Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜುಬೀನ್ ಗರ್ಗ್ ಸಾವಿನ ತನಿಖೆಗೆ ನ್ಯಾಯಾಂಗ ಆಯೋಗ ರಚನೆ | Zubeen garg death case

04/10/2025 8:31 AM

ರೈತರೇ ಗಮನಿಸಿ : ಬೆಂಬಲ ಬೆಲೆ ಯೋಜನೆಯಡಿ `ರಾಗಿ’ ಖರೀದಿ ನೋಂದಣಿ ಪ್ರಾರಂಭ

04/10/2025 8:31 AM

ಕುರ್ಕುರೆ ಕೊಡಿಸದ ತಾಯಿ ವಿರುದ್ಧ ಪೊಲೀಸರಿಗೆ ದೂರು ನೀಡಿದ 10 ವರ್ಷದ ಬಾಲಕ : ವಿಡಿಯೋ ವೈರಲ್ | WATCH VIDEO

04/10/2025 8:27 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈತರೇ ಗಮನಿಸಿ : ಬೆಂಬಲ ಬೆಲೆ ಯೋಜನೆಯಡಿ `ರಾಗಿ’ ಖರೀದಿ ನೋಂದಣಿ ಪ್ರಾರಂಭ
KARNATAKA

ರೈತರೇ ಗಮನಿಸಿ : ಬೆಂಬಲ ಬೆಲೆ ಯೋಜನೆಯಡಿ `ರಾಗಿ’ ಖರೀದಿ ನೋಂದಣಿ ಪ್ರಾರಂಭ

By kannadanewsnow5704/10/2025 8:31 AM

ಬೆಂಗಳೂರು : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಅಕ್ಟೋಬರ್ 1ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಗದೀಶ.ಜಿ ನಿರ್ದೇಶನ ನೀಡಿದರು.

ಇಂದು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ 2025-26ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಮಾಡುವ ಸಂಬಂಧ ಕರೆಯಲಾಗಿದ್ದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತೀ ಕ್ವಿಂಟಲ್ ರಾಗಿಗೆ 4,886 ರೂ.ಗಳ ಬೆಂಬಲ ಬೆಲೆಯನ್ನು ಸರ್ಕಾರ ನಿಗಧಿಪಡಿಸಿದ್ದು, 2025ರ ಅಕ್ಟೋಬರ್ 01 ರಿಂದ ಡಿಸೆಂಬರ್ 15 2025 ರ ವರೆಗೆ ನೊಂದಣಿ ಕಾರ್ಯ ಕೈಗೊಳ್ಳಲಾಗುವುದು ಹಾಗೂ ಜನವರಿ 01 2026 ರಿಂದ ಮಾರ್ಚ್ 31 2026 ರವರೆಗೆ ರಾಗಿ ಖರೀದಿ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರಂ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ, ಯಲಹಂಕ ಹಾಗೂ ಆನೇಕಲ್ ತಾಲ್ಲೂಕಿನಲ್ಲಿ ರಾಗಿ ಖರೀದಿ ಕೇಂದ್ರವನ್ನು ಮತ್ತು ರಾಗಿ ನೊಂದಣಿ ಕೇಂದ್ರವನ್ನು ತೆರೆಯಲು ಅನುಮತಿಯನ್ನು ನೀಡಲಾಗಿದ್ದು, ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಂದ ನೊಂದಣಿ ಮತ್ತು ಖರೀದಿ ಪ್ರಕ್ರಿಯೆ ಮುಗಿಯುವವರೆಗೂ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶಾಮಿಯಾನ ಮತ್ತ ಚೇರ್ ಹಾಗೂ ಟೇಬಲ್ ಗಳ ವ್ಯವಸ್ಥೆಯನ್ನು ಮಾಡುವಂತೆ ಎ.ಪಿ.ಎಂ.ಸಿ ಅಧಿಕಾರಿಗಳಿಗೆ ಸೂಚಿಸಿದರು.

ಯಲಹಂಕ, ಕೆ.ಆರ್.ಪುರಂ, ಕೆಂಗೇರಿ ಮತ್ತು ಆನೇಕಲ್ ಖರೀದಿ ಕೇಂದ್ರಗಳಿಗೆ ನೋಡಲ್ ಏಜೆನ್ಸಿಯಾದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಕೇಂದ್ರ ಸರ್ಕಾರವು ನಿಗಧಿಪಡಿಸಿರುವ ಮಾನದಂಡಗಳನ್ವಯ ರಾಗಿ ಖರೀದಿ ಹಂತದಲ್ಲಿ ಎಫ್.ಎ ಕ್ಯೂ ಗುಣಮಟ್ಟವನ್ನು ದೃಢೀಕರಿಸಿ ಪ್ರತಿ ಕೇಂದ್ರದಲ್ಲಿ ಮೂರನೇ ವ್ಯಕ್ತಿ ಗುಣಮಟ್ಟವನ್ನು ಪರರೀಕ್ಷಕರನ್ನು ನೇಮಿಸಲು ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ತಿಳಿಸಿದರು.

ರಾಗಿ ನೋಂದಣಿ ಮತ್ತು ಖರೀದಿ ಪ್ರಕ್ರಿಯೆಯನ್ನು ಬಯೋಮೆಟ್ರಿಕ್ ಆಧಾರದಲ್ಲಿಯೇ ಕೈಗೊಳ್ಳಬೇಕು, ರಾಗಿ ಸಂಗ್ರಹಣೆಗೆ ಅಗತ್ಯವಿರುವ ಗುಣಮಟ್ಟದ 775 ಗ್ರಾಂ ತೂಕದ ಹೊಸ ಗೋಣಿಚೀಲಗಳನ್ನು ಖರೀದಿಸಿ ಕೇಂದ್ರದಲ್ಲಿ ಲಭ್ಯವಿರುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಅವಶ್ಯಕತೆ ಇದ್ದಲ್ಲಿ ಹೆಚ್ಚುವರಿಯಾಗಿ ಖರೀದಿಕೇಂದ್ರಗಳನ್ನು ಮತ್ತು ನೊಂದಣಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಿದರು.

ರೈತರಿಗೆ ಅರಿವು ಮೂಡಿಸಲು ಎಲ್ಲಾ ಗ್ರಾಮಪಂಚಾಯ್ತಿಗಳಲ್ಲಿ ಕರಪತ್ರ, ಭಿತ್ತಿಪತ್ರ ಹಾಗೂ ಪತ್ರಿಕಾ ಪ್ರಕಟೆಯನ್ನು ನೀಡುವ ಮೂಲಕ ಮತ್ತು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವ ಮೂಲಕ ವ್ಯಾಪಕ ಪ್ರಚಾರವನ್ನು ಕೈಗೊಂಡು ಹೆಚ್ಚಿನ ಪ್ರಮಾಣದಲ್ಲಿ ರಾಗಿ ಸಂಗ್ರಹಿಸುವ ಕುರಿತು ಕ್ರಮವಹಿಸುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಶಾಂತಗೌಡ, ಕೃಷಿ ಜಂಟಿ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Farmers take note: Registration for purchase of 'Ragi' under the support price scheme has begun
Share. Facebook Twitter LinkedIn WhatsApp Email

Related Posts

ಗಮನಿಸಿ : ನಿಮ್ಮ ಕನ್ನಡಕದ ಮೇಲೆ ಗೀರುಗಳಿದ್ರೆ ಹೀಗೆ ಮಾಡಿ ಸೆಕೆಂಡುಗಳಲ್ಲಿ ಮಾಯವಾತ್ತೆ.!

04/10/2025 8:18 AM1 Min Read

ರಾಜ್ಯದಲ್ಲೊಂದು ಅಪರೂಪದ ಕೇಸ್ : ನವಜಾತ ಮಗುವಿನೊಳಗೊಂದು `ಮಗು’ ಪತ್ತೆ.!

04/10/2025 8:03 AM1 Min Read

Post Office Scheme: ನಿಮ್ಮ ಪತ್ನಿಯ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ 1 ಲಕ್ಷ ರೂ. `ಠೇವಣಿ’ ಇಟ್ಟರೆ 2 ವರ್ಷಗಳಲ್ಲಿ ಸಿಗಲಿದೆ ಇಷ್ಟು ಹಣ.!

04/10/2025 7:48 AM2 Mins Read
Recent News

ಜುಬೀನ್ ಗರ್ಗ್ ಸಾವಿನ ತನಿಖೆಗೆ ನ್ಯಾಯಾಂಗ ಆಯೋಗ ರಚನೆ | Zubeen garg death case

04/10/2025 8:31 AM

ರೈತರೇ ಗಮನಿಸಿ : ಬೆಂಬಲ ಬೆಲೆ ಯೋಜನೆಯಡಿ `ರಾಗಿ’ ಖರೀದಿ ನೋಂದಣಿ ಪ್ರಾರಂಭ

04/10/2025 8:31 AM

ಕುರ್ಕುರೆ ಕೊಡಿಸದ ತಾಯಿ ವಿರುದ್ಧ ಪೊಲೀಸರಿಗೆ ದೂರು ನೀಡಿದ 10 ವರ್ಷದ ಬಾಲಕ : ವಿಡಿಯೋ ವೈರಲ್ | WATCH VIDEO

04/10/2025 8:27 AM

ಗಮನಿಸಿ : ನಿಮ್ಮ ಕನ್ನಡಕದ ಮೇಲೆ ಗೀರುಗಳಿದ್ರೆ ಹೀಗೆ ಮಾಡಿ ಸೆಕೆಂಡುಗಳಲ್ಲಿ ಮಾಯವಾತ್ತೆ.!

04/10/2025 8:18 AM
State News
KARNATAKA

ರೈತರೇ ಗಮನಿಸಿ : ಬೆಂಬಲ ಬೆಲೆ ಯೋಜನೆಯಡಿ `ರಾಗಿ’ ಖರೀದಿ ನೋಂದಣಿ ಪ್ರಾರಂಭ

By kannadanewsnow5704/10/2025 8:31 AM KARNATAKA 2 Mins Read

ಬೆಂಗಳೂರು : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಅಕ್ಟೋಬರ್ 1ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಅಗತ್ಯ…

ಗಮನಿಸಿ : ನಿಮ್ಮ ಕನ್ನಡಕದ ಮೇಲೆ ಗೀರುಗಳಿದ್ರೆ ಹೀಗೆ ಮಾಡಿ ಸೆಕೆಂಡುಗಳಲ್ಲಿ ಮಾಯವಾತ್ತೆ.!

04/10/2025 8:18 AM

ರಾಜ್ಯದಲ್ಲೊಂದು ಅಪರೂಪದ ಕೇಸ್ : ನವಜಾತ ಮಗುವಿನೊಳಗೊಂದು `ಮಗು’ ಪತ್ತೆ.!

04/10/2025 8:03 AM

Post Office Scheme: ನಿಮ್ಮ ಪತ್ನಿಯ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ 1 ಲಕ್ಷ ರೂ. `ಠೇವಣಿ’ ಇಟ್ಟರೆ 2 ವರ್ಷಗಳಲ್ಲಿ ಸಿಗಲಿದೆ ಇಷ್ಟು ಹಣ.!

04/10/2025 7:48 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.