Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಫ್ರಾನ್ಸ್ ನಲ್ಲಿ ಚಾಂಪಿಯನ್ಸ್ ಲೀಂಗ್ ವಿಜಯೋತ್ಸವದ ವೇಳೆ ಇಬ್ಬರು ಸಾವು, ನೂರಾರು ಜನರ ಬಂಧನ

01/06/2025 4:14 PM

BIG NEWS : ಇಂದಿನಿಂದ ವಿಧಾನಸೌಧ ‘ಗೈಡೆಡ್ ಟೂರ್’ ಆರಂಭ : ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್

01/06/2025 3:56 PM

BREAKING: ಬೆಳಗಾವಿಯಲ್ಲಿ ಭೀಕರ ಅಪಘಾತ: ಟ್ಯಾಂಕರ್ ಹರಿದು ಮೂವರು ಕಾರ್ಮಿಕರು ಸಾವು

01/06/2025 3:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೊದಲ ಹಂತದಲ್ಲಿ 1000 ಎಕರೆಯಲ್ಲಿ ಅಭಿವೃದ್ಧಿ ಉದ್ದೇಶ: KHIR ಸಿಟಿ ಯೋಜನೆ-ಸಚಿವ ಎಂ.ಬಿ ಪಾಟೀಲ ಪಾತ್ಯಕ್ಷಿಕೆ ವೀಕ್ಷಣೆ
KARNATAKA

ಮೊದಲ ಹಂತದಲ್ಲಿ 1000 ಎಕರೆಯಲ್ಲಿ ಅಭಿವೃದ್ಧಿ ಉದ್ದೇಶ: KHIR ಸಿಟಿ ಯೋಜನೆ-ಸಚಿವ ಎಂ.ಬಿ ಪಾಟೀಲ ಪಾತ್ಯಕ್ಷಿಕೆ ವೀಕ್ಷಣೆ

By kannadanewsnow0908/02/2024 5:33 PM

ಬೆಂಗಳೂರು: ನಗರದ ಸಮೀಪ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಕೆಎಚ್ಐಆರ್ (KHIR – Knowledge, Health, Innovation and Research) ಸಿಟಿಯ ವಿನ್ಯಾಸ ಮತ್ತು ರೂಪುರೇಷೆ ಕುರಿತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ಬೋಸ್ಟನ್‌ ಕನ್ಸಲ್ಟೆನ್ಸಿ ಗ್ರೂಪ್ (ಬಿಸಿಜಿ) ಸಿದ್ಧಪಡಿಸಿರುವ ಪ್ರಾತ್ಯಕ್ಷಿಕೆಯನ್ನು ಗುರುವಾರ ವೀಕ್ಷಿಸಿದರು. ಜೊತೆಗೆ, ಅಧಿಕಾರಿಗಳು ಮತ್ತು ಪರಿಣತರೊಂದಿಗೆ ಯೋಜನೆಯ ಸಂಬಂಧ ಮೊದಲ ಹಂತದ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಉದ್ದೇಶಿತ ಕೆಎಚ್ಐಆರ್ ಸಿಟಿಯಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಮೂಲ ಮಾದರಿಗಳ ಅಭಿವೃದ್ಧಿಗೆ (ಪ್ರೋಟೋಟೈಪ್ಸ್) ಒತ್ತು ಕೊಡಲಾಗುವುದು. ಇಲ್ಲಿ ತಯಾರಿಕಾ ಚಟುವಟಿಕೆಗಳು ನಡೆಯುವುದಿಲ್ಲ. ಮೊದಲ ಹಂತದಲ್ಲಿ ಒಟ್ಟು 1,000 ಎಕರೆಯಲ್ಲಿ ಈ ಸಿಟಿ ಬರಲಿದ್ದು, ತಲಾ 200-300 ಎಕರೆಗಳಂತೆ ಹಂತಹಂತವಾಗಿ ಅಭಿವೃದ್ಧಿಪಡಿಸಬೇಕು ಎಂಬ ಸಲಹೆಯನ್ನು ತಜ್ಞರು ನೀಡಿದ್ದಾರೆ’ ಎಂದರು.

ಕೆಎಚ್ಐಆರ್ ಸಿಟಿ ಸಂಪೂರ್ಣವಾಗಿ ಖಾಸಗಿ ಉದ್ದಿಮೆಗಳ ಹೂಡಿಕೆಯಿಂದ ಆಗಲಿದೆ. ಸರಕಾರವು ಇದಕ್ಕೆ ಭೂಮಿಯನ್ನು ಒದಗಿಸಲಿದೆ. ಈ ಸಂಬಂಧ ಜಗತ್ತಿನ ಬೇರೆಬೇರೆ ದೇಶಗಳಲ್ಲಿ ಇರುವ ಇಂತಹ ಸಿಟಿಗಳ ಅಧ್ಯಯನ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಉದ್ದೇಶಿತ ಸಿಟಿಯು ರಸ್ತೆ, ಮೆಟ್ರೋ, ಸಬರ್ಬನ್ ರೈಲಿನ ತರಹದ ಅತ್ಯುತ್ತಮ ಸಂಪರ್ಕ ಜಾಲ ಹೊಂದಿರಬೇಕಾಗುತ್ತದೆ. ಜೊತೆಗೆ ನಗರದಿಂದ ಒಂದು ಗಂಟೆ ಕಾಲದ ಪ್ರಯಾಣದಲ್ಲಿ ಈ ಸಿಟಿಯನ್ನು ತಲುಪುವಂತೆ ಇರಬೇಕು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ ಎಂದು ಅವರು ನುಡಿದರು.

ಈ ಸಿಟಿಯ ಶೇ 15ರಷ್ಟು ಜಾಗದಲ್ಲಿ ಸಂಶೋಧನಾ ವಿ.ವಿ.ಗಳು, ಶೈಕ್ಷಣಿಕ ಸಂಸ್ಥೆಗಳು, ಶೇ.15ರಷ್ಟು ಪ್ರದೇಶದಲ್ಲಿ ಆರೋಗ್ಯಸೇವಾ ಉದ್ದಿಮೆಗಳು, ಶೇ.20ರಷ್ಟು ಜಾಗದಲ್ಲಿ ನಾನಾ ಉದ್ಯಮಗಳ ಆರ್ & ಡಿ ಕೇಂದ್ರಗಳು ಮತ್ತು ಕಾರ್ಪೊರೇಟ್ ಕಚೇರಿಗಳು ಮತ್ತು ಶೇ.10ರಷ್ಟು ಜಾಗದಲ್ಲಿ ಸ್ಟಾರ್ಟಪ್ಸ್, ಶೇ.20ರಷ್ಟು ಜಾಗದಲ್ಲಿ ವಸತಿ ಸಮುಚ್ಚಯಗಳು, ಶೇ.15ರಷ್ಟು ಪ್ರದೇಶದಲ್ಲಿ ವಾಣಿಜ್ಯ ಅಂಗಡಿ ಮುಂಗಟ್ಟುಗಳು ಮತ್ತು ಶೇ.5ರಷ್ಟು ಜಾಗದಲ್ಲಿ ಸರಕಾರಿ ಕಚೇರಿಗಳು ಹಾಗೂ ನಾಗರಿಕ ಸೇವಾಕೇಂದ್ರಗಳು ತಲೆ ಎತ್ತಲಿವೆ ಎಂದು ಅವರು ಮಾಹಿತಿ ನೀಡಿದರು.

ಮೊದಲ ಹಂತದ ಸಾವಿರ ಎಕರೆಯಲ್ಲಿ ಶೇ.35ರಷ್ಟು ಪ್ರದೇಶವು ಹಸಿರು ಹೊದಿಕೆಗೆ ಮೀಸಲಿಡಬೇಕು ಎಂದು ಸಲಹೆ ಬಂದಿದೆ. ಅಲ್ಲದೆ ತಲಾ ಶೇ.5ರಷ್ಟು ಜಾಗವನ್ನು ರಸ್ತೆಗಳಿಗೆ ಮತ್ತು ಸಾಮಾನ್ಯ ನಾಗರಿಕ ಸೇವೆಗಳಿಗೆ ಇಡಬೇಕು. ಶೇ.55ರಷ್ಟು ಜಾಗವನ್ನು ಕೆಎಚ್ಐಆರ್ ಸಿಟಿಗಾಗಿ ಬಳಸಿಕೊಳ್ಳಬೇಕು ಎಂದು ಪರಿಣತರು ಹೇಳಿದ್ದಾರೆ ಎಂದು ಪಾಟೀಲ ಹೇಳಿದರು.

ಉದ್ದೇಶಿತ ಸಿಟಿಯ ನಿರ್ಮಾಣಕ್ಕಾಗಿ ಸರಕಾರ ಮತ್ತು ಮಾಸ್ಟರ್ ಡೆವಲಪರ್ ನಡುವೆ ಸಮನ್ವಯತೆ ಇರುವಂತೆ ನೋಡಿಕೊಳ್ಳಲು ವಿಶೇಷ ಸಂಸ್ಥೆಯೊಂದನ್ನು (ಎಸ್ಪಿವಿ) ಸ್ಥಾಪಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜತೆಗೆ ಹೂಡಿಕೆ ಪ್ರೋತ್ಸಾಹಿಸಲು ಆರು ಬಗೆಯ ಪ್ರೋತ್ಸಾಹಕ ಕ್ರಮಗಳ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಅವರು ತಿಳಿಸಿದರು.

ಬೋಸ್ಟನ್‌ ಕನ್ಸಲ್ಟನ್ಸಿ ಗ್ರೂಪ್ ನ ಹಿರಿಯ ಸಲಹೆಗಾರ ರಾಂಚ್ ಕಿಮ್ಬಾಲ್, ಕಂಪನಿಯ ಮೂಲಸೌಕರ್ಯ ವಿಭಾಗದ ಮುಖ್ಯಸ್ಥ ಸುರೇಶ್ ಸುಬುಧಿ ಮತ್ತು ಅಭಿವೃದ್ಧಿ ತಜ್ಞ ಅದಿಲ್ ಇಕ್ರಂ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಉಪಸ್ಥಿತರಿದ್ದರು.

BREAKING: ಲೋಕಸಭೆಯಲ್ಲಿ ‘ಶ್ವೇತಪತ್ರ’ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ | White paper in Lok Sabha

Janaspanda: ಸಿಎಂ ‘ಜನಸ್ಪಂದನ’: ವಿಶೇಷ ಚೇತನ ವ್ಯಕ್ತಿಗೆ ‘ಸಿದ್ಧರಾಮಯ್ಯ ಮಾನವೀಯ ನೆರವು’

Share. Facebook Twitter LinkedIn WhatsApp Email

Related Posts

BIG NEWS : ಇಂದಿನಿಂದ ವಿಧಾನಸೌಧ ‘ಗೈಡೆಡ್ ಟೂರ್’ ಆರಂಭ : ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್

01/06/2025 3:56 PM1 Min Read

BREAKING: ಬೆಳಗಾವಿಯಲ್ಲಿ ಭೀಕರ ಅಪಘಾತ: ಟ್ಯಾಂಕರ್ ಹರಿದು ಮೂವರು ಕಾರ್ಮಿಕರು ಸಾವು

01/06/2025 3:47 PM1 Min Read

BIG NEWS: ಇನ್ಮುಂದೆ ರಾಜ್ಯದಲ್ಲಿ ಪೊಲೀಸರು ವಾಹನ ತಪಾಸಣೆ ವೇಳೆ ಈ ಸುರಕ್ಷತಾ ಕ್ರಮಗಳ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

01/06/2025 3:28 PM3 Mins Read
Recent News

ಫ್ರಾನ್ಸ್ ನಲ್ಲಿ ಚಾಂಪಿಯನ್ಸ್ ಲೀಂಗ್ ವಿಜಯೋತ್ಸವದ ವೇಳೆ ಇಬ್ಬರು ಸಾವು, ನೂರಾರು ಜನರ ಬಂಧನ

01/06/2025 4:14 PM

BIG NEWS : ಇಂದಿನಿಂದ ವಿಧಾನಸೌಧ ‘ಗೈಡೆಡ್ ಟೂರ್’ ಆರಂಭ : ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್

01/06/2025 3:56 PM

BREAKING: ಬೆಳಗಾವಿಯಲ್ಲಿ ಭೀಕರ ಅಪಘಾತ: ಟ್ಯಾಂಕರ್ ಹರಿದು ಮೂವರು ಕಾರ್ಮಿಕರು ಸಾವು

01/06/2025 3:47 PM

ಗಲ್ಲಿಯಿಂದ ಸೂಪರ್ ಸ್ಟಾರ್ ತನಕ; ‘ಸದರನ್ ಸ್ಟ್ರೀಟ್ ಪ್ರೀಮಿಯರ್ ಕ್ರಿಕೆಟ್ ಲೀಗ್‌’ಗೆ ಅದ್ಧೂರಿ ಚಾಲನೆ

01/06/2025 3:31 PM
State News
KARNATAKA

BIG NEWS : ಇಂದಿನಿಂದ ವಿಧಾನಸೌಧ ‘ಗೈಡೆಡ್ ಟೂರ್’ ಆರಂಭ : ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್

By kannadanewsnow0501/06/2025 3:56 PM KARNATAKA 1 Min Read

ಬೆಂಗಳೂರು : ರಾಜ್ಯದ ಶಕ್ತಿಸೌಧ ವಿಧಾನಸೌಧ ಇಂದಿನಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ. ಹೀಗಾಗಿ ಶಕ್ತಿಸೌಧವನ್ನ ದೂರದಿಂದಲೇ ನೋಡಿ.. ಫೋಟೋ ಕ್ಲಿಕ್ಕಿಸಿ…

BREAKING: ಬೆಳಗಾವಿಯಲ್ಲಿ ಭೀಕರ ಅಪಘಾತ: ಟ್ಯಾಂಕರ್ ಹರಿದು ಮೂವರು ಕಾರ್ಮಿಕರು ಸಾವು

01/06/2025 3:47 PM

BIG NEWS: ಇನ್ಮುಂದೆ ರಾಜ್ಯದಲ್ಲಿ ಪೊಲೀಸರು ವಾಹನ ತಪಾಸಣೆ ವೇಳೆ ಈ ಸುರಕ್ಷತಾ ಕ್ರಮಗಳ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

01/06/2025 3:28 PM

ನಂದಿನಿ ಉತ್ಪನ್ನ ಪ್ರಿಯರಿಗೆ ಸಂತಸದ ಸುದ್ದಿ: 18 ವಿವಿಧ ನಂದಿನಿ ಕೇಕ್, ಮಫಿನ್ ಮಾರುಕಟ್ಟೆಗೆ ಬಿಡುಗಡೆ | Nandini Products

01/06/2025 3:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.