ಬೆಂಗಳೂರು: ನಗರದಲ್ಲಿ ಬೈಕ್ ಅಪಘಾತದಲ್ಲಿ ಡೆಹ್ರಾಡೂನ್ ಮೂಲದ ದೀಪಕ್ ಎಂಬಾತ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಬೆಂಗಳೂರಿನ ವಿಂಡ್ಲರ್ ಮ್ಯಾನರ್ ಬಳಿ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದೀಪಕ್, ಸ್ನೇಹಿತೆ ರೋಹಿಣಿ ಜೊತೆ ಕೋರಮಂಗಲಕ್ಕೆ ಹೋಗುತ್ತಿದ್ದರು. ಮಧ್ಯರಾತ್ರಿ ದೇವನಹಳ್ಳಿ ಅಪಾರ್ಮೆಂಟ್ ಗೆ ದೀಪಕ್ ತೆರಳುತ್ತಿದ್ದರು.
ವಿಂಡ್ಸರ್ ಮ್ಯಾನರ್ ಬಳಿ ಸ್ಟೆಪ್ಸ್ ಮೇಲೆ ಬೈಕ್ ಅನ್ನು ದೀಪಕ್ ಇರಿಸಿದ್ದರು. ಆಯತಪ್ಪಿ ಬುಲೆಟ್ ಬೈಕ್ ನಿಂದ ಬಿದ್ದು ದೀಪಕ್ ತಲೆಗೆ ಪೆಟ್ಟಾಗಿತ್ತು. ದೀಪಕ್ ಗೆಳತಿ ರೋಹಿಣಿಗೆ ಕಾಲು ಮುರಿದು ಬಿದ್ದು ಒದ್ದಾಡಿದ್ದರು. ಪೊಲೀಸರು ಗಾಯಾಳು ದೀಪಕ್, ರೋಹಣಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೇ ಚಿಕಿತ್ಸೆ ಫಲಿಸದೇ ದೀಪಕ್ ಸಾವನ್ನಪ್ಪಿದ್ದರೇ, ರೋಹಿಣಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಕಲ್ಮನೆಯಲ್ಲಿ ನಡೆಸಿದ ‘ಜನಸಂಪರ್ಕ ಸಭೆ’ಗೆ ಭರ್ಜರಿ ರೆಸ್ಪಾನ್ಸ್!








