ಕೆಎನ್ಎನ್ಡಿಜಿಟಲ್ ಡೆಸ್ಕ್ : ಹೆಂಡ ಕುಡಿದ ಅಮಲಿನಲ್ಲಿ ಮನುಷ್ಯ ಏನು ಮಾಡಬಹುದು ಎಂಬುದು ಅವನ ಜೀವಕ್ಕೆ ಅಪಾಯವಾದಾಗ ಮಾತ್ರ ತಿಳಿಯುತ್ತದೆ. ಇದೇ ರೀತಿಯ ಘಟನೆ ಬೆಳಕಿಗೆ ಬಂದಿದೆ.

ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹೆಬ್ಬಾವನ್ನು ಕುತ್ತಿಗೆಗೆ ಸುತ್ತಿಕೊಂಡಿದ್ದಾನೆ. ಜಾರ್ಖಂಡ್‌ನ ಗರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಪರಿಹಾರ ಪಂಚಾಯತ್‌ನ ಕಿಟಾಸೋಟಿ ಖುರ್ದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದೇ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ವೀಡಿಯೊದಲ್ಲಿ, ಬಿರ್ಜಲಾಲ್ ರಾಮ್ ಭುಯಾನ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ಹೆಬ್ಬಾವಿನ ಹಿಡಿತದಿಂದ ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವಾಸ್ತವವಾಗಿ, ಆತ ಕುಡಿದ ಸ್ಥಿತಿಯಲ್ಲಿ ತನ್ನ ಕುತ್ತಿಗೆಗೆ ಸರೀಸೃಪವನ್ನು ಸುತ್ತಿಕೊಂಡಿದ್ದಾನ. ನಂತ್ರ, ಹೆಂಡದ ನಶೆ ಇಳಿದ ಮೇಲೆ ಹಾವನ್ನು ಹೊರಹಾಕಲು ಹೆಣಗಾಡುತ್ತಿದ್ದಾನೆ. ಇದನ್ನು ಕಂಡ ಬಿರ್ಜಲಾಲನ ಮಗ ಮತ್ತು ಅವನ ಸ್ನೇಹಿತರು ತಂದೆಯನ್ನು ರಕ್ಷಿಸಲು ಮತ್ತು ಹೆಬ್ಬಾವಿನ ಬಿಗಿಯಾದ ಹಿಡಿತದಿಂದ ಬಿಡಿಸಿ ಪ್ರಾಣ ಉಳಿಸುವುದನ್ನು ನೋಡಬಹುದು.

ಘಟನೆಯಲ್ಲಿ ಬಿರ್ಜಲಾಲ್‌ಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಗ್ರಾಮದಲ್ಲಿಯೇ ಚಿಕಿತ್ಸೆ ನೀಡಲಾಗಿದೆ.

BIGG NEWS : ಹೊನ್ನಾಳಿ ಚಂದ್ರು ಸಾವಿನ ಪ್ರಕರಣ : `FSL’ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ!

BIG NEWS: ಗುಜರಾತ್ ವಿಧಾನಸಭಾ ಚುನಾವಣೆ: 9 ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಬಾಲ್ಕನಿಯಿಂದ ಬಿದ್ದ ಬಾಲಕಿಯ ಬ್ರೈನ್ ಡೆಡ್: ಮಗಳ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು

BIGG NEWS : ಹೊನ್ನಾಳಿ ಚಂದ್ರು ಸಾವಿನ ಪ್ರಕರಣ : `FSL’ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ!

Share.
Exit mobile version