Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
Vidhana Soudha

BIGG NEWS: ಸಮೀಕ್ಷಾ ಕರ್ತವ್ಯದಲ್ಲಿ ಪಾಲ್ಗೊಳ್ಳದ ನೌಕರರ ಮೇಲೆ ಶಿಸ್ತು ಕ್ರಮ, ರಾಜ್ಯ ಸರ್ಕಾರದಿಂದ ಎಚ್ಚರಿಕೆ

25/09/2025 7:47 PM
vidhana soudha

DYSP ಎಂಕೆ ಗಣಪತಿ ಅಸ್ವಾಭಾವಿಕ ಮರಣ ಪ್ರಕರಣ: ರಾಜ್ಯ ಸರ್ಕಾರದಿಂದ ವಿಚಾರಣಾ ಆಯೋಗದ ವರದಿ ತಿರಸ್ಕಾರ

25/09/2025 7:45 PM
vidhana soudha

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನೀತಿ 2025–2032ಕ್ಕೆ ಸಂಪುಟ ಅನುಮೋದನೆ: ಯುವ ಸಮೂಹಕ್ಕೆ ಪೂರಕವಾಗಿ ಯೋಜನೆಗಳ ಜಾರಿ

25/09/2025 7:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » DYSP ಎಂಕೆ ಗಣಪತಿ ಅಸ್ವಾಭಾವಿಕ ಮರಣ ಪ್ರಕರಣ: ರಾಜ್ಯ ಸರ್ಕಾರದಿಂದ ವಿಚಾರಣಾ ಆಯೋಗದ ವರದಿ ತಿರಸ್ಕಾರ
KARNATAKA

DYSP ಎಂಕೆ ಗಣಪತಿ ಅಸ್ವಾಭಾವಿಕ ಮರಣ ಪ್ರಕರಣ: ರಾಜ್ಯ ಸರ್ಕಾರದಿಂದ ವಿಚಾರಣಾ ಆಯೋಗದ ವರದಿ ತಿರಸ್ಕಾರ

By kannadanewsnow0725/09/2025 7:45 PM
vidhana soudha
vidhana soudha

ಬೆಂಗಳೂರು: ಎಂ.ಕೆ. ಗಣಪತಿ, ಡಿವೈಎಸ್ಪಿ, (ಇಲಾಖಾ ವಿಚಾರಣೆ), ಐಜಿಪಿ ಕಛೇರಿ, ಪಶ್ಚಿಮ ವಲಯ, ಮಂಗಳೂರು ಇವರು ಮಡಿಕೇರಿಯ ವಿನಾಯಕ ಲಾಡ್, ಕೊಠಡಿ ಸಂಖ್ಯೆ: 315ರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ 2016ನೇ ಜುಲೈ 07 ರಂದು ಮರಣ ಹೊಂದಿರುವ ಬಗ್ಗೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು ಹಾಗೂ ಮುಖ್ಯಮಂತ್ರಿಯವರ ಆದೇಶದನ್ವಯ ಈ ಪ್ರಕರಣದ ತನಿಖೆ ನಡೆಸಲು  ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಕೆ.ಎನ್.ಕೇಶವನಾರಾಯಣ ಇವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ನೇಮಿಸಲಾಗಿತ್ತು.

ವಿಚಾರಣಾ ಆಯೋಗವು 2018 ನೇ ಫೆಬ್ರವರಿ 26 ರಂದು ಸರ್ಕಾರಕ್ಕೆ ವಿಚಾರಣಾ ವರದಿಯನ್ನು ಸಲ್ಲಿಸಿತ್ತು. ಸದರಿ ವಿಚಾರಣಾ ಆಯೋಗದ ವರದಿಯಲ್ಲಿನ ಸಂಪೂರ್ಣ 08 ಭಾಗಗಳ ಕುರಿತು ಅಧ್ಯಯನ ನಡೆಸಿ ಸದರಿ ವರದಿಯಲ್ಲಿನ ಎಲ್ಲಾ ಅಂಶಗಳು ಹಾಗು ಶಿಫಾರಸ್ಸುಗಳನ್ನು ಪರಿಶೀಲಿಸಿ ಅಧ್ಯಯನ ವರದಿಯನ್ನು ನೀಡಲು ಸರ್ಕಾರವು ಎಂ.ಕೆ.ಶ್ರೀವಾಸ್ತವ್, ಐಪಿಎಸ್ ನಿವೃತ್ತ ಪೊಲೀಸ್‌
ಮಹಾನಿರ್ದೇಶಕರು ಇವರನ್ನು ನೇಮಿಸಲಾಗಿತ್ತು.

ಸದರಿ ಅಧ್ಯಯನ ವರದಿಯ ಆಧಾರದಲ್ಲಿ ಕೆ.ಎನ್. ಕೇಶವ ನಾರಾಯಣ, ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಇವರ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ವರದಿ ಹಾಗೂ ಶಿಫಾರಸ್ಸುಗಳ ಮೇಲೆ ಅಂತಿಮ ತೀರ್ಮಾನಕ್ಕೆ ಬರಲು ಸರ್ಕಾರವು ನಿರ್ಧರಿಸಿತ್ತು.

ಪ್ರಸ್ತುತ 2025ನೇ ಮೇ 27 ರಂದು ನಿವೃತ್ತ ಪೊಲೀಸ್‌ ಮಹಾನಿರ್ದೇಶಕರಾದ ಎಂ.ಕೆ. ಶ್ರೀವಾಸ್ತವ್ ಐ.ಪಿ.ಎಸ್ ಇವರು ಸರ್ಕಾರಕ್ಕೆ ಅಧ್ಯಯನ ವರದಿಯನ್ನು ಸಲ್ಲಿಸಿರುತ್ತಾರೆ.

ಕೆ.ಎನ್. ಕೇಶವ ನಾರಾಯಣ, ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಇವರ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ವರದಿಯಲ್ಲಿ ಈ ಹಿಂದಿನ ಗೃಹ ಸಚಿವರಾದ ಕೆ.ಜಿ.ಜಾರ್ಜ್ ಹಾಗೂ ಎ.ಎಂ. ಪ್ರಸಾದ್. ಐಪಿಎಸ್, ಆಗಿನ ಇನ್ಸ್‍ಪೆಕ್ಟರ್ ಜನರಲ್ ಆಫ್ ಪೊಲೀಸ್‌ ಪಶ್ಚಿಮ ವಲಯ ಪ್ರಣವ್ ಮೊಹಾಂತಿ, ಐಪಿಎಸ್ ಇವರುಗಳ ವಿರುದ್ಧ ದಿವಂಗತ ಗಣಪತಿಯವರು ಸಂದರ್ಶನದಲ್ಲಿ ಆರೋಪಿಸಿರುವುದನ್ನು ಉದ್ಘರಿಸಿ ಸದರಿಯವರ ಆತ್ಮಹತ್ಯೆಗೆ ಇವರುಗಳು ಕಾರಣವಲ್ಲವೆಂಬ ಅಭಿಪ್ರಾಯವನ್ನು ಆಯೋಗವು ಸ್ಪಷ್ಟಪಡಿಸಿದೆ.

ಆದರೆ, ತನಿಖಾ ಕ್ರಮದಲ್ಲಿ ಕೆಲವು ನ್ಯೂನತೆಗಳು ಕಂಡುಬಂದಿರುವುದಾಗಿ ಆಯೋಗವು ವಿವರಿಸಿರುತ್ತದೆ.

ಎಂ.ಕೆ.ಶ್ರೀವಾಸ್ತವ್, ಐಪಿಎಸ್ ನಿವೃತ್ತ ಪೊಲೀಸ್‌ ಮಹಾನಿರ್ದೇಶಕರು ಇವರು ಸರ್ಕಾರಕ್ಕೆ ಸಲ್ಲಿಸಿರುವ ಅಧ್ಯಯನ ವರದಿಯಲ್ಲಿ ತನಿಖಾ ಕ್ರಮಗಳ ಬಗ್ಗೆ, ವಿಚಾರಣಾ ಆಯೋಗವು ಮಾಡಿರುವ ಆಕ್ಷೇಪಣೆಗಳನ್ನು ಸಿ.ಬಿ.ಐ. ಸಲ್ಲಿಸಿರುವ ವರದಿಯನ್ನು ಮಾನ ಕರ್ನಾಟಕ ಉಚ್ಚ ನ್ಯಾಯಾಲಯವು ಮಾನ್ಯ ಮಾಡಿರುವುದರಿಂದ ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯವು ಎಸ್.ಎಲ್.ಪಿ. ಯಲ್ಲಿ. ಸಿ.ಬಿ.ಐ. ಪ್ರಕರಣವನ್ನು ಮುಕ್ತಾಯ ಮಾಡಿರುವುದನ್ನು ಎತ್ತಿ ಹಿಡಿದಿರುವುದರಿಂದ, ಅಧಿಕಾರಿಗಳ ವಿರುದ್ಧದ ಇಲಾಖಾ ವಿಚಾರಣೆಯ ಶಿಫಾರಸ್ಸನ್ನು ಒಪ್ಪುವ ಅಗತ್ಯವಿಲ್ಲವೆಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಕೆ.ಎನ್. ಕೇಶವ ನಾರಾಯಣ, ಮಾನ್ಯ ಕರ್ನಾಟಕ ಉಚ್ಚ, ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಇವರ ವಿಚಾರಣಾ ವರದಿಯನ್ನು ಸಚಿವ ಸಂಪುಟವು ಭಾಗಶಃ ಒಪ್ಪಿ ಅಧಿಕಾರಿಗಳ ವಿರುದ್ಧದ ಇಲಾಖಾ ತನಿಖೆಯ ಶಿಫಾರಸ್ಸನ್ನು ತಿರಸ್ಕರಿಸಿದೆ ಎಂದು ಒಳಾಡಳಿತ ಇಲಾಖೆಯ ಪ್ರಕಟಣೆ ತಿಳಿಸಿದೆ.

DYSP MK Ganapathy unnatural death case: State government rejects inquiry commission report DYSP ಎಂಕೆ ಗಣಪತಿ ಅಸ್ವಾಭಾವಿಕ ಮರಣ ಪ್ರಕರಣ: ರಾಜ್ಯ ಸರ್ಕಾರದಿಂದ ವಿಚಾರಣಾ ಆಯೋಗದ ವರದಿ ತಿರಸ್ಕಾರ
Share. Facebook Twitter LinkedIn WhatsApp Email

Related Posts

‘ಕುಸುಮ್‌ ಸಿ’ಯೋಜನೆಗೆ ಭೂಮಿ ನೀಡಿ ಸಹಕರಿಸಿ: ಬೆಸ್ಕಾಂ ಎಂಡಿ ಡಾ.ಎನ್‌.ಶಿವಶಂಕರ್‌

25/09/2025 7:47 PM2 Mins Read
Vidhana Soudha

BIGG NEWS: ಸಮೀಕ್ಷಾ ಕರ್ತವ್ಯದಲ್ಲಿ ಪಾಲ್ಗೊಳ್ಳದ ನೌಕರರ ಮೇಲೆ ಶಿಸ್ತು ಕ್ರಮ, ರಾಜ್ಯ ಸರ್ಕಾರದಿಂದ ಎಚ್ಚರಿಕೆ

25/09/2025 7:47 PM1 Min Read
vidhana soudha

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನೀತಿ 2025–2032ಕ್ಕೆ ಸಂಪುಟ ಅನುಮೋದನೆ: ಯುವ ಸಮೂಹಕ್ಕೆ ಪೂರಕವಾಗಿ ಯೋಜನೆಗಳ ಜಾರಿ

25/09/2025 7:42 PM2 Mins Read
Recent News

‘ಕುಸುಮ್‌ ಸಿ’ಯೋಜನೆಗೆ ಭೂಮಿ ನೀಡಿ ಸಹಕರಿಸಿ: ಬೆಸ್ಕಾಂ ಎಂಡಿ ಡಾ.ಎನ್‌.ಶಿವಶಂಕರ್‌

25/09/2025 7:47 PM
Vidhana Soudha

BIGG NEWS: ಸಮೀಕ್ಷಾ ಕರ್ತವ್ಯದಲ್ಲಿ ಪಾಲ್ಗೊಳ್ಳದ ನೌಕರರ ಮೇಲೆ ಶಿಸ್ತು ಕ್ರಮ, ರಾಜ್ಯ ಸರ್ಕಾರದಿಂದ ಎಚ್ಚರಿಕೆ

25/09/2025 7:47 PM
vidhana soudha

DYSP ಎಂಕೆ ಗಣಪತಿ ಅಸ್ವಾಭಾವಿಕ ಮರಣ ಪ್ರಕರಣ: ರಾಜ್ಯ ಸರ್ಕಾರದಿಂದ ವಿಚಾರಣಾ ಆಯೋಗದ ವರದಿ ತಿರಸ್ಕಾರ

25/09/2025 7:45 PM
vidhana soudha

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನೀತಿ 2025–2032ಕ್ಕೆ ಸಂಪುಟ ಅನುಮೋದನೆ: ಯುವ ಸಮೂಹಕ್ಕೆ ಪೂರಕವಾಗಿ ಯೋಜನೆಗಳ ಜಾರಿ

25/09/2025 7:42 PM
State News
KARNATAKA

‘ಕುಸುಮ್‌ ಸಿ’ಯೋಜನೆಗೆ ಭೂಮಿ ನೀಡಿ ಸಹಕರಿಸಿ: ಬೆಸ್ಕಾಂ ಎಂಡಿ ಡಾ.ಎನ್‌.ಶಿವಶಂಕರ್‌

By kannadanewsnow0925/09/2025 7:47 PM KARNATAKA 2 Mins Read

ತುಮಕೂರು : ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆಯೇ ಸಮರ್ಪಕ ವಿದ್ಯುತ್ ಪೂರೈಸಲು ನೆರವಾಗುವ ‘ಕುಸುಮ್‌ ಸಿ’ಯೋಜನೆಗೆ ಭೂಮಿ ಗುತ್ತಿಗೆ ನೀಡುವ…

Vidhana Soudha

BIGG NEWS: ಸಮೀಕ್ಷಾ ಕರ್ತವ್ಯದಲ್ಲಿ ಪಾಲ್ಗೊಳ್ಳದ ನೌಕರರ ಮೇಲೆ ಶಿಸ್ತು ಕ್ರಮ, ರಾಜ್ಯ ಸರ್ಕಾರದಿಂದ ಎಚ್ಚರಿಕೆ

25/09/2025 7:47 PM
vidhana soudha

DYSP ಎಂಕೆ ಗಣಪತಿ ಅಸ್ವಾಭಾವಿಕ ಮರಣ ಪ್ರಕರಣ: ರಾಜ್ಯ ಸರ್ಕಾರದಿಂದ ವಿಚಾರಣಾ ಆಯೋಗದ ವರದಿ ತಿರಸ್ಕಾರ

25/09/2025 7:45 PM
vidhana soudha

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನೀತಿ 2025–2032ಕ್ಕೆ ಸಂಪುಟ ಅನುಮೋದನೆ: ಯುವ ಸಮೂಹಕ್ಕೆ ಪೂರಕವಾಗಿ ಯೋಜನೆಗಳ ಜಾರಿ

25/09/2025 7:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.