ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನಡೆಸಿದಂತ ಜನಸ್ಪಂದನ ಕಾರ್ಯಕ್ರಮದಲ್ಲಿ ಅಂಗವಿಕಲ ಮಹಿಳೆಯೊಬ್ಬರು ಸರ್ಕಾರಕ್ಕೆ ದಯಾಮರಣ ನೀಡುವಂತೆ ಕೋರಿಕೊಂಡಿರೋ ಅಚ್ಚರಿಯ ಬೆಳವಮಿಗೆ ನಡೆದಿದೆ.
ಅಂಗವಿಕಲೆಯಾಗಿರುವಂತ ಮೀನಾ ಎಂಬುವರು ಇಂದಿನ ಸಿಎಂ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನನಗೆ ಜೀವನ ನಡೆಸೋದಕ್ಕೆ ತುಂಬಾನೇ ಕಷ್ಟವಾಗುತ್ತಿದೆ. ದಯಾಮರಣಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವಂತ ಮೀನಾ, ನಾನು ಅಂಗವಿಕಲೆ, ಯಾರು ಕೆಲಸ ಕೊಡ್ತಿಲ್ಲ. ಯಾರ ಬಳಿಯಾದ್ರೂ ಕೆಲಸ ಕೇಳಿದ್ರೇ ಒಂದು ದಿನ ಜೊತೆಗಿರಲು ಕರೀತಾರೆ ಎಂಬುದಾಗಿ ಅಳಲು ತೋಡಿಕೊಂಡರು.
ನನ್ನ ಮಗನ ಓದಿಗಾಗಿ ಸಹಾಯ ಮಾಡಬೇಕು. 2 ಬಾರಿ ಸಮಸ್ಯೆ ಹೇಳಿಕೊಂಡು ಬಂದ್ರು ಪ್ರಯೋಜನವಾಗಿಲ್ಲ. ನನಗೆ ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ. ಹೀಗಾಗಿ ಕನಿಷ್ಟ ರಾಜ್ಯ ಸರ್ಕಾರ ದಯಾಮರಣವನ್ನಾದರೂ ಕಲ್ಪಿಸಲಿ ಎಂಬುದಾಗಿ ಅಲವತ್ತುಕೊಂಡಿದ್ದಾರೆ.
Janaspanda: ಸಿಎಂ ‘ಜನಸ್ಪಂದನ’: ವಿಶೇಷ ಚೇತನ ವ್ಯಕ್ತಿಗೆ ‘ಸಿದ್ಧರಾಮಯ್ಯ ಮಾನವೀಯ ನೆರವು’