Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ಹೆಣ ಹೂತಿರೋ ವ್ಯಕ್ತಿಯೇ ಬೇರೆ, ಈಗಿರುವ ಮಾಸ್ಕ್ ಮ್ಯಾನ್ ಬೇರೆ ಎಂದ ಹೊಸ ಸಾಕ್ಷಿದಾರ!

13/08/2025 2:15 PM

BIG NEWS : ಧರ್ಮಸ್ಥಳದಲ್ಲಿ ಹೆಣ ಸಿಗದೇ ಇದ್ರೆ ಅನಾಮಿಕನ ಒದ್ದು ಒಳಗೆ ಹಾಕಿ : ಈರಣ್ಣ ಕಡಾಡಿ ಆಕ್ರೋಶ

13/08/2025 2:13 PM

ಮಕ್ಕಳಿಗೆ `ಗುಡ್ ಟಚ್, ಬ್ಯಾಡ್ ಟಚ್’ ಬಗ್ಗೆ ಪಾಠ : ಶಿಕ್ಷಕಿಯ ವಿಡಿಯೋ ವೈರಲ್ | WATCH VIDEO

13/08/2025 1:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬೆಂಗಳೂರಲ್ಲಿ ಮೊಟ್ಟ ಮೊದಲ ಬಾರಿಗೆ ನಾಲ್ವರು ‘GST ಅಧಿಕಾರಿ’ಗಳು ಅರೆಸ್ಟ್
KARNATAKA

BREAKING: ಬೆಂಗಳೂರಲ್ಲಿ ಮೊಟ್ಟ ಮೊದಲ ಬಾರಿಗೆ ನಾಲ್ವರು ‘GST ಅಧಿಕಾರಿ’ಗಳು ಅರೆಸ್ಟ್

By kannadanewsnow0911/09/2024 3:34 PM

ಬೆಂಗಳೂರು: ಬೆಂಗಳೂರಲ್ಲಿ ಮೊಟ್ಟಲ ಮೊದಲ ಬಾರಿ ಎನ್ನುವಂತೆ ಉದ್ಯಮಿಯೊಬ್ಬರಿಂದ ಹಣ ಪಡೆದು ಪರಾರಿಯಾಗಿದ್ದಂತ ನಾಲ್ವರು ಕೇಂದ್ರದ ಜಿಎಸ್ಟಿ ಅಧಿಕಾರಿಗಳನ್ನು ಪೊಲೀಸರು ಭರ್ಜರಿ ಬೇಟೆಯಾಡುವ ಮೂಲಕ ಬಂಧಿಸಿದ್ದಾರೆ.

ಈ ಕುರಿತಂತೆ ಬೆಂಗಳೂರು ನಗರ ಪೊಲೀಸರಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ದಿನಾಂಕ:09-09-2024 ರಂದು ಸಂಜೆ 16-35 ಗಂಟೆಗೆ ಪಿರಾದುದಾರರಾದ ಕೇಶವ್ ಟಾಕ್ ರವರು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, Mexo Solutions Private Limited having its address at L4, 2nd Floor, 11th Sector, Jeevan Bhimanagar Main Road, Bengaluru-560075 0 ಮಾಡಿಕೊಂಡಿರುತ್ತೇನೆ. ದಿನಾಂಕ:30-08-2024 ರಂದು 8-30 ರಿಂದ 9-00 ಗಂಟೆ ನಡುವೆ ಅಪರಿಚಿತ ವ್ಯಕ್ತಿಗಳು ತಾವು ಜಿಎಸ್‌ಟಿ ಮತ್ತು ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು, ನಮ್ಮ ಮನೆಗೆ ಅತಿಕ್ರಮ ಪ್ರವೇಶ ಮಾಡಿ ನಮ್ಮ ಮೊಬೈಲ್ ಫೋನ್ ಮತ್ತು ಇತರೆ ವಸ್ತುಗಳನ್ನು ತೆಗೆದುಕೊಂಡು ನನ್ನನ್ನು ಪವನ್ ತಕ್, ಮುಖೇಶ್ ಜೈನ್, ರಾಕೇಶ್ ಮಾಣಕ್ ಚಾಂದನಿ ರವರುಗಳನ್ನು ಬಲವಂತವಾಗಿ ಮನೆಯಿಂದ ಎಳೆದುಕೊಂಡು ಬಂದು ಮಹೀಂದ್ರಾ ಎಕ್ಸ್ಯುವಿ 500 ಮತ್ತು ಟಾಟಾ ಹ್ಯಾರಿಯರ್ ಎಸ್‌ಯುವಿ ಕಾರುಗಳಲ್ಲಿ ಕೂರಿಸಿಕೊಂಡು ನಾನು ಕೆಲಸ ಮಾಡುತ್ತಿರುವ ಕಛೇರಿಗೆ ಬಂದು ನಮ್ಮ ಮೇಲೆ ಹಲ್ಲೆ ಮಾಡಿ ನಮ್ಮಗಳನ್ನು ಪ್ರತ್ಯೇಕ ರೂಂಗಳಲ್ಲಿ ಕೂಡಿ ಹಾಕಿರುತ್ತಾರೆ ಎಂದು ದೂರಿನ ಸಾರಾಂಶ ತಿಳಿಸಿದೆ.

ನಂತರ ಮತ್ತೊಬ್ಬ ವ್ಯಕ್ತಿ ತಾನು ಮನೋಜ್ ಸೀನಿಯರ್ ಜಿಎಸ್‌ ಆಫೀಸರ್ ಎಂದು ಹೇಳಿ ಇತರರೊಂದಿಗೆ ನಮ್ಮನ್ನು ಇಂದಿರಾನಗರಕ್ಕೆ ಅವರ ಕಾರಿನಲ್ಲಿ ಕರೆದುಕೊಂಡು ನನ್ನ ಮೊಬೈಲ್ ಫೋನ್ ಅನ್ನು ಫ್ರೆಟ್ ಮೋಡ್‌ಗೆ ಹಾಕಿ, ಹಾಟ್‌ಸ್ಪಾಟ್ ಮೂಲಕ ಇಂಟರ್‌ನೆಟ್ ಅನ್ನು ಕಲೆಕ್ಟ್ ಮಾಡಿರುತ್ತಾರೆ. ಅವರು ತಿಳಿಸಿದಂತೆ ನಾನು ರೋಷನ್ ಜೈನ್ ಎಂಬಾತನಿಗೆ ವಾಟ್ಸಾಪ್ ಕರೆ ಮಾಡಿಸಿ 03 ಕೋಟಿ ರೂಗಳನ್ನು ತಂದುಕೊಡುವಂತೆ ಹೇಳಿರುತ್ತೇನೆ. ನಂತರ ಅವರುಗಳು ನನ್ನನ್ನು ನಾನು ಕೆಲಸ ಮಾಡುವ ಸ್ಥಳಕ್ಕೆ ಕರೆದುಕೊಂಡು ಬಂದಿರುತ್ತಾರೆ. ನಂತರ ದಿನಾಂಕ:31-08-2024 ರಂದು ಬೆಳಿಗ್ಗೆ 10-30 ಗಂಟೆಗೆ ಸದರಿ ವ್ಯಕ್ತಿಗಳು ನನ್ನನ್ನು ಅವರ ಕಾರಿನಲ್ಲಿ ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋಗಿ ಮತ್ತು ವಾಪಸ್ ಕರೆದುಕೊಂಡು ಬಂದಿರುತ್ತಾರೆ. ಅದೇ ರೀತಿ ನನ್ನ ಸ್ನೇಹಿತ ರೋಷನ್‌ಗೆ ಕರೆ ಮಾಡಿಸಿ ಹಣವನ್ನು ತಂದು ಕೊಡುವಂತೆ ಒತ್ತಾಯ ಮಾಡಿರುತ್ತಾರೆ. ಹಣವನ್ನು ತಂದು ಕೊಡಲು ತಡ ಮಾಡಿದ್ದರಿಂದ ನಮ್ಮ ಮೇಲೆ ಹಲ್ಲೆ ಮಾಡಿರುತ್ತಾರೆ ಎಂದು ತಿಳಿಸಿದೆ.

ದಿನಾಂಕ:31-08-2024 ರಂದು ರೋಷನ್ ಹಣವನ್ನು ಅರೇಂಜ್ ಮಾಡಲು ಸಾಧ್ಯವಾಗಿರುವುದಿಲ್ಲ ಎಂದು ತಿಳಿಸಿದ್ದು, ನಂತರ ಸದರಿ ಆಸಾಮಿಗಳು ನಮ್ಮ ಮೇಲೆ ಹಲ್ಲೆ ಮಾಡಿರುತ್ತಾರೆ. ನಂತರ ರೋಷನ್ ಜೈನ್ ರವರು ಅಂಗಾಡಿಯ ಮೂಲಕ 1.5 ಕೋಟಿ ರೂಗಳನ್ನು ಅರೇಂಜ್ ಮಾಡಿ ಹಣವನ್ನು ಕಲೆಕ್ಟ್ ಮಾಡಿಕೊಳ್ಳುವಂತೆ ತಿಳಿಸಿರುತ್ತಾರೆ. ಅದರಂತೆ ಸದರಿ ಹಣವನ್ನು ಮುಖೇಶ್ ಜೈನ್ ದಿನಾಂಕ:01-09-2024 ರಂದು ಬೆಳಗ್ಗಿನ ಜಾವ 2-30 ಗಂಟೆಯ ಸಮಯದಲ್ಲಿ ತೆಗೆದುಕೊಂಡು ಬರಲು ಹೋದಾಗ ನಮ್ಮಲ್ಲಿ 4 ಜನರಲ್ಲಿ ಮೂವರನ್ನು ಕಳುಹಿಸಿಕೊಟ್ಟಿರುತ್ತಾರೆ. ಇದಾದ ನಂತರ ಹಣವನ್ನು ಪಡೆದುಕೊಂಡು ದಾಖಲಾತಿಗಳನ್ನು ಸಿದ್ದಪಡಿಸಿ ನಮ್ಮಗಳ ಸಹಿಯನ್ನು ಪಡೆದುಕೊಂಡಿರುತ್ತಾರೆ. ಸದರಿ ಆಸಾಮಿಗಳು ಹೋಗುವಾಗ ಮಹಜರ್ ದಾಖಲಾತಿಗಳನ್ನು ಬಿಟ್ಟು ಹೋಗಿರುತ್ತಾರೆ ಎಂದು ಮಾಹಿತಿ ಹಂಚಿಕೊಂಡಿದೆ.

ನಂತರ ನಾನು ದಿನಾಂಕ:02-09-2024 ರಿಂದ ದಿನಾಂಕ:03-09-2024 ರವರೆಗೆ ಮೇಲ್ಕಂಡ ಘಟನೆಯ ನೈಜತೆಯ ಬಗ್ಗೆ ವಿವಿಧ ಅಧಿಕಾರಿಗಳನ್ನು ವಿಚಾರಿಸಿರುತ್ತೇನೆ. ಸದರಿ ಆಸಾಮಿಗಳು ತಾವುಗಳು ಜಿಎಸ್‌ಟಿ ಮತ್ತು ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು ನನ್ನನ್ನು ಬೆದರಿಸಿ ಹಣ ಮತ್ತು ಇತರೆ ವಸ್ತುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಆದ್ದರಿಂದ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ದೂರು ಬೈಯ್ಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಂತರ ಸಿಸಿಬಿ ತನಿಖೆಗೆ ನೀಡಲಾಗಿರುತ್ತದೆ ಎಂದಿದೆ.

ಈ ಪ್ರಕರಣದ ತನಿಖೆಯಲ್ಲಿ ಮೇಲೆ ಹೇಳಿರುವಂತೆ ಘಟನೆಯು ನಡೆದಿದ್ದು ಮೇಲ್ನೋಟಕ್ಕೆ ಕಂಡುಬಂದಿದ್ದು, ಪ್ರಕರಣವನ್ನು ತನಿಖೆಯು ಮುಂದುವರೆದಂತೆ Director General of GST Intelligence, Bengaluru Zonal Unit (Central GST) ಘಟಕಕ್ಕೆ ಸೇರಿದ ಅಧಿಕಾರಿಗಳು ಯಾವುದೇ ಅನುಮೋದನೆ ಇಲ್ಲದೆ ದಾಳಿ ಮಾಡಿರುವುದು ಧೃಡವಾಗಿರುತ್ತದೆ. ಅಲ್ಲದೇ ಹಲವಾರು ವಸ್ತುಗಳನ್ನು ಜಪ್ತಿ ಮಾಡಿರುವುದು ಕಂಡುಬಂದಿರುತ್ತದೆ. ಇಷ್ಟೇ ಅಲ್ಲದೆ ಯಾವುದೇ ಅನುಮತಿ ಇಲ್ಲದೇ 2 ದಿನಗಳ ಕಾಲ ದೂರುದಾರರನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡಿರುವುದು ಕಂಡುಬಂದಿರುತ್ತದೆ ಎಂದು ಹೇಳಿದೆ.

ಅದರಂತೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ 4 ಜನ ಸೆಂಟ್ರಲ್ ಜಿ.ಎಸ್.ಟಿ ಅಧಿಕಾರಿಗಳಾದ

1. Superintendent of Central Tax, South Commissionerate, Bengaluru
Zone.
2. Senior Intelligence Officer, GST Intelligence, Bengaluru Zone.

3. Senior Intelligence Officer, GST Intelligence, Bengaluru Zone.

4. Intelligence Officer, GST Intelligence, Bengaluru Zone.

ಇವರುಗಳನ್ನು ದಿನಾಂಕ. 10.09.2024 ರಂದು ಪತ್ತೆ ಮಾಡಿ ದಸ್ತಗಿರಿ ಮಾಡಲಾಗಿದ್ದು, ಇವರುಗಳ ವಶದಿಂದ ಹಲವಾರು ವಸ್ತುಗಳನ್ನು ಜಪ್ತಿ ಮಾಡಿದ್ದು, ತನಿಖೆಯನ್ನು ಮುಂದುವರೆಸಲಾಗಿದೆ. ಈ ವಿಶೇಷ ಕಾರ್ಯಾಚರಣೆಯನ್ನು ಸಿಸಿಬಿ ಹಾಗೂ ಪೂರ್ವ ವಿಭಾಗದ ಪೊಲೀಸರ ತಂಡವು ಜಂಟಿಯಾಗಿ ಕೈಗೊಂಡಿರುತ್ತಾರೆ ಎಂದು ಬೆಂಗಳೂರು ನಗರ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

‘ಬಿಜೆಪಿ ಸರ್ಕಾರ’ದ ಹಗರಣಗಳ ತನಿಖೆ ಚುರುಕುಗೊಳಿಸಲು ‘ಸಚಿವ ಸಂಪುಟ ಉಪ ಸಮಿತಿ’ ರಚನೆ: ಸಿಎಂ ಸಿದ್ದರಾಮಯ್ಯ

ರಾಹುಲ್ ಗಾಂಧಿ ಮೀಸಲಾತಿ ರದ್ದು ಹೇಳಿಕೆ ವಿವಾದ: ನಾಳೆ ರಾಜ್ಯಾಧ್ಯಂತ ಬಿಜೆಪಿಯಿಂದ ಪ್ರತಿಭಟನೆಗೆ ಕರೆ

ಕೇಂದ್ರ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ : ಈ ದಾಖಲೆಗಳಿದ್ರೆ ಕೂಡಲೇ ಅರ್ಜಿ ಸಲ್ಲಿಸಿ!

Share. Facebook Twitter LinkedIn WhatsApp Email

Related Posts

ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ಹೆಣ ಹೂತಿರೋ ವ್ಯಕ್ತಿಯೇ ಬೇರೆ, ಈಗಿರುವ ಮಾಸ್ಕ್ ಮ್ಯಾನ್ ಬೇರೆ ಎಂದ ಹೊಸ ಸಾಕ್ಷಿದಾರ!

13/08/2025 2:15 PM1 Min Read

BIG NEWS : ಧರ್ಮಸ್ಥಳದಲ್ಲಿ ಹೆಣ ಸಿಗದೇ ಇದ್ರೆ ಅನಾಮಿಕನ ಒದ್ದು ಒಳಗೆ ಹಾಕಿ : ಈರಣ್ಣ ಕಡಾಡಿ ಆಕ್ರೋಶ

13/08/2025 2:13 PM1 Min Read

ಮಕ್ಕಳಿಗೆ `ಗುಡ್ ಟಚ್, ಬ್ಯಾಡ್ ಟಚ್’ ಬಗ್ಗೆ ಪಾಠ : ಶಿಕ್ಷಕಿಯ ವಿಡಿಯೋ ವೈರಲ್ | WATCH VIDEO

13/08/2025 1:51 PM2 Mins Read
Recent News

ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ಹೆಣ ಹೂತಿರೋ ವ್ಯಕ್ತಿಯೇ ಬೇರೆ, ಈಗಿರುವ ಮಾಸ್ಕ್ ಮ್ಯಾನ್ ಬೇರೆ ಎಂದ ಹೊಸ ಸಾಕ್ಷಿದಾರ!

13/08/2025 2:15 PM

BIG NEWS : ಧರ್ಮಸ್ಥಳದಲ್ಲಿ ಹೆಣ ಸಿಗದೇ ಇದ್ರೆ ಅನಾಮಿಕನ ಒದ್ದು ಒಳಗೆ ಹಾಕಿ : ಈರಣ್ಣ ಕಡಾಡಿ ಆಕ್ರೋಶ

13/08/2025 2:13 PM

ಮಕ್ಕಳಿಗೆ `ಗುಡ್ ಟಚ್, ಬ್ಯಾಡ್ ಟಚ್’ ಬಗ್ಗೆ ಪಾಠ : ಶಿಕ್ಷಕಿಯ ವಿಡಿಯೋ ವೈರಲ್ | WATCH VIDEO

13/08/2025 1:51 PM

BREAKING : `UG-CET’ ಛಾಯ್ಸ್ ದಾಖಲಿಸಲು ಪರಿಷ್ಕೃತ ವೇಳಾಪಟ್ಟಿ ಪ್ರಕಟ : ನಾಳೆಯಿಂದ `ವೈದ್ಯಕೀಯ’ ಪ್ರವೇಶ ಆರಂಭ

13/08/2025 1:41 PM
State News
KARNATAKA

ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ಹೆಣ ಹೂತಿರೋ ವ್ಯಕ್ತಿಯೇ ಬೇರೆ, ಈಗಿರುವ ಮಾಸ್ಕ್ ಮ್ಯಾನ್ ಬೇರೆ ಎಂದ ಹೊಸ ಸಾಕ್ಷಿದಾರ!

By kannadanewsnow0513/08/2025 2:15 PM KARNATAKA 1 Min Read

ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಎಸ್ ಐ ಟಿ ಅಧಿಕಾರಿಗಳು ಜೋರಾದ…

BIG NEWS : ಧರ್ಮಸ್ಥಳದಲ್ಲಿ ಹೆಣ ಸಿಗದೇ ಇದ್ರೆ ಅನಾಮಿಕನ ಒದ್ದು ಒಳಗೆ ಹಾಕಿ : ಈರಣ್ಣ ಕಡಾಡಿ ಆಕ್ರೋಶ

13/08/2025 2:13 PM

ಮಕ್ಕಳಿಗೆ `ಗುಡ್ ಟಚ್, ಬ್ಯಾಡ್ ಟಚ್’ ಬಗ್ಗೆ ಪಾಠ : ಶಿಕ್ಷಕಿಯ ವಿಡಿಯೋ ವೈರಲ್ | WATCH VIDEO

13/08/2025 1:51 PM

BREAKING : `UG-CET’ ಛಾಯ್ಸ್ ದಾಖಲಿಸಲು ಪರಿಷ್ಕೃತ ವೇಳಾಪಟ್ಟಿ ಪ್ರಕಟ : ನಾಳೆಯಿಂದ `ವೈದ್ಯಕೀಯ’ ಪ್ರವೇಶ ಆರಂಭ

13/08/2025 1:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.