Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಫಿಟ್ನೆಸ್’ನಲ್ಲಿ ಹೊಸ ಟ್ರೆಂಡ್ ; 6-6-6 ನಡಿಗೆಯಿಂದ ಸುಲಭವಾಗಿ ತೂಕ ಇಳಿಸಿಕೊಳ್ಬೋದು.! ಹೇಗೆ ಗೊತ್ತಾ.?

05/06/2025 10:04 PM

BREAKING : ಪ್ರಮಾಣೀಕರಿಸದ ಉತ್ಪನ್ನ ಮಾರಾಟ ; ಅಮೆಜಾನ್, ಫ್ಲಿಪ್‌ಕಾರ್ಟ್ ವಿರುದ್ಧ ಕೇಂದ್ರದಿಂದ ಮೊಕದ್ದಮೆ ದಾಖಲು

05/06/2025 9:47 PM

‘HDFC’ ಬ್ಯಾಂಕ್ ಗ್ರಾಹಕರಿಗೆ ಬಿಗ್ ಅಲರ್ಟ್ ; ಈ ದಿನ ‘UPI ಸೇವೆ’ಗಳು ಸ್ಥಗಿತ.!

05/06/2025 9:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಧರ್ಮಸ್ಥಳ ಸಂಘ’ದಿಂದ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿಲ್ಲ, ‘ಬ್ಯಾಂಕ್’ನಷ್ಟೇ ವಿಧಿಸಲಾಗುತ್ತಿದೆ: ಯೋಜನಾಧಿಕಾರಿ ಶಾಂತಾ ನಾಯ್ಕ್ ಸ್ಪಷ್ಟನೆ
KARNATAKA

‘ಧರ್ಮಸ್ಥಳ ಸಂಘ’ದಿಂದ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿಲ್ಲ, ‘ಬ್ಯಾಂಕ್’ನಷ್ಟೇ ವಿಧಿಸಲಾಗುತ್ತಿದೆ: ಯೋಜನಾಧಿಕಾರಿ ಶಾಂತಾ ನಾಯ್ಕ್ ಸ್ಪಷ್ಟನೆ

By kannadanewsnow0906/11/2024 12:31 PM

ಶಿವಮೊಗ್ಗ: ಧರ್ಮಸ್ಥಳ ಸಂಘದಿಂದ ಹೆಚ್ಚಿನ ಬಡ್ಡಿದರವನ್ನು ವಸೂಲಿ ಮಾಡಲಾಗುತ್ತಿದೆ ಎಂಬುದೆಲ್ಲ ಸುಳ್ಳು. ಅಲ್ಲದೇ ಯಾರಿಗೂ ಕಿರುಕುಳ ಕೂಡ ನೀಡುತ್ತಿಲ್ಲ. ಬ್ಯಾಂಕ್ ಎಷ್ಟು ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡುತ್ತಿದೆಯೋ ಅಷ್ಟೇ ವಿಧಿಸಲಾಗುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುವ ಸುದ್ದಿ ಸುಳ್ಳು ಎಂಬುದಾಗಿ ಸಾಗರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಾಂತಾ ನಾಯ್ಕ್ ಸ್ಪಷ್ಟ ಪಡಿಸಿದ್ದಾರೆ.

ಸಾಗರ ತಾಲ್ಲೂಕಿನಲ್ಲಿ 90,40,00,000 ಸಾಲಸೌಲಭ್ಯ

ಮಂಗಳವಾರದಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾಗರ ತಾಲ್ಲೂಕು ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ 3007 ಸಂಘಗಳು ನೋಂದಣಿ ಮಾಡಿಕೊಂಡಿದ್ದಾವೆ. ಸದ್ಯ 23,860 ಸದಸ್ಯರಿದ್ದಾರೆ. ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ (ರಿ) ಚಾಲ್ತಿ ಪ್ರಗತಿ ನಿಧಿ 90,40,00,000 ಆಗಿದೆ ಎಂಬುದಾಗಿ ತಿಳಿಸಿದರು.

ಈವರೆಗೆ ಸಂಘದಿಂದ ಸದಸ್ಯರಿಗೆ ಸುರಕ್ಷಾ ಕ್ಲೈಂ, ಆರೋಗ್ಯ ರಕ್ಷಾ ಕ್ಲಂ ಅಡಿಯಲ್ಲಿ 471 ಮಂದಿಗೆ 67,96,685 ರೂ ನೀಡಲಾಗಿದೆ. ಸ್ವಸ್ಥ್ಯಾ ಸಂಕಲ್ಪ, ಮಾಧಕ ವಸ್ತು ದಿನಾಚರಣೆ, ತಂಬಾಕು ವಿರೋಧಿ ದಿನಾಚರಣೆ ಸೇರಿದಂತೆ 15 ಕಾರ್ಯಕ್ರಮವನ್ನು ಸಂಘದಿಂದ ಆಯೋಜಿಸಲಾಗಿದೆ. ಇದಕ್ಕಾಗಿ 25,000 ಖರ್ಚು ಮಾಡಲಾಗಿದೆ ಎಂದರು.

ಸುಜ್ಞಾನ ನಿಧಿಯಡಿ 150 ಮಂದಿಗೆ ರೂ.25,500, ಪ್ರತಿ ತಿಂಗಳು 60 ವರ್ಷ ಮೇಲ್ಪಟ್ಟ ಸದಸ್ಯರಿಗೆ ಮಾಶಾಸನ ರೂಪದಲ್ಲಿ 111 ಜನರಿಗೆ ರೂ.1,11,000 ನೀಡಲಾಗುತ್ತಿದೆ. 181 ದೇವಸ್ಥಾನಗಳನ್ನು ರೂ.1,63,00,000ನಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಅಕ್ಷರ ದಾಸೋಹ, ಕೊಠಡಿ ದುರಸ್ಥಿಗಾಗಿ 50,000 ನೀಡಲಾಗಿದೆ ಎಂದರು.

ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕ

ಶಿಕ್ಷಕರ ಕೊರತೆಯಿರುವ ಸರ್ಕಾರಿ ಶಾಲೆಗಳಿಗೆ ಜ್ಞಾನದೀಪ ಯೋಜನೆಯ ಅಡಿಯಲ್ಲಿ ಮೂವರು ಶಿಕ್ಷಕರನ್ನು ನೇಮಿಸಲಾಗಿದ್ದು, ಅವರಿಗೆ ಪ್ರತಿ ತಿಂಗಳು 8,000ದಂತೆ 2,40,000 ರೂ ಒದಗಿಸಲಾಗಿದೆ. 1 ಶಾಲಾ ಶೌಚಾಲಯ ನಿರ್ಮಿಸಿಕೊಡಲಾಗಿದೆ. ಕೃಷಿ ಅನುದಾನದ ರೂಪದಲ್ಲಿ 1342 ರೈತರಿಗೆ ರೂ.28,31,750 ಸಾಲ ಸೌಲಭ್ಯ ಒದಗಿಸಲಾಗಿದೆ. ಕೆರೆ ಕಾರ್ಯಕ್ರಮದಡಿ 8 ಕೆರೆಗಳಿಗೆ 58,00,000 ಒದಗಿಸಲಾಗಿದೆ. ಸಾಗರದ ಸರ್ಕಾರಿ ಆಸ್ಪತ್ರೆಗೆ 1 ಡಯಾಲಿಸಿಸ್ ಯಂತ್ರ ಕೊಡಿಸಲಾಗಿದೆ. ಹಣ ರಹಿತ ಸಂಪೂರ್ಣ ಸುರಕ್ಷಾ ಕ್ಲೈಂ ಮತ್ತು ಆರೋಗ್ಯ ರಕ್ಷಾ ಕ್ಲೈಂ ಅಡಿಯಲ್ಲಿ 326 ಸಂಘದ ಸದಸ್ಯರಿಗೆ ರೂ.45,14,275 ಹಣವನ್ನು ನೀಡಲಾಗಿದೆ. ಇದುವರೆಗೆ 700 ಜನರಿಗೆ 14,00,000 ಸಹಾಯಧವನ್ನು ಸಂಘದಿಂದ ನೀಡಲಾಗಿದೆ. ಇನ್ನೂ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಧರ್ಮಸ್ಥಳ ಸಂಘದಿಂದ ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿಸಿದರು.

ಬ್ಯಾಂಕ್ ನಷ್ಟೇ ಬಡ್ಡಿ ದರದಲ್ಲಿ ಸಾಲಸೌಲಭ್ಯ

ಧರ್ಮಸ್ಥಳ ಸಂಘದಿಂದ ಶೇ.14ರಷ್ಟು ಬಡ್ಡಿದರದಲ್ಲಿ ವಾರದ ರೂಪದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಬ್ಯಾಂಕ್ ನಿಂದ ಕೂಡ ಸಂಘಕ್ಕೆ ಅದೇ ಮಾದರಿಯಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ. ಅನೇಕರು ಬ್ಯಾಂಕ್ ಬಡ್ಡಿದರದಲ್ಲಿ ನೀಡುತ್ತಿಲ್ಲ. ಶೇ.8ರಷ್ಟು ಬಡ್ಡಿದರದಲ್ಲಿ ಬ್ಯಾಂಕ್ ನಿಂದ ಪಡೆದು, ಶೇ.14ರ ಬಡ್ಡಿದರದಲ್ಲಿ ಜನರಿಗೆ ಸಾಲ ಕೊಡುತ್ತಿದೆ ಎಂಬುದು ಸುಳ್ಳು. ನಮಗೆ ಬ್ಯಾಂಕ್ ಕೊಡುತ್ತಿರುವುದು ಶೇ.14ರಷ್ಟು ಬಡ್ಡಿದರದಲ್ಲೇ ಸಾಲ. ನಾವು ಕೊಡುತ್ತಿರುವುದು ಅದೇ ದರದಲ್ಲಿ ಸಾಲವೆಂದು ಸ್ಪಷ್ಟ ಪಡಿಸಿದರು.

ಧರ್ಮಸ್ಥಳ ಸಂಘದಿಂದ ಯಾರಿಗೂ ಕಿರುಕುಳ ನೀಡುವುದಿಲ್ಲ

ಕೆಲ ದಿನಗಳ ಹಿಂದೆ ಧರ್ಮಸ್ಥಳ ಸಂಘದಿಂದ ಸಾಲ ಪಡೆದು, ಕಿರುಕುಳಕ್ಕೆ ಬೇಸತ್ತು ಮಹಿಳೆ ಸಾವನ್ನಪ್ಪಿದಂತ ಸುದ್ದಿ ಹರಿದಾಡುತ್ತಿರುವುದು ನೀವು ಓದಿದ್ದೀರಿ. ಆದರೇ ಅದು ಸತ್ಯಕ್ಕೆ ದೂರವಾಗಿರೋದು. ಮೃತ ಮಹಿಳೆ ಧರ್ಮಸ್ಥಳ ಸಂಘದಲ್ಲಿ ಅಷ್ಟೇ ಅಲ್ಲದೇ ಇತರೆ ಕಡೆಯಲ್ಲೂ ಸಾಲ ಪಡೆದಿದ್ದರು. ಆ ಕಾರಣದಿಂದಲೇ ಸಾವಿಗೆ ಶರಣಾಗಿದ್ದಾರೆ. ಆ ಮಹಿಳೆ ನಮ್ಮ ಸಂಘದ ಒಂದೇ ಒಂದು ವಾರದ ಕಂತು ಮಾತ್ರ ಕಟ್ಟುವುದು ಬಾಕಿ ಇತ್ತು. ಅವರಿಗೆ ಸಂಘದಿಂದ ಕಿರುಕುಳ ನೀಡಿಲ್ಲ. ಅವರ ಸಾವಿಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ ಎಂಬುದಾಗಿ ತಿಳಿಸಿದರು.

ಪತ್ರಕರ್ತರಿಗೂ ಸುರಕ್ಷಾ ಕ್ಲೈಂ, ಆರೋಗ್ಯ ರಕ್ಷಾ ಕ್ಲೈಂಗೆ ಪ್ರಯತ್ನ

ಇದೇ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಯೋಜನಾಧಿಕಾರಿ ಶಾಂತಾ ನಾಯ್ಕ್ ಅವರಿಗೆ ಪತ್ರಕರ್ತರಿಗೂ ಸುರಕ್ಷಾ ಕ್ಲೈಂ, ಆರೋಗ್ಯ ರಕ್ಷಾ ಕ್ಲೈಂ ಯೋಜನೆ ತರುವಂತೆ ಮನವಿ ಮಾಡಲಾಯಿತು. ಇದಕ್ಕೆ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದಂತ ಅವರು, ಸಂಘದ ಅಧ್ಯಕ್ಷರಾದಂತ ಡಾ.ವೀರೇಂದ್ರ ಹೆಗಡೆ ಅವರಲ್ಲಿ ಈ ಬಗ್ಗೆ ಮನವಿ ಮಾಡಲಾಗುತ್ತದೆ. ಅವರ ಗಮನಕ್ಕೆ ತಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಮೂಲಕ ಪತ್ರಕರ್ತರಿಗೂ ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸಿಕೊಡುವ ಕೆಲಸ ಮಾಡುವಂತ ಭರವಸೆಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಸಾಗರ ತಾಲ್ಲೂಕು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನಿಂದ ದೀಪಾವಳಿ ಹಬ್ಬದ ಪ್ರಯುಕ್ತ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಘದ ಸಿಹೆಚ್ ಎಸ್ಸಿ ಯೋಜನಾಧಿಕಾರಿ ರಮೇಶ್, ಮೇಲ್ವಿಚಾರಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Share. Facebook Twitter LinkedIn WhatsApp Email

Related Posts

ಹೀಗೆ ಕುಲದೇವತೆಯನ್ನು ಪೂಜಿಸಿ, ನಿಮ್ಮೆಲ್ಲಾ ಇಷ್ಟಾರ್ಥ ಸಿದ್ಧಿ ಗ್ಯಾರಂಟಿ

05/06/2025 6:54 PM3 Mins Read

ಡಿಸಿಎಂ ಡಿಕೆಶಿ ಮನುಷ್ಯತ್ವ ಇಲ್ಲದ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

05/06/2025 6:31 PM3 Mins Read

ಬೆಂಗಳೂರಲ್ಲಿ ಕಾಲ್ತುಳಿತ ದುರಂತ: ಸಿಎಂ, ಡಿಸಿಎಂ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಒತ್ತಾಯ

05/06/2025 6:29 PM2 Mins Read
Recent News

ಫಿಟ್ನೆಸ್’ನಲ್ಲಿ ಹೊಸ ಟ್ರೆಂಡ್ ; 6-6-6 ನಡಿಗೆಯಿಂದ ಸುಲಭವಾಗಿ ತೂಕ ಇಳಿಸಿಕೊಳ್ಬೋದು.! ಹೇಗೆ ಗೊತ್ತಾ.?

05/06/2025 10:04 PM

BREAKING : ಪ್ರಮಾಣೀಕರಿಸದ ಉತ್ಪನ್ನ ಮಾರಾಟ ; ಅಮೆಜಾನ್, ಫ್ಲಿಪ್‌ಕಾರ್ಟ್ ವಿರುದ್ಧ ಕೇಂದ್ರದಿಂದ ಮೊಕದ್ದಮೆ ದಾಖಲು

05/06/2025 9:47 PM

‘HDFC’ ಬ್ಯಾಂಕ್ ಗ್ರಾಹಕರಿಗೆ ಬಿಗ್ ಅಲರ್ಟ್ ; ಈ ದಿನ ‘UPI ಸೇವೆ’ಗಳು ಸ್ಥಗಿತ.!

05/06/2025 9:34 PM

Interesting Fact : ಇದು ವಿಶ್ವದ ಅತಿ ಉದ್ದದ ರಸ್ತೆ, ಯಾವುದೇ ಯು-ಟರ್ನ್ ಇಲ್ಲದೇ 14 ದೇಶಗಳ ಮೂಲಕ ಹಾದು ಹೋಗುತ್ತೆ

05/06/2025 9:24 PM
State News
KARNATAKA

ಹೀಗೆ ಕುಲದೇವತೆಯನ್ನು ಪೂಜಿಸಿ, ನಿಮ್ಮೆಲ್ಲಾ ಇಷ್ಟಾರ್ಥ ಸಿದ್ಧಿ ಗ್ಯಾರಂಟಿ

By kannadanewsnow0905/06/2025 6:54 PM KARNATAKA 3 Mins Read

ಅನ್ಯ ದೇವತೆಗಳನ್ನು ಪೂಜಿಸುವುದಕ್ಕಿಂತ ಕುಲದೇವತೆಯನ್ನು ಪೂಜಿಸಿದರೆ ನಮ್ಮ ಬದುಕು ಹಸನಾಗುತ್ತದೆ ಎನ್ನುತ್ತಾರೆ. ಅದಕ್ಕಾಗಿ ಬೇರೆ ದೇವತೆಗಳನ್ನು ಪೂಜಿಸಬಾರದೇ ಎಂದು ಕೇಳಿದರೆ…

ಡಿಸಿಎಂ ಡಿಕೆಶಿ ಮನುಷ್ಯತ್ವ ಇಲ್ಲದ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

05/06/2025 6:31 PM

ಬೆಂಗಳೂರಲ್ಲಿ ಕಾಲ್ತುಳಿತ ದುರಂತ: ಸಿಎಂ, ಡಿಸಿಎಂ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಒತ್ತಾಯ

05/06/2025 6:29 PM

ಜೂ.21ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ: ‘KUWJ’ಯಿಂದ ಕೆ.ವಿ ಪ್ರಭಾಕರ್ ಗೆ ಆಹ್ವಾನ

05/06/2025 6:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.