ನವದೆಹಲಿ: ಅಂಧರು ಕೂಡ ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಲು ಅರ್ಹತೆ ಹೊಂದಿದ್ದಾರೆ. ಅಂಗವೈಕಲ್ಯದ ಕಾರಣ ನೀಡಿ ಅವರಿಗೆ ಹುದ್ದೆ ನಿರಾಕರಿಸುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಸಂಬಂಧ ದೃಷ್ಟಿ ಮಾಂದ್ಯ ಮಗನ ನೇಮಕಾತಿಗೆ ಅಡ್ಡಿಯಾದ ಮಧ್ಯಪ್ರದೇಶದ ನಿಬಂಧನೆಯೊಂದನ್ನು ಪ್ರಶ್ನಿಸಿ ತಾಯಿಯೊಬ್ಬಳು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದರು.
ಈ ಪತ್ರದ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಂತ ಸುಪ್ರೀಂ ಕೋರ್ಟ್ ದ್ವಿಸದಸ್ಯ ನ್ಯಾಯಪೀಠವು, ಅಂಗವಿಕಲರು ನ್ಯಾಯಾಂಗ ಸೇವೆಯ ನೇಮಕಾತಿ ವೇಳೆ ಯಾವುದೇ ತಾರತಮ್ಯ ಎದುರಿಸಬಾರದು. ಅಂಥವರನ್ನು ಒಳಗೊಂಡ ಚೌಕಟ್ಟನ್ನು ಒದಗಿಸಲು ರಾಜ್ಯಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿತು. ಅಲ್ಲದೇ ಮಧ್ಯಪ್ರದೇಶದಲ್ಲಿರುವ ನಿಯಮವನ್ನು ರದ್ದುಗೊಳಿಸುವಂತೆ ಆದೇಶಿಸಿತು.
BREAKING: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ ಅನುಭವ: ಬೆಚ್ಚಿ ಬಿದ್ದ ಜನರು
‘OLA ಉದ್ಯೋಗಿ’ಗಳಿಗೆ ಬಿಗ್ ಶಾಕ್: ‘1,000 ನೌಕರ’ರ ವಜಾಕ್ಕೆ ನಿರ್ಧಾರ | OLA Layoff