ಬೆಂಗಳೂರಿನ ನಾಗರಿಕರ ಮೊಬೈಲ್ಗಳಿಗೆ ಶನಿವಾರ (ಮೇ 2) ತುರ್ತು ಎಚ್ಚರಿಕೆ ಸಂದೇಶಗಳು (Emergency Alert) ಬರಲಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಹಮ್ಮಿಕೊಂಡಿರುವ ‘ಸೆಲ್ ಬ್ರಾಡ್ಕಾಸ್ಟಿಂಗ್ ಅಲರ್ಟ್’ ವ್ಯವಸ್ಥೆಯ ತಾಂತ್ರಿಕ ಪರೀಕ್ಷೆಯ ಭಾಗವಾಗಿ ಈ ಸಂದೇಶಗಳನ್ನು ಕಳುಹಿಸಲಾಗುತ್ತಿದೆ.
ನಿಮ್ಮ ಮೊಬೈಲ್ಗೆ ಜೋರಾದ ಸೈರನ್ ಶಬ್ದದೊಂದಿಗೆ ಎಚ್ಚರಿಕೆ ಸಂದೇಶ ಬಂದಾಗ ಗಾಬರಿಯಾಗುವ ಅಗತ್ಯವಿಲ್ಲ. ಇದು ಕೇವಲ ತಾಂತ್ರಿಕ ಪರೀಕ್ಷೆಯಾಗಿದ್ದು, ಸಾರ್ವಜನಿಕರು ಯಾವುದೇ ಕ್ರಮ ಕೈಗೊಳ್ಳಬೇಕಿಲ್ಲ.
ಪ್ರವಾಹ, ಭೂಕಂಪ ಅಥವಾ ಭೂಕುಸಿತದಂತಹ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನರಿಗೆ ತಕ್ಷಣ ಮಾಹಿತಿ ನೀಡಿ ಅವರ ಜೀವ ರಕ್ಷಣೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ವೈಶಿಷ್ಟ್ಯಗಳು:
ಈ ಸಂದೇಶ ಪಡೆಯಲು ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲ.
ಯಾವುದೇ ವಿಶೇಷ ಆ್ಯಪ್ ಡೌನ್ಲೋಡ್ ಮಾಡುವ ಅವಶ್ಯಕತೆಯೂ ಇರುವುದಿಲ್ಲ.
2G, 3G, 4G ಅಥವಾ 5G ಯಾವುದೇ ನೆಟ್ವರ್ಕ್ ಹೊಂದಿರುವ ಮೊಬೈಲ್ಗಳಿಗೂ ಈ ಸಂದೇಶ ರವಾನೆಯಾಗುತ್ತದೆ.
ಕಾರ್ಯನಿರ್ವಹಣೆ: ಇದು ಮೊಬೈಲ್ ಟವರ್ಗಳ ಮೂಲಕ ನಿರ್ದಿಷ್ಟ ಪ್ರದೇಶದ ಎಲ್ಲ ಫೋನ್ಗಳಿಗೆ ಏಕಕಾಲದಲ್ಲಿ ಸಂದೇಶ ರವಾನಿಸುವ ತಂತ್ರಜ್ಞಾನವಾಗಿದೆ.








