ಬೆಂಗಳೂರು: ಭಾರತದ ಸ್ವದೇಶಿ ಇ-ಕಾಮರ್ಸ್ ಕಂಪನಿಯಾಗಿರುವ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರಿಗೆ ಗುಣಮಟ್ಟದ ಮತ್ತು ತಾಜಾತನದ ಕೃಷಿ ಉತ್ಪನ್ನಗಳನ್ನು ಒದಗಿಸುತ್ತಿರುವ ರೈತರು ಸೇರಿದಂತೆ ತನ್ನೆಲ್ಲಾ ಪಾಲುದಾರರ ಬೆಳವಣಿಗೆಗೆ ಆದ್ಯತೆ ನೀಡುತ್ತಿರುವ ಕಂಪನಿಯಾಗಿದೆ.
ಇತ್ತೀಚೆಗೆ ಫ್ಲಿಪ್ ಕಾರ್ಟ್ ಗ್ರೂಪ್ ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಮತ್ತು ಫ್ಲಿಪ್ ಕಾರ್ಟ್ ಮಿನಿಟ್ಸ್ ನ ಉಪಾಧ್ಯಕ್ಷ ಕಬೀರ್ ಬಿಸ್ವಾಸ್ ಅವರು ಕರ್ನಾಟಕದ ಮಾಲೂರಿನ ರೈತರನ್ನು ನೇರವಾಗಿ ಭೇಟಿ ಮಾಡಿ ಅವರೊಂದಿಗೆ ಸಂವಾದ ನಡೆಸಿದರು. ಈ ರೈತರು ಪ್ರತಿದಿನ ಬೆಳಗ್ಗೆ ಫ್ಲಿಪ್ ಕಾರ್ಟ್ ಮಿನಿಟ್ಸ್ ಫುಲ್ ಫಿಲ್ಮೆಂಟ್ ಸ್ಟೋರ್ ಗಳಿಗೆ ತಾಜಾತನದ ಹಣ್ಣು ತರಕಾರಿಗಳನ್ನು ಪೂರೈಸುವಲ್ಲಿ ನಿರತರಾಗಿದ್ದು, ಈ ಪ್ರಕ್ರಿಯೆ ಬಗ್ಗೆ ಈ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು.
ಕೃಷಿಯಲ್ಲಿ 17 ವರ್ಷ ಅನುಭವ ಹೊಂದಿರುವ ಕೃಷ್ಣಪ್ಪ ಕ್ಯಾಪ್ಸಿಕಂ, ಸೌತೆಕಾಯಿ ಮತ್ತು ಮೆಣಸಿನಕಾಯಿಯನ್ನು ತಮ್ಮ 4 ಎಕರೆ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಅದೇ ರೀತಿ ಕೃಷಿಕ ಮಹಿಳೆ ಪದ್ಮ ಅವರು ಕೊತ್ತಂಬರಿ, ಮೆಂತ್ಯ ಮತ್ತು ಪಾಲಕ್ ಸೊಪ್ಪನ್ನು ತಮ್ಮ 3 ಎಕರೆ ಜಮೀನಿನಲ್ಲಿ ಕಳೆದ 10 ವರ್ಷದಿಂದ ಬೆಳೆಯುತ್ತಾ ಬಂದಿದ್ದಾರೆ. ಇವರಿಬ್ಬರನ್ನು ಭೇಟಿ ಮಾಡಿದ ಕಲ್ಯಾಣ್ ಅವರು, ಕೃಷಿ ಬೆಳವಣಿಗೆಯಲ್ಲಿ ಫ್ಲಿಪ್ ಕಾರ್ಟ್ ನಿಂದ ಆಗುತ್ತಿರುವ ನೆರವಿನ ಬಗ್ಗೆ ಮಾಹಿತಿಯನ್ನು ಪಡೆದರು.
ಈ ನೇರ ಸಹಭಾಗಿತ್ವವು ಸಣ್ಣ ರೈತರು ತಮ್ಮ ಕೃಷಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೊಂದುವುದರ ಜೊತೆಗೆ ಫ್ಲಿಪ್ ಕಾರ್ಟ್ ಮೂಲಕ ಗ್ರಾಹಕರಿಗೆ ನೇರವಾಗಿ ಗುಣಮಟ್ಟದ ಮತ್ತು ಸಕಾಲದಲ್ಲಿ ತಾಜಾತನದ ತರಕಾರಿಗಳನ್ನು ತಲುಪಿಸುತ್ತಿರುವ ಬಗೆಯನ್ನು ಹಂಚಿಕೊಂಡರು.