Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘LIC’ಯಲ್ಲಿನ ಮತ್ತಷ್ಟು ‘ಷೇರು’ ಮಾರಾಟಕ್ಕೆ ಸರ್ಕಾರ ನಿರ್ಧಾರ

10/07/2025 3:15 PM

BREAKING: ‘SSLC ವಿದ್ಯಾರ್ಥಿ’ಗಳ ಮಾರ್ಕ್ಸ್ ಹೆಚ್ಚಿಸಲು ‘ಶಿಕ್ಷಣ ಇಲಾಖೆ’ಯಿಂದ ಮಹತ್ವದ ಆದೇಶ | SSLC Exam 2025

10/07/2025 3:13 PM

BREAKING: 30,000 ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾಸ್ಪತ್ರೆ ಸರ್ಜನ್

10/07/2025 3:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇ-ಆಸ್ತಿ ತಂತ್ರಾಂಶ: ರಾಜ್ಯ ಸರ್ಕಾರದ ಚೆಲ್ಲಾಟ. ಬಡವರಿಗೆ ಪ್ರಾಣ ಸಂಕಟ…!
KARNATAKA

ಇ-ಆಸ್ತಿ ತಂತ್ರಾಂಶ: ರಾಜ್ಯ ಸರ್ಕಾರದ ಚೆಲ್ಲಾಟ. ಬಡವರಿಗೆ ಪ್ರಾಣ ಸಂಕಟ…!

By kannadanewsnow0730/10/2024 7:24 PM
vidhana soudha
vidhana soudha

ಬೆಂಗಳೂರು: ರಾಜ್ಯ ಸರ್ಕಾರದಿಂದ ಇ-ಆಸ್ತಿ ತಂತ್ರಾಂಶವನ್ನು ಆಸ್ತಿ ನೋಂದಣಿಗಾಗಿ ಜಾರಿಗೊಳಿಸಿದೆ. ಈಗ ಯಾವುದೇ ಆಸ್ತಿ ಖರೀದಿ, ಮಾರಾಟ ಮಾಡಲು ಇ-ಆಸ್ತಿ ಪ್ರಮಾಣಪತ್ರ ಕಡ್ಡಾಯವಾಗಿದೆ. ಇಂತಹ ಇ-ಆಸ್ತಿ ಪ್ರಮಾಣ ಪತ್ರ ಸಿಗದೇ ರಾಜ್ಯಾಧ್ಯಂತ ಆಸ್ತಿ ಮಾಲೀಕರು, ಖರೀದಿದಾರರು ಸಮಸ್ಯೆಗೆ ಸಿಲುಕಿದ್ದಾರೆ. ಇ-ಆಸ್ತಿ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿದ್ದರಿಂದಾಗಿ ಸಾರ್ವಜನಿಕರು ಸಮಸ್ಯೆಗೆ ಸಿಲುಕುವಂತಾಗಿದ್ದು, ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.

*ನನ್ನ ಅಪ್ಪನ ಆಪರೇಶನ್‌ ಇದ್ದು ಹಣದ ಅವಶ್ಯಕತೆ ಇರುವ ಕಾರಣ ನಾನು ನನ್ನ ಅಪ್ಪನ ಸೈಟ್‌ ಮಾರಲು ಮುಂದಾಗಿದ್ದೇನೆ ಆದರೆ ಇ-ಆಸ್ತಿ ಪ್ರಮಾಣಪತ್ರದಿಂದ ಎಲ್ಲವೂ ನಿಧಾನವಾಗುತ್ತಿದೆ. ಸಿಎಂ ಸಾಹೇಬ್ರೇ ನಿಮ್ಮ ಗ್ಯಾರಂಟಿ ಇದರ ಮೇಲೆ ಕೂಡ ಇರಲಿ.
* ವೇದಾ, ತುಮಕೂರು

ನನ್ನ ಅಕ್ಕನ ಮದುವೆಗೆ ಹಣದ ಅವಶ್ಯಕತೆ ಇದ್ದು, ನನ್ನ ಅಪ್ಪನ ಆಸ್ತಿಯನ್ನು ತುರ್ತಾಗಿ ಮಾರಾಟ ಮಾಡಬೇಕಾಗಿದೆ. ಇ-ಆಸ್ತಿ ಪ್ರಮಾಣಪತ್ರ ದಿಂದಾಗಿ ನನಗೆ ನನ್ನ ಅಕ್ಕನ ಮದುವೆ ಬಗ್ಗೆ ಭಯ ಉಂಟಾಗಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಮೊದಲಿನ ಹಾಗೇ ಮಾಡಿದ್ದರೆ ಚೆನ್ನಾ….!

ಚಿನ್ಮಯಿ, ತುಮಕೂರು

ಜನತೆ ಜೊತೆಗೆ ರಾಜ್ಯ ಸರ್ಕಾರ ಚೆಲ್ಲಾಟ: ಇ-ಆಸ್ತಿ ಪ್ರಮಾಣಪತ್ರ ದಿಂದಾಗಿ ರಾಜ್ಯದ ಜನತೆಗೆ ಇನ್ನಿಲ್ಲದ ಸಮಸ್ಯೆ ಎದುರಿಸುತ್ತ ಇರುವುದು ಸುಳ್ಳಲ್ಲ. ಸುಳ್ಳು ಹೇಳಿಕೊಂಡು ಆಸ್ತಿಯನ್ನು ಪರಬಾರೆ ಮಾಡುವವರ ವಿರುದ್ದ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಬೇಕೆ ಹೊರತು, ಸಾಮಾನ್ಯ ಜನರ ಮೇಲೆ ಅಲ್ಲ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ.

ಈ ನಡುವೆ ಇ-ಆಸ್ತಿ ಪ್ರಮಾಣಪತ್ರ ಪಡೆದುಕೊಳ್ಳವುದುಕ್ಕೆ ತೀವ್ರ ಪ್ರಮಾಣದಲ್ಲಿ ಹಲವು ಮಂದಿ ಸಮಸ್ಯೆಯನ್ನು ಎದುರಿಸುತ್ತಾ ಇರುವುದು ಸುಳ್ಳಲ್ಲ. ಕಂದಾಯ ಇಲಾಖೆಯಲ್ಲಿರುವ ಲೋಪಗಳನ್ನು,. ತಪ್ಪುಗಳನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ಸಚಿವರ ಕ್ರಮವನ್ನು ಮೆಚ್ಚಿಕೊಳ್ಳಬೇಕು ಆದರೆ ಹೀಗೆ ಸಚಿವರ ನಡೆ ಸಮಂಜಸನಾ? ಎನ್ನುವುದು ರಾಜ್ಯದ ಜನತೆಗೆ ಪ್ರಶ್ನೆಯಾಗಿದೆ. ಸಚಿವರು ಇನ್ನೂ ಕೆಲವು ದಿನಗಳ ಕಾಲ ಇ-ಆಸ್ತಿ ಪ್ರಮಾಣಪತ್ರಕ್ಕೆ ಬ್ರೇಕ್‌ ಹಾಕಬೇಕಿದರೆ ಹಲವು ಮಂದಿ ನಿಟ್ಟಿಸಿರುವ ಬಿಡುತ್ತಾರೆ.

ಕರ್ನಾಟಕದಲ್ಲಿ ಕಂದಾಯ ಇಲಾಖೆಯಿಂದ ಆಸ್ತಿ ದಾಖಲೆಗಳ ನಕಲುತನ ತಡೆಯಲು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇ-ಆಸ್ತಿ, ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ ವ್ಯಾಪ್ತಿಯಲ್ಲಿ ಇ-ಖಾತಾ ಹಾಗೂ ಗ್ರಾಮೀಣ ಮಟ್ಟದಲ್ಲಿನ ಆಸ್ತಿ ನೋಂದಣಿಗೆ ಇ-ಸ್ವತ್ತು ಕಡ್ಡಾಯಗೊಳಿಸಲಾಗಿದೆ. ಆದರೇ ನಗರ ಪ್ರದೇಶದಲ್ಲಿ ಜಾರಿಗೊಳಿಸಿರುವಂತ ಇ-ಆಸ್ತಿ ತಂತ್ರಾಂಶದಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ.

ಇ-ಆಸ್ತಿ ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯದಿಂದ ಸಾರ್ವಜನಿಕರಿಗೆ ಸಮಸ್ಯೆ: ಇ-ಆಸ್ತಿ ತಂತ್ರಾಂಶದ ಮೂಲಕವೇ ಆಸ್ತಿ ನೋಂದಣಿ, ಮಾರಾಟವನ್ನು ಇತ್ತೀಚೆಗೆ ರಾಜ್ಯ ಸರ್ಕಾರ ಕಡ್ಡಾಯಗೊಳಿಸಲಾಗಿದೆ. ಈ ಪ್ರಮಾಣ ಪತ್ರವಿಲ್ಲದೇ ಆಸ್ತಿ ಖರೀದಿಯಾಗಲೀ, ಮಾರಾಟವಾಗಲೀ ಮಾಡೋದಕ್ಕೆ ಸಾಧ್ಯವಾಗುತ್ತಿಲ್ಲ. ಮದುವೆ, ಅನಾರೋಗ್ಯದ ಸಮಸ್ಯೆ, ಇತರೆ ಕಾರಣಗಳಿಂದಾಗಿ ತುರ್ತು ಸಂದರ್ಭದಲ್ಲಿ ತಮ್ಮ ಆಸ್ತಿಯನ್ನು ಇ-ಆಸ್ತಿ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿದ್ದರಿಂದ ಮಾರಾಟ ಮಾಡೋದಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲಾಗಿದೆ.

ಪ್ರಮಾಣಪತ್ರ ತ್ವರಿತವಾಗಿ ಸಿಗುವಂತೆ ಮಾಡಿ: ತುರ್ತು ಸಂದರ್ಭಗಳಲ್ಲಿ, ಹಣಕಾಸಿನ ಅಗತ್ಯವಿರೋರು ತಮ್ಮ ಬಳಿ ಆಪಾತ್ಕಾಲದಲ್ಲಿ ನೆರವಾಗಲೆಂದು ಇಟ್ಟುಕೊಂಡಿರೋ ಆಸ್ತಿ ಮಾರಾಟಕ್ಕೆ, ಇ-ಆಸ್ತಿ ಪ್ರಮಾಣ ಪತ್ರ ಕಡ್ಡಾಯವಾಗಿರುವುದರಿಂದ ಸಮಸ್ಯೆಗೆ ಸಿಲುಕಿದ್ದಾರೆ. ಇ-ಆಸ್ತಿ ಪ್ರಮಾಣಪತ್ರ ಸಿಗದೇ ಸಾರ್ವಜನಿಕರು ಪರದಾಡುವಂತೆ ಆಗಿದೆ. ಹೀಗಾಗಿ ರಾಜ್ಯ ಸರ್ಕಾರವು ಇ-ಆಸ್ತಿ ಪ್ರಮಾಣಪತ್ರವನ್ನು ತ್ವರಿತವಾಗಿ ಆಸ್ತಿ ಮಾರಾಟಗಾರರಿಗೆ, ಖರೀದಿದಾರರಿಗೆ ಸಿಗುವಂತೆ ಮಾಡುವಂತೆ ಆಗ್ರಹಿಸಿದ್ದಾರೆ

E-property software: The state government's flirting. The poor are suffering... ಇ-ಆಸ್ತಿ ತಂತ್ರಾಂಶ: ರಾಜ್ಯ ಸರ್ಕಾರದ ಚೆಲ್ಲಾಟ. ಬಡವರಿಗೆ ಪ್ರಾಣ ಸಂಕಟ...!
Share. Facebook Twitter LinkedIn WhatsApp Email

Related Posts

BREAKING: ‘SSLC ವಿದ್ಯಾರ್ಥಿ’ಗಳ ಮಾರ್ಕ್ಸ್ ಹೆಚ್ಚಿಸಲು ‘ಶಿಕ್ಷಣ ಇಲಾಖೆ’ಯಿಂದ ಮಹತ್ವದ ಆದೇಶ | SSLC Exam 2025

10/07/2025 3:13 PM8 Mins Read

BREAKING: 30,000 ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾಸ್ಪತ್ರೆ ಸರ್ಜನ್

10/07/2025 3:08 PM1 Min Read

BIG NEWS: ‘SSLC ಪರೀಕ್ಷೆ ಫಲಿತಾಂಶ’ ವೃದ್ಧಿಗೆ ಮಹತ್ವದ ಕ್ರಮ: ಎಲ್ಲಾ ಶಾಲೆಗಳು ಈ ಕ್ರಮ ಅನುಸರಿಸೋದು ಕಡ್ಡಾಯ

10/07/2025 2:58 PM8 Mins Read
Recent News

BREAKING : ‘LIC’ಯಲ್ಲಿನ ಮತ್ತಷ್ಟು ‘ಷೇರು’ ಮಾರಾಟಕ್ಕೆ ಸರ್ಕಾರ ನಿರ್ಧಾರ

10/07/2025 3:15 PM

BREAKING: ‘SSLC ವಿದ್ಯಾರ್ಥಿ’ಗಳ ಮಾರ್ಕ್ಸ್ ಹೆಚ್ಚಿಸಲು ‘ಶಿಕ್ಷಣ ಇಲಾಖೆ’ಯಿಂದ ಮಹತ್ವದ ಆದೇಶ | SSLC Exam 2025

10/07/2025 3:13 PM

BREAKING: 30,000 ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾಸ್ಪತ್ರೆ ಸರ್ಜನ್

10/07/2025 3:08 PM

BIG NEWS: ‘SSLC ಪರೀಕ್ಷೆ ಫಲಿತಾಂಶ’ ವೃದ್ಧಿಗೆ ಮಹತ್ವದ ಕ್ರಮ: ಎಲ್ಲಾ ಶಾಲೆಗಳು ಈ ಕ್ರಮ ಅನುಸರಿಸೋದು ಕಡ್ಡಾಯ

10/07/2025 2:58 PM
State News
KARNATAKA

BREAKING: ‘SSLC ವಿದ್ಯಾರ್ಥಿ’ಗಳ ಮಾರ್ಕ್ಸ್ ಹೆಚ್ಚಿಸಲು ‘ಶಿಕ್ಷಣ ಇಲಾಖೆ’ಯಿಂದ ಮಹತ್ವದ ಆದೇಶ | SSLC Exam 2025

By kannadanewsnow0910/07/2025 3:13 PM KARNATAKA 8 Mins Read

ಬೆಂಗಳೂರು: 2025-26ನೇ ಸಾಲಿನ ಎಸ್‌ಎಸ್‌ಎಲ್‍ಸಿ ಪರೀಕ್ಷೆಯ ಫಲಿತಾಂಶವನ್ನು ವೃದ್ಧಿಸುವುದು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಕ್ರಮ ವಹಿಸಿದೆ. ಇದನ್ನು ಸಾಧಿಸುವ…

BREAKING: 30,000 ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾಸ್ಪತ್ರೆ ಸರ್ಜನ್

10/07/2025 3:08 PM

BIG NEWS: ‘SSLC ಪರೀಕ್ಷೆ ಫಲಿತಾಂಶ’ ವೃದ್ಧಿಗೆ ಮಹತ್ವದ ಕ್ರಮ: ಎಲ್ಲಾ ಶಾಲೆಗಳು ಈ ಕ್ರಮ ಅನುಸರಿಸೋದು ಕಡ್ಡಾಯ

10/07/2025 2:58 PM

BREAKING : ಕಲಬುರ್ಗಿಯಲ್ಲಿ ಘೋರ ಘಟನೆ : ವಸತಿ ಶಾಲೆಯಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿ!

10/07/2025 2:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.