Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಮೆರಿಕ-ಇರಾನ್ ಕದನ ವಿರಾಮ: ಹಾರ್ಮುಜ್ ಜಲಸಂಧಿ ದಾಟಿದ ಮೊದಲ ಭಾರತೀಯ ನೌಕೆ ‘ಜಗ್ ವಿಕ್ರಮ್’!

12/04/2026 7:51 PM

2029ರಲ್ಲೇ ಮಹಿಳಾ ಮೀಸಲಾತಿ ಜಾರಿಗೆ ಮೋದಿ ಪಟ್ಟು: ಎಲ್ಲಾ ಪಕ್ಷಗಳ ನಾಯಕರಿಗೆ ಪ್ರಧಾನಿ ಮಹತ್ವದ ಪತ್ರ!

12/04/2026 7:40 PM

ಅಮೆರಿಕದ ‘ಮೈನ್ ಸ್ವೀಪರ್’ ನೌಕೆಗಳ ಸಂಚಾರ ನಿರಾಕರಿಸಿದ ಇರಾನ್: ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ!

12/04/2026 7:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ರೈತ ಸಂಘದೊಂದಿಗೆ ಸಾಗರದ ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘ ಸೇರ್ಪಡೆ- ದಿನೇಶ್ ಶಿರವಾಳ
KARNATAKA

ರಾಜ್ಯ ರೈತ ಸಂಘದೊಂದಿಗೆ ಸಾಗರದ ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘ ಸೇರ್ಪಡೆ- ದಿನೇಶ್ ಶಿರವಾಳ

By kannadanewsnow0921/11/2024 10:02 PM

ಶಿವಮೊಗ್ಗ: ಜಿಲ್ಲಾ ಮಟ್ಟದ ಸಂಘಟನೆಯಾಗಿರುವಂತ ಸಾಗರದ ಹೆಚ್.ಗಣಪತಿಯಪ್ಪ ರೈತ ಸಂಘವನ್ನು ರಾಜ್ಯ ಮಟ್ಟದ ಸಂಘಟನೆಯಾಗಿ ಪರಿವರ್ತಿಸಲಾಗುತ್ತಿದೆ. ಈ ಸಂಘವನ್ನು ಕರ್ನಾಟಕ ರಾಜ್ಯ ರೈತ ಸಂಘದ ಜೊತೆಗೆ ಸೇರ್ಪಡೆಗೊಳಿಸುತ್ತಿರುವುದಾಗಿ ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ತಿಳಿಸಿದ್ದಾರೆ.

ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾಗರದ ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘವನ್ನು ರಾಜ್ಯ ಮಟ್ಟದ ಸಂಘಟನೆಯೊಂದಿಗೆ ಸೇರ್ಪಡೆಗೊಳಿಸುವ ಬಗ್ಗೆ ಈಗಾಗಲೇ ಎರಡು ಮೂರು ಸುತ್ತಿನ ಮಾತುಕತೆಯಾಗಿದೆ. ನಮ್ಮ ಸಂಘದ ಪದಾಧಿಕಾರಿಗಳು, ಸದಸ್ಯರ ಜೊತೆಗೂ ಈಗಾಗಲೇ ಸಭೆ ನಡೆಸಿ, ಚರ್ಚಿಸಿ ಅಂತಿಮಗೊಳಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಸುಮಾರು 6 – 7 ವರ್ಷಗಳಿಂದ ಸಾಗರದಲ್ಲಿ ಹೆಚ್.ಗಣಪತಿಯಪ್ಪ ಸಾಗರ ತಾಲ್ಲೂಕು ರೈತ ಸಂಘಟನೆಯು ರೈತರ ಪರ ಹೋರಾಟ ನಡೆಸಿಕೊಂಡು ಬಂದಿದೆ. ಮುಂದೆಯೂ ಇದು ಮುಂದುವರೆಯಲಿದೆ. ಜಿಲ್ಲಾ ಮಟ್ಟದ ಸಂಘಟನೆಯನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.

ಸಾಗರ ತಾಲ್ಲೂಕು ಸಂಘವಾಗಿ ಶುರುವಾದಂತ ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘವು ಜಿಲ್ಲಾ ಹಂತಕ್ಕೂ ವಿಸ್ತರಿಸಿದೆ. ರೈತರ ಸಮಸ್ಯೆಗಳ ಬಗ್ಗೆ ಗಟ್ಟಿ ಧ್ವನಿಯಾಗಿ ಹೋರಾಟ ನಡೆಸಲು ರಾಜ್ಯ ಮಟ್ಟದ ಸಂಘಟನೆಯೊಂದಿಗೆ ಕೈ ಜೋಡಿಸಲಾಗುತ್ತಿದೆ. ಸುಮಾರು 15 ರಿಂದ 20 ರಾಜ್ಯದ ವಿವಿಧ ರೈತ ಸಂಘಟನೆಗಳು ಚಿನ್ನಪ್ಪ ಪೂಜಾರ್ ರಾಜ್ಯಾಧ್ಯಕ್ಷರಾಗಿರುವಂತ ಕರ್ನಾಟಕ ರಾಜ್ಯ ರೈತ ಸಂಘಟನೆಯೊಂದಿಗೆ ಒಟ್ಟಾಗುತ್ತಿರುವುದಾಗಿ ಹೇಳಿದರು.

ಡಿಸೆಂಬರ್.9ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಳ್ಳುತ್ತಿದೆ. ಈ ಅಧಿವೇಶನದಲ್ಲಿ ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು ಎನ್ನುವ ಆಗ್ರಹ ನಮ್ಮದಾಗಿದೆ. ರಾಜ್ಯದ ರೈತರ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆಗೂ ಬೆಳಗಾವಿಯ ಸುವರ್ಣ ಸೌಧದ ಬಳಿ ನಡೆಸಲು ನಿರ್ಧರಿಸಲಾಗಿದೆ. ಒಂದು ಲಕ್ಷದಷ್ಟು ರೈತರು ಒಟ್ಟಾಗಿ ಸೇರುವ ನಿರೀಕ್ಷೆಯಿದೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ತೀವ್ರ ಮಳೆಯ ಕಾರಣ ಕೊಳೆ ರೋಗದಿಂದ ಅಡಿಕೆ ಹಾಳಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಪರಿಹಾರ ಕೊಡಿಸಬೇಕಿದ್ದಂತ ಜಿಲ್ಲಾ ಮಂತ್ರಿಗಳೇ ಗಮನವಹಿಸುತ್ತಿಲ್ಲ. ಸಾಗರ ತಾಲ್ಲೂಕು ಶಾಸಕರು ರೈತರ ಈ ಕಷ್ಟ ನಿವಾರಿಸುವ ಕೆಲಸ ಮಾಡುತ್ತಿಲ್ಲ. ಈ ಎಲ್ಲಾ ಕಾರಣದಿಂದ ಬೆಳಗಾವಿಯಲ್ಲಿ ನಡೆಯುವಂತ ಚಳಿಗಾಲದ ವಿಧಾನ ಮಂಡಲದ ಅಧಿವೇಶನದ ವೇಳೆಯಲ್ಲಿ ರೈತ ಸಂಘಟನೆಗಳಿಂದ ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ಹೇಳಿದರು.

ಉಪಾಧ್ಯಕ್ಷ ರಮೇಶ್ ಕೆಳದಿ ಮಾತನಾಡಿ ಮಂಡ್ಯ ಜಿಲ್ಲೆಯ ರೈತರಿಗೆ ನಾಲೆಗೆ ನೀರು ಬಿಡುವ ವಿಚಾರವಾಗಿ ಪ್ರತಿಭಟನೆ ನಡೆಸಿದಂತ ಸಂಘಟನೆ ಇದಾಗಿದೆ. ಡಾ.ಗಣಪತಿಯಪ್ಪ ಮಲೆನಾಡು ಗೇಣಿದಾರರ ಸಂಘವಾಗಿ ಶುರುವಾಗಿ, ತಾಲ್ಲೂಕು ರೈತ ಸಂಘವಾಗಿ ವಿಲೀನಗೊಂಡಿತ್ತು. ಕಡಿದಾಳು ಶ್ಯಾಮಣ್ಣ ಅವರು ಈ ಸಂಘಟನೆಯ ಜೊತೆಗಿದ್ದರು. 1974ರಲ್ಲಿ ಕಾಗೋಡು ಸತ್ಯಾಗ್ರಹಕ್ಕೂ ನಮ್ಮ ಸಂಘದಿಂದ ಬೆಂಬಲ ನೀಡಲಾಗಿದೆ. ಶಿವಮೊಗ್ಗದಿಂದ ಬೆಂಗಳೂರು ಚಲೋ ಕೂಡ ನಡೆಸಲಾಗಿತ್ತು. ಇಂತಹ ಸಂಘವನ್ನು ರಾಜ್ಯ ರೈತ ಸಂಘಟನೆಯೊಂದಿಗೆ ವಿಲೀನಗೊಳಿಸುತ್ತಿರುವುದಾಗಿ ತಿಳಿಸಿದರು.

ಈ ವೇಳೆ ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಡಾ.ರಾಮಚಂದ್ರ ಎಂ.ಎಲ್, ತಾಲ್ಲೂಕು ಉಪಾಧ್ಯಕ್ಷ ಕುಮಾರ್ ಗೌಡ್ರು ಕಟ್ಟೇಕೊಪ್ಪ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಭದ್ರೇಶ್ ಬಾಳಗೋಡು ಹಾಜರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ

Share. Facebook Twitter LinkedIn WhatsApp Email

Related Posts

ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ: ಇವೈ ಇಂಡಿಯಾ ಹಾಗೂ ಯು.ಪಿ.ಇ.ಎಸ್ ಮೈತ್ರಿ; ಉದ್ಯೋಗಾಧಾರಿತ 7 ಹೊಸ ಕಾರ್ಯಕ್ರಮಗಳ ಲಾಂಚ್

12/04/2026 7:03 PM2 Mins Read

ನಿಮ್ಮ ಬೆರಳಿನ ಉಗುರನ್ನು ಕತ್ತರಿಸಿ ಇಲ್ಲಿ ಹಾಕಿ ಪವಾಡ ನೋಡಿ, ಕೆಟ್ಟ ದೃಷ್ಟಿಯು ಕೂಡ ದೂರ

12/04/2026 6:49 PM2 Mins Read

ಅಧಿಕಾರಿಗಳ ನಡೆಯಿಂದ ಬೇಸತ್ತ ಸಾಗರದ ವರದ ಕಾಲೋನಿ ನಿವಾಸಿಗಳು: ಏ.16ರಂದು ಬೃಹತ್ ಪ್ರತಿಭಟನೆ!?

12/04/2026 6:32 PM1 Min Read
Recent News

ಅಮೆರಿಕ-ಇರಾನ್ ಕದನ ವಿರಾಮ: ಹಾರ್ಮುಜ್ ಜಲಸಂಧಿ ದಾಟಿದ ಮೊದಲ ಭಾರತೀಯ ನೌಕೆ ‘ಜಗ್ ವಿಕ್ರಮ್’!

12/04/2026 7:51 PM

2029ರಲ್ಲೇ ಮಹಿಳಾ ಮೀಸಲಾತಿ ಜಾರಿಗೆ ಮೋದಿ ಪಟ್ಟು: ಎಲ್ಲಾ ಪಕ್ಷಗಳ ನಾಯಕರಿಗೆ ಪ್ರಧಾನಿ ಮಹತ್ವದ ಪತ್ರ!

12/04/2026 7:40 PM

ಅಮೆರಿಕದ ‘ಮೈನ್ ಸ್ವೀಪರ್’ ನೌಕೆಗಳ ಸಂಚಾರ ನಿರಾಕರಿಸಿದ ಇರಾನ್: ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ!

12/04/2026 7:32 PM

ಮಹಿಳಾ ಮೀಸಲಾತಿ ಜಾರಿಗೆ ಮೋದಿ ಮಾಸ್ಟರ್ ಪ್ಲಾನ್: ಸಂಸತ್ ವಿಶೇಷ ಅಧಿವೇಶನಕ್ಕೆ ಬಿಜೆಪಿ ‘ವಿಪ್’ ಜಾರಿ!

12/04/2026 7:25 PM
State News
KARNATAKA

ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ: ಇವೈ ಇಂಡಿಯಾ ಹಾಗೂ ಯು.ಪಿ.ಇ.ಎಸ್ ಮೈತ್ರಿ; ಉದ್ಯೋಗಾಧಾರಿತ 7 ಹೊಸ ಕಾರ್ಯಕ್ರಮಗಳ ಲಾಂಚ್

By kannadanewsnow0912/04/2026 7:03 PM KARNATAKA 2 Mins Read

ಬೆಂಗಳೂರು: ಇಂದು, ಯು.ಪಿ.ಇ.ಎಸ್. ಸ್ಕೂಲ್ ಆಫ್ ಬಿಸಿನೆಸ್ ಮತ್ತು ಇವೈ ಇಂಡಿಯಾ ಏಳು ಹೊಸ ಶೈಕ್ಷಣಿಕ ಕಾರ್ಯಕ್ರಮಗಳ ಆರಂಭವನ್ನು ಘೋಷಿಸಿವೆ.…

ನಿಮ್ಮ ಬೆರಳಿನ ಉಗುರನ್ನು ಕತ್ತರಿಸಿ ಇಲ್ಲಿ ಹಾಕಿ ಪವಾಡ ನೋಡಿ, ಕೆಟ್ಟ ದೃಷ್ಟಿಯು ಕೂಡ ದೂರ

12/04/2026 6:49 PM

ಅಧಿಕಾರಿಗಳ ನಡೆಯಿಂದ ಬೇಸತ್ತ ಸಾಗರದ ವರದ ಕಾಲೋನಿ ನಿವಾಸಿಗಳು: ಏ.16ರಂದು ಬೃಹತ್ ಪ್ರತಿಭಟನೆ!?

12/04/2026 6:32 PM

ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ

12/04/2026 6:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.