Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಮಚರಿತಮಾನಸದ ಈ ಶ್ಲೋಕಗಳು ನಿಮ್ಮ ಎಲ್ಲಾ ಆಸೆ ಪೂರೈಸುತ್ವೆ, ದೊಡ್ಡ ಸಮಸ್ಯೆ ಸಹ ದೂರವಾಗುತ್ವೆ!

28/06/2025 5:28 PM

Watch Video: ಗುತ್ತಿಗೆ ಸ್ಟಾಫ್ ನರ್ಸ್ ರಿನೀವಲ್ ಗೆ ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯ: ಆಡಿಯೋ ವೈರಲ್

28/06/2025 5:26 PM

CBSE Important Notice 2025 : ‘ವಿದ್ಯಾರ್ಥಿ ವೇತನ’ಕ್ಕಾಗಿ ಅರ್ಜಿ ಆಹ್ವಾನ, ಯಾರೆಗೆಲ್ಲಾ ಲಭ್ಯ.? ಅರ್ಜಿ ಸಲ್ಲಿಕೆ ಹೇಗೆ ಗೊತ್ತಾ.?

28/06/2025 4:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Watch Video: ಗುತ್ತಿಗೆ ಸ್ಟಾಫ್ ನರ್ಸ್ ರಿನೀವಲ್ ಗೆ ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯ: ಆಡಿಯೋ ವೈರಲ್
KARNATAKA

Watch Video: ಗುತ್ತಿಗೆ ಸ್ಟಾಫ್ ನರ್ಸ್ ರಿನೀವಲ್ ಗೆ ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯ: ಆಡಿಯೋ ವೈರಲ್

By kannadanewsnow0928/06/2025 5:26 PM

ಚಿತ್ರದುರ್ಗ: ಜಿಲ್ಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವಂತ ಸ್ಟಾಫ್ ನರ್ಸ್ ಒಪ್ಪರ ಕಾಂಟ್ರಾಕ್ಟ್ ಮುಂದುವರೆಸೋದಕ್ಕೆ, ರಿನೀವಲ್ ಮಾಡಿಕೊಡೋದಕ್ಕೆ ಸಾವಿರಾರು ರೂಪಾಯಿಯ ಲಂಚ ನೀಡುವಂತೆ ವೈದ್ಯರೊಬ್ಬರು ಒತ್ತಾಯಿಸಿದಂತ ಆಡಿಯೋ ವೈರಲ್ ಆಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಡಾ.ಕೃಷ್ಣ ಎಂಬುವರದ್ದು ಎನ್ನಲಾದಂತ ಆಡಿಯೋ ಈಗ ವೈರಲ್ ಆಗಿದೆ. ಅದರಲ್ಲಿ ಗುತ್ತಿಗೆ ರಿನೀವಲ್ ಮಾಡಿಕೊಡುವುದಕ್ಕೆ ಸ್ಟಾಫ್ ನರ್ಸ್ ಒಬ್ಬರಿಗೆ 5,000 ನೀಡುವಂತೆ ಆಗ್ರಹಿಸಿರೋದು ಕೇಳಿ ಬಂದಿದೆ.

ಜವಗೊಂಡನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎರಡು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸ್ಟಾಫ್ ನರ್ಸ್ ಒಬ್ಬರು ಕಾರ್ಯ ನಿರ್ವಹಿಸುತ್ತಿದ್ದರು. ಇಂತಹ ಅವರ ಗುತ್ತಿಗೆ ಅವಧಿಯನ್ನು ಮುಂದುವರೆಸೋದಕ್ಕೆ 5,000 ಕೊಟ್ಟರೆ ಮಾತ್ರವೇ ಮಾಡಿಕೊಡುವುದಾಗಿ ವೈದ್ಯ ಕೃಷ್ಣ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಇದಷ್ಟೇ ಅಲ್ಲದೇ ನೀನು ಬೇಗ ಕೊಡದಿದ್ದರೇ ಆ ಬಳಿಕ 10,000 ಆಗುತ್ತದೆ. ಇನ್ನೂ ಲೇಟ್ ಆದರೇ 15,000 ಕೊಟ್ಟರೆ ಮಾತ್ರವೇ ಗುತ್ತಿಗೆ ಅವಧಿಯನ್ನು ರಿನೀವಲ್ ಮಾಡಿಕೊಡೋದಕ್ಕೆ ಸಹಿ ಹಾಕುವುದಾಗಿ ವೈದ್ಯ ಡಾ.ಕೃಷ್ಣ ಒತ್ತಾಯಿಸಿದ್ದಾರೆ. ಅದ್ಯಾರಿಗೆ ಹೇಳುತ್ತೀಯೋ ಹೇಳು, ಡೋಂಟ್ ಕೇರ್. ಟಿಹೆಚ್ಓ ಬಳಿಯಲ್ಲಿ ಸಹಿ ಹಾಕಿಸಿಕೊಳ್ಳುತ್ತೀಯಾ ನನ್ನ ಬಿಟ್ಟು ಅದು ಸಾಧ್ಯವಾದರೇ ಹಾಕಿಸಿಕೋ ಹೋಗು ಅಂತ ಅವಾಜ್ ಹಾಕಿದ್ದಾರೆ.

ನನ್ನನ್ನು ಯಾರಿಂದಲೂ ಏನು ಮಾಡೋದಕ್ಕೆ ಸಾಧ್ಯವಿಲ್ಲ. ನನ್ನ ಎದುರು ಹಾಕಿಕೊಂಡ ನಿನಗೆ ಕಿರಿಕಿರಿ ಶುರುವಾದಂತೆಯೇ. ಲಂಚದ ಹಣ ಕೊಡೋದೇ ಆರೋಗ್ಯ ಇಲಾಖೆಯಲ್ಲಿ ಯಾವೊಂದು ಕೆಲಸ ನಡೆಯೋದಿಲ್ಲಮ್ಮ. ನಾನಂತು 5000 ಕೊಟ್ರೆ ಮಾತ್ರವೇ ರಿನೀವಲ್ ಅರ್ಜಿಗೆ ಸಹಿ ಹಾಕೋದು. ಇಲ್ಲವಾದಲ್ಲಿ ನಿನ್ನ ಹೇಗೆ ಟರ್ಮಿನೇಟ್ ಮಾಡಬೇಕು ಅಂತ ನನಗೆ ಗೊತ್ತಿದೆ ಎಂಬುದಾಗಿಯೂ ಬೆದರಿಕೆ ಹಾಕಿರೋದು ಆಡಿಯೋದಲ್ಲಿ ಕೇಳಿ ಬಂದಿದೆ.

ಈ ಕುರಿತಂತೆ ಚಿತ್ರದುರ್ಗ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಮಾಹಿತಿ ಪಡೆಯಲು ಕನ್ನಡ ನ್ಯೂಸ್ ನೌ ಸಂಪರ್ಕಿಸುವಂತ ಪ್ರಯತ್ನ ಮಾಡಿತು. ಆದರೇ ಅವರು ಪೋನ್ ಕರೆಯನ್ನು ಸ್ವೀಕರಿಸಲಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಳು,  ಸಚಿವ ದಿನೇಶ್ ಗುಂಡೂರಾವ್ ಯಾವ ಕ್ರಮವನ್ನು ಲಂಚಬಾಕ ವೈದ್ಯನ ವಿರುದ್ಧ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ವೈದ್ಯನ ವಿರುದ್ಧ ಕ್ರಮಕ್ಕೆ ರೈತ ಸಂಘಟನೆಯಿಂದ THOಗೆ ಮನವಿ

ಜವಗೊಂಡನಹಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಘಟಕ ದಲ್ಲಿ ವೈದ್ಯ ಡಾ.ಕೃಷ್ಣ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಬೆಳಿಗ್ಗೆ 11 ಗಂಟೆಗೆ ಬರುತ್ತಾರೆ. ಮೂರು ಗಂಟೆಗೆ ಅಲೆ ವಾಪಸ್ ಹೋಗಿರುತ್ತಾರೆ. ವಾರದಲ್ಲಿ ಮೂರು ನಾಲ್ಕು ದಿನ ಮಾತ್ರ ಡ್ಯೂಟಿಗೆ ಬರುತ್ತಾರೆ. ಬಂದರು ವೈದ್ಯ ಡಾ.ಕೃಷ್ಣ ಸರಿಯಾಗಿ ರೋಗಿಗಳನ್ನು ನೋಡುತ್ತಿಲ್ಲ. ಕೊಡುತ್ತಿಲ್ಲ ಸರ್ಕಾರದಿಂದ ಬಂದ ಔಷಧಿಗಳನ್ನು ರೋಗಿಗಳಿಗೆ ನೀಡದೆ ಔಷಧಿಯನ್ನು ಹೊರಗಡೆ ತೆಗೆದುಕೊಳ್ಳಲು ಚೀಟಿ ಬರೆದು ಕೊಡುತ್ತಾರೆ. ಹೀಗೆ 108 ಸಮಸ್ಯೆ ಇರುವ ವೈದ್ಯಾಧಿಕಾರಿಯನ್ನು ಕೂಡಲೇ ಇಲ್ಲಿಂದ ವರ್ಗಾಯಿಸಬೇಕು. ಹೊಸ ವೈದ್ಯಾಧಿಕಾರಿಯನ್ನು ನೇಮಕ ಮಾಡಬೇಕು. ಇದು ಜಿಲ್ಲೆಯ ಮತ್ತು ತಾಲೂಕು ಗಡಿಗ್ರಾಮ ಆಗಿದ್ದು ಇದು ಹೋಬಳಿಯ ಹೆಡ್ ಕ್ವಾಟ್ರು ಆಗಿರುತ್ತದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ 48 ಹಾದು ಹೋಗುತ್ತಿದ್ದು ಆಕ್ಸಿಡೆಂಟ್ ಆದ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ಹೆರಿಗೆ ವ್ಯವಸ್ಥೆ ಇಲ್ಲ ಎಲ್ಲಿಗೆ ಹೋದರು ಸುಮಾರು 25 km ಅಂತರವಾಗುತ್ತದೆ. ಆದ್ದರಿಂದ ಈ ಘಟಕವನ್ನು ಮೇಲ್ದರ್ಜೆಗೆ ಏರಿಸಿ 24 ಗಂಟೆ ಕಾರ್ಯನಿರ್ವಹಿಸುವಂತೆ ಕ್ರಮವಹಿಸಬೇಕು. ಅನೇಕ ಬಾರಿ ಈ ವಿಚಾರವಾಗಿ ಮನವಿ ಮಾಡಿದರು ಇದುವರೆಗೂ ಯಾವುದೇ ಕ್ರಮವಹಿಸಿರುವುದಿಲ್ಲ. ಆದ್ದರಿಂದ ತಕ್ಷಣ ಕಾರ್ಯರೂಪಕ್ಕೆ ಬರಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ರಾಮಣ್ಣ ಒತ್ತಾಯಿಸಿದ್ದಾರೆ. ಈ ಮೂಲಕ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ರೈತ ಸಂಘಟನೆಯಿಂದ ಡಾ.ಕೃಷ್ಣ ವಿರುದ್ಧ ದೂರು ನೀಡಿ, ವರ್ಗಾವಣೆಗೆ ಮನವಿ ಮಾಡಲಾಗಿದೆ.

ಪಾಕಿಸ್ತಾನದಲ್ಲಿ ಭೀಕರ ಪ್ರವಾಹ: ಹಲವರು ಸಾವು, ಪ್ರವಾಹದಲ್ಲಿ ಕೊಚ್ಚಿಹೋದ ಕುಟುಂಬ

BREAKING : ಸೆ.22ಕ್ಕೆ ಮೈಸೂರು ದಸರಾಗೆ ಚಾಲನೆ, ಅ.2 ರಂದು ಜಂಬೂ ಸವಾರಿ : ಸಿಎಂ ಸಿದ್ದರಾಮಯ್ಯ ಹೇಳಿಕೆ

Share. Facebook Twitter LinkedIn WhatsApp Email

Related Posts

BREAKING : ಇಂದಿರಾಗಾಂಧಿಗೆ ಅವಹೇಳನ : ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕೈ ಕಾರ್ಯಕರ್ತರು ವಶಕ್ಕೆ

28/06/2025 4:33 PM1 Min Read

BIG NEWS : ಸಂವಿಧಾನ ಮಾಡಿರೋದಲ್ಲ, ಪಾರ್ಲಿಮೆಂಟ್ ನಲ್ಲಿ ಚರ್ಚಿಸಿ ರಚನೆ ಆಗಿರೋದು : ಸಿಎಂ ಸಿದ್ದರಾಮಯ್ಯ

28/06/2025 4:20 PM1 Min Read

BIG NEWS : ಪ್ರವಾಸಿಗರೇ ಗಮನಿಸಿ : ಜೂ.30 ರಿಂದ ಜು.3ರವರೆಗೆ ನಂದಿಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

28/06/2025 4:00 PM1 Min Read
Recent News

ರಾಮಚರಿತಮಾನಸದ ಈ ಶ್ಲೋಕಗಳು ನಿಮ್ಮ ಎಲ್ಲಾ ಆಸೆ ಪೂರೈಸುತ್ವೆ, ದೊಡ್ಡ ಸಮಸ್ಯೆ ಸಹ ದೂರವಾಗುತ್ವೆ!

28/06/2025 5:28 PM

Watch Video: ಗುತ್ತಿಗೆ ಸ್ಟಾಫ್ ನರ್ಸ್ ರಿನೀವಲ್ ಗೆ ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯ: ಆಡಿಯೋ ವೈರಲ್

28/06/2025 5:26 PM

CBSE Important Notice 2025 : ‘ವಿದ್ಯಾರ್ಥಿ ವೇತನ’ಕ್ಕಾಗಿ ಅರ್ಜಿ ಆಹ್ವಾನ, ಯಾರೆಗೆಲ್ಲಾ ಲಭ್ಯ.? ಅರ್ಜಿ ಸಲ್ಲಿಕೆ ಹೇಗೆ ಗೊತ್ತಾ.?

28/06/2025 4:39 PM

BREAKING : ಇಂದಿರಾಗಾಂಧಿಗೆ ಅವಹೇಳನ : ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕೈ ಕಾರ್ಯಕರ್ತರು ವಶಕ್ಕೆ

28/06/2025 4:33 PM
State News
KARNATAKA

Watch Video: ಗುತ್ತಿಗೆ ಸ್ಟಾಫ್ ನರ್ಸ್ ರಿನೀವಲ್ ಗೆ ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯ: ಆಡಿಯೋ ವೈರಲ್

By kannadanewsnow0928/06/2025 5:26 PM KARNATAKA 2 Mins Read

ಚಿತ್ರದುರ್ಗ: ಜಿಲ್ಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವಂತ ಸ್ಟಾಫ್ ನರ್ಸ್ ಒಪ್ಪರ ಕಾಂಟ್ರಾಕ್ಟ್ ಮುಂದುವರೆಸೋದಕ್ಕೆ, ರಿನೀವಲ್ ಮಾಡಿಕೊಡೋದಕ್ಕೆ ಸಾವಿರಾರು…

BREAKING : ಇಂದಿರಾಗಾಂಧಿಗೆ ಅವಹೇಳನ : ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕೈ ಕಾರ್ಯಕರ್ತರು ವಶಕ್ಕೆ

28/06/2025 4:33 PM

BIG NEWS : ಸಂವಿಧಾನ ಮಾಡಿರೋದಲ್ಲ, ಪಾರ್ಲಿಮೆಂಟ್ ನಲ್ಲಿ ಚರ್ಚಿಸಿ ರಚನೆ ಆಗಿರೋದು : ಸಿಎಂ ಸಿದ್ದರಾಮಯ್ಯ

28/06/2025 4:20 PM

BIG NEWS : ಪ್ರವಾಸಿಗರೇ ಗಮನಿಸಿ : ಜೂ.30 ರಿಂದ ಜು.3ರವರೆಗೆ ನಂದಿಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

28/06/2025 4:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.