Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಮಹಿಳೆಯರೇ `ನೇಲ್ ಪಾಲಿಶ್’ ಹಚ್ಚುತ್ತೀರಾ? ಹಾಗಿದ್ರೆ ಇದನ್ನೊಮ್ಮೆ ತಪ್ಪದೇ ಓದಿ.!

04/02/2026 11:06 AM

‘ಬ್ಯಾಟ್ ಹಿಡಿದುಕೊಳ್ಳಲು ಗೊತ್ತಿಲ್ಲದವರು ಕ್ರಿಕೆಟ್ ಸಂಸ್ಥೆಗಳನ್ನು ನಿರ್ವಹಿಸಬಾರದು’: ಸುಪ್ರೀಂಕೋರ್ಟ್ | Supreme court

04/02/2026 10:47 AM

ರಾಜ್ಯದ ಜನತೆಯ ಗಮನಕ್ಕೆ :`ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

04/02/2026 10:46 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬೆಂಗಳೂರಲ್ಲಿ ‘ಅಕ್ರಮ ಸರ್ಕಾರಿ ಭೂಮಿ’ ಒತ್ತುವರಿದಾರರ ವಿರುದ್ಧ ‘FIR’ ದಾಖಲು
KARNATAKA

BREAKING: ಬೆಂಗಳೂರಲ್ಲಿ ‘ಅಕ್ರಮ ಸರ್ಕಾರಿ ಭೂಮಿ’ ಒತ್ತುವರಿದಾರರ ವಿರುದ್ಧ ‘FIR’ ದಾಖಲು

By kannadanewsnow0922/06/2024 8:33 PM

ಬೆಂಗಳೂರು: ನಗರದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಸರ್ಕಾರಿ ಭೂಮಿ ಒತ್ತುವರಿದಾರರ ವಿರುದ್ಧ ಸಮರ ಸಾರಿದ್ದಾರೆ. ಇಂದು ಅಕ್ರಮ ಸರ್ಕಾರಿ ಭೂ ಒತ್ತುವರಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಿಸಿ ಮುಟ್ಟಿಸಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಕಂದಾಯ ಇಲಾಖೆಯ ಸಚಿವನಾಗಿ ನಾನು ಜವಾಬ್ದಾರಿ ವಹಿಸುತ್ತಿದ್ದಂತೆ ನಿರ್ಧರಿಸಿದ ಮೊದಲ ಕೆಲಸ ಸರ್ಕಾರಿ ಜಮೀನಿನ ಒತ್ತುವರಿ ತೆರವು. ಕಳೆದ ವರ್ಷ 2023ರ ಜೂನ್‌ ತಿಂಗಳ ಮೊದಲ ವಾರವೇ ಇಲಾಖೆಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಒತ್ತುವರಿಯಾಗಿರುವ ಎಲ್ಲಾ ಸರ್ಕಾರಿ ಜಮೀನಿನ ವಿವರವನ್ನು ಕೇಳಲಾಗಿತ್ತು. ಅಲ್ಲದೆ, ಯಾವುದೇ ಭೂ ಮಾಫಿಯಾ ಮರ್ಜಿಗೆ ಒಳಗಾಗದೆ ಅಥವಾ ಬೆದರಿಕೆಗಳಿಗೆ ಬಗ್ಗದೆ ವಾರಾಂತ್ಯಗಳಲ್ಲಿ ಒತ್ತುವರಿ ಕಾರ್ಯಾಚರಣೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಲಾಗಿತ್ತು ಎಂದಿದ್ದಾರೆ.

ಪರಿಣಾಮ ಕಳೆದ ವರ್ಷ ಜೂನ್‌ ತಿಂಗಳಿನಿಂದಲೇ ಬೆಂಗಳೂರು ನಗರ-ಗ್ರಾಮೀಣ ಭಾಗದಲ್ಲಿ ಒತ್ತುವರಿ ತೆರವು ಕೆಲಸ ಆರಂಭಿಸಲಾಗಿತ್ತು. ಅದರಂತೆ ನೂರಾರು ಕೋಟಿ ಮೌಲ್ಯದ ಯಲಹಂಕ ತಾಲ್ಲೂಕು, ಜಾಲ ಹೋಬಳಿ ಕಟ್ಟಿಗೇನಹಳ್ಳಿ ಗ್ರಾಮದ ಸ.ನಂ.28 ರಲ್ಲಿ 13.07 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿರುವುದು ಗಮನಕ್ಕೆ ಬಂದಿತ್ತು. ಈ ಪೈಕಿ ಎರಡು ಎಕರೆ ಜಮೀನನ್ನು ಕೆಲವು ಭ್ರಷ್ಟ ಅಧಿಕಾರಿಗಳು ಈಗಾಗಲೇ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿರುವುದು ಗಮನಕ್ಕೆ ಬಂದಿತ್ತು ಎಂದು ತಿಳಿಸಿದ್ದಾರೆ.

ಕೂಡಲೇ ಈ ಅಕ್ರಮದ ಬಗ್ಗೆ ತನಿಖೆ ನಡೆಸಿ ಈ ಅಕ್ರಮದಲ್ಲಿ ಭಾಗಿಯಾಗಿದ್ದ ವಿಶೇಷ ಜಿಲ್ಲಾಧಿಕಾರಿ, ವಿಶೇಷ ತಹಶೀಲ್ದಾರ್‌ ಸೇರಿದಂತೆ ಸುಮಾರು 18 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು. ಅಲ್ಲದೆ, ಕೂಡಲೇ ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆಗೂ ಅಂಕಿತ ಹಾಕಲಾಗಿತ್ತು ಹೇಳಿದ್ದಾರೆ.

ಯಲಹಂಕ ತಾಲ್ಲೂಕು, ಜಾಲ ಹೋಬಳಿ ಕಟ್ಟಿಗೇನಹಳ್ಳಿ ಗ್ರಾಮದ ಸರ್ವೇ ನಂ.28 ರಲ್ಲಿ ಒತ್ತುವರಿಯಾಗಿದ್ದ 13.07 ಎಕರೆ ಸರ್ಕಾರಿ ಜಮೀನನ್ನೂ ಖಾಸಗಿ ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿತ್ತು. ಈ ಭಾಗದಲ್ಲಿ ಇಂದಿನ ಪ್ರತಿ ಎಕರೆ ಜಮೀನನ ಮಾರುಕಟ್ಟೆ ಮೌಲ್ಯ ಕನಿಷ್ಠ 10 ಕೋಟಿ ರೂಪಾಯಿ ಎಂಬುದು ಉಲ್ಲೇಖಾರ್ಹ. ಹೀಗೆ ವಶಕ್ಕೆ ಪಡೆದಿದ್ದ ಜಮೀನಿನ ರಕ್ಷಣೆಗೆ ರಕ್ಷಣಾ ಗೋಡೆ (ಕಾಂಪೌಂಡ್‌) ನಿರ್ಮಿಸುವ ಕಾರ್ಯಕ್ಕೂ ಸೂಚನೆ ನೀಡಲಾಗಿತ್ತು ಎಂದಿದ್ದಾರೆ.

ಇಲಾಖೆಗೆ ಸೇರಿದ ನೌಕರರು ಕಾಂಪೌಂಡ್ ಗೋಡೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಸಮಯದಲ್ಲಿ ಕೆಲವರು ಇಂಜಿನಿಯರ್‌ ಚಂದ್ರಶೇಖರ್‌ ಅವರ ಮೊಬೈಲ್‌ಗೆ ಕರೆಮಾಡಿ ಕಾಂಪೌಂಡ್‌ ನಿರ್ಮಿಸುವ ಕೆಲಸದಲ್ಲಿ ನಿರತರಾಗಿರುವ ಎಲ್ಲರಿಗೂ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಕೆಎ 50 ಎಂವೈ7177 ಸಂಖ್ಯೆಯ ನೀಲಿ ಬಣ್ಣದ ಟಾಟಾ ಪಂಚ್ ಎಲೆಕ್ಟ್ರಿಕಲ್‌ ಕಾರಿನಲ್ಲಿ ಬಂದು ಸ್ಥಳದಲ್ಲೇ ಪ್ರಾಣ ಬೆದರಿಕೆ ಹಾಕಿ ಹೊಗಿರುತ್ತಾರೆ ಅಂತ ತಿಳಿಸಿದ್ದಾರೆ.

ಭೂ ಮಾಫಿಯಾ ಜನರ ಈ ಗೊಡ್ಡು ಬೆದರಿಗೆ ಜಗ್ಗದ ಇಲಾಖೆ ಸಿಬ್ಬಂದಿಗಳು ಕಾಂಪೌಂಡ್‌ ಗೋಡೆಯನ್ನು ಸಂಪೂರ್ಣವಾಗಿ ನಿರ್ಮಿಸಿದ್ದರು. ಆ ಮೂಲಕ ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ತೋರಿದ್ದರು ಎಂದಿದ್ದಾರೆ.

ಆದರೆ, ದಿನಾಂಕ:22/06/2024 ರಂದು ಬೆಳಗಿನ ಜಾವ ಸುಮಾರು 1:00 ಗಂಟೆಯಿಂದ 4:00 ಗಂಟೆ ವೇಳೆಯಲ್ಲಿ ಸುಮಾರು 40 ರಿಂದ 50 ಜನರ ದುಷ್ಕರ್ಮಿಗಳ ಗುಂಪು ಬೃಹತ್ ಆದ ಕೌಂಪೌಂಡ್ ಗೋಡೆಯನ್ನು ಅಕ್ರಮವಾಗಿ ಧ್ವಂಸಗೊಳಿಸಿ ಸರ್ಕಾರಕ್ಕೆ ಸುಮಾರು ರೂ.1.50 ರಿಂದ 2 ಕೋಟಿ ಹಣ ನಷ್ಟಮಾಡಿರುತ್ತಾರೆ. ಅಲ್ಲದೆ, ಸರ್ಕಾರಿ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಸಕಾರಿ ಜಾಗವನ್ನು ಕಬಳಿಸಲು ಪ್ರಯತ್ನಿಸಿರುತ್ತಾರೆ ಎಂದು ಹೇಳಿದ್ದಾರೆ.

ಹೀಗೆ ನಮ್ಮ ಇಲಾಖೆಯ ಸಿಬ್ಬಂದಿಗಳಿಗೆ ಜೀವ ಬೆದರಿಕೆ ಹಾಕಿದ್ದಲ್ಲದೆ, ದೌರ್ಜನ್ಯವೆಸಗಿ ಸರ್ಕಾರಿ ಜಮೀನಿಗೆ ಅತಿಕ್ರಮಿಸಿ ಕಾಂಪೌಂಡ್‌ ಗೋಡೆಗಳನ್ನೂ ಧ್ವಂಸಗೊಳಿಸಿರುವ ಎಲ್ಲಾ ದುಷ್ಕರ್ಮಿಗಳ ವಿರುದ್ಧ ಇದೀಗ ಅವರ ಛಾಯಾಚಿತ್ರದ ಸಹಿತ ಎಫ್‌ಐಆರ್‌ ದಾಖಲಿಸಲಾಗಿದೆ. ಈ ಮೂಲಕ ಭೂ ಮಾಫಿಯಾವನ್ನು ನಮ್ಮ ಇಲಾಖೆ ಮತ್ತು ಸರ್ಕಾರ ಯಾವ ಕಾಲಕ್ಕೂ ಯಾವ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಸರ್ಕಾರಿ ಜಮೀನನ್ನು ಕಾನೂನು ಬಾಹೀರವಾಗಿ ಅತಿಕ್ರಮಿಸುವವರ ವಿರುದ್ಧ ನಾನು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಎಂದಿಗೂ ಹಿಂಜರಿಯುವ ಮಾತೇ ಇಲ್ಲ ಎಂದು ತಿಳಿಸಿದ್ದಾರೆ.

ಬಳ್ಳಾರಿ: ನಾಳೆ ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

ರಷ್ಯಾಕ್ಕೆ ಶರಣಾಗುವ ಮುನ್ನ ತನ್ನದೇ ಸೈನಿಕನ ಮೇಲೆ ಬಾಂಬ್ ದಾಳಿ ನಡೆಸಿದ ಉಕ್ರೇನ್, ಡ್ರೋನ್ ದಾಳಿಯ ವಿಡಿಯೋ ವೈರಲ್

Share. Facebook Twitter LinkedIn WhatsApp Email

Related Posts

ALERT : ಮಹಿಳೆಯರೇ `ನೇಲ್ ಪಾಲಿಶ್’ ಹಚ್ಚುತ್ತೀರಾ? ಹಾಗಿದ್ರೆ ಇದನ್ನೊಮ್ಮೆ ತಪ್ಪದೇ ಓದಿ.!

04/02/2026 11:06 AM1 Min Read

ರಾಜ್ಯದ ಜನತೆಯ ಗಮನಕ್ಕೆ :`ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

04/02/2026 10:46 AM5 Mins Read

BIG NEWS : ರಾಜ್ಯದಲ್ಲಿ `SSLC’ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಬಿಗ್ ಪ್ಲ್ಯಾನ್ : ಪ್ರತಿ ಸಂಜೆ `ಮೊಬೈಲ್,ಟಿವಿ ಸ್ವಿಚ್ ಆಫ್’ ಟಾಸ್ಕ್.!

04/02/2026 10:24 AM1 Min Read
Recent News

ALERT : ಮಹಿಳೆಯರೇ `ನೇಲ್ ಪಾಲಿಶ್’ ಹಚ್ಚುತ್ತೀರಾ? ಹಾಗಿದ್ರೆ ಇದನ್ನೊಮ್ಮೆ ತಪ್ಪದೇ ಓದಿ.!

04/02/2026 11:06 AM

‘ಬ್ಯಾಟ್ ಹಿಡಿದುಕೊಳ್ಳಲು ಗೊತ್ತಿಲ್ಲದವರು ಕ್ರಿಕೆಟ್ ಸಂಸ್ಥೆಗಳನ್ನು ನಿರ್ವಹಿಸಬಾರದು’: ಸುಪ್ರೀಂಕೋರ್ಟ್ | Supreme court

04/02/2026 10:47 AM

ರಾಜ್ಯದ ಜನತೆಯ ಗಮನಕ್ಕೆ :`ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

04/02/2026 10:46 AM

ಅಮೇರಿಕಾದಾದ್ಯಂತ ಮೊಳಗಿದ ಹಿಂದೂಗಳ ಧ್ವನಿ: 25 ನಗರಗಳಲ್ಲಿ ಬಾಂಗ್ಲಾ ಹಿಂಸಾಚಾರ ವಿರುದ್ಧ ಬೃಹತ್ ರ‍್ಯಾಲಿ!

04/02/2026 10:30 AM
State News
KARNATAKA

ALERT : ಮಹಿಳೆಯರೇ `ನೇಲ್ ಪಾಲಿಶ್’ ಹಚ್ಚುತ್ತೀರಾ? ಹಾಗಿದ್ರೆ ಇದನ್ನೊಮ್ಮೆ ತಪ್ಪದೇ ಓದಿ.!

By kannadanewsnow5704/02/2026 11:06 AM KARNATAKA 1 Min Read

ಸುಂದರವಾಗಿ ಕಾಣಲು ಹುಡುಗಿಯರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅವರು ಕೂದಲಿನಿಂದ ಉಗುರುಗಳವರೆಗೆ ತಮ್ಮ ಸೌಂದರ್ಯವನ್ನ ಕಾಪಾಡಿಕೊಳ್ಳುತ್ತಾರೆ. ಉಗುರುಗಳು ಸುಂದರವಾಗಿ ಕಾಣುವಲ್ಲಿ…

ರಾಜ್ಯದ ಜನತೆಯ ಗಮನಕ್ಕೆ :`ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

04/02/2026 10:46 AM

BIG NEWS : ರಾಜ್ಯದಲ್ಲಿ `SSLC’ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಬಿಗ್ ಪ್ಲ್ಯಾನ್ : ಪ್ರತಿ ಸಂಜೆ `ಮೊಬೈಲ್,ಟಿವಿ ಸ್ವಿಚ್ ಆಫ್’ ಟಾಸ್ಕ್.!

04/02/2026 10:24 AM

BREAKING : ಬೆಂಗಳೂರಲ್ಲಿ ಪೋಷಕರು ಬೈದಿದ್ದಕ್ಕೆ, ಮನೆ ತೊರೆದು ಫ್ರೀ ಬಸ್ ನಲ್ಲಿ ತಿರುಗಿದ ಅಕ್ಕ-ತಮ್ಮ!

04/02/2026 10:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.