಕೇಂದ್ರಕ್ಕೆ ಕೊಟ್ಟ ತಾಯಿ

07/08/2025 10:15 PM1 Min Read

ಆಶಾ ಕಾರ್ಯಕರ್ತೆಯರಿಗೆ ಸಚಿವ ದಿನೇಶ್ ಗುಂಡೂರಾವ್ ಗುಡ್ ನ್ಯೂಸ್

07/08/2025 9:47 PM1 Min Read

ರಾಜ್ಯದ ಜನತೆಗೆ ಗುಡ್ ನ್ಯೂಸ್: ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ‘ಇಬ್ಬರು ಸ್ತ್ರೀ ರೋಗ ತಜ್ಞರ’ ನೇಮಕ

07/08/2025 9:44 PM2 Mins Read
Recent News

SHOCKING: ರಾಜ್ಯದಲ್ಲಿ ಮನಕಲಕುವ ಘಟನೆ: ಬಡತನದಿಂದ ನವಜಾತ ಶಿಶುವನ್ನೇ ಸಾಂತ್ವಾನ ಕೇಂದ್ರಕ್ಕೆ ಕೊಟ್ಟ ತಾಯಿ

07/08/2025 10:15 PM

SHOCKING : ಪೋಷಕರೇ ಎಚ್ಚರ ; ಜೇಡ ಕಚ್ಚಿ ಬಾಲಕಿ ಸಾವು

07/08/2025 10:05 PM

BREAKING ; ಟ್ರಂಪ್ ಸುಂಕ ಹೆಚ್ಚಳದ ನಡುವೆ ಮಾಸ್ಕೋದಲ್ಲಿ ‘ಪುಟಿನ್’ ಭೇಟಿಯಾದ NSA ‘ಅಜಿತ್ ದೋವಲ್’

07/08/2025 9:48 PM

ಆಶಾ ಕಾರ್ಯಕರ್ತೆಯರಿಗೆ ಸಚಿವ ದಿನೇಶ್ ಗುಂಡೂರಾವ್ ಗುಡ್ ನ್ಯೂಸ್

07/08/2025 9:47 PM
State News
KARNATAKA

SHOCKING: ರಾಜ್ಯದಲ್ಲಿ ಮನಕಲಕುವ ಘಟನೆ: ಬಡತನದಿಂದ ನವಜಾತ ಶಿಶುವನ್ನೇ ಸಾಂತ್ವಾನ ಕೇಂದ್ರಕ್ಕೆ ಕೊಟ್ಟ ತಾಯಿ

By kannadanewsnow0907/08/2025 10:15 PM KARNATAKA 1 Min Read

ಮಂಡ್ಯ: ರಾಜ್ಯದಲ್ಲಿ ಮನಕಲಕುವ ಘಟನೆ ಎನ್ನುವಂತೆ ನವಜಾತ ಶಿಶುವನ್ನು ಸಾಂತ್ವನ ಕೇಂದ್ರಕ್ಕೆ ತಾಯಿ ನೀಡಿರುವಂತ ಘಟನೆ ಮಂಡ್ಯದಲ್ಲಿ ನಡೆದಿದೆ. ಬಡತನದ…

ಆಶಾ ಕಾರ್ಯಕರ್ತೆಯರಿಗೆ ಸಚಿವ ದಿನೇಶ್ ಗುಂಡೂರಾವ್ ಗುಡ್ ನ್ಯೂಸ್

07/08/2025 9:47 PM

ರಾಜ್ಯದ ಜನತೆಗೆ ಗುಡ್ ನ್ಯೂಸ್: ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ‘ಇಬ್ಬರು ಸ್ತ್ರೀ ರೋಗ ತಜ್ಞರ’ ನೇಮಕ

07/08/2025 9:44 PM

ರಾಜ್ಯದ 147 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಉನ್ನತೀಕರಿಸಿ ಸರ್ಕಾರ ಆದೇಶ

07/08/2025 9:35 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.