Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿತ್ರದುರ್ಗದ ‘ಹಿರಿಯ ಪತ್ರಕರ್ತ ಡಿ.ಕುಮಾರಸ್ವಾಮಿ’ ಅವರಿಗೆ ‘ಕರ್ನಾಟಕ ಮಾಧ್ಯಮ ಅಕಾಡೆಮಿ’ ಪ್ರಶಸ್ತಿ

09/01/2026 9:53 PM

2024-25ನೇ ಸಾಲಿನ KAS ಪರೀಕ್ಷಾ ಪೂರ್ವ ತರಬೇತಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

09/01/2026 9:35 PM

ಸಾಗರದ ಮಾರಿಕಾಂಬ ಜಾತ್ರೆಗೆ ಭರ್ಜರಿ ಸಿದ್ಧತೆ: ನಾಳೆ ಶಾಸಕ ಗೋಪಾಲಕೃಷ್ಣ ಬೇಳೂರು ಪೋಸ್ಟರ್, ಕ್ಯಾಲೆಂಡರ್ ಬಿಡುಗಡೆ

09/01/2026 9:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮಗಿದು ಗೊತ್ತಾ? ಭಾರತದ ‘ನೋಟು’ಗಳಲ್ಲಿ ಈ ವಿಶೇಷಗಳಿವೆ | Indian Currency Note
KARNATAKA

ನಿಮಗಿದು ಗೊತ್ತಾ? ಭಾರತದ ‘ನೋಟು’ಗಳಲ್ಲಿ ಈ ವಿಶೇಷಗಳಿವೆ | Indian Currency Note

By kannadanewsnow0922/09/2024 7:38 PM

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನಿಂದ 10, 20, 50, 100, 200 ಹಾಗೂ 500 ಮಾದರಿಯ ನೋಟುಗಳನ್ನು ಚಲಾವಣೆಗೆ ಪರಿಚಯಿಸಲಾಗಿದೆ. ಈ ಎಲ್ಲಾ ಬಗೆಯ ನೋಟುಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ದೇಶದ ವೈವಿದ್ಯತೆಯನ್ನು ಸಾರುವಂತ ವಿಶೇಷತೆಗಳಿಂದ ಕೂಡಿವೆ. ಹಾಗಾದ್ರೇ ಏನೆಲ್ಲಾ ವಿಶೇಷತೆಗಳಿವೆ ಅನ್ನುವ ಬಗ್ಗೆ ಮುಂದೆ ಓದಿ.

ಆರ್ ಬಿ ಐ ಚಲಾವಣೆಗೆ ತಂದಿರುವಂತ ಹತ್ತು ರೂಪಾಯಿಯ ನೋಟಿನಿಂದ ಹಿಡಿದು, 500 ರೂ.ಗಳ ನೋಟಿನವರೆಗೆ ಭಾರತದ ನೋಟಿನಲ್ಲಿ ವಿಶೇಷತೆಗಳಿವೆ. ಭಾರತದ ಅತೀ ಹೆಚ್ಚು ಮುಖಬೆಲೆಯ ನೋಟಾದಂತ 2000 ರೂಪಾಯಿಗಳನ್ನು ಆರ್ ಬಿ ಐ ಹಿಂಪಡೆದಿತ್ತು. ಈಗ 10, 20, 50, 100 ಹಾಗೂ 500 ರೂ.ಗಳ ನೋಟುಗಳು ಮಾತ್ರ ಚಲಾವಣೆಯಲ್ಲಿದ್ದಾವೆ. ಈ ಒಂದೊಂದು ನೋಟಿನಲ್ಲಿರುವಂತ ವಿಶೇಷತೆ ಈ ಕೆಳಗಿನಂತಿದೆ.

10 ರೂ.ಗಳ ನೋಟಿನ ವಿಶೇಷತೆಗಳು

10 ರೂಪಾಯಿ ನೋಟಿನ ರಚನೆಯು ಕೋನಾರ್ಕ್ ಸೂರ್ಯ ದೇವಸ್ಥಾನದಿಂದ ಕೂಡಿದೆ. ಕೋನಾರ್ಕ್ ಸೂರ್ಯ ದೇವಸ್ಥಾನವನ್ನು ಕ್ರಿ.ಶ 13ನೇ ಶತಮಾನದಲ್ಲಿ ನಿರ್ಮಾಣ ಮಾಡಿದ್ದಾಗಿದೆ. ಪೂರ್ವ ಗಂಗಾ ರಾಜವಂಶದವರ ಸಾಮ್ರಾಜ್ಯದ ವೇಳೆಯಾಗಿದೆ.

24 ಚಕ್ರಗಳು ದಿನದ 24 ಗಂಟೆಗಳನ್ನು ಮತ್ತು 7 ಕುದುರೆಗಳು ವಾರದ 7 ದಿನಗಳ್ನು ಸೂಚಿಸುತ್ತವೆ. ಕೋನಾರ್ಕ್ ಸೂರ್ಯ ದೇವಸ್ಥಾನವನ್ನು ಯುನೆಸ್ಕೋ 1984ರಲ್ಲಿ ಭಾರತದ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತ್ತು.

20 ರೂಪಾಯಿ ನೋಟಿನ ವಿಶೇಷತೆಗಳು

20 ರೂ ನೋಟಿನ ರಚನೆ ಎಲ್ಲೋರಾ ಗುಹೆಗಳ ರಚನೆಯನ್ನು ಒಳಗೊಂಡಿದೆ. ಇದರ ನಿರ್ಮಾಣ ಕ್ರಿಸ್ತ ಶಕ 600 ರಿಂದ 1000 ಆಗಿದೆ. ರಾಷ್ಟ್ರಕೂಟರು ಮತ್ತು ಯಾದವ ರಾಜವಂಶಜರ ಕಾಲದ್ದಾಗಿದೆ.

ಎಲ್ಲೋರಾ ಗುಹೆಗಳು 34 ಕಲ್ಲಿನ ಗುಹೆಗಳ ಸರಣಿಯಾಗಿದೆ. 6 ರಿಂದ 8ನೇ ಶತಮಾನದಲ್ಲಿ ಕೆತ್ತಲಾದ ಈ ಗುಹೆಗಳು ಹಿಂದೂ, ಬೌದ್ಧ ಮತ್ತು ಜೈನ ದೇವಾಲಯಗಳ ನೆಲೆಯಾಗಿವೆ. ಎಲ್ಲೋರಾ ಗುಹೆಗಳನ್ನು 1983ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತ್ತು. ಈ ಎಲ್ಲಾ ವೈಶಿಷ್ಯತೆಗಳನ್ನು 20 ರೂ.ಗಳ ನೋಟು ಒಳ ಗೊಂಡಿದೆ.

50 ರೂ.ಗಳ ನೋಟಿನ ವಿಶೇಷತೆಗಳು

50 ರೂ.ಗಳ ನೋಟಿನ ರಚನೆಯು ಹಂಪಿಯ ಕಲ್ಲಿನ ರಥವನ್ನು ಒಳಗೊಂಡಿದೆ. ಕ್ರಿ.ಶ 14ನೇ ಶತಮಾನದಲ್ಲಿ ಹಂಪಿಯ ಕಲ್ಲಿನ ರಥ ನಿರ್ಮಿಸಲಾಗಿದ್ದು ಎನ್ನಲಾಗಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ನಿರ್ಮಿಸಿದ್ದು.

ಈ ಪ್ರಸಿದ್ಧ ಕಲ್ಲಿನ ರಥವನ್ನು 14 ರಿಂದ 16ನೇ ಶತಮಾನದ ನಡುವೆ ವಿಜಯನಗರ ಸಾಮ್ರಾಜ್ಯದಲ್ಲಿ ನಿರ್ಮಿಸಲಾಗಿತ್ತು. ಇದನ್ನು 1986ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲಾಗಿತ್ತು. ಇದರ ಚಿತ್ರವನ್ನು 50 ರೂ.ಗಳ ನೋಟಿನಲ್ಲಿ ಇದೆ.

100 ರೂ.ಗಳ ನೋಟಿನ ವಿಶೇಷತೆಗಳು

100 ರೂಪಾಯಿ ನೋಟಿನಲ್ಲಿ ರಾಣಿ ಕಿ ವಾವ್ ಚಿತ್ರವನ್ನು ಕಾಣಬಹುದಾಗಿದೆ. ಇದು ಕ್ರಿ.ಶ 11ನೇ ಶತಮಾನದ್ದು. ಸೋಲಂಕಿ ರಾಜವಂಶರ ಕಾಲದ್ದಾಗಿದೆ. ಗುಜರಾತ್ ನ ಪಟಾನ್ ನಲ್ಲಿರುವ ಮೆಟ್ಟಿಲು ಬಾವಿಯನ್ನು ಯುನೆಸ್ಕೋ 2014ರಲ್ಲಿ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತ್ತು. ಇದನ್ನು 11ನೇ ಶತಮಾನದಲ್ಲಿ ಸೋಲಂಕಿ ರಾಣಿ ಉದಯಮತಿ ತನ್ನ ಪತಿಯ ಪ್ರೀತಿಯ ಸಂಕೇತವಾಗಿ ನಿರ್ಮಿಸಿದ್ದರು.

200 ರೂ.ಗಳ ನೋಟಿನ ವಿಶೇಷತೆಗಳು

ಈ ನೋಟಿನಲ್ಲಿ ಸಾಂಚಿ ಸ್ತೂಪದ ರಚನೆ ಒಳಗೊಂಡಿದೆ. ಕ್ರಿ.ಪೂ 3ನೇ ಶತಮಾನದ್ದಾಗಿದೆ. ಮೌರ್ಯ ಸಾಮ್ರಾಜ್ಯದ ಕಾಲದ್ದು ಸಾಂಚಿ ಸ್ತೂಪವಾಗಿದೆ.

ಮೊದಲ ಬಾರಿಗೆ 200 ರೂ ಮುಖಬೆಲೆಯ ನೋಟನ್ನು ಆಗಸ್ಟ್ 2017ರಲ್ಲಿ ಪರಿಚಯಿಸಲಾಯಿತು. ಇದರಲ್ಲಿ ಬೌದ್ಧ ಸ್ಮಾರಕವಾದ ಮಧ್ಯಪ್ರದೇಶದಲ್ಲಿರುವ ಸಾಂಚಿ ಸ್ತೂಪವಿದೆ. ಇದನ್ನು ಕ್ರಿ.ಪೂ 2ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. 1989ರಲ್ಲಿ ಇದು ಕೂಡ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿದೆ.

500 ರೂ.ಗಳ ನೋಟಿನ ವಿಶೇಷತೆಗಳು

ಈ ನೋಟಿನಲ್ಲಿ ಕೆಂಪು ಕೋಟೆಯ ರಚನೆಯನ್ನು ಕಾಣಬಹುದಾಗಿದೆ. ಇದರ ನಿರ್ಮಾಣ ಮೇ.12, 1693 ರಿಂದ ಏಪ್ರಿಲ್.6, 1648 ಆಗಿದೆ. ಮೊಘಲ್ ಸಾಮ್ರಾಜ್ಯದ ಕಾಲಾವಧಿಯಲ್ಲಿ ನಿರ್ಮಾಣವಾಗಿತ್ತು.

2016ರ ನವೆಂಬರ್ ನಲ್ಲಿ ಹೊಸ 500 ರೂ ನೋಟುಗಳನ್ನು ಪರಿಚಯಿಸಲಾಗಿತ್ತು. ಈ ನೋಟುಗಳ ಮೇಲೆ ದೆಹಲಿಯ ಕೆಂಪು ಕೋಟೆಯ ಭಾಗಗಳನ್ನು ಪ್ರಕಟಿಸಲಾಗಿದೆ. ಈ ಐತಿಹಾಸಿಕ ಕೋಟೆಯನ್ನು 17ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ಇದನ್ನು 2007ರಲ್ಲಿ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು.

1 ವರ್ಷದೊಳಗೆ ತುಂಗಭದ್ರಾ ಜಲಾಶಯಕ್ಕೆ ನೂತನ ‘ಕ್ರಸ್ಟ್ ಗೇಟ್’ಗಳ ಅಳವಡಿಕೆಗೆ ಕ್ರಮ: ಡಿಸಿಎಂ ಡಿಕೆಶಿ

ಇತಿಹಾಸದಲ್ಲಿ ಮೊದಲ ಬಾರಿಗೆ ‘ಚೆಸ್ ಒಲಿಂಪಿಯಾಡ್’ನಲ್ಲಿ ಭಾರತಕ್ಕೆ ಚಿನ್ನ ಗೆಲುವು | 45th Chess Olympiad

Share. Facebook Twitter LinkedIn WhatsApp Email

Related Posts

ಚಿತ್ರದುರ್ಗದ ‘ಹಿರಿಯ ಪತ್ರಕರ್ತ ಡಿ.ಕುಮಾರಸ್ವಾಮಿ’ ಅವರಿಗೆ ‘ಕರ್ನಾಟಕ ಮಾಧ್ಯಮ ಅಕಾಡೆಮಿ’ ಪ್ರಶಸ್ತಿ

09/01/2026 9:53 PM2 Mins Read

2024-25ನೇ ಸಾಲಿನ KAS ಪರೀಕ್ಷಾ ಪೂರ್ವ ತರಬೇತಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

09/01/2026 9:35 PM1 Min Read

ಸಾಗರದ ಮಾರಿಕಾಂಬ ಜಾತ್ರೆಗೆ ಭರ್ಜರಿ ಸಿದ್ಧತೆ: ನಾಳೆ ಶಾಸಕ ಗೋಪಾಲಕೃಷ್ಣ ಬೇಳೂರು ಪೋಸ್ಟರ್, ಕ್ಯಾಲೆಂಡರ್ ಬಿಡುಗಡೆ

09/01/2026 9:20 PM1 Min Read
Recent News

ಚಿತ್ರದುರ್ಗದ ‘ಹಿರಿಯ ಪತ್ರಕರ್ತ ಡಿ.ಕುಮಾರಸ್ವಾಮಿ’ ಅವರಿಗೆ ‘ಕರ್ನಾಟಕ ಮಾಧ್ಯಮ ಅಕಾಡೆಮಿ’ ಪ್ರಶಸ್ತಿ

09/01/2026 9:53 PM

2024-25ನೇ ಸಾಲಿನ KAS ಪರೀಕ್ಷಾ ಪೂರ್ವ ತರಬೇತಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

09/01/2026 9:35 PM

ಸಾಗರದ ಮಾರಿಕಾಂಬ ಜಾತ್ರೆಗೆ ಭರ್ಜರಿ ಸಿದ್ಧತೆ: ನಾಳೆ ಶಾಸಕ ಗೋಪಾಲಕೃಷ್ಣ ಬೇಳೂರು ಪೋಸ್ಟರ್, ಕ್ಯಾಲೆಂಡರ್ ಬಿಡುಗಡೆ

09/01/2026 9:20 PM

ರಾತ್ರಿ ಸಮಯದಲ್ಲಿ ಮಾತ್ರ ತೆರೆದಿರುವ ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ನಿಮ್ಮ ಜೀವನದಲ್ಲಿನ ಕತ್ತಲು ಬೆಳಕಾಗುತ್ತೆ

09/01/2026 8:37 PM
State News
KARNATAKA

ಚಿತ್ರದುರ್ಗದ ‘ಹಿರಿಯ ಪತ್ರಕರ್ತ ಡಿ.ಕುಮಾರಸ್ವಾಮಿ’ ಅವರಿಗೆ ‘ಕರ್ನಾಟಕ ಮಾಧ್ಯಮ ಅಕಾಡೆಮಿ’ ಪ್ರಶಸ್ತಿ

By kannadanewsnow0909/01/2026 9:53 PM KARNATAKA 2 Mins Read

ಚಿತ್ರದುರ್ಗ: ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 2025ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿಯು ಚಿತ್ರದುರ್ಗದ ಹಿರಿಯ…

2024-25ನೇ ಸಾಲಿನ KAS ಪರೀಕ್ಷಾ ಪೂರ್ವ ತರಬೇತಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

09/01/2026 9:35 PM

ಸಾಗರದ ಮಾರಿಕಾಂಬ ಜಾತ್ರೆಗೆ ಭರ್ಜರಿ ಸಿದ್ಧತೆ: ನಾಳೆ ಶಾಸಕ ಗೋಪಾಲಕೃಷ್ಣ ಬೇಳೂರು ಪೋಸ್ಟರ್, ಕ್ಯಾಲೆಂಡರ್ ಬಿಡುಗಡೆ

09/01/2026 9:20 PM

ರಾತ್ರಿ ಸಮಯದಲ್ಲಿ ಮಾತ್ರ ತೆರೆದಿರುವ ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ನಿಮ್ಮ ಜೀವನದಲ್ಲಿನ ಕತ್ತಲು ಬೆಳಕಾಗುತ್ತೆ

09/01/2026 8:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.