ಕೆಎನ್ಎನ್ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ಟ್ರೆಂಡ್ ಬಹಳ ಜನಪ್ರಿಯವಾಗಿದೆ. ರಾತ್ರಿಯ ಕತ್ತಲೆಯಲ್ಲಿ ನೀರಿನಲ್ಲಿ ಅರಿಶಿಣವನ್ನ ಬೆರೆಸುವ ರೀಲ್’ಗಳು ಮತ್ತು ವೀಡಿಯೋಗಳನ್ನ ಎಲ್ಲರೂ ಅಪ್ಲೋಡ್ ಮಾಡುತ್ತಿದ್ದಾರೆ. ಆದ್ರೆ, ಈ ರೀತಿ ಮಾಡುವ ಜನರು ತಮಗೆ ತಾವೇ ತೊಂದರೆಯನ್ನ ಆಹ್ವಾನಿಸಿಕೊಳ್ಳುತ್ತಿದ್ದಾರೆ ಎಂದು ಅರುಣ್ ಕುಮಾರ್ ವ್ಯಾಸ್ ಎಂಬ ಜ್ಯೋತಿಷಿ ಹೇಳಿದ್ದಾರೆ. ಇನ್ನು ಈ ವಿಚಿತ್ರ ಪ್ರವೃತ್ತಿಯ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಹೀಗೆ ಮಾಡುವುದರಿಂದ ನೀವು ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸಲು ಅವಕಾಶ ನೀಡುವುದಲ್ಲದೆ, ಈ ಕ್ರಿಯೆಯು ದೆವ್ವಗಳನ್ನ ಆಹ್ವಾನಿಸಿದಂತೆ ಎಂದು ಜ್ಯೋತಿಷಿ ಅರುಣ್ ಹೇಳಿದ್ದಾರೆ. ಜ್ಯೋತಿಷಿಯ ಈ ವೀಡಿಯೊ ವೈರಲ್ ಆದ ನಂತರ, ಅನೇಕ ನೆಟ್ಟಿಗರು ಈ ಟ್ರೆಂಡ್’ಗೆ ಹೋಗಿ ಅಪಾಯವನ್ನು ಆಹ್ವಾನಿಸಿದ್ದೇವೆಯೇ ಅನ್ನೋ ಗೊಂದಲಕ್ಕೊಳಗಾಗಿದ್ದಾರೆ.
ನೀರಿನಲ್ಲಿ ಅರಿಶಿಣ ಬೆರೆಸುವುದು ಸಾಮಾನ್ಯ ಪ್ರಕ್ರಿಯೆಯಲ್ಲ, ಬದಲಾಗಿ ತಾಂತ್ರಿಕ ಆಚರಣೆ ಎಂದು ಜ್ಯೋತಿಷಿ ಅರುಣ್ ಹೇಳಿದ್ದಾರೆ. ತಮ್ಮ ವೀಡಿಯೊದಲ್ಲಿ, ಜನರು ಇದನ್ನು ಅಪ್ಪಿತಪ್ಪಿಯೂ ಪ್ರಯತ್ನಿಸಬೇಡಿ ಎಂದು ಎಚ್ಚರಿಸಿದ್ದಾರೆ. ಯಾಕಂದ್ರೆ, ಇದು ಅವರ ಮನೆಗೆ ನಕಾರಾತ್ಮಕ ಶಕ್ತಿಯನ್ನು ತರಬಹುದು. ಇದು ಮಾತ್ರವಲ್ಲದೆ, ಅವರನ್ನು ದೆವ್ವಗಳು ಸಹ ಕಾಡಬಹುದು ಎಂದಿದ್ದಾರೆ.
ಇದು ನಿಮ್ಮ ಜಾತಕದ ಮೇಲೆ ಪರಿಣಾಮ ಬೀರುತ್ತದೆ!
ಅಂತಹ ಚಟುವಟಿಕೆಗಳು ನಿಮ್ಮ ಜನ್ಮ ಕುಂಡಲಿಯಲ್ಲಿ ಚಂದ್ರ ಮತ್ತು ಗುರು ಗ್ರಹಗಳನ್ನ ದುರ್ಬಲಗೊಳಿಸಬಹುದು, ಇದು ನಿಮ್ಮ ಅದೃಷ್ಟದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಅವರು ಹೇಳಿದರು. ಇದು ನಿಮ್ಮ ಮಾನಸಿಕ ಸ್ಥಿತಿಯನ್ನ ಸಹ ಹಾಳು ಮಾಡಬಹುದು. ಇದು ಸಂಪೂರ್ಣವಾಗಿ ಹಾನಿಕಾರಕ ಪ್ರಕ್ರಿಯೆಯಾಗಿದ್ದು, ಇದು ನಿಮ್ಮ ಮನೆಗೆ ವಿಪತ್ತು ತರಬಹುದು ಎಂದು ಜ್ಯೋತಿಷಿ ಹೇಳಿಕೊಂಡಿದ್ದಾರೆ. ಆದ್ದರಿಂದ, ಅಂತಹ ವಿಷಯಗಳನ್ನ ತಪ್ಪಿಸಬೇಕು ಎಂದು ಹೇಳಿದ್ದಾರೆ.
ಈ ಎಚ್ಚರಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದು, ಕೆಲವೇ ಗಂಟೆಗಳಲ್ಲಿ ಇದನ್ನು 5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ, ಸಾವಿರಾರು ಜನರು ಈ ಪೋಸ್ಟ್’ಗೆ ತಮ್ಮ ಪ್ರತಿಕ್ರಿಯೆಗಳನ್ನ ನೀಡಿದ್ದಾರೆ.
ಜ್ಯೋತಿಷಿ ವೈರಲ್ ವಿಡಿಯೋ ಇಲ್ಲಿದೆ ನೋಡಿ.!
https://www.instagram.com/reel/DLPNJAjNi9g/?utm_source=ig_web_copy_link
‘ರಕ್ತ ಹರಿಸೋರನ್ನ ಬಿಡೋದಿಲ್ಲ, 22 ನಿಮಿಷದಲ್ಲೇ ಶತ್ರುಗಳನ್ನ ಸೋಲಿಸಲಾಯ್ತು’ : ಪಾಕ್’ಗೆ ‘ಪ್ರಧಾನಿ ಮೋದಿ’ ಖಡಕ್ ಸಂದೇಶ