ನವದೆಹಲಿ : ನೈಋತ್ಯ ದೆಹಲಿಯ ಸಾಗರ್ಪುರ ಪ್ರದೇಶದಲ್ಲಿ ಮಳೆಯಲ್ಲಿ ಆಟವಾಡುವ ವಿಚಾರದಲ್ಲಿ ನಡೆದ ಜಗಳದಲ್ಲಿ 10 ವರ್ಷದ ಬಾಲಕನನ್ನು ತಂದೆಯೇ ಇರಿದು ಕೊಂದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
40 ವರ್ಷದ ದಿನಗೂಲಿ ಕಾರ್ಮಿಕನಾಗಿರುವ ಆರೋಪಿಯನ್ನ ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳನ್ನ ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತಂದೆಯಿಂದ ಇರಿತಕ್ಕೊಳಗಾಗಿದ್ದ ಮಗುವನ್ನು ದಾಖಲಿಸುವ ಬಗ್ಗೆ ದಾದಾ ದೇವ್ ಆಸ್ಪತ್ರೆಯಿಂದ ಮಧ್ಯಾಹ್ನ 1.30ರ ಸುಮಾರಿಗೆ ಕರೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಆಸ್ಪತ್ರೆಗೆ ತರುವ ವೇಳೆಗೆ ಬಾಲಕ ಸತ್ತಿದ್ದಾನೆಂದು ವೈದ್ಯರು ಘೋಷಿಸಿದರು ಎಂದು ಅವರು ಹೇಳಿದರು.
ಪೊಲೀಸ್ ಹೇಳಿಕೆಯ ಪ್ರಕಾರ, ಬಾಲಕ ತನ್ನ ತಂದೆ ಮತ್ತು ಮೂವರು ಸಹೋದರರೊಂದಿಗೆ ಸಾಗರ್ಪುರದ ಮೋಹನ್ ಬ್ಲಾಕ್’ನಲ್ಲಿರುವ ಒಂದು ಕೋಣೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ.
“ಅವನ ತಾಯಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದು, ಮಕ್ಕಳನ್ನು ತಂದೆ ಮಾತ್ರ ನೋಡಿಕೊಳ್ಳುತ್ತಿದ್ದರು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಳೆಯಲ್ಲಿ ಆಟವಾಡಲು ಹೊರಗೆ ಹೋಗಲು ಬಾಲಕ ಹಟ ಹಿಡಿದಾಗ ಈ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಗಳು ಸೂಚಿಸುತ್ತವೆ ಎಂದು ವರದಿಯಲ್ಲಿ ಸೇರಿಸಲಾಗಿದೆ.
“ತಂದೆ ಎಷ್ಟೇ ಆಕ್ಷೇಪಿಸಿದ್ರು ಮಗು ಕೇಳದೇ ಹಟ ಹಿಡಿದಿದ್ದು, ಕೋಪದಿಂದ ಆ ವ್ಯಕ್ತಿ ಅಡುಗೆಮನೆಯ ಚಾಕುವನ್ನ ತೆಗೆದುಕೊಂಡು ಬಾಲಕನ ಎದೆಗೆ ಇರಿದಿದ್ದಾನೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
SHOCKING: ಹಾಸನದಲ್ಲಿ ಆಟೋ ಚಲಾವಣೆ ವೇಳೆಯೇ ಹೃದಯಾಘಾತದಿಂದ ವ್ಯಕ್ತಿ ಸಾವು: ಇಂದು ಒಂದೇ ದಿನ ನಾಲ್ವರು ಬಲಿ
ಕುವೆಂಪು ವಿವಿಯಲ್ಲಿ 16ನೇ ಸಹ್ಯಾದ್ರಿ ಚಲನಚಿತ್ರೋತ್ಸವ ಆರಂಭ: 5 ದಿನ ಪೂರ್ವ ಏಷ್ಯಾದ ಸಿನಿಮಾ ಪ್ರದರ್ಶನ
ಹೃದಯ ವಿದ್ರಾವಕ ದುರಂತ ; ಕಡಲೆಕಾಯಿ ಕುದಿಸುತ್ತಿದ್ದ ಪಾತ್ರೆಗೆ ಬಿದ್ದು 1 ವರ್ಷದ ಮಗು ದುರ್ಮರಣ