Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿನ್ನಸ್ವಾಮಿ ಕ್ರೀಢಾಂಗಣದ ಬಳಿ ಕಾಲ್ತುಳಿತ ದುರಂತ ತುಂಬಾ ನೋವು ತಂದಿದೆ: ಸಿಎಂ ಸಿದ್ಧರಾಮಯ್ಯ ಭಾವುಕ ನುಡಿ

08/06/2025 9:16 PM

BIG NEWS: ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

08/06/2025 8:50 PM

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

08/06/2025 8:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಸಾರಿಗೆ ಬಸ್ಸಿನಲ್ಲೇ ‘ನಮಾಜ್’ ಮಾಡಿದ ‘ಚಾಲಕ ಕಂ ಕಂಡಕ್ಟರ್ ಸಸ್ಪೆಂಡ್’
KARNATAKA

BREAKING: ಸಾರಿಗೆ ಬಸ್ಸಿನಲ್ಲೇ ‘ನಮಾಜ್’ ಮಾಡಿದ ‘ಚಾಲಕ ಕಂ ಕಂಡಕ್ಟರ್ ಸಸ್ಪೆಂಡ್’

By kannadanewsnow0901/05/2025 2:21 PM

ಹಾವೇರಿ: ಕರ್ತವ್ಯದ ಅವಧಿಯಲ್ಲೇ ಬಸ್ ನಿಲ್ಲಿಸಿ ಸಾರಿಗೆ ಬಸ್ಸಿನಲ್ಲಿಯೇ ನಮಾಜ್ ಮಾಡಿದಂತ ಘಟನೆ ವೀಡಿಯೋ ವೈರಲ್ ಆಗಿತ್ತು. ಈ ನಡೆಯನ್ನು ತೋರಿದಂತ ಚಾಲಕ ಕಂ ಕಂಡಕ್ಟರ್ ಅಮಾನತುಗೊಳಿಸಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಆದೇಶಿಸಿದೆ.

ಈ ಸಂಬಂಧ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಆದೇಶ ಹೊರಡಿಸಿದ್ದು, ದಿನಾಂಕ:28/04/2025 ರಂದು ಹಾನಗಲ್ ಘಟಕದ ಅನುಸೂಚಿ ಸಂಖ್ಯೆ : 7/8, ಹಾನಗಲ್ ದಿಂದ ವಿಶಾಲಗಡ ಮಾರ್ಗದ ಮೇಲೆ ವಾಹನ ಸಂಖ್ಯೆ ಕೆಎ-27, ಎಫ್-0914, ರಲ್ಲಿ ಚಾಲಕರಾಗಿ ಕರ್ತವ್ಯಕ್ಕೆ ನಿಯೋಜಿಸಿದ್ದು, ದಿನಾಂಕ:29/04/2025 ರಂದು ವಿಶಾಲಗಡ ದಿಂದ ಹಾನಗಲ್ ಮಾರ್ಗವಾಗಿ ವಾಹನವನ್ನು ಕಾರ್ಯಾಚರಣೆ ಮಾಡುತ್ತಿರುವ ಸಮಯದಲ್ಲಿ ನೀವು ಸಮಯ 17:30 ಘಂಟೆಗೆ ಸುಮಾರಿಗೆ ವಾಹನವನ್ನು ಹುಬ್ಬಳ್ಳಿಯ ಹೊರ ಭಾಗದಲ್ಲಿನ ಗಟ್ಟೂರು ಕ್ರಾಸ್‌ನಿಂದ ಸ್ವಲ್ಪ ಮುಂದೆ ವಾಹನವನ್ನು ರಸ್ತೆಯ ಎಡಬದಿಗೆ ಹಾಕಿ, ವಾಹನವನ್ನು ಬಂದ್ ಮಾಡಿ, ಹ್ಯಾಂಡ್ ಬ್ರೇಕ್ ಹಾಕಿ, ಚಾಲಕರ ಸೀಟಿನಿಂದ ಎದ್ದು, ಚಾಲಕರ ಸೀಟಿನ್ ಹಿಂದೆ ಇರುವ ಮೂರರ (1,2,3) ಆಸನದಲ್ಲಿ ‘ನಮಾಜ'(ಪ್ರಾರ್ಥನೆ) ಮಾಡಿರುತ್ತೀರಿ ಎಂದಿದೆ.

ನೀವು ಈ ರೀತಿ ಸಂಸ್ಥೆಯ ಸಾರ್ವಜನಿಕ ಸೇವೆಯಲ್ಲಿರುವಾಗ ಮಾರ್ಗ ಮದ್ಯದಲ್ಲಿ ಬಸ್ ನಿಲ್ಲಿಸಿ, ಬಸ್ಸಿನಲ್ಲಿ ಪ್ರಯಾಣಿಕರು ಇದ್ದಾಗಲೂ ಸಹ ಧಾರ್ಮಿಕ ಆಚರಣೆ ಮಾಡಿ ಕರ್ತವ್ಯ ಲೋಪ ಎಸಗಿರುತ್ತೀರಿ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮತ್ತು ದೃಶ್ಯ ಮಾದ್ಯಮಗಳಲ್ಲಿ ವಿಷಯ ಭಿತ್ತರವಾಗಿ ಸಾರ್ವಜನಿಕರ ವಯಲದಲ್ಲಿ ಚರ್ಚೆಗೆ ಗ್ರಾಸವಾಗಲು ಮತ್ತು ಸಂಸ್ಥೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಲು ಕಾರಣರಾಗಿರುತ್ತೀರಿ ಎಂದು ತಿಳಿಸಿದೆ.

ಎ. ಆರ್. ಮುಲ್ಲಾ, ಚಾಲಕ ಬಿಲ್ಲೆ ಸಂಖ್ಯೆ : 300, ಹಾನಗಲ್ ಘಟಕ ಇವರು ಕ.ರಾ.ರ.ಸಾ.ಸಂಸ್ಥೆಯ ಶಿಸ್ತು ಮತ್ತು ನಡತೆಗಳ ನಿಯಮಾವಳಿ 1971ರ ಭಾಗ-2 ಖಂಡಿಕೆ 3 ರಲ್ಲಿನ ಉಪ ಕಂಡಿಕೆ 1 ರಲ್ಲಿನ (ಎ) (ಬಿ) ಮತ್ತು (ಸಿ) ರಲ್ಲಿನ ನಿರ್ದೇಶನಗಳನ್ನು ಉಲ್ಲಂಘಿಸಿರುವುದು ಮೇಲೆ ನಮೂದಿಸಿದ ವರದಿಯಿಂದ ತಿಳಿಯುತ್ತದೆ. ಸದರಿಯವರು ಕೆಲಸದ ಮೇಲೆ ಇರುವುದರಿಂದ ಈ ಪ್ರಕರಣದ ತನಿಖೆಗೆ ಭಾದಕವಾಗಬಹುದೆಂದು, ಎ. ಆರ್. ಮುಲ್ಲಾ, ಚಾಲಕ ಬಿಲ್ಲೆ ಸಂಖ್ಯೆ : 300, ಹಾನಗಲ್‌ ಘಟಕ ಇವರನ್ನು ಅಮಾನತ್ತಗೊಳಿಸಬೇಕೆಂದು ಅಭಿಪ್ರಾಯಪಟ್ಟು ಈ ಕೆಳಗಿನಂತೆ ಆದೇಶಿಸಿದ್ದಾರೆ.

ಕ.ರಾ.ರ.ಸಾ.ಸಂಸ್ಥೆ ನೌಕರರ ನಡತೆ ಮತ್ತು ಶಿಸ್ತು ನಿಯಮಾವಳಿ-1971 ರ ನಿಯಮ 21(1) ಮತ್ತು ಕ.ರಾ.ರ.ಸಾ.ಸಂಸ್ಥೆಯ ಸುತ್ತೋಲೆ ಸಂ:ಕರಾಸಾ/ಕೇಕ/ಶಿಸ್ತು/959 ದಿನಾಂಕ:22/10/1999 ರ ಮೇರೆಗೆ ಪ್ರದತ್ತವಾದ ಅಧಿಕಾರದನ್ವಯ ನಡತೆ ಮತ್ತು ಶಿಸ್ತು ನಿಯಮ 21(1) ರಡಿಯಲ್ಲಿ ಎ. ಆರ್. ಮುಲ್ಲಾ, ಚಾಲಕ ಬಿಲ್ಲೆ ಸಂಖ್ಯೆ : 300, ಹಾನಗಲ್ ಘಟಕ ರವರನ್ನು ಈ ಕೂಡಲೇ ಜಾರಿಗೆ ಬರುವಂತೆ ವಿಚಾರಣೆ ಬಾಕಿ ಇಟ್ಟು ಅಮಾನತ್ತಿನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.

ಸದರಿಯವರಿಗೆ ಅಮಾನತ್ತಿನ ಅವಧಿಯಲ್ಲಿ ಜೀವನಾಧಾರ ಭತ್ಯೆಯನ್ನು ವಹಿಸಿದ ಕೆಲಸ ಮಾಡಿದ ಪೂರ್ಣಾವಧಿಗೆ (ದಿನದ ಭತ್ಯೆ ಹಾಗೂ ಇತರ ಭತ್ಯೆ ಬಿಟ್ಟು ಪಡೆಯಬಹುದಾದ ಒಟ್ಟು ವೇತನದ ಶೇಕಡ 50 ಕ್ಕೆ ಸರಿಯಾಗುವಷ್ಟು ಮೊತ್ತವನ್ನು ನೀಡಲಾಗುವುದು. ಸದರಿಯವರು ತಮ್ಮ ಅಮಾನತ್ತಿನ ಅವಧಿಯಲ್ಲಿ ಯಾವುದೇ ತರಹದ ನೌಕರಿ, ವ್ಯಾಪಾರ, ಉದ್ಯೋಗ ಹಾಗೂ ವಿರಾಮ ಕಾಲದ ಚಟುವಟಿಕೆಗಳಲ್ಲಿ ತೊಡಗಿಲ್ಲವೆಂದು ಘೋಷಣೆ ಪತ್ರ ಸಹಿ ಮಾಡಿ ಕೊಟ್ಟಾಗ ಮಾತ್ರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗುತ್ತಾರೆ.

ಸದರಿಯವರು ಶಿಸ್ತುಪಾಲನಾಧಿಕಾರಿಯಿಂದ ಲಿಖಿತ ಅನುಮತಿ ಪಡೆಯದೇ ಕಾರ್ಯಕ್ಷೇತ್ರವನ್ನು ತೊರೆದು ಹೊರಗೆ ಹೋಗಬಾರದು. ಸದರಿಯವರು ತಮ್ಮ ಸರಿಯಾದ ಅಂಚೆ ವಿಳಾಸವನ್ನು ತಿಳಿಸಬೇಕು. ಇಲ್ಲದೇ ಹೋದಲ್ಲಿ ಈ ಕಛೇರಿಯ ದಾಖಲಾತಿಯಲ್ಲಿ ಇರುವ ವಿಳಾಸಕ್ಕೆ ತಿಳುವಳಿಕೆ ಪತ್ರ ಹಾಗೂ ಇತರ ಕಾಗದ ಪತ್ರವನ್ನು ಕಳಿಸಲಾಗುವುದು. ಅಂತಹ ಅಂಚೆಗಳು ಬಟವಡೆಯಾಗದಿದ್ದಲ್ಲಿ ಅಂತಹ ವಿಳಾಸದಾರರು ಇಲ್ಲ ಅಥವಾ ಬಟವಾಡೆ ವೇಳೆಯಲ್ಲಿ ಸಿಗುವುದಿಲ್ಲ ಎಂಬ ಅಂಚೆ ಶರಾಗಳೊಂದಿಗೆ ಪರತ್‌ ಬಂದರೂ ಸಹ ಸದರಿಯವರಿಗೆ ಸಕಲ ಉದ್ದೇಶಗಳಿಗಾಗಿ ಆ ಪತ್ರಗಳು ಮುಟ್ಟಿರುತ್ತವೆ ಎಂದು ಪರಿಗಣಿಸಲಾಗುವುದು. ಈ ರೀತಿ ಜಾರಿಯಾಗದೇ ಇರುವ ಪತ್ರಗಳು ಜಾರಿಯಾದ ಪತ್ರಗಳೆಂದೇ ಪರಿಗಣಿಸಲ್ಪಡುವುದರಿಂದ ವಿಚಾರಣೆಯನ್ನು ಮುಂದುವರೆಸಲು ಹಾಗೂ ಶಿಸ್ತಿನ ಕ್ರಮವನ್ನು ಜರುಗಿಸಲು ಅವು ಪ್ರತಿಬಂಧಕವಾಗಲಾರವು ಎಂದು ತಿಳಿಸಿದ್ದಾರೆ.

BREAKING: ನಾನು ಮಾಜಿ ಸಂಸದ ಡಿ.ಕೆ ಸುರೇಶ್ ಪತ್ನಿ ಎಂಬುದಾಗಿ ವೀಡಿಯೋ ಹರಿಬಿಟ್ಟ ಮಹಿಳೆ ಅರೆಸ್ಟ್

BREAKING: ಪಹಲ್ಗಾಮ್ ಉಗ್ರರ ದಾಳಿ: ನ್ಯಾಯಾಂಗ ತನಿಖೆಗೆ ಕೋರಿದ್ದ ಅರ್ಜಿ ಸ್ವೀಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್ | Pahalgam Terror Attack

Share. Facebook Twitter LinkedIn WhatsApp Email

Related Posts

ಚಿನ್ನಸ್ವಾಮಿ ಕ್ರೀಢಾಂಗಣದ ಬಳಿ ಕಾಲ್ತುಳಿತ ದುರಂತ ತುಂಬಾ ನೋವು ತಂದಿದೆ: ಸಿಎಂ ಸಿದ್ಧರಾಮಯ್ಯ ಭಾವುಕ ನುಡಿ

08/06/2025 9:16 PM1 Min Read

BIG NEWS: ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

08/06/2025 8:50 PM3 Mins Read

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

08/06/2025 8:39 PM3 Mins Read
Recent News

ಚಿನ್ನಸ್ವಾಮಿ ಕ್ರೀಢಾಂಗಣದ ಬಳಿ ಕಾಲ್ತುಳಿತ ದುರಂತ ತುಂಬಾ ನೋವು ತಂದಿದೆ: ಸಿಎಂ ಸಿದ್ಧರಾಮಯ್ಯ ಭಾವುಕ ನುಡಿ

08/06/2025 9:16 PM

BIG NEWS: ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

08/06/2025 8:50 PM

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

08/06/2025 8:39 PM

ರಾಜ್ಯದಲ್ಲಿಂದು 61 ಜನರಿಗೆ ಕೊರೋನಾ ದೃಢ: ಸೋಂಕಿತರ ಸಂಖ್ಯೆ 423ಕ್ಕೆ ಏರಿಕೆ

08/06/2025 7:45 PM
State News
KARNATAKA

ಚಿನ್ನಸ್ವಾಮಿ ಕ್ರೀಢಾಂಗಣದ ಬಳಿ ಕಾಲ್ತುಳಿತ ದುರಂತ ತುಂಬಾ ನೋವು ತಂದಿದೆ: ಸಿಎಂ ಸಿದ್ಧರಾಮಯ್ಯ ಭಾವುಕ ನುಡಿ

By kannadanewsnow0908/06/2025 9:16 PM KARNATAKA 1 Min Read

ಮೈಸೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾಗದಂತ ಕಾಲ್ತುಳಿತ ದುರಂತವು ತುಂಬಾ ನೋವು ತಂದಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕ ನುಡಿಯಾಡಿದ್ದಾರೆ.…

BIG NEWS: ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

08/06/2025 8:50 PM

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

08/06/2025 8:39 PM

ರಾಜ್ಯದಲ್ಲಿಂದು 61 ಜನರಿಗೆ ಕೊರೋನಾ ದೃಢ: ಸೋಂಕಿತರ ಸಂಖ್ಯೆ 423ಕ್ಕೆ ಏರಿಕೆ

08/06/2025 7:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.