Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಯಾದಗಿರಿ ವಸತಿ ನಿಲಯದಲ್ಲಿ ಊಟ ಸೇವಿಸಿ 28 ವಿದ್ಯಾರ್ಥಿನಿಯರು ಅಸ್ವಸ್ಥ : ಆಸ್ಪತ್ರೆಗೆ ದಾಖಲು

11/12/2025 9:40 AM

ಭಾರತಕ್ಕೆ ಮೆಕ್ಸಿಕೋ ಶಾಕ್: 2026 ರಿಂದ ಏಷ್ಯಾದ ದೇಶಗಳಿಗೆ ಆಮದು ಸುಂಕ ಶೇ. 50ರಷ್ಟು ಹೆಚ್ಚಳ !

11/12/2025 9:37 AM

ಗಮನಿಸಿ : ಅಪ್ಪಿತಪ್ಪಿಯೂ ಈ 7 ಸ್ಥಳಗಳಲ್ಲಿ ನಿಮ್ಮ `ಕ್ರೆಡಿಟ್ ಕಾರ್ಡ್’ ಎಂದಿಗೂ ಬಳಸಬೇಡಿ.!

11/12/2025 9:27 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮತ್ತೆ ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು ಬಿಡುಗಡೆಯಲ್ಲಿ ಅನ್ಯಾಯ: ಕನ್ನಡಿಗರನ್ನು ಕೆಣಕುತ್ತಿದೆ: ಡಿ.ಕೆ ಸುರೇಶ್ ಆಕ್ರೋಶ
KARNATAKA

ಮತ್ತೆ ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು ಬಿಡುಗಡೆಯಲ್ಲಿ ಅನ್ಯಾಯ: ಕನ್ನಡಿಗರನ್ನು ಕೆಣಕುತ್ತಿದೆ: ಡಿ.ಕೆ ಸುರೇಶ್ ಆಕ್ರೋಶ

By kannadanewsnow0911/10/2024 3:15 PM

ಬೆಂಗಳೂರು: “ಪದೇ, ಪದೇ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ತೆರಿಗೆ ಪಾಲಿನಲ್ಲಿ ಮೋಸವಾಗುತ್ತಿದೆ. ಕನ್ನಡಿಗರು ಹಾಗೂ ದಕ್ಷಿಣ ಭಾರತೀಯರ ಮನಸ್ಸನ್ನು ಕೇಂದ್ರ ಸರ್ಕಾರ ಕೆಣಕುತ್ತಿದೆ” ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದರು.

ರಾಜ್ಯಗಳಿಗೆ ತೆರಿಗೆ ಹಂಚಿಕೆ ಬಗ್ಗೆ ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದ ಪಟ್ಟಿಯ ಬಗ್ಗೆ ಮಾಧ್ಯಮದವರು ಸದಾಶಿವನಗರ ನಿವಾಸದ ಬಳಿ ಶುಕ್ರವಾರ ಕೇಳಿದಾಗ ಸುರೇಶ್ ಅವರು ಹೀಗೆ ಉತ್ತರಿಸಿದರು.

“ಕನ್ನಡಿಗರಿಗೆ ಆಗುತ್ತಿರುವ ಮೋಸವನ್ನು ಬಹಳ ದುಃಖದಿಂದ ಹೇಳುತ್ತಿದ್ದೇನೆ. ದೇಶದಲ್ಲಿಯೇ ಅತ್ಯಂತ ಹೆಚ್ಚು ತೆರಿಗೆ ಪಾವತಿಸುವ ಎರಡನೇ ರಾಜ್ಯ ಕರ್ನಾಟಕಕ್ಕೆ 6,498 ಕೋಟಿ ರೂಪಾಯಿ ಕೊಡಲಾಗಿದೆ. ದಕ್ಷಿಣ ಭಾರತ ರಾಜ್ಯಗಳಿಗೆ ಒಟ್ಟಾರೆ 28,152 ಕೋಟಿ ರೂಪಾಯಿ ತೆರಿಗೆ ಪಾಲು ಕೊಡಲಾಗಿದೆ. ಆದರೆ ಉತ್ತರ ಪ್ರದೇಶ ರಾಜ್ಯವೊಂದಕ್ಕೆ 31,962 ಕೋಟಿ ರೂಪಾಯಿ ನೀಡಲಾಗಿದೆ. ನಮಗೆ ಈಗಾಗಲೇ ಆಗಿರುವ ಅನ್ಯಾಯವನ್ನಾದರೂ ಕನಿಷ್ಠ ಪಕ್ಷ ಸರಿದೂಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬಹುದಿತ್ತು. 2022 ರ ಕೇಂದ್ರ ಬಜೆಟ್ ಸಂದರ್ಭದಲ್ಲಿಯೇ ರಾಜ್ಯಗಳ ತೆರಿಗೆ ಪಾಲಿನ ತಾರತಮ್ಯದ ಬಗ್ಗೆ ನಾನು ದನಿಯೆತ್ತಿದ್ದೆ. ಅದರಲ್ಲೂ ಕರ್ನಾಟಕಕ್ಕೆ ಮತ್ತು ದಕ್ಷಿಣ ಭಾರತ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದೆ” ಎಂದು ಹೇಳಿದರು.

“ಉತ್ತರ ಭಾರತ ರಾಜ್ಯಗಳಂತೆ, ದಕ್ಷಿಣ ಭಾರತದ ರಾಜ್ಯಗಳನ್ನು ಕೇಂದ್ರ ಸರ್ಕಾರ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು. ನಮ್ಮ ರಾಜ್ಯಗಳ ಅಭಿವೃದ್ದಿಗೆ ಪೂರಕವಾಗಿ ನಿಲ್ಲಬೇಕು ಎನ್ನುವ ಆಲೋಚನೆ ಕೇಂದ್ರ ಸರ್ಕಾರಕ್ಕೆ ಬರಬೇಕು.

ಕರ್ನಾಟಕದ ಮೇಲೆ ಮಲತಾಯಿ ಧೋರಣೆ ಏಕೆ?

“ಬಿಜೆಪಿ ಹಾಗೂ ಮಿತ್ರಪಕ್ಷದ 19 ಮಂದಿ ಸಂಸತ್ ಸದಸ್ಯರನ್ನು ಕರ್ನಾಟಕದಿಂದ ಕಳುಹಿಸಲಾಗಿದೆ. ಕಳೆದ 5 ಚುನಾವಣೆಗಳಲ್ಲಿ ಅತಿ ಹೆಚ್ಚು ಸಂಸದರನ್ನು ಕರ್ನಾಟಕದಿಂದ ಕಳುಹಿಸಿದರೂ ಏಕೆ ಈ ಧೋರಣೆ? ಕರ್ನಾಟಕದ ಜನರ ಮೇಲೆ ಮಲತಾಯಿ ಮತ್ಸರವೇಕೆ? ವಿಜಯದಶಮಿಯ ದಿನ ಕರ್ನಾಟಕಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಹಕ್ಕೋತ್ತಾಯ ಮಾಡುತ್ತಿದ್ದೇನೆ” ಎಂದು ಹೇಳಿದರು.

ನನ್ನ ಹಿಂದಿನ ಹೇಳಿಕೆ ತಿರುಚಲಾಗಿತ್ತು

ತೆರಿಗೆ ಅನ್ಯಾಯ ಮುಂದುವರೆದರೆ ದಕ್ಷಿಣ ಭಾರತ ಬೇರೆಯಾಗುವ ಪರಿಸ್ಥಿತಿ ಬರುತ್ತದೆ ಎನ್ನುವ ಹಿಂದಿನ ಹೇಳಿಕೆ ಬಗ್ಗೆ ಕೇಳಿದಾಗ, ” ನಾನು ಹೇಳಿದ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷ ತಿರುಚಿತ್ತು. ಮತ್ತೆ, ಮತ್ತೆ ಇದೇ ರೀತಿಯ ಕೆಲಸವನ್ನು ಮಾಡಲಾಗುತ್ತಿದೆ” ಎಂದರು.

ತಮಿಳುನಾಡು ಪ್ರತ್ಯೇಕ ದೇಶದ ದನಿ ಎತ್ತಿತ್ತು

“ಈ ಹಿಂದೆಯೇ ತಮಿಳುನಾಡಿನವರು ಪ್ರತ್ಯೇಕ ರಾಷ್ಟ್ರದ ದನಿ ಎತ್ತಿದ್ದರು. ನಾನು ರಾಜ್ಯಗಳ ಹಿತಾಸಕ್ತಿಗೆ ಧಕ್ಕೆ ತರಬಾರದು ಎಂದು ಮನವಿ ಮಾಡಿದ್ದೆ. ಕೇಂದ್ರ ಸರ್ಕಾರದ ಧೋರಣೆ ಸರಿಯಿಲ್ಲ. ಎಂದಿಗೂ ಕರ್ನಾಟಕವನ್ನು , ದಕ್ಷಿಣ ಭಾರತೀಯರನ್ನು ಕಡೆಗಣಿಸಬೇಡಿ. ನಾವು ಕೂಡ ಭಾರತ ಮಾತೆಯ ಮಕ್ಕಳು. ನಮ್ಮ ಮೇಲೆ ಮಲತಾಯಿ ಧೋರಣೆ ಸರಿಯಲ್ಲ” ಎಂದರು.

ಕರ್ನಾಟಕಕ್ಕೆ ಎಲ್ಲಾ ವಿಚಾರಗಳಲ್ಲಿ ವಿಜಯ ದೊರಕಲಿ

“ಮುಂದಿನ ದಿನಗಳಲ್ಲಿ ಕರ್ನಾಟಕ ಎಲ್ಲಾ ವಿಚಾರಗಳಲ್ಲೂ ವಿಜಯ ಸಾಧಿಸಲಿ. ತಾಯಿ ಭಾರತಾಂಬೆಯ ಮಡಿಲಲ್ಲಿ ನಾವಿದ್ದೇವೆ. ನಮ್ಮ ಕನ್ನಡಾಂಬೆ ಎಂದೆಂದಿಗೂ ವಿಜಯಪತಾಕೆಯನ್ನು ಹಾರಿಸಲಿ” ಎಂದು ಆಶಿಸುತ್ತೇನೆ” ಎಂದರು.

“ತಾಯಿ ಚಾಮುಂಡೇಶ್ವರಿ ಕರ್ನಾಟಕದ ಜನರ ಆಶೋತ್ತರಗಳನ್ನು ಈಡೇರಿಸುವ ಮುಖಾಂತರ ಭವಿಷ್ಯದಲ್ಲಿ ನಮ್ಮದು ಅಭಿವೃದ್ಧಿ ಹೊಂದಿದ ರಾಜ್ಯವಾಗಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯದ ಸಮಸ್ತ ಜನರಿಗೆ ವಿಜಯದಶಮಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತೇನೆ” ಎಂದರು.

Who is Noel Tata: ‘ಟಾಟಾ ಸಾಮ್ರಾಜ್ಯ’ದ ನೂತನ ಅಧ್ಯಕ್ಷರಾದ ‘ನೋಯೆಲ್ ಟಾಟಾ’ ಯಾರು? ಹಿನ್ನಲೆ ಏನು? ಇಲ್ಲಿದೆ ಡೀಟೆಲ್ಸ್ | New Tata Trusts Chairman

BREAKING: ಜಪಾನ್ ನ ‘ನಿಹಾನ್ ಹಿಡಾಂಕ್ಯೊ’ಗೆ ಪ್ರತಿಷ್ಠಿತ ‘2024ರ ನೊಬೆಲ್ ಶಾಂತಿ ಪ್ರಶಸ್ತಿ’ ಘೋಷಣೆ | 2024 Nobel Peace Prize

Share. Facebook Twitter LinkedIn WhatsApp Email

Related Posts

BREAKING : ಯಾದಗಿರಿ ವಸತಿ ನಿಲಯದಲ್ಲಿ ಊಟ ಸೇವಿಸಿ 28 ವಿದ್ಯಾರ್ಥಿನಿಯರು ಅಸ್ವಸ್ಥ : ಆಸ್ಪತ್ರೆಗೆ ದಾಖಲು

11/12/2025 9:40 AM1 Min Read

ಗಮನಿಸಿ : ಅಪ್ಪಿತಪ್ಪಿಯೂ ಈ 7 ಸ್ಥಳಗಳಲ್ಲಿ ನಿಮ್ಮ `ಕ್ರೆಡಿಟ್ ಕಾರ್ಡ್’ ಎಂದಿಗೂ ಬಳಸಬೇಡಿ.!

11/12/2025 9:27 AM2 Mins Read

SHOCKING : ಮಂಡ್ಯದಲ್ಲಿ 9 ನೇ ತರಗತಿ ವಿದ್ಯಾರ್ಥಿನಿಗಾಗಿ ಶಾಲಾ ಬಸ್ ಅಡ್ಡಗಟ್ಟಿದ ಪುಂಡರು : ವೀಡಿಯೋ ವೈರಲ್ |WATCH VIDEO

11/12/2025 9:23 AM1 Min Read
Recent News

BREAKING : ಯಾದಗಿರಿ ವಸತಿ ನಿಲಯದಲ್ಲಿ ಊಟ ಸೇವಿಸಿ 28 ವಿದ್ಯಾರ್ಥಿನಿಯರು ಅಸ್ವಸ್ಥ : ಆಸ್ಪತ್ರೆಗೆ ದಾಖಲು

11/12/2025 9:40 AM

ಭಾರತಕ್ಕೆ ಮೆಕ್ಸಿಕೋ ಶಾಕ್: 2026 ರಿಂದ ಏಷ್ಯಾದ ದೇಶಗಳಿಗೆ ಆಮದು ಸುಂಕ ಶೇ. 50ರಷ್ಟು ಹೆಚ್ಚಳ !

11/12/2025 9:37 AM

ಗಮನಿಸಿ : ಅಪ್ಪಿತಪ್ಪಿಯೂ ಈ 7 ಸ್ಥಳಗಳಲ್ಲಿ ನಿಮ್ಮ `ಕ್ರೆಡಿಟ್ ಕಾರ್ಡ್’ ಎಂದಿಗೂ ಬಳಸಬೇಡಿ.!

11/12/2025 9:27 AM

SHOCKING : ಮಂಡ್ಯದಲ್ಲಿ 9 ನೇ ತರಗತಿ ವಿದ್ಯಾರ್ಥಿನಿಗಾಗಿ ಶಾಲಾ ಬಸ್ ಅಡ್ಡಗಟ್ಟಿದ ಪುಂಡರು : ವೀಡಿಯೋ ವೈರಲ್ |WATCH VIDEO

11/12/2025 9:23 AM
State News
KARNATAKA

BREAKING : ಯಾದಗಿರಿ ವಸತಿ ನಿಲಯದಲ್ಲಿ ಊಟ ಸೇವಿಸಿ 28 ವಿದ್ಯಾರ್ಥಿನಿಯರು ಅಸ್ವಸ್ಥ : ಆಸ್ಪತ್ರೆಗೆ ದಾಖಲು

By kannadanewsnow5711/12/2025 9:40 AM KARNATAKA 1 Min Read

ಯಾದಗಿರಿ : ವಸತಿ ನಿಲಯದಲ್ಲಿ ಊಟ ಸೇವಿಸಿ 29 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಘಟನೆ ಯಾದಿಗಿರಿ ಜಿಲ್ಲೆಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ…

ಗಮನಿಸಿ : ಅಪ್ಪಿತಪ್ಪಿಯೂ ಈ 7 ಸ್ಥಳಗಳಲ್ಲಿ ನಿಮ್ಮ `ಕ್ರೆಡಿಟ್ ಕಾರ್ಡ್’ ಎಂದಿಗೂ ಬಳಸಬೇಡಿ.!

11/12/2025 9:27 AM

SHOCKING : ಮಂಡ್ಯದಲ್ಲಿ 9 ನೇ ತರಗತಿ ವಿದ್ಯಾರ್ಥಿನಿಗಾಗಿ ಶಾಲಾ ಬಸ್ ಅಡ್ಡಗಟ್ಟಿದ ಪುಂಡರು : ವೀಡಿಯೋ ವೈರಲ್ |WATCH VIDEO

11/12/2025 9:23 AM

SHOCKING : ನಡು ರಸ್ತೆಯಲ್ಲೇ `ಬೀದಿ ನಾಯಿ’ ಮೇಲೆ ಅತ್ಯಾಚಾರ ಎಸಗಿದ ಕಾಮುಕ.!

11/12/2025 9:21 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.