Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದ್ವಿತೀಯ ಪಿಯು ಪರೀಕ್ಷೆಯ`ಪ್ರಶ್ನೆ ಪತ್ರಿಕೆ’ ಬೇಕಾದರೆ ಮೆಸೇಜ್ ಮಾಡಿ : ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ !

26/02/2026 9:12 AM

ವರ್ಷಾಂತ್ಯದ ಬೋನಸ್ ಆಗಿ ಉದ್ಯೋಗಿಗಳಿಗೆ 236 ಕೋಟಿ ನಗದು ಹಂಚಿದ ಉದ್ಯಮಿ!

26/02/2026 9:11 AM

ದಿನಕ್ಕೆ 50-80 ಬಾರಿ ಫೋನ್ ಚೆಕ್ ಮಾಡ್ತೀರಾ? ನಿಮ್ಮ ಏಕಾಗ್ರತೆ ಅಪಾಯದಲ್ಲಿದೆ ಎಚ್ಚರ

26/02/2026 8:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅ.18, 19ರಂದು ಸಾಗರದಲ್ಲಿ ‘ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ’ ಆಯೋಜನೆ
KARNATAKA

ಅ.18, 19ರಂದು ಸಾಗರದಲ್ಲಿ ‘ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ’ ಆಯೋಜನೆ

By kannadanewsnow0915/10/2025 12:52 PM

ಶಿವಮೊಗ್ಗ: ಸಾಗರದಲ್ಲಿ ಅಕ್ಟೋಬರ್.18 ಮತ್ತು 19ರಂದು ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಾಧನ ಮಲ್ಟಿ ಜಿಮ್ ಗೌರವ ಅಧ್ಯಕ್ಷರಾದ ಪ್ರಕಾಶ್ ಕಾರಂತ್ ತಿಳಿಸಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಾಗರದಲ್ಲಿ ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅಕ್ಟೋಬರ್.18, 19ರಂದು ಸಾಗರದ ಒಕ್ಕಲಿಗರ ಭವನದಲ್ಲಿ ನಡೆಯಲಿದೆ ಎಂದರು.

ಪವರ್ ಲಿಫ್ಟಿಂಗ್ ನಿಂದ ಅನೇಕ ಆರೋಗ್ಯ ಪ್ರಯೋಜನಗಳು ಇದ್ದಾವೆ. ಇದರಲ್ಲಿ ಸಾಧನೆ ಮಾಡಿದಂತ ಅನೇಕರು ಸರ್ಕಾರಿ ಉದ್ಯೋಗ ಪಡೆದಿದ್ದಾರೆ. ಯುವ ಜನತೆ ಪವರ್ ಲಿಫ್ಟಿಂಗ್ ನಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಾಧನ ಮಲ್ಟಿ ಜಿಮ್ ವ್ಯವಸ್ಥಾಪಕ ರಮೇಶ್. ಎನ್ ಮಾತನಾಡಿ, ಸಾಧನ ಮಲ್ಟಿ ಜಿಮ್, ಸಾಗರ ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ಭದ್ರಾವತಿಯ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ನನ್ನ ತಾಯಿ ದಿವಂಗತ ರುಕ್ಷ್ಮಿಣಿ ಅವರ ಸ್ಮರಣಾರ್ಥವಾಗಿ ಆಯೋಜಿಸಲಾಗಿದೆ ಎಂದರು.

ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಹಿಳಾ ಮತ್ತು ಪುರುಷ ವಿಭಾಗಗಳಲ್ಲಿ ನಡೆಸಲಾಗುತ್ತಿದೆ. ಸಬ್ ಜ್ಯೂನಿಯರ್ 13 ರಿಂದ 18 ವರ್ಷದವರು, ಜ್ಯೂನಿಯರ್ 18 ರಿಂದ 23 ವರ್ಷದವರು, ಸೀನಿಯರ್ 23 ರಿಂದ 40 ವರ್ಷದವರು, ಮಾಸ್ಟರ್ 40 ರಿಂದ 51 ವಯೋಮಾನದವರು ಸ್ಪರ್ಧಿಸಲಿದ್ದಾರೆ. 150ಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಗೆದ್ದ ಸ್ಪರ್ಧಾಳುಗಳಿಗೆ ಆಕರ್ಷಕ ಬಹುಮಾನದ ಜೊತೆಗೆ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಸಾಧನ ಮಲ್ಟಿ ಜಿಮ್ ಜಂಟಿ ಕಾರ್ಯದರ್ಶಿ ಕೆ.ಭಾಸ್ಕರ್, ಸಂಯೋಜಕ ಎ.ಶಶಿ, ರಾಷ್ಟ್ರೀಯ ಕ್ರೀಡಾಪಟು ಸಲೀಮ್, ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಕ್ರೀಡಾಪಟು ಪುಷ್ಪ ರಮೇಶ್ ಉಪಸ್ಥಿತರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

Share. Facebook Twitter LinkedIn WhatsApp Email

Related Posts

ದ್ವಿತೀಯ ಪಿಯು ಪರೀಕ್ಷೆಯ`ಪ್ರಶ್ನೆ ಪತ್ರಿಕೆ’ ಬೇಕಾದರೆ ಮೆಸೇಜ್ ಮಾಡಿ : ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ !

26/02/2026 9:12 AM1 Min Read

ರೈತರ ಪಾಲಿನ ‘ಹಸಿರು ಚಿನ್ನ’ : ಕೋಟಿ ಕೋಟಿ ಲಾಭ ತಂದುಕೊಡುತ್ತೆ ಈ ಕಲ್ಪವೃಕ್ಷ !

26/02/2026 8:52 AM2 Mins Read

ಭಕ್ತರ ಮನದಲ್ಲಿ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ನಿಮಗೆ ಗೊತ್ತಾ….!!

26/02/2026 8:41 AM6 Mins Read
Recent News

ದ್ವಿತೀಯ ಪಿಯು ಪರೀಕ್ಷೆಯ`ಪ್ರಶ್ನೆ ಪತ್ರಿಕೆ’ ಬೇಕಾದರೆ ಮೆಸೇಜ್ ಮಾಡಿ : ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ !

26/02/2026 9:12 AM

ವರ್ಷಾಂತ್ಯದ ಬೋನಸ್ ಆಗಿ ಉದ್ಯೋಗಿಗಳಿಗೆ 236 ಕೋಟಿ ನಗದು ಹಂಚಿದ ಉದ್ಯಮಿ!

26/02/2026 9:11 AM

ದಿನಕ್ಕೆ 50-80 ಬಾರಿ ಫೋನ್ ಚೆಕ್ ಮಾಡ್ತೀರಾ? ನಿಮ್ಮ ಏಕಾಗ್ರತೆ ಅಪಾಯದಲ್ಲಿದೆ ಎಚ್ಚರ

26/02/2026 8:57 AM

ರೈತರ ಪಾಲಿನ ‘ಹಸಿರು ಚಿನ್ನ’ : ಕೋಟಿ ಕೋಟಿ ಲಾಭ ತಂದುಕೊಡುತ್ತೆ ಈ ಕಲ್ಪವೃಕ್ಷ !

26/02/2026 8:52 AM
State News
KARNATAKA

ದ್ವಿತೀಯ ಪಿಯು ಪರೀಕ್ಷೆಯ`ಪ್ರಶ್ನೆ ಪತ್ರಿಕೆ’ ಬೇಕಾದರೆ ಮೆಸೇಜ್ ಮಾಡಿ : ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ !

By kannadanewsnow5726/02/2026 9:12 AM KARNATAKA 1 Min Read

ಬೆಂಗಳೂರು: ರಾಜ್ಯಾದ್ಯಂತ ಫೆಬ್ರವರಿ 28ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿವೆ. ಆದರೆ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವಾಗ…

ರೈತರ ಪಾಲಿನ ‘ಹಸಿರು ಚಿನ್ನ’ : ಕೋಟಿ ಕೋಟಿ ಲಾಭ ತಂದುಕೊಡುತ್ತೆ ಈ ಕಲ್ಪವೃಕ್ಷ !

26/02/2026 8:52 AM

ಭಕ್ತರ ಮನದಲ್ಲಿ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ನಿಮಗೆ ಗೊತ್ತಾ….!!

26/02/2026 8:41 AM
BREAKING NEWS

BREAKING : ಬೆಂಗಳೂರಲ್ಲಿ `CBI’ ತನಿಖೆಗೆ ಹೆದರಿ BBMP ನಿವೃತ್ತ ಇಂಜಿನಿಯರ್ ಆತ್ಮಹತ್ಯೆ !

26/02/2026 8:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.