Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕನ್ನಡ ಚಳವಳಿಗಾರರ ಮೇಲಿನ ಕ್ರಿಮಿನಲ್ ಮೊಕದ್ದಮೆ ವಾಪಸ್ ಪಡೆಯಿರಿ: ಸರ್ಕಾರಕ್ಕೆ MLC ರಮೇಶ್ ಬಾಬು ಆಗ್ರಹ

13/03/2026 4:46 PM

ಸಮುದಾಯಕ್ಕೊಂದು ಆಸ್ಪತ್ರೆಯಲ್ಲ, ಜನಸಂಖ್ಯೆ ಆಧಾರದಲ್ಲಿ ನಿರ್ಮಾಣ: ಸಚಿವ ದಿನೇಶ್ ಗುಂಡೂರಾವ್

13/03/2026 4:39 PM

ಇರಾಕ್‌ನಲ್ಲಿ ಅಮೆರಿಕ ಸೇನಾ ವಿಮಾನ ಪತನ: ನಾಲ್ವರು ಸಾವು | US military aircraft crash

13/03/2026 4:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೈಸೂರು ವಿಭಾಗೀಯ ಕಛೇರಿಯಲ್ಲಿ ಡೇ ಕೇರ್/ಕ್ರೆಚ್ ಕೇಂದ್ರ ಆರಂಭ
KARNATAKA

ಮೈಸೂರು ವಿಭಾಗೀಯ ಕಛೇರಿಯಲ್ಲಿ ಡೇ ಕೇರ್/ಕ್ರೆಚ್ ಕೇಂದ್ರ ಆರಂಭ

By kannadanewsnow0909/03/2026 3:45 PM

ಮೈಸೂರು: ಉದ್ಯೋಗಿಗಳ ಕಲ್ಯಾಣ ಹಾಗೂ ಸಮಾವೇಶಾತ್ಮಕ ಕೆಲಸದ ವಾತಾವರಣ ನಿರ್ಮಿಸುವ ಬದ್ಧತೆಯ ಭಾಗವಾಗಿ, ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಮೈಸೂರು ವಿಭಾಗೀಯ ಕಛೇರಿ ಆವರಣದಲ್ಲಿ ರೈಲ್ವೆ ಉದ್ಯೋಗಿಗಳ ಮಕ್ಕಳಿಗಾಗಿ ಡೇ ಕೇರ್/ಕ್ರೆಚ್ ಕೇಂದ್ರವನ್ನು ಆರಂಭಿಸಿದೆ. ಈ ಸೌಲಭ್ಯವು ಮುಖ್ಯವಾಗಿ ಮೈಸೂರು ಮುಖ್ಯಾಲಯ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ರೈಲ್ವೆ ಉದ್ಯೋಗಿಗಳ ಮಕ್ಕಳಿಗೆ ಸುರಕ್ಷಿತ, ಭದ್ರ ಹಾಗೂ ಬೆಂಬಲಕಾರಿ ವಾತಾವರಣವನ್ನು ಒದಗಿಸುವ ಉದ್ದೇಶ ಹೊಂದಿದೆ.

ಈ ಕೇಂದ್ರವನ್ನು ಗುಂಟೂರು ವಿಭಾಗದ ಡಿಆರ್ ಎಂ ಹಾಗೂ ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘದ ಅಧ್ಯಕ್ಷರಾದ ಸುಧೇಷ್ಣಾ ಸೇನ್, ಅವರು ಆನ್‌ಲೈನ್ ಮೂಲಕ ಉದ್ಘಾಟಿಸಿದರು. ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ಅವರು ಸ್ಥಳದಲ್ಲೇ ರಿಬ್ಬನ್ ಕತ್ತರಿಸುವ ಮೂಲಕ ಕ್ರೆಚ್ ಕೇಂದ್ರವನ್ನು ಉದ್ಘಾಟಿಸಿದರು.

ಈ ಮುಂದಾಳತ್ವವನ್ನು ವಿಭಾಗವು ಮುಖ್ಯ ಉದ್ಯೋಗದಾತನಾಗಿ ತನ್ನ ಮಹಿಳಾ ಉದ್ಯೋಗಿಗಳಿಗೆ ಬೆಂಬಲಕಾರಿ ಮತ್ತು ಸಮಾನತೆಯ ಕೆಲಸದ ವಾತಾವರಣವನ್ನು ಒದಗಿಸುವ ಜವಾಬ್ದಾರಿಯ ಭಾಗವಾಗಿ ಕೈಗೊಳ್ಳಲಾಗಿದೆ. ಈ ಉದ್ಘಾಟನೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲೇ ನಡೆದಿದ್ದು, ಕೆಲಸ ಮಾಡುವ ತಾಯಂದಿರಿಗೆ ಹಾಗೂ ಅವರ ಕುಟುಂಬಗಳಿಗೆ ಸಂಸ್ಥೆಯ ಬೆಂಬಲವನ್ನು ಪ್ರತಿಬಿಂಬಿಸುತ್ತದೆ.

ಮೈಸೂರು ವಿಭಾಗದಲ್ಲಿ ಒಟ್ಟು 580 ಮಹಿಳಾ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ 87 ಮಹಿಳಾ ಉದ್ಯೋಗಿಗಳು ವಿಭಾಗೀಯ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕ್ರೆಚ್ ಕೇಂದ್ರದ ಸ್ಥಾಪನೆಯ ಉದ್ದೇಶವು ಈ ಮಹಿಳಾ ಉದ್ಯೋಗಿಗಳಿಗೆ ಕೆಲಸದ ಸಮಯದಲ್ಲಿ ತಮ್ಮ ಮಕ್ಕಳಿಗಾಗಿ ಸುರಕ್ಷಿತ ಹಾಗೂ ಆರೈಕೆಪೂರ್ಣ ವಾತಾವರಣವನ್ನು ಒದಗಿಸುವುದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಿಭಾಗೀಯ ಕಾರ್ಯಾಚರಣ ವ್ಯವಸ್ಥಾಪಕರಾದ ಹರಿತಾ ಎಸ್. ಅವರು ಅಂತರರಾಷ್ಟ್ರೀಯ ಮಹಿಳಾ ದಿನದ ಮಹತ್ವವನ್ನು ವಿವರಿಸಿ, ಇಂತಹ ಕಲ್ಯಾಣ ಕಾರ್ಯಕ್ರಮಗಳು ಮಹಿಳಾ ಉದ್ಯೋಗಿಗಳು ತಮ್ಮ ವೃತ್ತಿ ಮತ್ತು ಕುಟುಂಬದ ಜವಾಬ್ದಾರಿಗಳನ್ನು ಸಮತೋಲನದಿಂದ ನಿರ್ವಹಿಸಲು ಸಹಾಯಕವಾಗುತ್ತವೆ ಎಂದು ತಿಳಿಸಿದರು.

ಮಕ್ಕಳಿಗೆ ಸುರಕ್ಷಿತ ಮತ್ತು ಸಂತೋಷಕರ ವಾತಾವರಣ ಒದಗಿಸುವ ಮೂಲಕ, ಪ್ರಸೂತಿ ರಜೆಯ ನಂತರ ಕೆಲಸಕ್ಕೆ ಮರಳುವ ಮಹಿಳಾ ಉದ್ಯೋಗಿಗಳು ಯಾವುದೇ ಆತಂಕವಿಲ್ಲದೆ, ಮನಶ್ಶಾಂತಿಯೊಂದಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಇದು ಸಹಕಾರಿಯಾಗಲಿದೆ.

ಈ ಕ್ರೆಚ್ ಕೇಂದ್ರವನ್ನು ಮಕ್ಕಳ ಅಭಿವೃದ್ಧಿಯ ಅಗತ್ಯಗಳು ಹಾಗೂ ತಾಯಂದಿರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಆಲೋಚಿತ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಕೇಂದ್ರದಲ್ಲಿ ಮಕ್ಕಳಿಗೆ ಅನುಕೂಲವಾಗುವ ಹಾಗೂ ಸುರಕ್ಷತೆಯನ್ನು ಒದಗಿಸುವ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ, ಅವುಗಳೆಂದರೆ.

ತಾಯಂದಿರಿಗಾಗಿ ವಿಶೇಷ ನರ್ಸಿಂಗ್ ಲೌಂಜ್
ಡೈಪರ್ ಬದಲಿಸುವ ಸ್ಥಳ
ವಿಶ್ರಾಂತಿ ಮತ್ತು ನಿದ್ರೆಗೆ ಸ್ಲೀಪ್ ಪಾಡ್ಸ್
ಸುರಕ್ಷತಿಗಾಗಿ ಸಿಸಿಟಿವಿ ಮೇಲ್ವಿಚಾರಣೆ
ಮಕ್ಕಳ ಸೃಜನಶೀಲತೆಗೆ ಸ್ಕ್ರಿಬಲ್ ಕಾರ್ನರ್
ಓದುವ ಅಭ್ಯಾಸ ಬೆಳೆಸಲು ರೀಡಿಂಗ್ ಕಾರ್ನರ್
ಕಲ್ಪನೆ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಉತ್ತೇಜಿಸಲು ಪ್ರಿಟೆಂಡ್ ಪ್ಲೇ ಕಾರ್ನರ್

ಈ ಕೇಂದ್ರವನ್ನು ಮಕ್ಕಳ ದೈಹಿಕ, ಭಾವನಾತ್ಮಕ ಹಾಗೂ ಸಂವೇದನಾತ್ಮಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಮಕ್ಕಳ ಸುರಕ್ಷತೆಯನ್ನು ಅತ್ಯಂತ ಪ್ರಮುಖವಾಗಿ ಪರಿಗಣಿಸಿ, ಒಳಾಂಗಣ ವಿನ್ಯಾಸದಲ್ಲಿ ಯಾವುದೇ ತೀಕ್ಷ್ಣ ಅಂಚುಗಳಿಲ್ಲದಂತೆ ಮಾಡಲಾಗಿದೆ ಮತ್ತು ಎಲ್ಲಾ ಚಟುವಟಿಕೆಗಳ ವ್ಯವಸ್ಥೆಯನ್ನು ಮಕ್ಕಳಿಗೆ ಸುಲಭವಾಗಿ ತಲುಪುವ ವ್ಯವಸ್ಥೆ ಮಾಡಲಾಗಿದೆ, ಇದರಿಂದ ಮಕ್ಕಳಲ್ಲಿ ಸ್ವಾವಲಂಬನೆ ಮತ್ತು ಕುತೂಹಲವನ್ನು ಉತ್ತೇಜಿಸಲಾಗುತ್ತದೆ.

ಈ ಕ್ರೆಚ್ ಕೇಂದ್ರವನ್ನು ವಿನ್ಯಾಸಗೊಳಿಸಿದ ಅಧಿಕಾರಿಯವರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾ, ಈ ಕೇಂದ್ರವನ್ನು ಪೋಷಕರ ದೃಷ್ಟಿಕೋನದಿಂದ ರೂಪಿಸಲಾಗಿದೆ ಎಂದು ಹೇಳಿದರು. ಆರು ವರ್ಷದ ಮಗುವಿನ ತಾಯಿಯಾಗಿರುವ ಕಾರಣ, ಮಕ್ಕಳಿಗೆ ಸುರಕ್ಷಿತ, ಆಕರ್ಷಕ ಮತ್ತು ಅಭಿವೃದ್ಧಿಗೆ ಸಹಾಯಕವಾದ ವಾತಾವರಣದ ಅಗತ್ಯವನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಪೋಷಕರು ತಮ್ಮ ಮಕ್ಕಳಿಗಾಗಿ ನಿರೀಕ್ಷಿಸುವ ಪ್ರತಿಯೊಂದು ಅಂಶವನ್ನು ಗಮನದಲ್ಲಿಟ್ಟುಕೊಂಡು, ಮಕ್ಕಳ ದೈಹಿಕ ಚಟುವಟಿಕೆ, ಭಾವನಾತ್ಮಕ ಆರಾಮ ಮತ್ತು ಸಂವೇದನಾತ್ಮಕ ಅಭಿವೃದ್ಧಿಗೆ ಅನುಕೂಲವಾಗುವಂತೆ ಈ ಕೇಂದ್ರವನ್ನು ರೂಪಿಸಲಾಗಿದೆ.

ವಿಭಾಗೀಯ ಕಚೇರಿಯೊಳಗೆ ಉತ್ತಮ ಗುಣಮಟ್ಟದ ಮಕ್ಕಳ ಆರೈಕೆ ಸೌಲಭ್ಯವನ್ನು ಕೈಗೆಟುಕುವ ದರದಲ್ಲಿ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಹೊರಗೆ ದೊರೆಯುವ ಪ್ರೀಮಿಯಂ ಸೌಲಭ್ಯಗಳಂತೆಯೇ ಈ ವ್ಯವಸ್ಥೆಯನ್ನು ರೈಲ್ವೆ ಕುಟುಂಬದ ಮಕ್ಕಳಿಗೂ ಲಭ್ಯವಾಗುವಂತೆ ಮಾಡಲಾಗಿದೆ, ಇದರಿಂದ ಪ್ರಸೂತಿ ರಜೆಯ ನಂತರ ಕೆಲಸಕ್ಕೆ ಮರಳುವ ಪ್ರತಿಯೊಬ್ಬ ತಾಯಿ ತನ್ನ ಮಗುವಿನ ಸುರಕ್ಷತೆ, ಸಂತೋಷ ಮತ್ತು ಅಭಿವೃದ್ಧಿಯ ಬಗ್ಗೆ ವಿಶ್ವಾಸದಿಂದ ಇರಲು ಸಾಧ್ಯವಾಗುತ್ತದೆ.

ಕ್ರೆಚ್ ಕೇಂದ್ರದ ಶುಲ್ಕ ರಚನೆ ಈ ಕೆಳಗಿನಂತಿದೆ:

ನೋಂದಣಿ ಶುಲ್ಕ: ₹500 (ಒಮ್ಮೆ ಮಾತ್ರ)
ಮಾಸಿಕ ಶುಲ್ಕ: ₹1,500
ಅರ್ಧ ದಿನದ ಶುಲ್ಕ: ₹1,000
ಮೊದಲ ಅವಧಿ: 09:30 ರಿಂದ 13:30 ಗಂಟೆ
ಎರಡನೇ ಅವಧಿ: 14:00 ರಿಂದ 18:00 ಗಂಟೆ
ತ್ರೈಮಾಸಿಕ ಶುಲ್ಕ: ₹4,200

ಈ ಸಂದರ್ಭದಲ್ಲಿ ಹಿರಿಯ ವಿಭಾಗೀಯ ಅಧಿಕಾರಿಗಳು, ಮಹಿಳಾ ಉದ್ಯೋಗಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು, ಕೆಲಸ ಮಾಡುವ ಪೋಷಕರಿಗೆ ಬೆಂಬಲ ನೀಡುವ ಈ ಮುಂದಾಳತ್ವವನ್ನು ಪ್ರಶಂಸಿಸಿದರು.

ನಿಮ್ಮ ದಿಂಬೇ ನಿಮ್ಮ ಕುತ್ತಿಗೆ ನೋವಿಗೆ ಮೌನ ಶತ್ರು: ಜಪಾನ್ ತಜ್ಞರ ಆಘಾತಕಾರಿ ಸಂಶೋಧನೆ!

ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11 ರಿಂದ `OPD’ ಸೇವೆ ಬಂದ್: ರೋಗಿಗಳಿಗೆ ಸಂಕಷ್ಟದ ಭೀತಿ

Share. Facebook Twitter LinkedIn WhatsApp Email

Related Posts

ಕನ್ನಡ ಚಳವಳಿಗಾರರ ಮೇಲಿನ ಕ್ರಿಮಿನಲ್ ಮೊಕದ್ದಮೆ ವಾಪಸ್ ಪಡೆಯಿರಿ: ಸರ್ಕಾರಕ್ಕೆ MLC ರಮೇಶ್ ಬಾಬು ಆಗ್ರಹ

13/03/2026 4:46 PM1 Min Read

ಸಮುದಾಯಕ್ಕೊಂದು ಆಸ್ಪತ್ರೆಯಲ್ಲ, ಜನಸಂಖ್ಯೆ ಆಧಾರದಲ್ಲಿ ನಿರ್ಮಾಣ: ಸಚಿವ ದಿನೇಶ್ ಗುಂಡೂರಾವ್

13/03/2026 4:39 PM1 Min Read

ಇದು ‘ಕ್ಯಾನ್ಸರ್ ಪೀಡಿತ ಜರೀನಾ ಬೇಗಂ’ ಎಂಬ ಸಂತ್ರಸ್ತೆಯ ಹೋರಾಟದ ಕಣ್ಣೀರಿನ ಕತೆ

13/03/2026 4:14 PM2 Mins Read
Recent News

ಕನ್ನಡ ಚಳವಳಿಗಾರರ ಮೇಲಿನ ಕ್ರಿಮಿನಲ್ ಮೊಕದ್ದಮೆ ವಾಪಸ್ ಪಡೆಯಿರಿ: ಸರ್ಕಾರಕ್ಕೆ MLC ರಮೇಶ್ ಬಾಬು ಆಗ್ರಹ

13/03/2026 4:46 PM

ಸಮುದಾಯಕ್ಕೊಂದು ಆಸ್ಪತ್ರೆಯಲ್ಲ, ಜನಸಂಖ್ಯೆ ಆಧಾರದಲ್ಲಿ ನಿರ್ಮಾಣ: ಸಚಿವ ದಿನೇಶ್ ಗುಂಡೂರಾವ್

13/03/2026 4:39 PM

ಇರಾಕ್‌ನಲ್ಲಿ ಅಮೆರಿಕ ಸೇನಾ ವಿಮಾನ ಪತನ: ನಾಲ್ವರು ಸಾವು | US military aircraft crash

13/03/2026 4:27 PM

BREAKING: AIFF ಮಾಜಿ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ವಿಧಿವಶ | Kushal Das No More

13/03/2026 4:21 PM
State News
KARNATAKA

ಕನ್ನಡ ಚಳವಳಿಗಾರರ ಮೇಲಿನ ಕ್ರಿಮಿನಲ್ ಮೊಕದ್ದಮೆ ವಾಪಸ್ ಪಡೆಯಿರಿ: ಸರ್ಕಾರಕ್ಕೆ MLC ರಮೇಶ್ ಬಾಬು ಆಗ್ರಹ

By kannadanewsnow0913/03/2026 4:46 PM KARNATAKA 1 Min Read

ಬೆಂಗಳೂರು: ಕರ್ನಾಟಕದ ನೆಲ, ಜಲ ಮತ್ತು ಭಾಷೆಯ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಕನ್ನಡ ಚಳವಳಿಗಾರರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳ…

ಸಮುದಾಯಕ್ಕೊಂದು ಆಸ್ಪತ್ರೆಯಲ್ಲ, ಜನಸಂಖ್ಯೆ ಆಧಾರದಲ್ಲಿ ನಿರ್ಮಾಣ: ಸಚಿವ ದಿನೇಶ್ ಗುಂಡೂರಾವ್

13/03/2026 4:39 PM

ಇದು ‘ಕ್ಯಾನ್ಸರ್ ಪೀಡಿತ ಜರೀನಾ ಬೇಗಂ’ ಎಂಬ ಸಂತ್ರಸ್ತೆಯ ಹೋರಾಟದ ಕಣ್ಣೀರಿನ ಕತೆ

13/03/2026 4:14 PM

BIG NEWS : ಕೋಲಾರದಲ್ಲಿ ಕಲ್ಲು ಕ್ವಾರಿಯಲ್ಲಿ ಸ್ಫೋಟ : ಮೂವರು ಕಾರ್ಮಿಕರಿಗೆ ಗಂಭೀರ ಗಾಯ!

13/03/2026 4:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.