ಬೆಂಗಳೂರು :  2022 ರಲ್ಲಿ ನಡೆದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಶೇಕಡ 90 ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3 ಹಾಗೂ 3- ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಡಿ ದೇವರಾಜ ಅರಸು ಪ್ರತಿಭಾ ಪುರಸ್ಕಾರಕ್ಕಾಗಿ  ಹಿಂದುಳಿದ ವರ್ಗಗಳ ಕಲ್ಯಾಣ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೂಚನೆಗಳು

1) ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು

2) ಹಿಂದುಳಿದ ವರ್ಗಗಳಾದ ಪ್ರವರ್ಗ-1,2 ಎ, 3 ಎ ಅಥವಾ 3 ಬಿಗೆ ಸೇರಿರಬೇಕು

3) ಅಭ್ಯರ್ಥಿಯು ಮತ್ತು ಕುಟುಂಬದ ಒಟ್ಟು ವಾರ್ಷಿಕ  ಆದಾಯ ಮಿತಿ ಪ್ರವರ್ಗ-1 ಕ್ಕೆ 2.50 ಲಕ್ಷ ಮೀರಿರಬಾರದು ಹಾಗೂ 2 ಎ, 3 ಎ,3 ಬಿ ಅವರಿಗೆ 1 ಲಕ್ಷ ಮೀರಿರಬಾರದು.

4)  ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಶೇಕಡ 90 ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.

5) ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು 21:10:2022 ಸಂಜೆ 5 ಗಂಟೆ ಕೊನೆಯ ದಿನಾಂಕವಾಗಿರುತ್ತದೆ.

 

BIGG NEWS : ದಸರಾ ಹಬ್ಬಕ್ಕೆ ‘ಪ್ರವಾಸಿ ಗೈಡ್’ ಗಳಿಗೆ ‘ಸಿಎಂ ಬೊಮ್ಮಾಯಿ’ ಗುಡ್ ನ್ಯೂಸ್ : ಮಾಸಿಕ ವೇತನ 5000 ರೂ.ಗೆ ಹೆಚ್ಚಳ

 

BIGG NEWS : ಅಭ್ಯರ್ಥಿಗಳೇ ಗಮನಿಸಿ : ‘ಸಿಇಟಿ’ ಪರಿಷ್ಕೃತ Rank ಪಟ್ಟಿ ಅ.1 ರಂದು ಪ್ರಕಟ |KCET Result 2022

 

Share.
Exit mobile version