ಧಾರವಾಡ: ಯೂರಿಯಾ ಗೊಬ್ಬರವು ಬೆಳೆಗಳಿಗೆ ಎಷ್ಟು ಮುಖ್ಯವೋ ಅತೀಯಾದ ಬಳಕೆ ಅμÉ್ಟೀ ಹಾನಿಕಾರಕ. ಇದರಿಂದ ಬೆಳೆ ಮತ್ತು ಮಣ್ಣಿನ ಮೇಲೆ ಕೆಲವು ಋಣಾತ್ಮಕ ಪರಿಣಾಮಗಳು ಉಂಟಾಗಬಹುದು. ಮುಖ್ಯವಾಗಿ, ಯೂರಿಯಾ ಮಣ್ಣಿನಲ್ಲಿ ಹೈಡ್ರಾಲಿಸಿಸ್ ಆಗಿ ಅಮೋನಿಯಾವನ್ನು ಬಿಡುಗಡೆ ಮಾಡುತ್ತದೆ, ಇದು ಬೀಜ ಮತ್ತು ಬೇರುಗಳಿಗೆ ಹಾನಿಕಾರಕವಾಗಿದೆ. ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಬಹುದು ಮತ್ತು ಪರಿಸರ ಮಾಲಿನ್ಯ ಉಂಟಾಗಬಹುದು.
ಮಣ್ಣಿನ ಮೇಲೆ ಪರಿಣಾಮ: ಯೂರಿಯಾ ಮಣ್ಣಿನಲ್ಲಿ ಹೈಡ್ರಾಲಿಸಿಸ್ ಆಗಿ ಅಮೋನಿಯಾವನ್ನು ಬಿಡುಗಡೆ ಮಾಡುತ್ತದೆ, ಇದು ಮಣ್ಣಿನ ಪಿಎಚ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಸಸ್ಯಗಳಿಗೆ ಹಾನಿಕಾರಕವಾಗಬಹುದು ಮತ್ತು ಮಣ್ಣಿನ ರಚನೆ ಹಾಳಾಗಿ, ಮಣ್ಣಿನ ಆರೋಗ್ಯ ಹದಗೆಡುತ್ತದೆ.
ಅತಿಯಾದ ಯೂರಿಯಾ ಬಳಕೆಯು ಮಣ್ಣಿನ ಸೂಕ್ಷ್ಮಜೀವಿಗಳ ಮೇಲೆ ಪರಿಣಾಮ ಬೀರಬಹುದು ಮತ್ತು ದೀರ್ಘಾವಧಿಯಲ್ಲಿ ಮಣ್ಣಿನ ಫಲವತ್ತತೆಯನ್ನು ಕಡಿಮೆ ಮಾಡಬಹುದು.
ಬೆಳೆಗಳ ಮೇಲೆ ಪರಿಣಾಮ: ಅತೀಯಾದ ಯೂರಿಯಾ ಬಳಕೆಯಿಂದ ಬೆಳೆಗಳು ಸಸ್ಯ ಬೆಳವಣಿಗೆ ಹೆಚ್ಚಾಗಿ ರಸ ಹೀರುವ ಕೀಟ ಹಾಗೂ ಮುಂತಾದ ಕೀಟ ಮತ್ತು ರೋಗ ಭಾಧೆಗಳಿಗೆ ತುತ್ತಾಗಬಹುದು. ಸಸಿಗಳು ಗಟ್ಟಿಯಾಗಿ ನಿಲ್ಲುವ ಸಾಮಥ್ರ್ಯ ಕಳೆದುಕೊಳ್ಳುತ್ತವೆ ಮತ್ತು ನೆಲಕ್ಕೆ ಬಾಗಿ ಕಾಳು ಕಟ್ಟುವ ಪ್ರಕ್ರಿಯೆಯಲ್ಲಿ ಅಡಚಣೆ ಉಂಟಾಗುತ್ತದೆ. ಯೂರಿಯಾ ಗೊಬ್ಬರವನ್ನು ಬೀಜ ಮತ್ತು ಸಸಿಗಳ ಬೇರುಗಳ ಹತ್ತಿರದಲ್ಲಿ ಹಾಕಿದಾಗ ಅಮೋನಿಯಾ ಸಾಂದ್ರತೆಯು ಹೆಚ್ಚಾಗಿ ಬೀಜ ಮತ್ತು ಸಸಿಗಳ ಬೇರುಗಳಿಗೆ ವಿಷಕಾರಿಯಾಗಬಹುದು.
ಪರಿಸರ ಮಾಲಿನ್ಯ: ಯೂರಿಯಾ ಮಣ್ಣಿನಲ್ಲಿ ಕರಗಿದಾಗ, ಅಮೋನಿಯಾ ಅನಿಲವಾಗಿ ಗಾಳಿಯಲ್ಲಿ ಬಿಡುಗಡೆಯಾಗಿ ಹೆಚ್ಚು ಸಾರಜನಕಾಂಶ ಸಂಗ್ರಹವಾಗಬಹುದು, ಇದು ನೀರು ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗಿ ವಾತಾವರಣವನ್ನು ಕಲುಷಿತಗೊಳಿಸುತ್ತದೆ. ಯೂರಿಯಾ ಗೊಬ್ಬರವನ್ನು ಎಚ್ಚರಿಕೆಯಿಂದ ಮತ್ತು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಬಳಸುವುದು ಮುಖ್ಯವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೊಡ್ಡರಂಗೇಗೌಡ ಆರೋಗ್ಯ ವಿಚಾರಿಸಿದ ಸಚಿವ ಶಿವರಾಜ ತಂಗಡಗಿ: ವೈದ್ಯಕೀಯ ವೆಚ್ಚ ಸರ್ಕಾರವೇ ಭರಿಸುವುದಾಗಿ ಘೋಷಣೆ