ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತೊಬ್ಬ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. ನಾಗರಾಜು ಎನ್ನುವಾತ ಬಂಧಿತ ಆರೋಪಿಯಾಗಿದ್ದು, ಈತ ದರ್ಶನ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.
ನಟ ದರ್ಶನ್ ಅಭಿಮಾನ ಸಂಘಗಳಲ್ಲಿನ ಸಂಪರ್ಕಹೊಂದಿದ್ದ ಈತ ಎಲ್ಲ ಜವಾಬ್ದಾರಿಯನ್ನು ಈತ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ನಾಗರಾಜ್ಗೆ ದರ್ಶನ್ ಬಾರ್ ಇಟ್ಟುಕೊಂಡಿದ್ದ ಎನ್ನಲಾಗಿದ್ದ, ಈತ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಮೈಸೂರಿನ ಇಪ್ಪೊಂದನೇ ವಾರ್ಡ್ನಿಂದ ಈ ಬಾರಿ ಕಾರ್ಪೋರೇಟರ್ ಆಗಿ ಕಣಕ್ಕೆ ಇಳಿಯಲು ಸಿದ್ದನಾಗಿದ್ದ ಎನ್ನಲಾಗಿದೆ.