Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬಿಹಾರ ಚುನಾವಣೆಯಲ್ಲಿ ಮತ ಕಳ್ಳತನ ಆರೋಪ : 42 ಶಾಸಕರಿಗೆ ಹೈಕೋರ್ಟ್ ನೋಟಿಸ್

19/02/2026 2:51 PM

BREAKING : ಕೆಲಸ ಬಿಟ್ಟು ಮುಷ್ಕರಕ್ಕೆ ಇಳಿದ ‘KSRTC’ ನೌಕರರಿಗೆ ಬಿಗ್ ಶಾಕ್ : ‘ ನೋ ವರ್ಕ್ ನೋ ವೆಜೆಸ್’ ಜಾರಿ

19/02/2026 2:27 PM

ಉಚಿತ ಗ್ಯಾರಂಟಿ’ಗಳು ಆರ್ಥಿಕ ಅಭಿವೃದ್ಧಿಗೆ ಅಡ್ಡಿ : ಸುಪ್ರೀಂಕೋರ್ಟ್ ಸರ್ಕಾರಗಳಿಗೆ ಚಾಟಿ

19/02/2026 1:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭೂ ನ್ಯಾಯಮಂಡಳಿ ಸಭೆ ಮುಂದೂಡಿಕೆಗೆ ರೈತರ ಆಕ್ರೋಶ: ಸಾಗರ ಎಸಿಗೆ ಮನವಿ
KARNATAKA

ಭೂ ನ್ಯಾಯಮಂಡಳಿ ಸಭೆ ಮುಂದೂಡಿಕೆಗೆ ರೈತರ ಆಕ್ರೋಶ: ಸಾಗರ ಎಸಿಗೆ ಮನವಿ

By kannadanewsnow0924/02/2025 11:44 AM

ಶಿವಮೊಗ್ಗ: ಸಾಗರ ತಾಲ್ಲೂಕು ಆಡಳಿತದಿಂದ ರೈತರ ಜೊತೆಗೆ ಚೆಲ್ಲಾಟ ಎನ್ನುವಂತೆ ಪದೇ ಪದೇ ಭೂ ನ್ಯಾಯ ಮಂಡಳಿ ಸಭೆ ಮುಂದೂಡಿಕೆ ಮಾಡಲಾಗುತ್ತಿದೆ. ಕೂಡಲೇ ಸಭೆ ನಡೆಸಿ ರೈತರ ಸಮಸ್ಯೆ ಪರಿಹರಿಸುವ ಕೆಲಸ ಮಾಡುವಂತೆ ಸಾಗರ ತಾಲ್ಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ.ಇ ಒತ್ತಾಯಿಸಿದರು.

ಇಂದು ಸಾಗರದ ಉಪ ವಿಭಾಗೀಯ ಅಧಿಕಾರಿಗಳ ಕಚೇರಿ ಬಳಿ ಸಾಗರ ತಾಲ್ಲೂಕು ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ ಎಸಿಗೆ ಮನವಿ ಪತ್ರವನ್ನು ನೀಡಲಾಯಿತು.

ಈ ವೇಳೆ ಮಾತನಾಡಿದಂತ ಅವರು, ಭೂ ನ್ಯಾಯ ಮಂಡಳಿ ಸ್ಥಾಪನೆಯಾಗಿ 4 ತಿಂಗಳು ಕಳೆಯುತ್ತಿದೆ. ರೈತರ ಸಮಸ್ಯೆ ಇತ್ಯರ್ಥ ಪಡಿಸಲು ನಾಲ್ಕು ಬಾರಿ ಸಭೆ ಕರೆಯಲಾಗಿತ್ತು. ಆದರೆ ಒಂದು ಸಭೆ ನಡೆಸದೇ ಪದೇ ಪದೇ ಮುಂದೂಡಿಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಜನವರಿಯಿಂದ ಫೆಬ್ರವರಿ ವರೆಗೆ ನಾಲ್ಕು ಸಭೆ ನಿಗದಿ ಮಾಡಲಾಗಿತ್ತು. ಸಂಬಂಧಪಟ್ಟ ರೈತರಿಗೂ ನೋಟಿಸ್ ನೀಡಲಾಗಿತ್ತು. ತಮ್ಮ ಸಮಸ್ಯೆ ಇತ್ಯರ್ಥಕ್ಕೆ ಸಭೆಗೆ ಬರುವಂತೆ ನೋಟಿಸ್ ನಲ್ಲಿ ತಿಳಿಸಲಾಗಿತ್ತು. ಆದರೆ ನಿಗದಿತ ದಿನಾಂಕದಂದು ಸಾಗರ ತಾಲ್ಲೂಕು ಕೇಂದ್ರಕ್ಕೆ ರೈತರು ಆಗಮಿಸಿದರೇ ಸಭೆ ರದ್ದು ಮಾಡಲಾಗಿದೆ ಅಂತ ತಿಳಿಸಿದ್ದಾರೆ. ಇದರಿಂದ ರೈತರು ಸಾಗರ ತಾಲ್ಲೂಕು ಕಚೇರಿಗೆ ಅಲೆದಾಡೋದೇ ಆಗಿದೆ ಎಂದರು.

ಮುಂದಿನ ಭೂ ನ್ಯಾಯ ಮಂಡಳಿ ಸಭೆಗಳನ್ನು ಬೇಗ ನಡೆಸಬೇಕು. ದಿನಾಂಕ ನಿಗದಿ ಮಾಡಿ, ರೈತರ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಕೆಲಸ ಮಾಡಬೇಕು. ಗೇಣಿದಾರರೂ ಹಾಲಿ ಸಾಗುವಳಿದಾರರು, ಸ್ವಾಧೀನಾನುಭವ ವಿಸ್ತೀರ್ಣಕ್ಕೆ ಪಹಣಿ ಪರಿಷ್ಕೃತ ಹಕ್ಕು ಪತ್ರದ ಜೊತೆಗೆ ಮಂಜೂರಾತಿ ಪತ್ರ ನೀಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಮಚಂದ್ರ ಸೂರನಗದ್ದೆ, ಸತ್ಯನಾರಾಯಣ ಕೆಳದಿ, ನಾಗರಾಜ್, ಸುರೇಶ್ ಟಿ.ಹೆಚ್, ಮಂಜಪ್ಪ, ದ್ಯಾಮಪ್ಪ, ಲಕ್ಷಣ, ಕರಿಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ

Share. Facebook Twitter LinkedIn WhatsApp Email

Related Posts

BREAKING : ಕೆಲಸ ಬಿಟ್ಟು ಮುಷ್ಕರಕ್ಕೆ ಇಳಿದ ‘KSRTC’ ನೌಕರರಿಗೆ ಬಿಗ್ ಶಾಕ್ : ‘ ನೋ ವರ್ಕ್ ನೋ ವೆಜೆಸ್’ ಜಾರಿ

19/02/2026 2:27 PM1 Min Read

ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್‌ಗೆ ಮುಂಬಡ್ತಿ ವಿಚಾರ : ಸ್ನೇಹಮಯಿ ಕೃಷ್ಣಗೆ ಪತ್ರದ ಮೂಲಕ ಸ್ಪಷ್ಟನೆ ನೀಡಿದ ಸಿ ಎಸ್ ಶಾಲಿನಿ ರಜನೀಶ್

19/02/2026 1:43 PM1 Min Read

ALERT : ಮಹಿಳೆಯರೇ ಎಚ್ಚರ : ಅತಿಯಾಗಿ ಬೇಯಿಸುವ ಈ 7 ಆಹಾರಗಳಲ್ಲಿ `ಕ್ಯಾನ್ಸರ್’ ಅಪಾಯ ಹೆಚ್ಚಳ!

19/02/2026 1:31 PM2 Mins Read
Recent News

BREAKING : ಬಿಹಾರ ಚುನಾವಣೆಯಲ್ಲಿ ಮತ ಕಳ್ಳತನ ಆರೋಪ : 42 ಶಾಸಕರಿಗೆ ಹೈಕೋರ್ಟ್ ನೋಟಿಸ್

19/02/2026 2:51 PM

BREAKING : ಕೆಲಸ ಬಿಟ್ಟು ಮುಷ್ಕರಕ್ಕೆ ಇಳಿದ ‘KSRTC’ ನೌಕರರಿಗೆ ಬಿಗ್ ಶಾಕ್ : ‘ ನೋ ವರ್ಕ್ ನೋ ವೆಜೆಸ್’ ಜಾರಿ

19/02/2026 2:27 PM

ಉಚಿತ ಗ್ಯಾರಂಟಿ’ಗಳು ಆರ್ಥಿಕ ಅಭಿವೃದ್ಧಿಗೆ ಅಡ್ಡಿ : ಸುಪ್ರೀಂಕೋರ್ಟ್ ಸರ್ಕಾರಗಳಿಗೆ ಚಾಟಿ

19/02/2026 1:44 PM

ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್‌ಗೆ ಮುಂಬಡ್ತಿ ವಿಚಾರ : ಸ್ನೇಹಮಯಿ ಕೃಷ್ಣಗೆ ಪತ್ರದ ಮೂಲಕ ಸ್ಪಷ್ಟನೆ ನೀಡಿದ ಸಿ ಎಸ್ ಶಾಲಿನಿ ರಜನೀಶ್

19/02/2026 1:43 PM
State News
KARNATAKA

BREAKING : ಕೆಲಸ ಬಿಟ್ಟು ಮುಷ್ಕರಕ್ಕೆ ಇಳಿದ ‘KSRTC’ ನೌಕರರಿಗೆ ಬಿಗ್ ಶಾಕ್ : ‘ ನೋ ವರ್ಕ್ ನೋ ವೆಜೆಸ್’ ಜಾರಿ

By kannadanewsnow0519/02/2026 2:27 PM KARNATAKA 1 Min Read

ಹುಬ್ಬಳ್ಳಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್ಟಿಸಿ ನೌಕರರು ಮುಷ್ಕರಕ್ಕೆ ಇಳಿದಿದ್ದಾರೆ. ಇದೀಗ ಕೆಲಸ ಬಿಟ್ಟು ಮುಷ್ಕರಕ್ಕೆ ಹೇಳಿದವರ…

ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್‌ಗೆ ಮುಂಬಡ್ತಿ ವಿಚಾರ : ಸ್ನೇಹಮಯಿ ಕೃಷ್ಣಗೆ ಪತ್ರದ ಮೂಲಕ ಸ್ಪಷ್ಟನೆ ನೀಡಿದ ಸಿ ಎಸ್ ಶಾಲಿನಿ ರಜನೀಶ್

19/02/2026 1:43 PM

ALERT : ಮಹಿಳೆಯರೇ ಎಚ್ಚರ : ಅತಿಯಾಗಿ ಬೇಯಿಸುವ ಈ 7 ಆಹಾರಗಳಲ್ಲಿ `ಕ್ಯಾನ್ಸರ್’ ಅಪಾಯ ಹೆಚ್ಚಳ!

19/02/2026 1:31 PM

BREAKING : ಬೆಂಗಳೂರು ಏರ್​ಪೋರ್ಟ್​ನಲ್ಲಿ ಪ್ರಯಾಣಿಕನ ಬ್ಯಾಗ್​ನಲ್ಲಿ 23.88 ಕೋಟಿ ಮೌಲ್ಯದ ಕೊಕೇನ್ ಪತ್ತೆ : ಆರೋಪಿ ಅರೆಸ್ಟ್!

19/02/2026 1:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.