Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೋಟೆಲ್ ಗಳಲ್ಲಿ ಬಿಳಿ ಬೆಡ್ ಶೀಟ್ ಗಳನ್ನೇ ಏಕೆ ಬಳಸುತ್ತಾರೆ ಗೊತ್ತಾ? ನಿಮಗೆ ತಿಳಿಯದ ಅಸಲಿ ಸತ್ಯ ಇಲ್ಲಿದೆ!

18/04/2026 12:14 PM

ಗೃಹ ಸಾಲಗಾರರೇ ಎಚ್ಚರ: ಎಷ್ಟು `EMI’ ಮಿಸ್ ಮಾಡಿದರೆ ಬ್ಯಾಂಕ್ ನಿಮ್ಮ ಮನೆ ಹರಾಜು ಹಾಕುತ್ತೆ? ಇಲ್ಲಿದೆ ಮಾಹಿತಿ

18/04/2026 12:09 PM

ನಿಮ್ಮ ಮನೆಯ ಸಿಲಿಂಡರ್ ನಲ್ಲಿ ಇನ್ನೂ ಎಷ್ಟು ಗ್ಯಾಸ್ ಬಾಕಿ ಇದೆ? ಇಲ್ಲಿದೆ ನೋಡಿ ಪತ್ತೆ ಹಚ್ಚುವ ಸುಲಭ ವಿಧಾನ

18/04/2026 11:56 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಾಸಕ ಯತ್ನಾಳ್ ವಿರುದ್ಧ ಕ್ರಮದ ಬಗ್ಗೆ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದೇನು ಗೊತ್ತಾ?
KARNATAKA

ಶಾಸಕ ಯತ್ನಾಳ್ ವಿರುದ್ಧ ಕ್ರಮದ ಬಗ್ಗೆ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದೇನು ಗೊತ್ತಾ?

By kannadanewsnow0903/12/2024 6:00 PM

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ವಿಷಯವನ್ನು ಕೇಂದ್ರದ ವರಿಷ್ಠರು ಗಮನಿಸುತ್ತಿದ್ದಾರೆ. ಶಿಸ್ತು ಕ್ರಮ ಕೈಗೊಳ್ಳಬೇಕೇ ಅಥವಾ ಹೀಗೇ ಸುಮ್ಮನೇ ಬಿಡಬೇಕೇ ಎಂಬುದನ್ನು ನಿರ್ಧರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ವಿರುದ್ಧ ಮಾತ್ರ ಶಿಸ್ತು ಕ್ರಮವೇ ಅಥವಾ ಅವರ ಸುತ್ತ ಇರುವವರ ಬಗ್ಗೆ ಕ್ರಮ ಆಗಲಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದರು.

ಸಂಘಟನಾ ಪರ್ವದ ಹಿನ್ನೆಲೆಯಲ್ಲಿ ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಕರ್ನಾಟಕದ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಕೇಂದ್ರದ ಮಾಜಿ ಸಚಿವ ರಾಧಾಕೃಷ್ಣನ್ ಅವರು ಬೆಂಗಳೂರಿಗೆ ಬಂದು ಬೆಳಿಗ್ಗೆಯಿಂದ ಸುಮಾರು 4ರಿಂದ 4.30 ತಾಸುಗಳ ಕಾಲ ಸಕ್ರಿಯ ಸದಸ್ಯತ್ವ ಮುಂದುವರಿಕೆ, ಬೂತ್ ಸಮಿತಿಗಳ ರಚನೆ, ಮಂಡಲ ಸಮಿತಿಗಳ ರಚನೆ ಕುರಿತು ಸಮಗ್ರವಾಗಿ ಚರ್ಚೆ ಮಾಡಿದ್ದಾರೆ; ‘ಸಂಘಟನಾ ಪರ್ವ’ ಯಶಸ್ಸಿಗೆ ಸಂಬಂಧಿಸಿ ಮಾರ್ಗದರ್ಶನ ನೀಡಿದ್ದಾರೆ ಎಂದರು.

ಕೋರ್ ಕಮಿಟಿ ಸಭೆಯೂ ನಡೆದಿದೆ. ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನೂ ನೀಡಿದ್ದಾರೆ ಎಂದು ವಿವರಿಸಿದರು. ಜಿಲ್ಲಾಧ್ಯಕ್ಷರು ಮತ್ತು ರಾಜ್ಯದ ಪದಾಧಿಕಾರಿಗಳು ಇವೆಲ್ಲವನ್ನೂ ಗಮನಿಸಿ ಸಂಘಟನೆ ಗಟ್ಟಿಗೊಳಿಸುವ ಕೆಲಸ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಹೇಳಿದರು. ಜಿಲ್ಲಾಧ್ಯಕ್ಷರು ರಾಷ್ಟ್ರೀಯ ನಾಯಕರಿಗೆ ಯಾವುದೇ ಮನವಿ ನೀಡಿಲ್ಲ; ಯಾರೂ ಭಯಪಡುವ ಅವಶ್ಯಕತೆ ಇಲ್ಲ ಎಂದು ಅವರು ಪ್ರಶ್ನೆಗೆ ನಗುತ್ತ ಉತ್ತರ ನೀಡಿದರು.

ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಸದಸ್ಯತ್ವದಲ್ಲಿ ದೇಶದಲ್ಲಿ ನಾಲ್ಕನೇ ಸ್ಥಾನವನ್ನು ರಾಜ್ಯ ಪಡೆದು ಸಾಧನೆ ಮಾಡಿದೆ ಎಂದರಲ್ಲದೆ, ಕರ್ನಾಟಕದ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ, ಹಗರಣಗಳಲ್ಲಿ ಮುಳುಗಿದೆ. 74 ಲಕ್ಷ ಸದಸ್ಯತ್ವ ಮಾಡಿದ್ದು, ಇನ್ನಷ್ಟು ಸದಸ್ಯತ್ವ ಮಾಡಲು ಅವಕಾಶವಿದೆ ಎಂದು ಕೇಂದ್ರದ ಮುಖಂಡರು ತಿಳಿಸಿದ್ದಾರೆ ಎಂದರು.

ಪಕ್ಷದ ಸಣ್ಣಪುಟ್ಟ ವಿಚಾರಗಳು ಇನ್ನು ಮೂರ್ನಾಲ್ಕು ದಿನಗಳಲ್ಲಿ ಸುಖಾಂತ್ಯ ಆಗಲಿದೆ ಎಂದು ಅವರು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು. ಪಕ್ಷದಲ್ಲಿ ನಾವೆಲ್ಲ ಒಟ್ಟಾಗಿದ್ದೇವೆ; ಒಟ್ಟಾಗಿ ಹೋಗಲಿದ್ದೇವೆ ಎಂದು ಸ್ಪಷ್ಟಪಡಿಸಿದರು. ಕೇಂದ್ರದ ನಾಯಕರಿಗೆ ಸಮಸ್ಯೆಗಳನ್ನು ಸರಿಪಡಿಸುವ ಶಕ್ತಿ ಇದೆ. ಅದನ್ನು ಮಾಡುತ್ತಾರೆ. ಈಗ ಚುನಾವಣೆ ಇಲ್ಲ; ನಮಗೂ ತಾಳ್ಮೆ ಬೇಕೆಂದು ಹೇಳಿದ್ದಾರೆ ಎಂದು ತಿಳಿಸಿದರು.

ಮಾಜಿ ಸಚಿವ ಅರಗ ಜ್ಞಾನೇಂದ್ರ ಅವರು ಮಾತನಾಡಿ, ಪಕ್ಷದ ಘನತೆಗೆ ಹಾನಿ ಮಾಡುವ ಕೆಲಸವನ್ನು ಯಾರೂ ಮಾಡಬಾರದು. ಬಹಿರಂಗವಾಗಿ ಪಕ್ಷದ ಅಧ್ಯಕ್ಷರು, ಪಕ್ಷವನ್ನು ಟೀಕಿಸುವುದು, ಹಿರಿಯರನ್ನು ಟೀಕಿಸಿದರೆ ಪಕ್ಷಕ್ಕೆ ಹೊಡೆತ ಬೀಳುತ್ತದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಪಕ್ಷವು ರಾಜ್ಯದಲ್ಲಿ ಈಚೆಗೆ ಸಾಕಷ್ಟು ಹೋರಾಟಗಳನ್ನು ಮಾಡಿ ಉತ್ತಮ ಇಮೇಜ್ ಸಂಪಾದಿಸಿತ್ತು. ಕೆಲವರ ಹೇಳಿಕೆ, ಮಾತಿನಿಂದಾಗಿ ದೊಡ್ಡ ಹೊಡೆತ ಅನುಭವಿಸಬೇಕಾದ ಪರಿಸ್ಥಿತಿಗೆ ಬಂದಿದೆ ಎಂದು ತಿಳಿಸಿದರು. ಇದಕ್ಕೆ ಅವಕಾಶ ಕೊಡಬಾರದು; ಅವರನ್ನು ಕರೆದು ಮಾತನಾಡಬೇಕು. ಅದಕ್ಕೂ ಕೇಳದೆ ಸೆಡ್ಡು ಹೊಡೆದರೆ ನಿಯಮಾವಳಿ ಪ್ರಕಾರ ಕ್ರಮ ತೆಗೆದುಕೊಳ್ಳಲು ಸಭೆಯಲ್ಲಿ ನಾನು ಸೇರಿದಂತೆ ಎಲ್ಲ ಹಿರಿಯರು, ಶಾಸಕರು ಅಭಿಪ್ರಾಯ ತಿಳಿಸಿದ್ದಾಗಿ ವಿವರ ನೀಡಿದರು.
ನಮ್ಮ ಹೈಕಮಾಂಡ್ ಶಕ್ತಿಯುತವಾಗಿದೆ. ಬಹಳ ಕಡಿಮೆ ಅವಧಿಯಲ್ಲಿ ಸಮಸ್ಯೆ ಸರಿ ಆಗುವುದಾಗಿ ಭಾವಿಸುತ್ತೇನೆ ಎಂದು ತಿಳಿಸಿದರು.

GOOD NEWS: ‘KKRTC ನೌಕರ’ರಿಗೆ ಗುಡ್ ನ್ಯೂಸ್: ‘1 ಕೋಟಿ ವಿಮಾ ಯೋಜನೆ’ಗೆ ಬ್ಯಾಂಕ್ ಜೊತೆಗೆ ಸಚಿವ ರಾಮಲಿಂಗಾರೆಡ್ಡಿ ಒಡಂಬಡಿಕೆ

BREAKING: ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಗೆ ಬಿಗ್ ರಿಲೀಫ್: ಚುನಾವಣಾ ಬಾಂಡ್ ಕೇಸ್ ರದ್ದುಪಡಿಸಿ ಹೈಕೋರ್ಟ್ ಆದೇಶ

Share. Facebook Twitter LinkedIn WhatsApp Email

Related Posts

ಗೃಹ ಸಾಲಗಾರರೇ ಎಚ್ಚರ: ಎಷ್ಟು `EMI’ ಮಿಸ್ ಮಾಡಿದರೆ ಬ್ಯಾಂಕ್ ನಿಮ್ಮ ಮನೆ ಹರಾಜು ಹಾಕುತ್ತೆ? ಇಲ್ಲಿದೆ ಮಾಹಿತಿ

18/04/2026 12:09 PM2 Mins Read

ನಿಮ್ಮ ಮನೆಯ ಸಿಲಿಂಡರ್ ನಲ್ಲಿ ಇನ್ನೂ ಎಷ್ಟು ಗ್ಯಾಸ್ ಬಾಕಿ ಇದೆ? ಇಲ್ಲಿದೆ ನೋಡಿ ಪತ್ತೆ ಹಚ್ಚುವ ಸುಲಭ ವಿಧಾನ

18/04/2026 11:56 AM2 Mins Read

ITR ಸಲ್ಲಿಕೆ : ನಿಮ್ಮ ಆದಾಯ ತೆರಿಗೆ ಮಿತಿಗಿಂತ ಕಡಿಮೆ ಇದ್ದರೂ ರಿಟರ್ನ್ ಫೈಲ್ ಮಾಡುವುದು ಏಕೆ ಮುಖ್ಯ? ಇಲ್ಲಿದೆ 5 ಪ್ರಮುಖ ಕಾರಣಗಳು!

18/04/2026 11:49 AM2 Mins Read
Recent News

ಹೋಟೆಲ್ ಗಳಲ್ಲಿ ಬಿಳಿ ಬೆಡ್ ಶೀಟ್ ಗಳನ್ನೇ ಏಕೆ ಬಳಸುತ್ತಾರೆ ಗೊತ್ತಾ? ನಿಮಗೆ ತಿಳಿಯದ ಅಸಲಿ ಸತ್ಯ ಇಲ್ಲಿದೆ!

18/04/2026 12:14 PM

ಗೃಹ ಸಾಲಗಾರರೇ ಎಚ್ಚರ: ಎಷ್ಟು `EMI’ ಮಿಸ್ ಮಾಡಿದರೆ ಬ್ಯಾಂಕ್ ನಿಮ್ಮ ಮನೆ ಹರಾಜು ಹಾಕುತ್ತೆ? ಇಲ್ಲಿದೆ ಮಾಹಿತಿ

18/04/2026 12:09 PM

ನಿಮ್ಮ ಮನೆಯ ಸಿಲಿಂಡರ್ ನಲ್ಲಿ ಇನ್ನೂ ಎಷ್ಟು ಗ್ಯಾಸ್ ಬಾಕಿ ಇದೆ? ಇಲ್ಲಿದೆ ನೋಡಿ ಪತ್ತೆ ಹಚ್ಚುವ ಸುಲಭ ವಿಧಾನ

18/04/2026 11:56 AM

ITR ಸಲ್ಲಿಕೆ : ನಿಮ್ಮ ಆದಾಯ ತೆರಿಗೆ ಮಿತಿಗಿಂತ ಕಡಿಮೆ ಇದ್ದರೂ ರಿಟರ್ನ್ ಫೈಲ್ ಮಾಡುವುದು ಏಕೆ ಮುಖ್ಯ? ಇಲ್ಲಿದೆ 5 ಪ್ರಮುಖ ಕಾರಣಗಳು!

18/04/2026 11:49 AM
State News
KARNATAKA

ಗೃಹ ಸಾಲಗಾರರೇ ಎಚ್ಚರ: ಎಷ್ಟು `EMI’ ಮಿಸ್ ಮಾಡಿದರೆ ಬ್ಯಾಂಕ್ ನಿಮ್ಮ ಮನೆ ಹರಾಜು ಹಾಕುತ್ತೆ? ಇಲ್ಲಿದೆ ಮಾಹಿತಿ

By kannadanewsnow5718/04/2026 12:09 PM KARNATAKA 2 Mins Read

ನಮ್ಮ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಲು ಹೆಚ್ಚಿನವರು ಗೃಹ ಸಾಲದ (Home Loan) ಮೊರೆ ಹೋಗುತ್ತಾರೆ. ಆದರೆ, ಆರ್ಥಿಕ…

ನಿಮ್ಮ ಮನೆಯ ಸಿಲಿಂಡರ್ ನಲ್ಲಿ ಇನ್ನೂ ಎಷ್ಟು ಗ್ಯಾಸ್ ಬಾಕಿ ಇದೆ? ಇಲ್ಲಿದೆ ನೋಡಿ ಪತ್ತೆ ಹಚ್ಚುವ ಸುಲಭ ವಿಧಾನ

18/04/2026 11:56 AM

ITR ಸಲ್ಲಿಕೆ : ನಿಮ್ಮ ಆದಾಯ ತೆರಿಗೆ ಮಿತಿಗಿಂತ ಕಡಿಮೆ ಇದ್ದರೂ ರಿಟರ್ನ್ ಫೈಲ್ ಮಾಡುವುದು ಏಕೆ ಮುಖ್ಯ? ಇಲ್ಲಿದೆ 5 ಪ್ರಮುಖ ಕಾರಣಗಳು!

18/04/2026 11:49 AM

NMMS ಪರೀಕ್ಷೆ ಫಲಿತಾಂಶ: ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದ ಸಾಗರದ ಪ್ರತಿಭೆಗಳು, ಮೇಲುಗೈ

18/04/2026 11:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.