ಬಳ್ಳಾರಿ: ಭರತ್ ರೆಡ್ಡಿಯವರು 5 ನಿಮಿಷ ಸಾಕು; ಜನಾರ್ಧನ ರೆಡ್ಡಿಯವರ ಮನೆ ಸುಟ್ಟು ಭಸ್ಮ ಮಾಡುತ್ತೇನೆ ಎಂದಿದ್ದಾರೆ. ಇದು ಶಾಸಕರು ಆಡುವ ಮಾತೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.
ಬಿಜೆಪಿ ವತಿಯಿಂದ ಬಳ್ಳಾರಿಯಲ್ಲಿ ಇಂದು ಕಾಂಗ್ರೆಸ್ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂಥ ಭಸ್ಮಾಸುರನಿಗೆ ಜನ್ಮ ಕೊಟ್ಟಿದ್ದಾರೆ ಈ ಬಳ್ಳಾರಿಯಲ್ಲಿ ಎಂದು ಕಳವಳ ವ್ಯಕ್ತಪಡಿಸಿದರು. ಇವತ್ತಲ್ಲ ನಾಳೆ ಜನಾರ್ಧನ ರೆಡ್ಡಿ ಮುಗಿಸಿ ಬಿಡುವುದಾಗಿ ಹೇಳುತ್ತೀರಿ. ಏನು ಅಷ್ಟೂ ತಾಕತ್ತಿದೆಯೇ ನಿಮಗೆ ಎಂದು ಸವಾಲು ಹಾಕಿದರು.
ನಾವೂ ನೋಡುತ್ತೇವೆ; ನಾವು ಯಾವುದಕ್ಕೂ ಹೆದರುವ ಮಕ್ಕಳಲ್ಲ. ನಾವೂ ಇಳಿಯುತ್ತೇವೆ. ನಿಮ್ಮಂತೆ ದುಂಡಾವರ್ತಿ ಮಾಡುವುದಿಲ್ಲ. ಡಾ. ಬಾಬಾಸಾಹೇಬ ಅಂಬೇಡ್ಕರರು ಕೊಟ್ಟ ಸಂವಿಧಾನದ ಅಡಿಯಲ್ಲೇ ನಿಮಗೆ ಪಾಠ ಕಲಿಸಲು ಸಾಧ್ಯವಿದೆ. ಅದನ್ನು ಕಲಿಸಿ ತೋರಿಸುತ್ತೇವೆ ಎಂದು ತಿಳಿಸಿದರು.
ನೀವು ಕೋಪ ಮಾಡಿಕೊಂಡು ಮೂಗು ಕುಯ್ದು ಹಾಕಿದರೆ ಅದು ಮತ್ತೆ ಬೆಳೆಯದು ಎಂದು ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಕಿವಿಮಾತು ಹೇಳಿದರು. ನಿಮ್ಮ ಕೋಪದ ಕೂಸು, ಪಾಪದ ಕೂಸು ನಿಮ್ಮ ಮೇಲೆ ಹಗೆತನ ಸಾಧಿಸುತ್ತಿದೆ ಎಂದು ತಿಳಿಸಿದರು.
ರಾಯಚೂರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ, ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ








