Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ಬಿಬಿಎಂಪಿ ಭರ್ಜರಿ ಕಾರ್ಯಾಚರಣೆ: ಪಾದಚಾರಿ ಮಾರ್ಗ ಒತ್ತುವರಿ ತೆರವು

06/08/2025 6:50 PM

ಆಗಸ್ಟ್.8ರಿಂದ ಸಾಗರದಲ್ಲಿ ಮೂರು ದಿನ ‘ಹಲಸು ಮತ್ತು ಹಲಸಿನ ಉತ್ಪನ್ನ ಮೇಳ’: ಆಯೋಜಕ ಗಣೇಶ್ ಶೆಟ್ಟಿ

06/08/2025 6:41 PM

BREAKING : RCB ಆಟಗಾರ ‘ಯಶ್ ದಯಾಳ್’ಗೆ ಬಿಗ್ ಶಾಕ್ ; ಬಂಧನ ತಡೆಗೆ ಹೈಕೋರ್ಟ್ ನಿರಾಕರಣೆ

06/08/2025 6:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆಗಸ್ಟ್.8ರಿಂದ ಸಾಗರದಲ್ಲಿ ಮೂರು ದಿನ ‘ಹಲಸು ಮತ್ತು ಹಲಸಿನ ಉತ್ಪನ್ನ ಮೇಳ’: ಆಯೋಜಕ ಗಣೇಶ್ ಶೆಟ್ಟಿ
KARNATAKA

ಆಗಸ್ಟ್.8ರಿಂದ ಸಾಗರದಲ್ಲಿ ಮೂರು ದಿನ ‘ಹಲಸು ಮತ್ತು ಹಲಸಿನ ಉತ್ಪನ್ನ ಮೇಳ’: ಆಯೋಜಕ ಗಣೇಶ್ ಶೆಟ್ಟಿ

By kannadanewsnow0906/08/2025 6:41 PM

ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದಲ್ಲಿ ಆಗಸ್ಟ್.8ರಿಂದ ಮೂರು ದಿನಗಳ ಕಾಲ ಹಲಸು ಮತ್ತು ಹಲಸಿನ ಉತ್ಪನ್ನಗಳ ಮೇಳವನ್ನು ಬ್ರಾಸಂ ಸಭಾಭವನದಲ್ಲಿ ಆಯೋಜಿಸಿರುವುದಾಗಿ ಆಯೋಜಕರಾದಂತ ಗಣೇಶ್ ಶೆಟ್ಟಿ ತಿಳಿಸಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ರೋಟರಿ ಕ್ಲಬ್, ಇನ್ನರ್ ವೀಲ್ ಸಾಗರ ಯೂನಿಕ್ ಮತ್ತು ರೈತ ಉತ್ಪಾದಕರ ಸೌಹಾರ್ದ ಸಹಕಾರ ಸಂಘದ ಆಶ್ರಯದಲ್ಲಿ ಈ ಹಲಸು ಮತ್ತು ಹಣ್ಣು ಮೇಳ ಹಮ್ಮಿಕೊಳ್ಳಲಾಗಿದೆ. ಆಗಸ್ಟ್.8ರಂದು ಬೆಳಗ್ಗೆಯಿಂದಲೇ ಹಲಸು ಮತ್ತು ಹಲಸಿನ ಉತ್ಪನ್ನಗಳ ಮೇಳ ಆರಂಭಗೊಳ್ಳಲಿದೆ. ಸಂಜೆ ಶಾಸಕ ಗೋಪಾಲಕೃಷ್ಣ ಬೇಳೂರು ಮೇಳವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಹಿಂಡ್ಲುಮನೆ ರಾಜೇಂದ್ರ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.

ಸಾಗರದ ಬ್ರಾಸಂ ಸಭಾಭವನದ ನೆಲಮಹಡಿಯಲ್ಲಿ ಹಲಸಿನ ಖಾದ್ಯ, ಬಗೆ ಬಗೆಯ ಹಲಸಿನ ಹಣ್ಣುಗಳನ್ನು ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಮೊದಲ ಮಹಡಿಯಲ್ಲಿ ಕೈಮಗ್ಗ ವಸ್ತುಗಳ ಪ್ರದರ್ಶನ ಮಾರಾಟ, ಕರಕುಶಲ ವಸ್ತುಗಳ ಪ್ರದರ್ಶನ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಹಲಸು ಮೇಳದಲ್ಲಿ ಕೆಂಪು, ಚಂದ್ರ ಹಲಸಿನ ಪ್ರದರ್ಶನ ಮಾರಾಟ ಇರುತ್ತದೆ. ಹೋಳಿಗೆ, ಜಿಲೇಬಿ, ಕಡುಬು, ಹಪ್ಪಳ, ಚಿಪ್ಸ್, ಕೇಸರಿಬಾತ್, ಪಾಯಸ, ಕಬಾಬ್, ಉಪ್ಪಿನ ಕಾಯಿ, ಪತ್ರೊಡೆ, ಪೋಡಿ ಸೇರಿ ಹಲವು ಖಾದ್ಯಗಳು ಬಿಸಿಬಿಸಿಯಾಗಿ ಸಿದ್ದಪಡಿಸಿಕೊಡಲಾಗುತ್ತದೆ. ಹಲಸು ಬೆಳೆಯುವ ಬೆಳೆಗಾರರಿಗೆ, ಹಲಸಿನ ಉದ್ದಿಮೆ ನಡೆಸುವವರಿಗೆ ಇಂತಹ ಮೇಳಗಳ ಮೂಲಕ ಪ್ರೋತ್ಸಾಹಿಸಲಾಗುತ್ತದೆ. ಸಾಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಹಲಸು ಮೇಳದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಸಾಗರದ ರೋಟರಿ ಸಂಸ್ಥೆಯ ಅಧ್ಯಕ್ಷ ಗೌತಮ್.ಕೆಎಸ್ ಮಾತನಾಡಿ ಸಾಗರದಲ್ಲಿ ಹಲಸಿನ ಪ್ರದರ್ಶನ ಮತ್ತು ಮಾರಾಟ ಇದೇನು ಮೊದಲಲ್ಲ. ಈ ಹಿಂದೆಯೂ ಮಾಡಲಾಗಿದೆ. ಆದರೇ ಈ ಬಾರಿ ಭಟ್ಕಳ ಇನ್ನಿತರೆ ತಾಲ್ಲೂಕುಗಳಲ್ಲಿ ಹೆಚ್ಚು ಜನಪ್ರಿಯಗೊಂಡ ತಂಡದ ಮೂಲಕ ಹಲಸಿನ ಮೇಳವನ್ನು ಏರ್ಪಡಿಸಿದೆ. ಮೇಳದಲ್ಲಿ ವಿವಿಧ ಹಲಸಿನ ಹಣ್ಣಿನ ಪ್ರದರ್ಶನ, ಹಲಸಿನ ಹಣ್ಣಿನ ಖಾದ್ಯಗಳ ಮಾರಾಟ, ಹಲಸು ಸೇರಿ ವಿವಿಧ ತಳಿಗಳ ಬೀಜ ಮತ್ತು ಸಸಿಗಳ ಮಾರಾಟ ಇರುತ್ತದೆ. ಹಲಸಿನ ಹಣ್ಣಿನಿಂದ ಮಾಡಿದ ಕಡುಬು, ಚಿಪ್ಸ್, ಕಬಾಬ್ ಸೇರಿ ಅನೇಕ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ ಎಂದು ಹೇಳಿದರು.

ಈ ಸುದ್ದಿಗೋಷ್ಠಿಯಲ್ಲಿ ರೈತ ಉತ್ಪಾದಕರ ಕೇಂದ್ರದ ನಾಗರಾಜ ಹೆಗಡೆ, ಭಾಸ್ಕರ ಪೂಜಾರಿ ಹಾಜರಿದ್ದರು.

SHOCKING : ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ!

ರಾಜ್ಯದಲ್ಲಿ ‘ಜನೌಷಧಿ ಕೇಂದ್ರ’ಗಳನ್ನು ಮುಚ್ಚಿಸಿಲ್ಲ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಬಿಬಿಎಂಪಿ ಭರ್ಜರಿ ಕಾರ್ಯಾಚರಣೆ: ಪಾದಚಾರಿ ಮಾರ್ಗ ಒತ್ತುವರಿ ತೆರವು

06/08/2025 6:50 PM2 Mins Read

BREAKING: ಶಿವಮೊಗ್ಗದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು: ತಪ್ಪಿದ ‘ಮಹಾ ರೈಲು ದುರಂತ’

06/08/2025 6:25 PM1 Min Read

BIG NEWS: ಟೀ ಪುಡಿಗೆ ರೂ.24 ಹೆಚ್ಚಿನ ದರ ಪಡೆದಿದ್ದಕ್ಕೆ 25,000 ದಂಡ ವಿಧಿಸಿದ ಕೋರ್ಟ್

06/08/2025 6:04 PM2 Mins Read
Recent News

ಬೆಂಗಳೂರಲ್ಲಿ ಬಿಬಿಎಂಪಿ ಭರ್ಜರಿ ಕಾರ್ಯಾಚರಣೆ: ಪಾದಚಾರಿ ಮಾರ್ಗ ಒತ್ತುವರಿ ತೆರವು

06/08/2025 6:50 PM

ಆಗಸ್ಟ್.8ರಿಂದ ಸಾಗರದಲ್ಲಿ ಮೂರು ದಿನ ‘ಹಲಸು ಮತ್ತು ಹಲಸಿನ ಉತ್ಪನ್ನ ಮೇಳ’: ಆಯೋಜಕ ಗಣೇಶ್ ಶೆಟ್ಟಿ

06/08/2025 6:41 PM

BREAKING : RCB ಆಟಗಾರ ‘ಯಶ್ ದಯಾಳ್’ಗೆ ಬಿಗ್ ಶಾಕ್ ; ಬಂಧನ ತಡೆಗೆ ಹೈಕೋರ್ಟ್ ನಿರಾಕರಣೆ

06/08/2025 6:40 PM

BREAKING : ಪೈಲಟ್ ಕೌಶಲ್ಯ ಪರೀಕ್ಷೆಯಲ್ಲಿ ಲೋಪ ; ‘DGCA’ಯಿಂದ Akasa Air ‘ಎಕ್ಸಾಮಿನರ್’ ಅಮಾನತು

06/08/2025 6:36 PM
State News
KARNATAKA

ಬೆಂಗಳೂರಲ್ಲಿ ಬಿಬಿಎಂಪಿ ಭರ್ಜರಿ ಕಾರ್ಯಾಚರಣೆ: ಪಾದಚಾರಿ ಮಾರ್ಗ ಒತ್ತುವರಿ ತೆರವು

By kannadanewsnow0906/08/2025 6:50 PM KARNATAKA 2 Mins Read

ಬೆಂಗಳೂರು: ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಅಡತಡೆಯಿಲ್ಲದ ಪಾದಚಾರಿ ಮಾರ್ಗ ವ್ಯವಸ್ಥೆಗೆ ಆದ್ಯತೆ ನೀಡಿ ವಲಯ ವ್ಯಾಪ್ತಿಯಲ್ಲಿ ನಿರಂತರವಾಗಿ ಪಾದಚಾರಿ ಮಾರ್ಗ…

ಆಗಸ್ಟ್.8ರಿಂದ ಸಾಗರದಲ್ಲಿ ಮೂರು ದಿನ ‘ಹಲಸು ಮತ್ತು ಹಲಸಿನ ಉತ್ಪನ್ನ ಮೇಳ’: ಆಯೋಜಕ ಗಣೇಶ್ ಶೆಟ್ಟಿ

06/08/2025 6:41 PM

BREAKING: ಶಿವಮೊಗ್ಗದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು: ತಪ್ಪಿದ ‘ಮಹಾ ರೈಲು ದುರಂತ’

06/08/2025 6:25 PM

BIG NEWS: ಟೀ ಪುಡಿಗೆ ರೂ.24 ಹೆಚ್ಚಿನ ದರ ಪಡೆದಿದ್ದಕ್ಕೆ 25,000 ದಂಡ ವಿಧಿಸಿದ ಕೋರ್ಟ್

06/08/2025 6:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.