Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇದುವರೆಗೂ ನನ್ನ ರಾಹುಲ್ ಗಾಂಧಿ ಕರೆದಿಲ್ಲ, ಸದ್ಯಕ್ಕೆ ದೆಹಲಿಗೆ ಹೋಗಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

06/05/2026 2:11 PM

ಚಿನ್ನದ ವ್ಯಾಪಾರದಲ್ಲಿ ಹೊಸ ಕ್ರಾಂತಿ: `NSE’ಯಿಂದ ‘ಎಲೆಕ್ಟ್ರಾನಿಕ್ ಗೋಲ್ಡ್ ರಶೀದಿ’ ಬಿಡುಗಡೆ

06/05/2026 1:45 PM

ಓಪನ್ ಮಾಡಿದ `ಎಣ್ಣೆ ಬಾಟಲಿ’ ಎಷ್ಟು ದಿನಗಳಲ್ಲಿ ಖಾಲಿ ಮಾಡಬೇಕು? `ಮದ್ಯ’ ಪ್ರಿಯರು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ.!

06/05/2026 1:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದಲ್ಲಿ ‘ತಾಲ್ಲೂಕು ಕಚೇರಿ’ಯಲ್ಲೇ ‘ನಕಲಿ ದಾಖಲೆ ಸೃಷ್ಠಿ ಜಾಲ’ ಪತ್ತೆ: ಆರು ಮಂದಿ ವಿರುದ್ಧ ‘FIR’ ದಾಖಲು
KARNATAKA

BIG NEWS: ರಾಜ್ಯದಲ್ಲಿ ‘ತಾಲ್ಲೂಕು ಕಚೇರಿ’ಯಲ್ಲೇ ‘ನಕಲಿ ದಾಖಲೆ ಸೃಷ್ಠಿ ಜಾಲ’ ಪತ್ತೆ: ಆರು ಮಂದಿ ವಿರುದ್ಧ ‘FIR’ ದಾಖಲು

By kannadanewsnow0920/03/2026 3:20 PM

ಶಿವಮೊಗ್ಗ: ರಾಜ್ಯದಲ್ಲಿ ತಾಲ್ಲೂಕು ಕಚೇರಿಯಲ್ಲೇ ನಕಲಿ ದಾಖಲೆ ಸೃಷ್ಠಿ ಮಾಡುತ್ತಿದ್ದಂತ ಜಾಲವೊಂದು ಪತ್ತೆಯಾಗಿದೆ.  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕಛೇರಿಯಲ್ಲಿ ಭೂ ಸುರಕ್ಷಾ ಯೋಜನೆಯಡಿ ನಡೆಯುತ್ತಿರುವ ಕಂದಾಯ ದಾಖಲೆಗಳ ಗಣಕೀಕರಣ ಕಾರ್ಯದಲ್ಲಿ ನಕಲಿ ದಾಖಲೆಗಳನ್ನು ಸೇರಿಸಲು ಯತ್ನಿಸಿದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ತಹಶೀಲ್ದಾರ್ ರಶ್ಮಿ ಅವರು ನೀಡಿದ ದೂರಿನ ಮೇರೆಗೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ: ದಿನಾಂಕ 18-03-2026 ರಂದು ಮಧ್ಯಾಹ್ನ ತಾಲೂಕು ಕಛೇರಿಯಲ್ಲಿ ಗಣಕೀಕರಣ ಕಾರ್ಯ ನಡೆಯುತ್ತಿದ್ದಾಗ, ಚುನಾವಣಾ ಶಿರಸ್ತೇದಾರರಾದ ರಾಮಾಂಜನೇಯ ಅವರು ಮೂರು ದರಖಾಸ್ತು ಮಂಜೂರಾತಿ ಕಡತಗಳನ್ನು ಅನಧಿಕೃತವಾಗಿ ಡಾಟಾ ಎಂಟ್ರಿ ಆಪರೇಟರ್‌ಗಳ ಮೂಲಕ ಸ್ಕ್ಯಾನ್ ಮಾಡಿಸಿ ಕಂಪ್ಯೂಟರ್‌ಗೆ ಸೇರಿಸಲು ಮುಂದಾಗಿದ್ದರು. ಈ ಕಡತಗಳು ನಕಲಿ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅವರು ವಿಚಾರಣೆ ನಡೆಸಿದಾಗ ದೊಡ್ಡ ಹಗರಣವೊಂದು ಬಯಲಾಗಿದೆ.

ತನಿಖೆಯಲ್ಲಿ ಬಯಲಾದ ಅಂಶಗಳು:

  • ಲಂಚದ ಆಮಿಷ: ಭೂಮಾಪನ ಇಲಾಖೆಯ ಜವಾನ ಅವಿನಾಶ್ ಎಂಬುವವರು ಈ ನಕಲಿ ಕಡತಗಳನ್ನು ನೀಡಿದ್ದರು. ವಿಚಾರಣೆ ವೇಳೆ ಅವರು, ಸಾಗರದ ವಕೀಲರಾದ ಷಣ್ಮುಖ ಎಂಬುವವರು ಈ ನಕಲಿ ದಾಖಲೆಗಳನ್ನು ನೈಜ ಕಡತಗಳ ಜೊತೆ ಸೇರಿಸಲು ತನಗೆ 2 ಲಕ್ಷ ರೂಪಾಯಿ ಹಣ ನೀಡಿದ್ದರು ಎಂದು ಒಪ್ಪಿಕೊಂಡಿದ್ದಾರೆ.
  • ಹಣ ಅಮಾನತ್ತು: ಆರೋಪಿಗಳ ಹೇಳಿಕೆಯ ಮೇರೆಗೆ ಕಾರೊಂದರ (ಬ್ರೆಜಾ ಸಂಖ್ಯೆ KA 15 P 5706) ಡ್ಯಾಶ್‌ಬೋರ್ಡ್‌ನಲ್ಲಿ ಇರಿಸಲಾಗಿದ್ದ ₹1,75,000 ನಗದನ್ನು ಪೊಲೀಸರು ಪಂಚನಾಮೆಯ ಮೂಲಕ ವಶಪಡಿಸಿಕೊಂಡಿದ್ದಾರೆ.
  • ನಕಲಿ ಕಡತಗಳು: ಚನ್ನಶೆಟ್ಟಿಕೊಪ್ಪ ಮತ್ತು ಹಿರೇಮನೆ ಗ್ರಾಮಗಳಿಗೆ ಸಂಬಂಧಿಸಿದ ಸುಮಾರು 66 ಪುಟಗಳ ನಕಲಿ ಮಂಜೂರಾತಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಆರೋಪಿಗಳ ಮೇಲೆ ಸಾಗರ ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲು:

ಈ ಪ್ರಕರಣ ಸಂಬಂಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಎ1 ಆರೋಪಿಯಾಗಿ ಸಾಗರ ತಹಶೀಲ್ದಾರ್ ಕಚೇರಿಯ ಶಿರೇಸ್ತೇದಾರರಾದಂತ ರಾಮಾಂಜನೇಯ, ಎ2 ಆರೋಪಿಯಾಗಿ ಜವಾನ ಅವಿನಾಶ್ ಎನ್ ಎಂ, ಎ3 ಆರೋಪಿಯಾಗಿ ವಕೀಲ ಷಣ್ಮುಖ, ಎ4 ಆರೋಪಿಯಾಗಿ ಹರಟೆ ಧರ್ಮಪ್ಪ, ಎ5 ಆರೋಪಿಯಾಗಿ ಲಕ್ಷ್ಮಣ ಪೂಜಾರಿ ಹಾಗೂ ಎ6 ಆರೋಪಿಯಾಗಿ ಹಾಲಮ್ಮ ಎಂಬುವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ವಿವಿಧ ಸೆಕ್ಷನ್‌ಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. 

ಒಟ್ಟಾರೆಯಾಗಿ ರಾಜ್ಯದಲ್ಲೊಂದು ತಾಲ್ಲೂಕು ಕಚೇರಿಯಲ್ಲೇ ಬೃಹತ್ ನಕಲಿ ದಾಖಲೆ ಸೃಷ್ಠಿಸುವಂತ ಪ್ರಕರಣವೊಂದು ಬೆಳಕಿಗೆ ಬಂದಿದೆ. ತಹಶೀಲ್ದಾರ್ ಕಚೇರಿಯಲ್ಲೇ ಹೀಗೆ ನಕಲಿ ದಾಖಲೆ ಸೃಷ್ಠಿಸೋ ಕೆಲಸ ಆದ್ರೇ, ಇನ್ನೂ ಜನಸಾಮಾನ್ಯರ ಪಾಡೇನು ಎಂಬ ಯಕ್ಷಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

ಜಾಗತಿಕ ತೈಲ-ಅನಿಲ ಬಿಕ್ಕಟ್ಟು: ಅಗತ್ಯ ಸರಕುಗಳ ಕಾಯ್ದೆಯಡಿ ಕಠಿಣ ಕ್ರಮಕ್ಕೆ ಮುಂದಾದ ಭಾರತ ಸರ್ಕಾರ

BREAKING : ಉಪಚುನಾವಣೆ ಕಾವು : ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ತಾಯಿಯೊಂದಿಗೆ ಬಂದು ನಾಮಪತ್ರ ಸಲ್ಲಿಸಿದ ಸಮರ್ಥ

ತೆರಿಗೆದಾರರೇ ಗಮನಿಸಿ: ಏಪ್ರಿಲ್ 1ರಿಂದ ಹೊಸ ‘ಆದಾಯ ತೆರಿಗೆ ನಿಯಮ 2026’ ಜಾರಿ; ಸರ್ಕಾರದ ಅಧಿಕೃತ ಅಧಿಸೂಚನೆ ಪ್ರಕಟ

Share. Facebook Twitter LinkedIn WhatsApp Email

Related Posts

ಇದುವರೆಗೂ ನನ್ನ ರಾಹುಲ್ ಗಾಂಧಿ ಕರೆದಿಲ್ಲ, ಸದ್ಯಕ್ಕೆ ದೆಹಲಿಗೆ ಹೋಗಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

06/05/2026 2:11 PM1 Min Read

ಓಪನ್ ಮಾಡಿದ `ಎಣ್ಣೆ ಬಾಟಲಿ’ ಎಷ್ಟು ದಿನಗಳಲ್ಲಿ ಖಾಲಿ ಮಾಡಬೇಕು? `ಮದ್ಯ’ ಪ್ರಿಯರು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ.!

06/05/2026 1:13 PM2 Mins Read

GOOD NEWS : ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್ : ಶೀಘ್ರವೇ ‘BMTC’ ಬಸ್ ನಲ್ಲಿ ಪ್ರಿಪೇಯ್ಡ್ ಕಾರ್ಡ್ ಸೌಲಭ್ಯ!

06/05/2026 1:01 PM1 Min Read
Recent News

ಇದುವರೆಗೂ ನನ್ನ ರಾಹುಲ್ ಗಾಂಧಿ ಕರೆದಿಲ್ಲ, ಸದ್ಯಕ್ಕೆ ದೆಹಲಿಗೆ ಹೋಗಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

06/05/2026 2:11 PM

ಚಿನ್ನದ ವ್ಯಾಪಾರದಲ್ಲಿ ಹೊಸ ಕ್ರಾಂತಿ: `NSE’ಯಿಂದ ‘ಎಲೆಕ್ಟ್ರಾನಿಕ್ ಗೋಲ್ಡ್ ರಶೀದಿ’ ಬಿಡುಗಡೆ

06/05/2026 1:45 PM

ಓಪನ್ ಮಾಡಿದ `ಎಣ್ಣೆ ಬಾಟಲಿ’ ಎಷ್ಟು ದಿನಗಳಲ್ಲಿ ಖಾಲಿ ಮಾಡಬೇಕು? `ಮದ್ಯ’ ಪ್ರಿಯರು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ.!

06/05/2026 1:13 PM

GOOD NEWS : ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್ : ಶೀಘ್ರವೇ ‘BMTC’ ಬಸ್ ನಲ್ಲಿ ಪ್ರಿಪೇಯ್ಡ್ ಕಾರ್ಡ್ ಸೌಲಭ್ಯ!

06/05/2026 1:01 PM
State News
KARNATAKA

ಇದುವರೆಗೂ ನನ್ನ ರಾಹುಲ್ ಗಾಂಧಿ ಕರೆದಿಲ್ಲ, ಸದ್ಯಕ್ಕೆ ದೆಹಲಿಗೆ ಹೋಗಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

By kannadanewsnow0506/05/2026 2:11 PM KARNATAKA 1 Min Read

ಮೈಸೂರು : ರಾಜ್ಯದಲಿ ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಕುರಿತಂತೆ ಹೈಕಮಾಂಡ್ ಈಗಾಗಲೇ ಮಹೂರ್ತ ಫಿಕ್ಸ್ ಮಾಡಿದೆ ಎಂದು…

ಓಪನ್ ಮಾಡಿದ `ಎಣ್ಣೆ ಬಾಟಲಿ’ ಎಷ್ಟು ದಿನಗಳಲ್ಲಿ ಖಾಲಿ ಮಾಡಬೇಕು? `ಮದ್ಯ’ ಪ್ರಿಯರು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ.!

06/05/2026 1:13 PM

GOOD NEWS : ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್ : ಶೀಘ್ರವೇ ‘BMTC’ ಬಸ್ ನಲ್ಲಿ ಪ್ರಿಪೇಯ್ಡ್ ಕಾರ್ಡ್ ಸೌಲಭ್ಯ!

06/05/2026 1:01 PM

ದೇವತೆಯಂತ ಇರೋ ನಿಮ್ಮನ್ನ ಬಿಟ್ಟು ಪರಸ್ತ್ರಿ ಬೆನ್ನು ಹತ್ತಿದಕ್ಕೆ ದರ್ಶನ್ ಗೆ ಈ ಸ್ಥಿತಿ : ಇನ್ಸ್ಟಾಗ್ರಾಮ್ ನಲ್ಲಿ ಕಮೆಂಟ್ ಸಖತ್ ವೈರಲ್!

06/05/2026 12:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.