ನವದೆಹಲಿ: ಪಹಲ್ಗಾಮ್ ನಲ್ಲಿನ ಉಗ್ರರ ದಾಳಿಯ ನಂತ್ರ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಮಟ್ಟ ಹಾಕುವ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ತೊಡಗಿದೆ. ಈ ರಕ್ಷಣಾ ಕಾರ್ಯಾಚರಣೆ, ಸೇನೆಯ ಚಲನವಲನಗಳನ್ನು ನೇರಪ್ರಸಾರ ಮಾಡಬೇಡಿ ಅಂತ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಸಲಹೆ ಮಾಡಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಿರುವಂತ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ರಾಷ್ಟ್ರೀಯ ಭದ್ರತೆ ಹಿತಾಸಕ್ತಿಯಲ್ಲಿ ಸೋಷಿಯಲ್ ಮೀಡಿಯಾಗಳು ರಕ್ಷಣಾ ಕಾರ್ಯಾಚರಣೆ, ಸೇನೆಯ ಚಲನವಲನಗಳ ನೇರಪ್ರಸಾರ ಮಾಡಬಾರದು ಅಂತ ಸಲಹೆ ಮಾಡಿದೆ.
ವರದಿ ಮಾಡುವಾಗ ಅಸ್ತಿತ್ವದಲ್ಲಿನ ಕಾನೂನು, ನಿಬಂಧನೆಗಳಿಗೆ ಬದ್ಧವಾಗಿರಬೇಕು. ರಕ್ಷಣಾ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರವನ್ನು ಮಾಡದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎಲ್ಲಾ ಮಾಧ್ಯಮ ಚಾನೆಲ್ ಗಳಿಗೆ ಸಲಹೆ ನೀಡಿದೆ.
The Ministry of Information and Broadcasting issues an advisory to all media channels to refrain from showing live coverage of defence operations and movement of security forces… pic.twitter.com/iyq9c6AQx4
— Press Trust of India (@PTI_News) April 26, 2025
ಸಿಂಧೂ ನದಿ ನೀರು ಹರಿಸದೇ ಹೋದರೇ ರಕ್ತ ಹರಿಯುತ್ತೆ: ಭಾರತಕ್ಕೆ ಪಾಕ್ ಮಾಜಿ ಸಚಿವ ಬೆದರಿಕೆ