Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರಿಗೂ ಕಡ್ಡಾಯ `ಹೃದಯ ತಪಾಸಣೆ’ : ಸಚಿವ ಕೆ.ಎನ್. ರಾಜಣ್ಣ ಹೇಳಿಕೆ

06/07/2025 11:12 AM

BREAKING : ರಾಜ್ಯದಲ್ಲಿ ಎಲ್ಲರಿಗೂ ಕಡ್ಡಾಯ `ಹೃದಯ’ ತಪಾಸಣೆಗೆ ಚಿಂತನೆ : ಸಚಿವ ಕೆ.ಎನ್. ರಾಜಣ್ಣ ಹೇಳಿಕೆ

06/07/2025 11:06 AM

YouTube Update : ಇನ್ಮುಂದೆ ಇಂತಹ ವಿಡಿಯೋಗಳಿಗೆ ‘YouTube’ ಹಣ ನೀಡೋದಿಲ್ಲ, ಜು.15ರಿಂದ ಹೊಸ ರೂಲ್ಸ್

06/07/2025 10:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತೂಕ ನಷ್ಟಕ್ಕೆ ಬೇಸಿಗೆ ಕಾಲದಲ್ಲಿ ಈ ರಸಭರಿತ ಹಣ್ಣುಗಳನ್ನು ತಿನ್ನಿ
LIFE STYLE

ತೂಕ ನಷ್ಟಕ್ಕೆ ಬೇಸಿಗೆ ಕಾಲದಲ್ಲಿ ಈ ರಸಭರಿತ ಹಣ್ಣುಗಳನ್ನು ತಿನ್ನಿ

By kannadanewsnow5725/03/2024 4:00 AM

ತೂಕವನ್ನು ಸುಲಭ ರೀತಿಯಲ್ಲಿ ಕಡಿಮೆ ಮಾಡಿಕೊಳ್ಳಲು ಸರಳವಾದ ಉಪಾಯವೆಂದರೆ ಅದು, ತಾಜಾ ರಸಭರಿತ ಹಣ್ಣುಗಳನ್ನು ಸೇವನೆ ಮಾಡುವುದು.

ಬೇಸಿಗೆ ಕಾಲವು ಹಣ್ಣುಗಳನ್ನು ಅಥವಾ ಹಣ್ಣಿನ ರಸವನ್ನು ಯಥೇಚ್ಚವಾಗಿ ಸೇವನೆ ಮಾಡಲು ಪ್ರೇರೇಪಿಸುತ್ತದೆ. ಬೇಸಿಗೆ ಕಾಲದಲ್ಲಿ ವೈವಿಧ್ಯಮಯವಾದ ಹಣ್ಣುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ನಾರಿನಂಶ ಹೆಚ್ಚಾಗಿರುವ ಹಣ್ಣುಗಳನ್ನು ಸೇವನೆ ಮಾಡುವುದರಿಂದ ತೂಕ ಇಳಿಕೆ ಮಾಡಿಕೊಳ್ಳಲು ಸುಲಭವಾದ ದಾರಿಯಾಗಿದೆ.

ಏಕೆಂದರೆ ಇಂತಹ ಹಣ್ಣುಗಳು ಪದೇ ಪದೇ ಹಸಿವಾಗುವುದನ್ನು ತಪ್ಪಿಸುವುದರ ಜೊತೆಗೆ ಕ್ಯಾಲೋರಿ ಭರಿತವಾದ ಆಹಾರವನ್ನು ತಿನ್ನುವುದನ್ನು ನಿಯಂತ್ರಿಸುತ್ತದೆ. ಒಟ್ಟಾರೆ ಈ ಕೆಳಗಿನ ಹಣ್ಣುಗಳು ನಿಮ್ಮ ತೂಕ ಇಳಿಕೆಗೆ ಸಹಾಯಕಾರಿಯಾಗಿದೆ. ಕೆಂಪು ಬಣ್ಣದ ರಸಭರಿತ ಕಲ್ಲಂಗಡಿ ಹಣ್ಣು ಬೇಸಿಗೆಯ ದಾಹವನ್ನು ತಣಿಸುತ್ತದೆ. ಈ ಋತುಮಾನದಲ್ಲಿ ಹೆಚ್ಚಾಗಿ ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಕಲ್ಲಂಗಡಿಯನ್ನು ‘ಬೇಸಿಗೆಯ ಹಣ್ಣು’ ಎಂದೇ ಕರೆಯಲಾಗುತ್ತದೆ.

ಇದು ದೇಹವನ್ನು ರಿಫ್ರೆಶ್‌ಗೊಳಿಸುವುದು ಮಾತ್ರವಲ್ಲದೆ, ತಂಪಾಗಿಸುತ್ತದೆ. ಕಲ್ಲಂಗಡಿಯಲ್ಲಿ ಫೈಬರ್‌, ವಿಟಮಿನ್‌ ಸಿ, ವಿಟಮಿನ್‌ ಎ, ಮೆಗ್ನೀಸಿಯಮ್‌, ಪೊಟ್ಯಾಶಿಯಮ್‌ ಮತ್ತು ಆಂಟಿಆಕ್ಸಿಡೆಂಟ್‌, ಲೈಕೋಪೀನ್‌ಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಸುಮಾರು 90% ಭಾಗದಷ್ಟು ನೀರು ಮತ್ತು ನಾರಿನಂಶ ತುಂಬಿರುತ್ತದೆ. ಹೆಚ್ಚಾಗಿ ನೀರಿನಂಶ ಇರುವ ಹಣ್ಣು ಮತ್ತು ತರಕಾರಿಗಳನ್ನು ಸೇವನೆ ಮಾಡಿದಾಗ ಹೊಟ್ಟೆ ಹಸಿವು ಕಡಿಮೆಯಾಗುತ್ತದೆ.

ಸೌತೆಕಾಯಿ ಬೇಸಿಗೆಯಲ್ಲಿ ಅಚ್ಚು ಮೆಚ್ಚಿನ ತರಕಾರಿಯಾಗಿದೆ. ನಿಮಗೆ ತಿಳಿದಿರಲಿ, ಸೌತೆಕಾಯಿಯನ್ನು ನಿಮ್ಮ ಡಯಟ್‌ ಚಾರ್ಟ್‌ನಲ್ಲಿ ಸೇರಿಸುವುದರಿಂದ ತೂಕ ನಷ್ಟ ಮಾಡಿಕೊಳ್ಳಬಹುದು. ಸಲಾಡ್‌ ಅಥವಾ ಸ್ಮೂಥಿಯಂತಹ ಅನೇಕ ಆಹಾರಗಳಲ್ಲಿ ಮಿಕ್ಸ್‌ ಮಾಡಿ ಸೇವನೆ ಮಾಡಬಹುದು. ವಿಶೇಷವಾಗಿ ಹಸಿರು ನೈಸರ್ಗಿಕ ಹಣ್ಣು ಮತ್ತು ತರಕಾರಿಗಳು ದೇಹವನ್ನು ತಂಪಾಗಿಸುವ ಗುಣಗಳನ್ನು ಹೊಂದಿರುತ್ತವೆ. ಕಲ್ಲಂಗಡಿ ಹಣ್ಣಿನಂತೆ ಸೌತೆಕಾಯಿಯಲ್ಲಿಯೂ 95% ನಷ್ಟು ನೀರು ತುಂಬಿರುತ್ತದೆ. ಕ್ಯಾಲೋರಿ ಬಗ್ಗೆ ಹೇಳುವುದಾದರೆ ಅತಿ ಕಡಿಮೆ ಹೊಂದಿದೆ. ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ಸೌತೆಕಾಯಿಯನ್ನು ಹೊಂದಿದ್ದಾಗ ಗಮನಾರ್ಹವಾಗಿ ತೂಕವನ್ನು ಕಳೆದುಕೊಳ್ಳಬಹುದಾಗಿದೆ.

ಕಿತ್ತಳೆ ಹಣ್ಣು ಆರೋಗ್ಯ, ತೂಕ ಮತ್ತು ಚರ್ಮಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಕಿತ್ತಳೆ ಹಣ್ಣು ಸಿಟ್ರಸ್‌ ಹಣ್ಣಿನ ಜಾತಿಗೆ ಸೇರಿದ್ದು, ಆರೋಗ್ಯಕ್ಕೆ ಬಹಳ ಉತ್ತಮವಾದ ಪರಿಣಾಮವನ್ನು ನೀಡುತ್ತದೆ.

ಈ ಹಣ್ಣು ಪೊಟ್ಯಾಶಿಯಮ್‌ ಮತ್ತು ವಿಟಮಿನ್‌ ಸಿ ಶ್ರೀಮಂತವಾದ ಮೂಲವನ್ನು ಹೊಂದಿದೆ. ಇದರಲ್ಲಿರುವ ವಿಟಮಿನ್‌ ಸಿ ರೋಗನಿರೋಧಕ ಶಕ್ತಿ ಮತ್ತು ಚಯಾಪಚಯವನ್ನು ಹೆಚ್ಚಿಸಲು ಉತ್ತೇಜಿಸುತ್ತದೆ. ಕಿತ್ತಳೆ ಹಣ್ಣಿನಲ್ಲಿ ಕೂಡ ಸುಮಾರು 88 % ನಷ್ಟು ನೀರಿನಂಶ ಹೊಂದಿದ್ದು, ದೇಹವನ್ನು ಈ ಬೇಸಿಗೆಯ ಸಮಯದಲ್ಲಿ ಹೈಡ್ರೇಟ್‌ ಮಾಡುತ್ತದೆ.

ಕಿತ್ತಳೆ ಹಣ್ಣಿನಲ್ಲಿರುವ ಪೊಟ್ಯಾಶಿಯಮ್‌ ಬೇಸಿಗೆಯ ತಾಪಾಮಾನದಿಂದ ಉಂಟಾಗುವ ಸ್ನಾಯು ಸೆಳೆತಕ್ಕೆ ಚಿಕಿತ್ಸೆ ನೀಡುತ್ತದೆ. ಇನ್ನು ಕಿತ್ತಳೆ ತೂಕ ಇಳಿಕೆಗೆ ಪ್ರಯೋಜನಕಾರಿ. ಕಿತ್ತಳೆ, ಕಲ್ಲಂಗಡಿ, ಸೌತೆಕಾಯಿಗಳಿಗೆ ಹೋಲಿಸಿದರೆ ಕರ್ಬೂಜ ಹಣ್ಣಿನಲ್ಲಿ ಕೂಡ ನೀರಿನಂಶದ ಕೊರತೆ ಇಲ್ಲ. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಮತ್ತು ನೀರಿನಂಶದಿಂದ ತುಂಬಿರುವ ಕಾರಣ ನಿಸ್ಸಂದೇಹವಾಗಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕರ್ಬೂಜ ಹಣ್ಣಿನಲ್ಲಿ ವಿಟಮಿನ್‌ ಎ, ಬಿ, ಕೆ, ಸಿ ಮತ್ತು ಇತರ ಖನಿಜಗಳಾದ ಸತು ಮತ್ತು ತಾಮ್ರದಲ್ಲಿ ಸಮೃದ್ಧವಾಗಿರುವುದರಿಂದ ಕರ್ಬೂಜ ಅನೇಕ ಆರೋಗ್ಯ ಸಮಸ್ಯೆಗಳನ್ನು ಹುಟ್ಟುವ ಮೊದಲೇ ಕಡಿವಾಣ ಹಾಕುತ್ತದೆ. ಪೀಚ್‌ ಹಣ್ಣು ಕೂಡ ರುಚಿಕರವಾದ ಹಣ್ಣುಗಳಲ್ಲಿ ಒಂದಾಗಿದೆ. ನಿಮ್ಮ ತೂಕ ಇಳಿಕೆಗೆ ಈ ಹಣ್ಣು ನಿಮಗೆ ವರದಾನವಾಗಲಿದೆ. ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಈ ಪೀಚ್‌ ಹಣ್ಣು, ಸುಮಾರು 89% ರಷ್ಟು ನೀರು ಹೊಂದಿದೆ. ಇದು ಪದೇ ಪದೇ ಹಸಿವಿನ ಬಯಕೆಯನ್ನು ನಿಗ್ರಹಿಸುತ್ತದೆ.

ಇದರಲ್ಲಿ ವಿಟಮಿನ್‌ ಎ, ಸಿ. ಕಬ್ಬಿಣ ಸತು ಹೊಂದಿದ್ದು, ಆರೋಗ್ಯಕ್ಕೆ ಉತ್ತಮವಾದ ಕೊಡುಗೆಯನ್ನು ನೀಡುತ್ತದೆ. ನಿಮ್ಮ ಡಯಟ್‌ ಚಾರ್ಟ್‌ನಲ್ಲಿ ತಪ್ಪದೇ ಪೀಚ್‌ ಹಣ್ಣನ್ನು ಸೇವನೆ ಮಾಡಿ. ಇದು ನಿಮ್ಮ ತೂಕ ಇಳಿಕೆಗೆ ಸಹಾಯ ಮಾಡಬಲ್ಲದು.

Eat these juicy fruits during the summer season for weight loss ತೂಕ ನಷ್ಟಕ್ಕೆ ಬೇಸಿಗೆ ಕಾಲದಲ್ಲಿ ಈ ರಸಭರಿತ ಹಣ್ಣುಗಳನ್ನು ತಿನ್ನಿ
Share. Facebook Twitter LinkedIn WhatsApp Email

Related Posts

ಪ್ರತಿದಿನ ‘ಮೊಟ್ಟೆ’ ತಿಂದರೆ ಏನಾಗುತ್ತೆ ಗೊತ್ತಾ.?

05/07/2025 10:11 PM1 Min Read

ಮೊಸರಿನ ಜೊತೆ ಎಂದಿಗೂ ಈ ಆಹಾರಗಳನ್ನ ತಿನ್ನಬೇಡಿ, ತಿಂದ್ರೆ ಅಷ್ಟೇ.!

04/07/2025 10:13 PM2 Mins Read

ಮನೆಯಲ್ಲಿ ಇದ್ದಕ್ಕಿದ್ದಂತೆ ‘ಹಲ್ಲಿ’ಗಳು ಹೆಚ್ಚಾಗಿವ್ಯಾ.? ಇದರ ಸಂಕೇತವಾಗಿರ್ಬೋದು.!

04/07/2025 8:29 PM1 Min Read
Recent News

BREAKING : ರಾಜ್ಯದಲ್ಲಿ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರಿಗೂ ಕಡ್ಡಾಯ `ಹೃದಯ ತಪಾಸಣೆ’ : ಸಚಿವ ಕೆ.ಎನ್. ರಾಜಣ್ಣ ಹೇಳಿಕೆ

06/07/2025 11:12 AM

BREAKING : ರಾಜ್ಯದಲ್ಲಿ ಎಲ್ಲರಿಗೂ ಕಡ್ಡಾಯ `ಹೃದಯ’ ತಪಾಸಣೆಗೆ ಚಿಂತನೆ : ಸಚಿವ ಕೆ.ಎನ್. ರಾಜಣ್ಣ ಹೇಳಿಕೆ

06/07/2025 11:06 AM

YouTube Update : ಇನ್ಮುಂದೆ ಇಂತಹ ವಿಡಿಯೋಗಳಿಗೆ ‘YouTube’ ಹಣ ನೀಡೋದಿಲ್ಲ, ಜು.15ರಿಂದ ಹೊಸ ರೂಲ್ಸ್

06/07/2025 10:58 AM

ಚೀನಾದೊಂದಿಗೆ ಟಿಕ್ ಟಾಕ್ ಒಪ್ಪಂದದ ಮಾತುಕತೆ ಮುಂದಿನ ವಾರ ಪ್ರಾರಂಭ : ಟ್ರಂಪ್ | Tiktok

06/07/2025 10:53 AM
State News
KARNATAKA

BREAKING : ರಾಜ್ಯದಲ್ಲಿ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರಿಗೂ ಕಡ್ಡಾಯ `ಹೃದಯ ತಪಾಸಣೆ’ : ಸಚಿವ ಕೆ.ಎನ್. ರಾಜಣ್ಣ ಹೇಳಿಕೆ

By kannadanewsnow5706/07/2025 11:12 AM KARNATAKA 1 Min Read

ಹಾಸನ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು,ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಡ್ಡಾಯ ಹೃದಯ ತಪಾಸಣೆಗೆ ಚಿಂತನೆ ನಡೆಸಲಾಗಿದೆ…

BREAKING : ರಾಜ್ಯದಲ್ಲಿ ಎಲ್ಲರಿಗೂ ಕಡ್ಡಾಯ `ಹೃದಯ’ ತಪಾಸಣೆಗೆ ಚಿಂತನೆ : ಸಚಿವ ಕೆ.ಎನ್. ರಾಜಣ್ಣ ಹೇಳಿಕೆ

06/07/2025 11:06 AM

BREAKING : ಹುಬ್ಬಳ್ಳಿಯಲ್ಲಿ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಪೊಲೀಸ್ ಕಾನ್ಸ್ ಟೇಬಲ್ ವಿರುದ್ಧ `ಪೋಕ್ಸೋ’ ಕೇಸ್ ದಾಖಲು.!

06/07/2025 10:37 AM

SHOCKING : ರಾಜ್ಯದಲ್ಲಿ ನಿಲ್ಲದ ‘ಹಾರ್ಟ್ ಅಟ್ಯಾಕ್’ : ಚಿಕ್ಕಮಗಳೂರಿನಲ್ಲಿ ಒಂದೇ ದಿನ `ಹೃದಯಾಘಾತ’ಕ್ಕೆ ಇಬ್ಬರು ಸಾವು.!

06/07/2025 10:28 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.