Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಮ್ಯಾಚ್ ಆಡಿಸುವುದಕ್ಕೆ ಸಚಿವ ಸಂಪುಟ ಅಸ್ತು

11/12/2025 9:48 PM

BREAKING : ಹೊಸ ವಾಹನ ಖರೀದಿಸುವವರಿಗೆ ಬಿಗ್ ಶಾಕ್ : ಶೇಕಡಾವರು ಸೆಸ್ ಹೆಚ್ಚಿಸಿದ ರಾಜ್ಯ ಸರ್ಕಾರ

11/12/2025 9:04 PM

ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್‌ ವಿತರಣೆಗೆ ಪುನರ್‌ ಪರಿಶೀಲಿಸಿ ಕ್ರಮ: ಸಚಿವ ಸಂತೋಷ್ ಲಾಡ್

11/12/2025 8:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮಗೆ ‘ಜರ್ನಲಿಸ್ಟ್’ ಆಗಬೇಕೆಂಬ ಕನಸಿದೆಯೇ? ಇಲ್ಲಿದೆ ‘ಸುವರ್ಣಾವಕಾಶ’ | Journalist Course
KARNATAKA

ನಿಮಗೆ ‘ಜರ್ನಲಿಸ್ಟ್’ ಆಗಬೇಕೆಂಬ ಕನಸಿದೆಯೇ? ಇಲ್ಲಿದೆ ‘ಸುವರ್ಣಾವಕಾಶ’ | Journalist Course

By kannadanewsnow0918/06/2024 10:33 AM

ಬೆಂಗಳೂರು: ಅನೇಕರಿಗೆ ನಾನು ಪತ್ರಕರ್ತ ಆಗಬೇಕು. ಸಾಮಾಜಿಕ ಕೆಲಸ ಮಾಡಬೇಕು. ಜನರ ಕಸ್ಟಗಳಿಗೆ ಪ್ರತಿಸ್ಪಂದಿಸೋ ಕಾರ್ಯ ಪ್ರವೃತ್ತನಾಗಬೇಕು ಎಂಬುದು ಕನಸಾಗಿರುತ್ತದೆ. ನಿಮಗೆ ಜರ್ನಲಿಸ್ಟ್ ಆಗಬೇಕು ಎಂಬ ಕನಸಿದ್ದರೇ, ಆ ಕನಸಿಗೆ ಸಂವಾದ ಬದುಕು ಸುವರ್ಣಾವಕಾಶ ಒದಗಿಸಿಕೊಡುತ್ತಿದೆ. ಆ ಬಗ್ಗೆ ಮುಂದೆ ಓದಿ.

ಬದುಕು ಸೆಂಟರ್ ಫಾರ್ ಲೈವ್ಲಿವುಡ್ಸ್ ಲರ್ನಿಂಗ್ ‘ಅಭಿವ್ಯಕ್ತಿ’ ಹೆಸರಿನ 9 ತಿಂಗಳ ಪತ್ರಿಕೋದ್ಯಮ ಡಿಪ್ಲೊಮಾ ಕೋರ್ಸ್‌ಗೆ ಆಸಕ್ತ ಯುವಜನರಿಂದ ಅರ್ಜಿ ಆಹ್ವಾನಿಸಿದೆ. ಪತ್ರಿಕೆ, ಸುದ್ದಿ ವಾಹಿನಿ, ಮನರಂಜನಾ ವಾಹಿನಿ, ಸಿನಿಮಾ, ಡಿಜಿಟಲ್ ಮೀಡಿಯಾದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಇರುವ; ಪದವಿ, ಸ್ನಾತಕೋತ್ತರ ಪದವಿ ಮುಗಿಸಿರುವ ಯುವಜನರು ಅರ್ಜಿ ಸಲ್ಲಿಸಬಹುದು. ಯುವತಿಯರಿಗೆ ವಿಶೇಷ ಆದ್ಯತೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೋರ್ಸ್‌ ಅವಧಿಯಲ್ಲಿ ಸ್ಕಾಲರ್‌ಶಿಪ್‌ ಸಿಗಲಿದೆ.

ವರದಿಗಾರಿಕೆ, ಬರವಣಿಗೆಗೆ ಬೇಕಾದ ದೃಷ್ಟಿಕೋನ, ತಾಂತ್ರಿಕ ಕೌಶಲ್ಯದ ಜೊತೆಗೆ ಪ್ರಾಯೋಗಿಕ ಕಲಿಕೆ, ಸುದ್ದಿ ಸಂಪಾದನೆ, ಭಾಷಾಂತರದ ಜತೆಗೆ ಕಿರುತೆರೆ-ಹಿರಿತೆರೆಗಳಿಗೆ ಸೃಜನಶೀಲ ಸ್ಕ್ರಿಪ್ಟ್ ಬರವಣಿಗೆಯ ಪ್ರಾಯೋಗಿಕ ಕಲಿಕೆ, ಕ್ಯಾಮೆರಾ ನಿರ್ವಹಣೆ, ವಿಡಿಯೊ ಎಡಿಟಿಂಗ್, ಪೇಜ್ ಡಿಸೈನಿಂಗ್ (ಪ್ರಿಂಟ್ / ವೆಬ್) ಬಗ್ಗೆ ಅನುಭವಿ ತಂತ್ರಜ್ಞರಿಂದ ತರಗತಿಗಳು ಇರಲಿವೆ.

ಮೊಬೈಲ್‌ ಜರ್ನಲಿಸಮ್, ವೆಬ್‌ಸೈಟ್, ಸೋಷಿಯಲ್ ಮೀಡಿಯಾ ಹ್ಯಾಂಡ್ಲಿಂಗ್, ಆನ್‌ಲೈನ್‌ ಜರ್ನಲಿಸಮ್‌ನ ಆಧುನಿಕ ತಂತ್ರಜ್ಞಾನದ ಕೌಶಲ್ಯ ಕಲಿಕೆಯ ಜತೆಗೆ ಇಂಗ್ಲಿಷ್ ಭಾಷೆ, ಭಾಷಾಂತರ ಕಲೆ, ವರದಿಗಾರಿಕೆ, ಬರವಣಿಗೆ ಮುಂತಾದ ಕೌಶಲಗಳ ಪ್ರಾಯೋಗಿಕ ಕಲಿಕೆಯನ್ನು ಕೋರ್ಸ್ ಒಳಗೊಂಡಿದೆ.

ಬೆಂಗಳೂರಿನ ಕನಕಪುರ ರಸ್ತೆ ಬಳಿಯ ಬಂಜಾರಪಾಳ್ಯದಲ್ಲಿರುವ ಪರಿಸರ ಸ್ನೇಹಿ ಕ್ಯಾಂಪಸ್‌ನಲ್ಲಿ ಈ ವಸತಿಸಹಿತ (ರೆಸಿಡೆನ್ಷಿಯಲ್) ಕೋರ್ಸ್‌ ನಡೆಯಲಿದೆ. ಕ್ಯಾಂಪಸ್‌ನಲ್ಲಿ ಸುಸಜ್ಜಿತ ವಸತಿ, ಗ್ರಂಥಾಲಯ, ಕಂಪ್ಯೂಟರ್‌ ಲ್ಯಾಬ್‌ ವ್ಯವಸ್ಥೆ ಇದೆ. ವೃತ್ತಿಪರ ಮೆಂಟರಿಂಗ್, ಕೌನ್ಸಲಿಂಗ್ ವ್ಯವಸ್ಥೆಯ ಯುವಜನ ಸ್ನೇಹಿ ವಾತಾವರಣದಲ್ಲಿ ಕೋರ್ಸ್‌ ನಡೆಯಲಿದೆ.

ಬದುಕು ಸೆಂಟರ್ ಫಾರ್ ಲೈವ್ಲಿವುಡ್ಸ್ ಲರ್ನಿಂಗ್ ಕಳೆದ ಹದಿನಾಲ್ಕು ವರ್ಷಗಳಿಂದ ಗುಣಮಟ್ಟದ ಮಾಧ್ಯಮ ಶಿಕ್ಷಣವನ್ನು ನೀಡುತ್ತಿದೆ. ಅವಕಾಶ ವಂಚಿತ ಗ್ರಾಮೀಣ, ಅಂಚಿನ ಸಮುದಾಯಗಳ ಯುವಜನರಿಗೆ ಶಿಕ್ಷಣ ನೀಡುವುದು ಮತ್ತು ಆ ಮೂಲಕ ಅವರ ಸಾಮಾಜಿಕ ಚಲನೆಯಲ್ಲಿ ಭಾಗಿಯಾಗುವುದು ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್‌ನ ಮುಖ್ಯ ಗುರಿಯಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 15. ಜುಲೈ ತಿಂಗಳಿನಲ್ಲಿ ಪ್ರವೇಶ ಪರೀಕ್ಷೆ ಹಾಗೂ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ ತಿಂಗಳಿಂದ ತರಗತಿಗಳು ಆರಂಭವಾಗುತ್ತವೆ. ಆಸಕ್ತರು https://bit.ly/3Jrg0Hz ಈ ಗೂಗಲ್ ಫಾರ್ಮ್ ಮೂಲಕ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ 9945065060 / 7899769899 ಅಥವಾ massmedia@samvadabaduku.org ಮೂಲಕ ಸಂಪರ್ಕಿಸಬಹುದು.

Share. Facebook Twitter LinkedIn WhatsApp Email

Related Posts

BREAKING: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಮ್ಯಾಚ್ ಆಡಿಸುವುದಕ್ಕೆ ಸಚಿವ ಸಂಪುಟ ಅಸ್ತು

11/12/2025 9:48 PM1 Min Read

BREAKING : ಹೊಸ ವಾಹನ ಖರೀದಿಸುವವರಿಗೆ ಬಿಗ್ ಶಾಕ್ : ಶೇಕಡಾವರು ಸೆಸ್ ಹೆಚ್ಚಿಸಿದ ರಾಜ್ಯ ಸರ್ಕಾರ

11/12/2025 9:04 PM1 Min Read

ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್‌ ವಿತರಣೆಗೆ ಪುನರ್‌ ಪರಿಶೀಲಿಸಿ ಕ್ರಮ: ಸಚಿವ ಸಂತೋಷ್ ಲಾಡ್

11/12/2025 8:47 PM1 Min Read
Recent News

BREAKING: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಮ್ಯಾಚ್ ಆಡಿಸುವುದಕ್ಕೆ ಸಚಿವ ಸಂಪುಟ ಅಸ್ತು

11/12/2025 9:48 PM

BREAKING : ಹೊಸ ವಾಹನ ಖರೀದಿಸುವವರಿಗೆ ಬಿಗ್ ಶಾಕ್ : ಶೇಕಡಾವರು ಸೆಸ್ ಹೆಚ್ಚಿಸಿದ ರಾಜ್ಯ ಸರ್ಕಾರ

11/12/2025 9:04 PM

ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್‌ ವಿತರಣೆಗೆ ಪುನರ್‌ ಪರಿಶೀಲಿಸಿ ಕ್ರಮ: ಸಚಿವ ಸಂತೋಷ್ ಲಾಡ್

11/12/2025 8:47 PM

BREAKING: ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬೀಸ್ ವ್ಯಾಕ್ಸಿನ್, ಇಮ್ಯುನೊಗ್ಲಾಬ್ಯುಲಿನ್ ಉಚಿತವಾಗಿ ನೀಡಿ: ರಾಜ್ಯ ಸರ್ಕಾರ ಆದೇಶ

11/12/2025 8:37 PM
State News
KARNATAKA

BREAKING: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಮ್ಯಾಚ್ ಆಡಿಸುವುದಕ್ಕೆ ಸಚಿವ ಸಂಪುಟ ಅಸ್ತು

By kannadanewsnow0911/12/2025 9:48 PM KARNATAKA 1 Min Read

ಬೆಳಗಾವಿ: ಆರ್ ಸಿ ಬಿ ಸಂಭ್ರಮಾಚರಣೆ ದುರಂತದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಬ್ರೇಕ್ ಹಾಕಲಾಗಿತ್ತು. ಇದೀಗ ಚಿನ್ನಸ್ವಾಮಿ…

BREAKING : ಹೊಸ ವಾಹನ ಖರೀದಿಸುವವರಿಗೆ ಬಿಗ್ ಶಾಕ್ : ಶೇಕಡಾವರು ಸೆಸ್ ಹೆಚ್ಚಿಸಿದ ರಾಜ್ಯ ಸರ್ಕಾರ

11/12/2025 9:04 PM

ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್‌ ವಿತರಣೆಗೆ ಪುನರ್‌ ಪರಿಶೀಲಿಸಿ ಕ್ರಮ: ಸಚಿವ ಸಂತೋಷ್ ಲಾಡ್

11/12/2025 8:47 PM

BREAKING: ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬೀಸ್ ವ್ಯಾಕ್ಸಿನ್, ಇಮ್ಯುನೊಗ್ಲಾಬ್ಯುಲಿನ್ ಉಚಿತವಾಗಿ ನೀಡಿ: ರಾಜ್ಯ ಸರ್ಕಾರ ಆದೇಶ

11/12/2025 8:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.